Tuesday, October 25, 2011

ಅವಿಭಜಿತ ಜಿಲ್ಲೆಗಳ ಅಭಿವೃದ್ಧಿಗೆ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಸಭೆ

ಮಂಗಳೂರು,ಅಕ್ಟೋಬರ್.25 : ಅವಿಭಜಿತ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಅಭಿವೃದ್ಧಿಗೆ ಅವಳಿ ಜಿಲ್ಲೆಗಳ ಜನಪ್ರತಿನಿಧಿಗಳು ಮತ್ತು ಮುಖ್ಯ ಅಧಿಕಾರಿಗಳ ಸಭೆ ನಡೆಸಿದ ಸನ್ಮಾನ್ಯ ಮುಖ್ಯಮಂತ್ರಿ ಡಿ ವಿ ಸದಾನಂದಗೌಡ ಅವರು, ಜಿಲ್ಲೆಯ ಸರ್ವತೋಮುಖ ಅಭಿವೃದ್ಧಿಗೆ ಸಮಯಮಿತಿಯನ್ನು ನಿಗದಿಪಡಿಸಿದರು.ಇಂದು ನಗರದ ಸರ್ಕಿಟ್ ಹೌಸ್ ನಲ್ಲಿ ಸಭೆ ನಡೆಸಿದ ಅವರು, ರಸ್ತೆ, ವಿದ್ಯುತ್ ಮತ್ತು ಕುಡಿಯುವ ನೀರಿನ ಯೋಜನೆಗಳನ್ನು ಆದ್ಯತೆ ಮೇರೆಗೆ ಅನುಷ್ಠಾನಕ್ಕೆ ತರಲು ಅಧಿಕಾರಿಗಳಿಗೆ ಸೂಚಿಸಿರುವುದಾಗಿ ಸಭೆಯ ಬಳಿಕ ಪತ್ರಕರ್ತರಿಗೆ ತಿಳಿಸಿದರು.
ಮಾಣಿ - ಸಂಪಾಜೆ ರಸ್ತೆ ಕಾಮಗಾರಿ ಮುಗಿಸಲು ಸಮಯಮಿತಿ. ರಾಷ್ಟ್ರೀಯ ಹೆದ್ದಾರಿ ಅದರಲ್ಲೂ ಮುಖ್ಯವಾಗಿ ಬೆಂಗಳೂರು ಮಂಗಳೂರು ರಾಷ್ಟ್ರೀಯ ಹೆದ್ದಾರಿಯ ಶಿರಾಡಿ ರಸ್ತೆ ದುರಸ್ತಿಗೆ ರಾಜ್ಯ ಸರ್ಕಾರದಿಂದ ಹಣ ಬಿಡುಗಡೆ ಮಾಡಿ ಕಾಮಗಾರಿ ಪೂರ್ಣಗೊಳಿಸಲು ಸೂಚಿಸಿದರು. ಡಿಸೆಂಬರ್ ಅಂತ್ಯದೊಳಗೆ ಜಿಲ್ಲೆಯ ಎಲ್ಲ ರಸ್ತೆಗಳು ಹೊಂಡ ಮುಕ್ತವಾಗಿರಬೇಕೆಂದ ಅವರು, ಫೆಬ್ರವರಿ- ಮಾರ್ಚ್ ನಲ್ಲಿ ಕುಡಿಯುವ ನೀರಿನ ಸಮಸ್ಯೆ ಯಾಗಬಾರದು ಎಂದರು.
ಸುಳ್ಯಕ್ಕೆ 110 ಕೆ ವಿ ವಿದ್ಯುತ್ ಸಬ್ ಸ್ಟೇಷನ್ ಸ್ಥಾಪಿಸಲು ಸಮೀಕ್ಷಾ ಕಾರ್ಯ ನಡೆಸಲಾಗಿದೆ ಎಂದರು. ಉಡುಪಿ ಜಿಲ್ಲಾ ಸ್ಪತ್ರೆ ಉನ್ನತೀಕರಣಕ್ಕೆ, ಆರೋಗ್ಯ ಸೇವೆಯನ್ನು ಇನ್ನಷ್ಟು ಬಲಪಡಿಸಲು ಅನುದಾನ ಸಾಕಷ್ಟು ನೀಡಲಾಗುವುದು; ಅನುಷ್ಠಾನ ಸ್ಥಳೀಯಾಧಿಕಾರಿಗಳ ಹೊಣೆ ಎಂದು ಮುಖ್ಯಮಂತ್ರಿಗಳು ಸ್ಪಷ್ಟಪಡಿಸಿದರು. ಆಡಳಿತ ಚುರುಕುಗೊಳಿಸಲು ಜಿಲ್ಲಾ ಮತ್ತು ತಾಲೂಕು ಮಟ್ಟದ ಹಿರಿಯ ಅಧಿಕಾರಿಗಳು ತಮ್ಮ ಕೇಂದ್ರ ಸ್ಥಾನ ಬಿಟ್ಟು ಕೆಳಗಿನ ಹಂತಗಳಲ್ಲಿ ಖುದ್ದಾಗಿ ಹೋಗಿ ಪ್ರಗತಿ ಪರಿಶೀಲನೆ ನಡೆಸಬೇಕೆಂದು ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.
ಡಿಸೆಂಬರ್ ಅಂತ್ಯದೊಳಗೆ ತಾಲೂಕು ಕಚೇರಿಗಳಲ್ಲಿ ಸಾಮಾನ್ಯ ಜನರ ಕಡತ ಉಳಿಯದಂತೆ ಜಿಲ್ಲಾಧಿಕಾರಿಗಳು ಖುದ್ದು ಪರಿಶೀಲನೆ ನಡೆಸಬೇಕೆಂದ ಮುಖ್ಯಮಂತ್ರಿಗಳು, ಶಿಕ್ಷಣ ಹಾಗೂ ಶಿಕ್ಷಕರ ಸಮಸ್ಯೆಗಳ ಬಗ್ಗೆ ನವೆಂಬರ್ 3ರಂದು ರಾಜ್ಯ ಮಟ್ಟದಲ್ಲಿ ಸಮಗ್ರ ಸಭೆ ನಡೆಸುವುದಾಗಿ ಹೇಳಿದರು.
ಅಂಗನವಾಡಿ ಮಕ್ಕಳಿಗೆ ಸ್ಥಳೀಯ ಆಹಾರ ಪೂರೈಕೆ, ಪ್ರವಾಸೋದ್ಯಮಕ್ಕೆ ಒತ್ತು ನೀಡಲು ಅನುದಾನ ಬಿಡುಗಡೆ ಮಾಡುವುದಾಗಿ ನುಡಿದರು.
ಮಂಗಳೂರು ಮಹಾನಗರಪಾಲಿಕೆ ತ್ವರಿತ ಅಭಿವೃದ್ಧಿಗೆ ನಗರದ ಒಳರಸ್ತೆಗೆ ಅನುದಾನ ನೀಡಲು ನಗರೋತ್ಥಾನ ಯೋಜನೆಯಡಿ 20 ದಿನಗಳೊಳಗೆ ಹಣ ಬಿಡುಗಡೆ ಮಾಡುವುದಾಗಿ ಮುಖ್ಯಮಂತ್ರಿಗಳು ಹೇಳಿದರು. ಸಾಮಾಜಿಕ ಸುರಕ್ಷಾ ಯೋಜನೆಗಳ ವೆರಿಫಿಕೇಷನ್ ಕಾರ್ಯ ಮುಗಿದಿದ್ದು ಅಗತ್ಯ ಹಣವನ್ನು ತಕ್ಷಣ ಬಿಡುಗಡೆ ಮಾಡುವುದಾಗಿ ಮುಖ್ಯಮಂತ್ರಿಗಳು ಹೇಳಿದರು. ಅವಿಭಜಿತ ಜಿಲ್ಲೆಗಳ ಉಸ್ತುವಾರಿ ಸಚಿವರುಗಳಾದ ಕಷ್ಣ ಜೆ.ಪಾಲೇಮಾರ್,ಡಾ.ವಿ.ಎಸ್.ಆಚಾರ್ಯ, ವಿಧಾನ ಸಭಾ ಉಪಸಭಾಪತಿಗಳಾದ ಎನ್.ಯೋಗಿಶ್ ಭಟ್, ಶಾಸಕರುಗಳಾದ ಅಂಗಾರ, ಮಲ್ಲಿಕಾ ಪ್ರಸಾದ್, ರಘುಪತಿ ಭಟ್, ಸಂಸದ ನಳಿನ್ ಕುಮಾರ್ ಕಟೀಲ್, ಕರಾವಳಿ ಅಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷರಾದ ಬಿ.ನಾಗರಾಜ ಶೆಟ್ಟಿ, ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಶೈಲಜಾ ಭಟ್, ಮೇಯರ್ ಪ್ರವೀಣ್, ಜಿಲ್ಲಾಧಿಕಾರಿ ಡಾ.ಎನ್ ಎಸ್ ಚನ್ನಪ್ಪ ಗೌಡ, ಸಿಇಒ ಡಾ. ವಿಜಯ ಪ್ರಕಾಶ್, ಪಾಲಿಕೆ ಆಯುಕ್ತ ಡಾ. ಹರೀಶ್ ಕುಮಾರ್, ಮತ್ತಿತರ ಅಧಿಕಾರಿ ಮತ್ತು ಜನಪ್ರತಿನಿಧಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.

