
ನಾಮ ಪತ್ರ ಸಲ್ಲಿಸಲು 25-3-11 ಕೊನೆಯ ದಿನ.ನಾಮಪತ್ರ ಪರಿಶೀಲನೆ 28-3-11,ಉಮೇದುವಾರಿಕೆ ಹಿಂತೆಗೆದುಕೊಳ್ಳಲು 31-3-11 ಹಾಗೂ ಅಗತ್ಯವಿದ್ದಲ್ಲಿ 24-4-11 ರಂದು ಬೆಳಿಗ್ಗೆ 7 ರಿಂದ ಸಂಜೆ 5 ಗಂಟೆ ತನಕ ಚುನಾವಣೆ ನಡೆಯಲಿದೆ.ಮತಗಳ ಎಣಿಕೆಯನ್ನು ದಿನಾಂಕ 26-4-11 ರಂದು ಪೂ.8 ಗಂಟೆಯಿಂದ ಮಂಗಳೂರು ಕದ್ರಿ ಪಾಲಿಟೆಕ್ನಿಕ್ನಲ್ಲಿ,ಬಂಟ್ವಾಳ ತಾಲೂಕು ಕಚೇರಿ ಸಭಾಭವನದಲ್ಲಿ, ಬೆಳ್ತಂಗಡಿ ಹಳೇಕೋಟೆ ವಾಣಿ ಆಂಗ್ಲ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಲಿದೆ.ದಿನಾಂಕ 28-4-11 ರೊಳಗೆ ಚುನಾವಣಾಪ್ರಕ್ರಿಯೆಯನ್ನು ಮುಕ್ತಾಯಗೊಳಿಸಬೇಕಾಗಿದೆ.
ಮಂಗಳೂರು,ಬಂಟ್ವಾಳ ಮತ್ತು ಬೆಳ್ತಂಗಡಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳ ಮತದಾರರ ಪಟ್ಟಿ,ಚುನಾವಣಾ ಕ್ಷೇತ್ರದ ಮೀಸಲಾತಿ ವಿವರ,ಮತದಾನ ಕೇಂದ್ರಗಳ ಪಟ್ಟಿ,ನಾಮಪತ್ರ ಸಲ್ಲಿಸುವ ನಮೂನೆ ಇತ್ಯಾದಿಗಳನ್ನು ಕೃಷಿ ಉತ್ಪನ್ನ ಮಾರುಕಟ್ಟೆ ಪ್ರದೇಶದ ಆಸಕ್ತ ಮತದಾರರು ಚುನಾವಣಾಧಿಕಾರಿಯಾದ ಆಯಾಯ ತಾಲೂಕು ತಹಶೀಲ್ದಾರರನ್ನು ಸಂಪರ್ಕಿಸಿ ಪಡೆಯಬಹುದಾಗಿದೆಯೆಂದು ಜಿಲ್ಲಾಧಿಕಾರಿಗಳು ತಿಳಿಸಿರುತ್ತಾರೆ.