ಬರ ಮತ್ತು ವಿದ್ಯುತ್ ಕೊರತೆ ನೀಗಿಸಲು ಪ್ರಥಮ ಆದ್ಯತೆ; ಮುಖ್ಯಮಂತ್ರಿಗಳು

ಮಂಗಳೂರು,ಅಕ್ಟೋಬರ್.26: ನಾಡಿನ ಜನತೆಗೆ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಅವರು ದೀಪಾವಳಿ ಶುಭಾಶಯಗಳನ್ನು ಹೇಳಿದ್ದಾರೆ. ಮಂಗಳೂರಿನಲ್ಲಿ ಸುದ್ದಿಗಾರೊಂದಿಗೆ ಮಾತನಾಡಿದ ಅವರು ಬೆಳಕಿನ ಹಬ್ಬವಾದ ದೀಪಾವಳಿ ನಾಡಿನ ಜನತೆಗೆ ಸುಖ-ಶಾಂತಿ ಮತ್ತು ನೆಮ್ಮದಿ,ಸಮೃದ್ದಿ ಸಹ ಬಾಳ್ವೆಯನ್ನು ತರಲಿ ಎಂದು ಮುಖ್ಯಮಂತ್ರಿಗಳು ಹಾರೈಸಿದರು.ರಾಜ್ಯದ ಅನೇಕ ಭಾಗ ಗಳಲ್ಲಿ ಬರ ಪರಿಸ್ಥಿತಿ ತಲೆ ದೋರಿದ ಹಿನ್ನೆಲೆ ಯಲ್ಲಿ ದೀಪಾ ವಳಿ ಹಬ್ಬ ವನ್ನು ತಾನು ಆಚರಿ ಸಲ್ಲ ಎಂದ ಮುಖ್ಯ ಮಂತ್ರಿ ಗಳು, ಬರ ಪರಿಸ್ಥಿತಿಯನ್ನು ಎದು ರಿಸಲು ಈಗಾಗಲೇ ರಾಜ್ಯ ಸರ್ಕಾರ 200 ಕೋಟಿ ರೂ.ಗಳನ್ನು ಬಿಡುಗಡೆ ಮಾಡಿದ್ದು ಹೆಚ್ಚುವರಿಯಾಗಿ 82 ಕೋಟಿ ರೂ.ಗಳನ್ನು ಬಿಡುಗಡೆ ಮಾಡಲಾಗಿದೆ.ಈ ಹಣ ಈಗಾಗಲೇ ಆಯಾಯ ಜಿಲ್ಲಾಧಿಕಾರಿಗಳ ಬಳಿ ಇದ್ದು ಕೂಡಲೇ ವಿನಿಯೋಗಿಸಲು ಸೂಚನೆ ನೀಡಲಾಗಿದೆ ಎಂದರು.
ರಾಜ್ಯದಲ್ಲಿನ ವಿದ್ಯುತ್ ಕೊರತೆ ನೀಗಿಸಲು ಕ್ರಮ ಕೈಗೊಳ್ಳಲಾಗಿದ್ದು ಚತ್ತೀಸ್ ಘಡದಿಂದ 200 ಮೆಗಾ ವ್ಯಾಟ್ ವಿದ್ಯುತ್ ಖರೀದಿ ಮಾಡಲಾಗಿದೆ ಮತ್ತು ರಾಜ್ಯದ ಸಕ್ಕರೆ ಕಾರ್ಖಾನೆಗಳಲ್ಲಿ ಉತ್ಪಾದನೆಯಾಗುತ್ತಿರುವ 500 ಮೆಗಾ ವ್ಯಾಟ್ ವಿದ್ಯುತ್ ಖರೀದಿ ಮಾಡಲು ಸರ್ಕಾರ ತೀರ್ಮಾನಿಸಿದೆ. ಕಡಿಮೆ ದರದಲ್ಲಿ ವಿದ್ಯುತ್ ನೀಡಲು ಸಕ್ಕರೆ ಕಾರ್ಖಾನೆ ಮಾಲಿಕರು ಒಪ್ಪಿಗೆ ನೀಡಿದ್ದು,ಈ ಪ್ರಕ್ರಿಯೆ ಪೂರ್ಣ ಗೊಳಿಸಲು 7 ದಿನಗಳ ಕಡಿಮೆ ಅವಧಿಯ ಟೆಂಡರ್ ಕರೆಯಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಮುಂದಿನ ವಾರದೊಳಗೆ ಈ ಪ್ರಕ್ರಿಯೆ ಪೂರ್ಣಗೊಳ್ಳಲಿದೆ ಎಂದು ಮುಖ್ಯಮಂತ್ರಿಗಳು ನುಡಿದರು.

Monday, October 24, 2011

'ನಮ್ಮ ಗ್ರಾಮ - ನಮ್ಮ ರಸ್ತೆ' ಕಾಮಗಾರಿಗೆ ಮುಖ್ಯಮಂತ್ರಿ ಚಾಲನೆ

ಮಂಗಳೂರು,ಅಕ್ಟೋಬರ್.24:ಮುಖ್ಯಮಂತ್ರಿ ಗ್ರಾಮಸಡಕ್ ಯೋಜನೆಯ 'ನಮ್ಮ ಗ್ರಾಮ - ನಮ್ಮ ರಸ್ತೆ' ಯೋಜನೆಯಡಿ ರಸ್ತೆ ಅಭಿವೃದ್ದಿ ಕಾಮಾಗಾರಿಗಳಿಗೆ ಪುತ್ತೂರಿನಲ್ಲಿ ಸನ್ಮಾನ್ಯ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಅವರು ಇಂದು ಚಾಲನೆ ನೀಡಿದರು.ಈ ಸಂದರ್ಭದಲ್ಲಿ ಮಾತನಾಡಿದ ಅವರು ಮುಖ್ಯಮಂತ್ರಿ ಗ್ರಾಮಸಡಕ್ ಯೋಜನೆಯ 'ನಮ್ಮ ಗ್ರಾಮ - ನಮ್ಮ ರಸ್ತೆ' ಯೋಜನೆಯಡಿ ದಕ್ಷಿಣ ಕನ್ನಡ ಜಿಲ್ಲೆಯ 7,916 ಕಿ.ಮೀ. ಉದ್ದದ ಗ್ರಾಮೀಣ ರಸ್ತೆಯಲ್ಲಿ 2,653 ಕಿ.ಮೀ ರಸ್ತೆಯ ಗುಂಡಿ ಮುಚ್ಚುವ ಕಾಮಗಾರಿಗೆ ರೂ.13.16 ಕೋಟಿ ಬಿಡುಗಡೆಯಾಗಿದೆ ಮತ್ತು ಮಾಣಿ-ಸಂಪಾಜೆ ರಸ್ತೆಯ ಕಾಮಗಾರಿಗಳನ್ನು ಮಾರ್ಚ್ ಒಳಗಡೆ ಮುಗಿಸಬೇಕೆಂದು ಈಗಾಗಲೇ ಸಂಬಂಧಪಟ್ಟ ಅಧಿಕಾರಿಗಳಿಗೆ ತಾಕೀತು ಮಾಡಲಾಗಿದೆ ಮತ್ತು ಈ ಸಂಬಂಧ ನಾಳೆ ಮಂಗಳೂರಿನಲ್ಲಿ ಅಧಿಕಾರಿಗಳ ಸಭೆ ನಡೆಸಲಾಗುವುದು ಎಂದು ಹೇಳಿದರು.ಇಡೀ ರಾಜ್ಯದ ವಿವಿಧ ರಸ್ತೆಗಳ ಅಭಿ ವೃದ್ದಿಗೆ ಸಂಬಂ ಧಿಸಿ ದಂತೆ 875 ಕೋಟಿ ರೂ.ಗಳನ್ನು ಬಿಡು ಗಡೆ ಮಾಡಲು ಹಣ ಕಾಸು ಇಲಾಖೆ ಒಪ್ಪಿಗೆ ನೀಡಿದೆ.ರಾಜ್ಯದ ಎಲ್ಲಾ 224 ವಿಧಾನಸಭಾ ಕ್ಷೇತ್ರಗಳಿಗೂ ಯಾವುದೇ ರಾಜಕೀಯ ಮಾಡದೆ ರಸ್ತೆಗಳ ಅಭಿವೃದ್ದಿಗೆ ಸಮಾನವಾಗಿ ಹಣವನ್ನು ಬಿಡುಗಡೆ ಮಾಡಲಾಗುವುದು.ಇದೊಂದು ಮಾದರಿ ಕಾರ್ಯಕ್ರಮವಾಗಿದೆ.ದಕ್ಷಿಣ ಕನ್ನಡ ಜಿಲ್ಲೆಗೆ ಸಂಬಂಧಿಸಿದಂತೆ ಪ್ರತೀ ವಿಧಾನ ಸಭಾ ಕ್ಷೇತ್ರಕ್ಕೆ ತಲಾ 20 ಕಿ.ಮೀ ನಂತೆ 139 ಕಿ.ಮೀ ರಸ್ತೆಯನ್ನು 45.45 ಕೋಟಿ ರೂಪಾಯಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗುವುದು ಎಂದರು.ಪುತ್ತೂರಿನಲ್ಲಿ ನಿರ್ಮಾಣವಾಗುತ್ತಿರುವ ಮಿನಿ ವಿಧಾನ ಸೌಧಕ್ಕೆ 9 ಕೋಟಿ ರೂಪಾಯಿಗಳ ವೆಚ್ಚದ ಅಂದಾಜು ಸಿದ್ದ ಪಡಿಸ ಲಾಗಿದ್ದು, ಬಿಡು ಗಡೆ ಯಾದ 3.5 ಕೋಟಿ ರೂ.ಗಳಲ್ಲಿ 2.8 ಕೋಟಿ ರೂ.ಗಳ ಕಾಮಗಾರಿ ನಡೆದಿದ್ದು, 2 ನೇ ಹಂತದಲ್ಲಿ 5.5 ಕೋಟಿ ರೂ.ಗಳನ್ನು ಬಿಡುಗಡೆ ಮಾಡುವುದಾಗಿ ಹೇಳಿದರು.ಜಿಲ್ಲೆಯ ಅಡಿಕೆ ಬೆಳೆಗಾರರಿಗೆ ಆದ ನಷ್ಟವನ್ನು ಭರಿಸಲಿಕ್ಕೆ ಸರ್ಕಾರ ಬದ್ಧವಾಗಿದ್ದು,ಖಂಡಿತವಾಗಿಯೂ ಒಳ್ಳೆಯ ಪರಿಹಾರವನ್ನು ನೀಡಲಾಗುವುದು ಎಂಬ ಭರವಸೆ ನೀಡಿದರು.ಸಂಕಷ್ಟದಲ್ಲಿರುವ ಜನತೆ ನೇರವಾಗಿ ದೂರು ದಾಖಲಿಸಲು ಅನುಕೂಲವಾಗುವಂತೆ 24x7 ದೂರು ದಾಖಲಿಸುವ ವಿಭಾಗ ರಚನೆಗೆ ಈಗಾಗಲೇ ನಿರ್ಧರಿಸಲಾಗಿದ್ದು,ಇದೇ ನವೆಂಬರ್ 1 ರಂದು ಇದಕ್ಕೆ ಚಾಲನೆ ನೀಡಲಾಗುವುದು,ಅರಣ್ಯ ಇಲಾಖೆಯ ಭೂಮಿಯನ್ನು ಹೊರತು ಪಡಿಸಿ ಸರ್ಕಾರಿ ಜಾಗದಲ್ಲಿ ಮನೆ ನಿರ್ಮಿಸಲು ಅಡಿಪಾಯ ಹಾಕಿದ ಬಡ ಕುಟುಂಬಗಳಿಗೆ ಮನೆ ನಿರ್ಮಾಣ ಮಾಡಲು ಸಾಧ್ಯವಾಗುವಂತೆ ಹಕ್ಕು ಪತ್ರಗಳನ್ನು ನೀಡಲು ಅನುಕೂಲವಾಗುವಂತೆ ಕಾನೂನಿನಲ್ಲಿ ತಿದ್ದುಪಡಿ ತರಲು ಮುಂದಿನ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗುವುದು, ಒಟ್ಟಾರೆಯಾಗಿ ರಾಜ್ಯದ ಜನತೆ ನೆಮ್ಮದಿಯಿಂದ ಇರಲು ಹಾಗೂ ಒಳ್ಳೆಯ ಮತ್ತು ಜನಪರ ಆಡಳಿತ ನೀಡಲು ತಾನು ಬದ್ದನಾಗಿದ್ದೇನೆ ಎಂದು ಮುಖ್ಯಮಂತ್ರಿಗಳು ಹೇಳಿದರು.ಪುತ್ತೂರು ಮತ್ತು ಸುಳ್ಯದ ಎರಡು ಕಾಮ ಗಾರಿ ಗಳಿಗೆ ಮುಖ್ಯ ಮಂತ್ರಿ ಗಳು ಇದೇ ಸಂದ ರ್ಭದಲ್ಲಿ ಶಂಕು ಸ್ಥಾಪನೆ ನೆರ ವೇರಿ ಸಿದರು.ಪುತ್ತೂರು ತಾಲೂಕಿನ ಒಟ್ಟು 23.33 ಕಿ.ಮೀ ಉದ್ದದ ರಸ್ತೆಗೆ 678.77 ಲಕ್ಷ ರೂ.ಗಳ ಅನು ದಾನ ಬಿಡು ಗಡೆ ಯಾಗಿದೆ.ಸುಳ್ಯ ತಾಲೂಕಿನ 20.87 ಕಿ.ಮೀ ಉದ್ದದ ರಸ್ತೆಗೆ 688.08 ಲಕ್ಷ ರೂ.ಗಳ ಅನುದಾನ ಬಿಡುಗಡೆಯಾಗಿದೆ.ಪುತ್ತೂರು ಶಾಸಕ ರಾದ ಮಲ್ಲಿಕಾ ಪ್ರಸಾದ್ ಅವರು ಅಥಿತಿ ಗಳನ್ನು ಸ್ವಾಗ ತಿಸಿ ಪ್ರಾಸ್ತಾ ವಿಕ ಮಾತು ಗಳನ್ನಾ ಡಿದರು.ಜಿಲ್ಲಾ ಉಸ್ತುವರಿ ಸಚಿವ ರಾದ ಕೃಷ್ಣ ಜೆ.ಪಾಲೆ ಮಾರ್,ಇಂಧನ ಸಚಿವೆ ಶೋಭಾ ಕರಂದ್ಲಾಜೆ,ಸಂಸದ ನಳಿನ್ ಕುಮಾರ್ ಕಟೀಲ್,ಸೇರಿದಂತೆ ಮತ್ತಿತರ ಗಣ್ಯರು ಸಮಾರಂಭದಲ್ಲಿ ಪಾಲ್ಗೊಂಡಿದ್ದರು.

50 ಅರ್ಹರಿಗೆ ರಾಜ್ಯೋತ್ಸವ ಪ್ರಶಸ್ತಿ: ಮುಖ್ಯಮಂತ್ರಿ ಸದಾನಂದ ಗೌಡ

ಮಂಗಳೂರು,ಅಕ್ಟೋಬರ್.24 : ಈ ಬಾರಿ ರಾಜ್ಯೋತ್ಸವ ಪ್ರಶಸ್ತಿಯನ್ನು 50ಕ್ಕೆ ಸೀಮಿತಗೊಳಿಸಲಾಗಿದೆ ಎಂದು ಸನ್ಮಾನ್ಯ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಹೇಳಿದ್ದಾರೆ.
ವಿವಿಧ ಕಾರ್ಯ ಕ್ರಮ ಗಳಲ್ಲಿ ಪಾಲ್ಗೊ ಳ್ಳಲು ದಕ್ಷಿಣ ಕನ್ನಡ ಜಿಲ್ಲೆಗೆ ಆಗ ಮಿಸಿದ ಅವರು ಸುಳ್ಯದ ಹೆಲಿ ಪ್ಯಾಡಿ ನಲ್ಲಿ ಸುದ್ದಿ ಗಾರ ರೊಂದಿಗೆ ಮಾತ ನಾಡಿ ದರು. ರಾಜ್ಯ ದಲ್ಲಿ ಏಕಲವ್ಯ ಪ್ರಶಸ್ತಿ ಯನ್ನು ಈಗಾಗಲೇ 15 ಕ್ಕೆ ಸೀಮಿತಗೊಳಿಸಲಾಗಿದೆ, ಅದೇ ಮಾದರಿಯಲ್ಲಿ ರಾಜ್ಯೋತ್ಸವ ಪ್ರಶಸ್ತಿಯನ್ನು 50 ಕ್ಕೆ ಸೀಮಿತಗೊಳಿಸಲಾಗುವುದು. ಪ್ರಶಸ್ತಿಗೆ 4 ಸಾವಿರ ಅರ್ಜಿಗಳು ಬಂದಿದ್ದು, ಈ ಸಂಬಂಧ 26 ಮತ್ತು 28 ರಂದು ತಾನೇ ಖುದ್ದಾಗಿ ಅರ್ಜಿಗಳನ್ನು ಪರಿಶೀಲನೆ ನಡೆಸುವುದಾಗಿ ಹೇಳಿದ ಮುಖ್ಯಮಂತ್ರಿಗಳು ಮೆರಿಟ್ ಆಧಾರದಲ್ಲಿ ಜಿಲ್ಲೆಗೆ ಒಂದರಂತೆ ಮೂವತ್ತು ಜನ ಅರ್ಹರಿಗೆ ವಿವಿಧ ಕ್ಷೇತ್ರಗಳಲ್ಲಿನ ಅವರ ಸಾಧನೆಗಳನ್ನು ಪರಿಗಣಿಸಿ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡಲಾಗುವುದು ಎಂದರು.ಪಡಿತರ ಚೀಟಿ ಗಳ ಸಮಸ್ಯೆ ಗಳಿಗೆ ಸಂಬಂ ಧಿಸಿದ ಪ್ರಶ್ನೆ ಗಳಿಗೆ ಉತ್ತ ರಿಸಿದ ಮುಖ್ಯ ಮಂತ್ರಿ ಗಳು ರಾಜ್ಯ ದಲ್ಲಿ ಸುಮಾರು 30 ಲಕ್ಷ ಬೋ ಗಸ್ ರೇಷನ್ ಕಾರ್ಡು ಗಳಿವೆ ಎಂಬ ವರದಿ ಅಧಿ ಕಾರಿ ಗಳಿಂದ ಬಂದಿದ್ದು ಮುಂದಿನ ಒಂದು ತಿಂಗ ಳೊಳಗೆ ಈ ಸಮಸ್ಯೆಗೆ ಪರಿಹಾರ ಕಂಡು ಕೊಳ್ಳಲಾಗುವುದು ಎಂದರು.ಎಲ್ ಪಿಜಿ ಗ್ಯಾಸ್ ಸಂಪರ್ಕ ಕೇಂದ್ರ ಸರ್ಕಾ ರದ ವ್ಯಾಪ್ತಿಗೆ ಬರು ತ್ತಿದೆ, ಆದರೂ ಬಡ ವರಿಗೆ ಯಾವುದೇ ತೊಂದರೆ ಗಳಾದ ರೀತಿ ಯಲ್ಲಿ ಮತ್ತು ವಾಣಿಜ್ಯ ಉದ್ದೇಶ ಕ್ಕಾಗಿ ದುರ್ಬ ಳಕೆ ಆಗದ ರೀತಿ ಯಲ್ಲಿ ಕ್ರಮ ಕೈ ಗೊಳ್ಳ ಲಾಗು ವುದು ಎಂದು ಮುಖ್ಯಮಂತ್ರಿಗಳು ತಿಳಿಸಿದರು.
ರಾಷ್ಟ್ರೀಯ ಅಭಿವೃದ್ದಿ ಸಮಿತಿಯ ಮುಂದೆ ರಾಜ್ಯಕ್ಕೆ ಸಂಬಂಧಿಸಿದಂತೆ ಪ್ರಮುಖ 12 ಬೇಡಿಕೆಗಳನ್ನು ಇಡಲಾಗಿದ್ದು ಇದು ಪರಿಶೀಲನೆಯ ಹಂತದಲ್ಲಿದೆ ಮತ್ತು ರಾಜ್ಯಕ್ಕೆ 2 ಐಐಟಿಗಳನ್ನು ನೀಡಲು ಕೇಂದ್ರ ಮುಂದೆ ಬಂದಿದೆ ಎಂದರು.
ರಾಜ್ಯದಲ್ಲಿ ಸರ್ವೇಯರ್ ಗಳ ಕೊರತೆಯನ್ನು ನೀಗಿಸಲು 2 ಸಾವಿರ ಸರ್ವೇಯರ್ ಗಳನ್ನು ಒಂದು ವರ್ಷದೊಳಗೆ ನೇಮಕ ಮಾಡಲಾಗುವುದು. ವಿಶೇಷ ತಹಸಿಲ್ದಾರರನ್ನು ನೇಮಕ ಮಾಡಲು ಕ್ರಮ ಕೈಗೊಳ್ಳಲಾಗುವುದು.ಭ್ರಷ್ಟಾಚಾರದ ಬಗ್ಗೆ ಈಗಾಗಲೇ ಸ್ಪಷ್ಟ ಸಂದೇಶ ಹೋಗಿದ್ದು, ಭ್ರಷ್ಟಾಚಾರದ ಬಗ್ಗೆ ಕಾನೂನಿನ ಅಡಿಯಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿಗಳು ಮಾಹಿತಿ ನೀಡಿದರು.ಅತಿ ವೃಷ್ಟಿ ಮತ್ತು ಅನ ವೃಷ್ಟಿಯ ಎರಡೂ ಸಮಸ್ಯೆ ಗಳು ರಾಜ್ಯ ದಲ್ಲಿವೆ ಮತ್ತು ಈ ಸಮಸ್ಯೆ ಗಳನ್ನು ಬಗೆ ಹರಿ ಸಲು ಸಾಕಷ್ಟು ಅನು ದಾನ ಕೂಡ ಸರ್ಕಾ ರದ ಬಳಿ ಇದೆ.ಯಾವುದೇ ತೊಂದರೆ ಇಲ್ಲದೇ ಸಮಸ್ಯೆ ಗಳನ್ನು ಯಶಸ್ವಿ ಯಾಗಿ ಬಗೆ ಹರಿ ಸಲಾ ಗುವುದು ಎಂದರು.ಸುಳ್ಯ ಶಾಸಕ ರಾದ ಅಂಗಾರ,ಕರಾ ವಳಿ ಅಭಿ ವೃದ್ದಿ ಪ್ರಾಧಿ ಕಾರದ ಅಧ್ಯಕ್ಷ ಬಿ.ನಾಗ ರಾಜ ಶೆಟ್ಟಿ, ಬಿಜೆಪಿ ಜಿಲ್ಲಾ ಧ್ಯಕ್ಷ ಪದ್ಮ ನಾಭ ಕೊಟ್ಟಾರಿ,ಜಿಲ್ಲಾಧಿ ಕಾರಿ ಡಾ.ಚನ್ನಪ್ಪ ಗೌಡ,ಜಿಲ್ಲಾ ಪೋಲಿಸ್ ವರಿಷ್ಟಾ ಧಿಕಾರಿ ಲಾಬೂ ರಾಂ,ಸ್ಥಳಿಯ ಮುಖಂಡರುಗಳಾದ ಮನ್ಮಥ ಕುಮಾರ್,ವೆಂಕಟ್ ದಂಬೆಕೋಡಿ,ಪುಲಸ್ಯಾ ರೈ,ಮತ್ತಿರರು ಮುಖ್ಯಮಂತ್ರಿಗಳನ್ನು ಸ್ವಾಗತಿಸಿದರು.

Sunday, October 23, 2011

ವಿರಾಟ್ ವಿರಾಗಿಗೆ ಮಹಾಮಜ್ಜನದ ಸಂಭ್ರಮ

ಮಂಗಳೂರು,ಅಕ್ಟೋಬರ್.23: ವಿರಾಟ್ ವಿರಾಗಿ ವೇಣೂರ ಗೊಮ್ಮಟೇಶನಿಗೆ ಇದೀಗ ಮಹಾಮಜ್ಜನದ ಭರದ ಸಿದ್ಧತೆ. 2012 ಜನವರಿ 29ರಂದು ಮಹಾಮಜ್ಜನಕ್ಕೆ ಈಗಾಗಲೇ ದಿನ ನಿಗಧಿಯಾಗಿದ್ದು,ಪೂರ್ವಭಾವೀ ಸಿದ್ದತೆಗಳು ಭರದಿಂದ ಸಾಗಿವೆ. ಸತತ ಒಂಬತ್ತು ದಿನಗಳ ಕಾಲ ಭಗವಾನ್ ಬಾಹುಬಲಿಗೆ ಮಹಾಮಜ್ಜನದ ವೈಭವದ ಕಾರ್ಯಕ್ರಮಗಳು ನಡೆಯಲಿವೆ.ಮತ್ತೊಮ್ಮೆ ವೇಣೂರು ಮಹಾಮಜ್ಜನದ ಚಾರಿತ್ರಿಕ ಸಂಭ್ರಮಕ್ಕೆ ಸಜ್ಜಾಗುತ್ತಿದ್ದು, ಯಾತ್ರಿಕರನ್ನು ಕೈ ಬೀಸಿ ಕರೆಯುತ್ತಿದೆ.
ಜಗ ತ್ತಿಗೆ ಶಾಂತಿ,ತ್ಯಾಗ ಮತ್ತು ಅಹಿಂ ಸೆಯ ಸಂದೇ ಶವನ್ನು ಸಾರಿದ ಭಗ ವಾನ್ ಬಾಹು ಬಲಿಯ ಪುಣ್ಯ ಕ್ಷೇತ್ರ ಗಳಲ್ಲಿ ಒಂ ದಾದ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂ ಗಡಿ ತಾಲೂ ಕಿನ ವೇಣೂರು ರಾಜ್ಯದ ಪ್ರಸಿದ್ದ ಜೈನ ತೀರ್ಥ ಕ್ಷೇತ್ರ ಗಳಲ್ಲಿ ಒಂದು. ಕ್ರಿ.ಶ. 1604 ರಲ್ಲಿ ಈ ಪ್ರದೇಶ ದಲ್ಲಿ ಆಳ್ವಿಕೆ ನಡೆಸು ತ್ತಿದ್ದ 4ನೇ ಅಜಿಲರ ಅರಸ ರಾದ ತಿಮ್ಮಣ್ಣಾಜಿಲ ಅರಸರಿಂದ ಪ್ರತಿ ಷ್ಠಾಪಿತವಾದ 35 ಅಡಿ ಎತ್ತರದ ಏಕ ಶಿಲಾ ಗೋಮ ಟೇಶ್ವರ ಮಹಾಮೂರ್ತಿ ಅತೀ ವಿರಳವಾಗಿರುವ ಮಂದಸ್ಮಿತ ಮುಖಮುದ್ರೆಯನ್ನು ಹೊಂದಿದ್ದು, ಜಾತಿ-ಭೇಧವಿಲ್ಲದೆ ಎಲ್ಲಾ ಧರ್ಮಿಯರನ್ನೂ ತನ್ನೆಡೆ ಕೈ ಬೀಸಿ ಕರೆಯುತ್ತಿದೆ.ಎಲ್ಲ ಬಾಹುಬಲಿ ವಿಗ್ರಹಗಳೂ ಗುಡ್ಡ- ಬೆಟ್ಟದಲ್ಲಿ ಪ್ರತಿಷ್ಠಾಪಿಸಿದ್ದರೆ, ವೇಣೂರಿನ ಈ ಬಾಹುಬಲಿ ಮೂರ್ತಿ ಮಾತ್ರ ಭೂಮಟ್ಟದಲ್ಲಿಯೇ ಇದೆ. ಆದ್ದರಿಂದ ಸುಲಭದಲ್ಲಿ ಬಾಹುಬಲಿ ದರ್ಶನ ಮಾಡಬಹುದಾದ ಅಪರೂಪದ ಕ್ಷೇತ್ರ ಇದಾಗಿದೆ. ಇಲ್ಲಿ ಶ್ರೀ ಆದೀಶ್ವರ ಸ್ವಾಮಿ ಬಸದಿ, ಶಾಂತೀಶ್ವರ ಸ್ವಾಮಿ ಬಸದಿ, 24 ತೀರ್ಥಂಕರರ ಬಸದಿ, ಅಕ್ಕಂಗಳ ಬಸದಿ, ಭಿನ್ನಾಣಿ ಬಸದಿ ಎಂಬ 7 ಜಿನ ಚೈತ್ಯಾಲಯಗಳಿವೆ.ಈ ಗೋಮ ಟೇಶ್ವರ ಮಹಾ ಮೂರ್ತಿಗೆ 1928, 1956, 2000 ನೇ ಇಸವಿ ಯಲ್ಲಿ ಮಹಾ ಮಸ್ತಕಾ ಭಿಷೇಕ ನಡೆ ದಿದ್ದು,ಇದೀಗ 12 ವರ್ಷಗಳ ತರು ವಾಯ ಮತ್ತೆ ಮಹಾ ಮಸ್ತಕಾ ಭಿಷೇಕ ಸಂಭ್ರಮ.ಮಸ್ತಕಾ ಭಿಷೇ ಕಕ್ಕೆ ಅನು ಕೂಲ ವಾಗು ವಂತೆ ಬಾಹುಬಲಿ ವಿಗ್ರಹದ ಹಿಂಭಾಗದಲ್ಲಿ ಈ ಬಾರಿ ಶಾಶ್ವತ ಅಟ್ಟಳಿಗೆ ರಚಿಸಲು ನಿರ್ಧರಿಸಲಾಗಿದೆ.ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಅವರು ಅಧ್ಯಕ್ಷತೆಯಲ್ಲಿ ಮತ್ತು ಜೈನ ಮುನಿಗಳ ಮಾರ್ಗ ದರ್ಶನದಲ್ಲಿ ಮಹಾ ಮಸ್ತಕಾಭಿಷೇಕ ಕಾರ್ಯ ಕ್ರಮಗಳು ನಡೆಯಲಿದ್ದು, ಪೂರ್ಣ ಕುಂಭ,ಚತುಷ್ಕೋಣ ಕುಂಭ,ಎಳನೀರು, ಹಾಲು, ಕಬ್ಬಿನ ಹಾಲು, ಶ್ರೀಗಂಧ, ಚಂದನ, ಅಷ್ಟಗಂಧ ಮೊದಲಾದವುಗಳಿಂದ ಮಸ್ತಕಾಭಿಷೇಕ ನಡೆಯಲಿದೆ.ವೇಣೂರು ಬಾಹುಬಲಿ ಮೂರ್ತಿಯ ಮಹಾ ಮಸ್ತಕಾಭಿಷೇಕ ಮಹೋತ್ಸವವನ್ನು ಯಶಸ್ವಿಯಾಗಿ ನಡೆಸಲು ರಾಜ್ಯ ಸರಕಾರದಿಂದ ಎಲ್ಲ ರೀತಿಯ ನೆರವು ನೀಡಲು ಈಗಾಗಲೇ ತೀರ್ಮಾನಿಸಿದೆ. ಜೊತೆಗೆ ರಾಜ್ಯಮಟ್ಟದ ವಸ್ತುಪ್ರದರ್ಶನ, ಧರ್ಮ, ಸಂಸ್ಕೃತಿ, ಕಲೆ, ಸಾಹಿತ್ಯ, ಸಂಗೀತ, ನಾಟಕ ಮೊದಲಾದ ಕಲಾಪ್ರಕಾರಗಳ ವಿಶೇಷ ಗೋಷ್ಠಿ, ಸಮಾವೇಶ ಕಲಾವೈಭವಗಳನ್ನು ಆಯೋಜಿಸಲಾಗಿದೆ. ದೇಶದ ವಿವಿಧ ಭಾಗಗಳಿಂದ ವಿದ್ವಾಂಸರು, ಕಲಾವಿದರು, ಸಾಹಿತಿಗಳು ಭಾಗವಹಿಸಿ ಸಾಹಿತ್ಯ ಕಲೆಯ ರಸ ಸಿಂಚನ ಉಣ ಬಡಿಸಲಿದ್ದಾರೆ.

ವೇಣೂರು ಮಹಾಮಸ್ತಕಾಭಿಷೇಕ ಪೂರ್ವಭಾವಿ ಸಭೆ

ಮಂಗಳೂರು,ಅಕ್ಟೋಬರ್.23: ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ವೇಣೂರಿನಲ್ಲಿ ಜನವರಿ 28 ರಿಂದ ಫೆಬ್ರವರಿ 5ರವರೆಗೆ ನಡೆಯಲಿರುವ ಬಾಹುಬಲಿ ಸ್ವಾಮಿಯ ಮಹಾಮಸ್ತಕಾಭಿಷೇಕಕ್ಕೆ ಸುಮಾರು 2ಲಕ್ಷ ಭಕ್ತಾದಿಗಳು ದೇಶದೆಲ್ಲೆಡೆಯಿಂದ ಆಗಮಿಸುವ ನಿರೀಕ್ಷೆಯಿದ್ದು ಈ ಸಂಬಂಧ ಅ.22 ಶನಿವಾದಂದು ಜಿಲ್ಲಾ ಉಸ್ತುವಾರಿ ಸಚಿವರಾದ ಜೆ ಕೃಷ್ಣ ಪಾಲೇಮಾರ್ ಅವರ ಅಧ್ಯಕ್ಷತೆಯಲ್ಲಿ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸಭೆ ನಡೆಸಲಾಯಿತು.ಸರ್ಕಾರ ಪ್ರವಾಸೋದ್ಯಮ ಇಲಾಖೆಯಿಂದ ಅಗತ್ಯ ಮೂಲಭೂತ ಸೌಕರ್ಯ ಒದಗಿಸಲು ಎರಡು ಕೋಟಿ ರೂ. ಬಿಡುಗಡೆಗೆ ಆದೇಶಿಸಿದ್ದು ಎಲ್ಲ ನೆರವನ್ನು ನೀಡುವುದಾಗಿ ಉಸ್ತುವಾರಿ ಸಚಿವರು ಹೇಳಿದರು. ಇಲ್ಲಿನ ಸಂಪರ್ಕ ರಸ್ತೆಗಳ ಸುಸ್ಥಿತಿಗೆ 23 ಕೋಟಿ ರೂ. ಗಳ ಪ್ರಸ್ತಾವನೆಯನ್ನು ಸಕರ್ಾರಕ್ಕೆ ಸಲ್ಲಿಸಲಾಗಿದ್ದು, ಮುಖ್ಯಮಂತ್ರಿಗಳು ಮಂಜೂರು ಮಾಡುವ ನಿರೀಕ್ಷೆಯನ್ನು ಜಿಲ್ಲಾ ಉಸ್ತುವಾರಿ ಸಚಿವರು ವ್ಯಕ್ತಪಡಿಸಿದರು. ಬೀದಿ ದೀಪಗಳ ನಿರ್ವಹಣೆ, ಕುಡಿಯುವ ನೀರು ಒದಗಿಸುವ ಬಗ್ಗೆ ಅಗತ್ಯ ನೆರವು ನೀಡುವುದಾಗಿ ಜಿಲ್ಲಾಧಿಕಾರಿ ಡಾ ಎನ್ ಎಸ್ ಚನ್ನಪ್ಪಗೌಡ ಹೇಳಿದರು.ವಸತಿ ಹಾಗೂ ಆಹಾರದ ಶುಚಿತ್ವಕ್ಕೆ ಸಂಬಂಧಿಸಿದಂತೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನೀಡುವ ಕುರಿತು ಮಸ್ತಕಾಭಿಷೇಕ ಸಮಿತಿಯ ಜೊತೆಗೆ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಪಾಲ್ಗೊಳ್ಳುವಿಕೆಯನ್ನು ಖಚಿತಪಡಿಸುವುದರಿಂದ ಜಿಲ್ಲಾಡಳಿತ ಪೂರಕ ನೆರವು ಒದಗಿಸುವುದಾಗಿ ಜಿಲ್ಲಾಧಿಕಾರಿಗಳು ಹೇಳಿದರು. ಸಮಿತಿ ಮತ್ತು ಜಿಲ್ಲಾಡಳಿತ ನಡುವೆ ಸಮನ್ವಯ ಸಾಧಿಸಲು ಸಾರ್ವಜನಿಕ ಸಂಪರ್ಕಧಿಕಾರಿಯನ್ನು ನೀಡುವುದಾಗಿಯೂ ಜಿಲ್ಲಾಧಿಕಾರಿಗಳು ಹೇಳಿದರು.
ಫೆಬ್ರವರಿ ಮೂರು ಮತ್ತು ನಾಲ್ಕರಂದು ಶಾಲೆಗಳಿಗೆ ರಜೆ ಘೋಷಿಸುವ ಬಗ್ಗೆ, ಹೆಚ್ಚುವರಿ ಬಸ್ ಸಂಪರ್ಕ ಕಲ್ಲಿಸುವ ಬಗ್ಗೆಯೂ ಸಭೆಯಲ್ಲಿ ಚರ್ಚಿಸಲಾಯಿತು. ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಕೆ ಟಿ ಶೈಲಜಾ ಭಟ್, ಶಾಸಕರಾದ ಅಭಯ ಚಂದ್ರ ಜೈನ್, ಯು ಟಿ ಖಾದರ್, ಪದ್ಮಪ್ರಸಾದ್ ಅಜಿಲರು, ಕೃಷ್ಣ ರಾಜ ಹೆಗಡೆ, ಧರಣೇಂದ್ರ ಕುಮಾರ್ ಉಪಸ್ಥಿತರಿದ್ದರು. ಸಮಿತಿಯ ಇತರ ಪದಾಧಿಕಾರಿಗಳು, ತಹಸೀಲ್ದಾರರು, ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.

Saturday, October 22, 2011

ಮಂಗಳೂರಿನಲ್ಲಿ 17ನೇ ರಾಷ್ಟ್ರೀಯ ಯುವಜನೋತ್ಸವ

ಮಂಗಳೂರು,ಅಕ್ಟೋಬರ್.22: ಜನವರಿ 12ರಿಂದ 16ರವರೆಗೆ 17ನೇ ರಾಷ್ಟ್ರೀಯ ಯುವಜನೋತ್ಸವವನ್ನು ವಿಜೃಂಭಣೆಯಿಂದ ಮಂಗಳೂರಿನಲ್ಲಿ ಆಯೋಜಿಸಲು ಜಿಲ್ಲಾ ಉಸ್ತುವಾರಿ ಸಚಿವರಾದ ಜೆ. ಕೃಷ್ಣ ಪಾಲೇಮಾರ್ ಅವರ ಅಧ್ಯಕ್ಷತೆಯಲ್ಲಿ ಇಂದು ಪೂರ್ವಭಾವಿ ಸಭೆ ನಡೆಯಿತು.
ಇಂದು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಸಚಿವರು, ರಾಷ್ಟ್ರೀಯ ಮಟ್ಟದ ಈ ಉತ್ಸವವನ್ನು ಎಲ್ಲರ ಸಹಕಾರ ಹಾಗೂ ಸಮನ್ವಯದಿಂದ ಅತ್ಯುತ್ತಮವಾಗಿ ಎಲ್ಲರೂ ಶ್ಲಾಘಿಸುವಂತೆ ಏರ್ಪಡಿಸಬೇಕೆಂದು ಸೂಚಿಸಿದರು.
ರಾಷ್ಟ್ರ ಮಟ್ಟದಲ್ಲಿ ಮಂಗಳೂರು ಗುರುತಿಸಲ್ಪಡುವ ಅತ್ಯುತ್ತಮ ಅವಕಾಶ ನಮ್ಮ ಜಿಲ್ಲೆಗೆ ಬಂದಿದ್ದು, ಅವಕಾಶದ ಸದ್ಬಳಕೆಯ ಜೊತೆಗೆ ಕರಾವಳಿಯ ವೈಶಿಷ್ಟ್ಯ ವನ್ನು, ಆತಿಥ್ಯವನ್ನು ಅತಿಥಿಗಳಿಗೆ ನೀಡಲು ಎಲ್ಲರೂ ಒಗ್ಗಟ್ಟಿನಿಂದ ಕರ್ತವ್ಯ ನಿರ್ವಹಿಸಬೇಕೆಂದರು. ಹಲವು ಸಮಾರಂಭಗಳನ್ನು ನಿರ್ವಹಿಸಿ ಹೆಸರು ಮಾಡಿದ ಮಹನೀಯರು ಜಿಲ್ಲೆಯಲ್ಲಿದ್ದು, ಜಿಲ್ಲಾಡಳಿತ ಇಂತಹ ಪರಿಣತರ ನೆರವನ್ನು, ಯುವಶಕ್ತಿಯನ್ನು ಈ ಸಂದರ್ಭದಲ್ಲಿ ಬಳಸಿಕೊಳ್ಳಬೇಕೆಂದು ನುಡಿದರು.
ಅತಿಥಿಗಳಿಗೆ ವಸತಿ ಮತ್ತು ಸಾರಿಗೆ ವ್ಯವಸ್ಥೆ ಹಾಗೂ ಊಟದ ವ್ಯವಸ್ಥೆಗೆ ಹೆಚ್ಚಿನ ಆದ್ಯತೆ ನೀಡಿ ಎಲ್ಲ ಸಮಿತಿಗಳಲ್ಲೂ ಜನಪ್ರತಿನಿಧಿಗಳನ್ನು ಸೇರಿಸಿಕೊಂಡು ಉತ್ಸವ ಯಶಸ್ವಗೊಳಿಸಬೇಕು ಎಂದ ಅವರು, ನಗರದ ಎಲ್ಲ ದೇವಾಲಯ, ಮಸೀದಿ, ಚರ್ಚು ಗಳು ಈ ದಿನಗಳಲ್ಲಿ ದೀಪಾಲಂಕಾರಗಳಿಂದ ಕಂಗೊಳಿಸಬೇಕು. ಇದಕ್ಕೆ ಎಲ್ಲ ಧಾರ್ಮಿಕ ಸಂಸ್ಥೆಗಳವರೇ ಸ್ವಯಂ ಸನ್ನದ್ಧರಾಗಬೇಕೆಂದರು. ಮಹಾನಗರಪಾಲಿಕೆ ನಗರದ ಸೌಂದರ್ಯ ಮತ್ತು ದೀಪಾಲಂಕಾರದ ಹೊಣೆ ವಹಿಸಬೇಕು ಎಂದ ಅವರು, ವಿಫುಲ ಪ್ರವಾಸಿ ಕ್ಷೇತ್ರಗಳನ್ನು ಹೊಂದಿರುವ ನಗರದಲ್ಲಿ ಎಲ್ಲರಿಗೂ ಅನುಕೂಲವಾಗುವಂತೆ ಮಾರ್ಗದರ್ಶಕ ಫಲಕಗಳಿರಬೇಕೆಂದರು. ಅತಿಥಿಗಳಿಗೆ ಊಟ ಹಾಗೂ ವ್ಯವಸ್ಥೆಯಲ್ಲಿ ಯಾವುದೇ ಕುಂದುಂಟಾಗ ಬಾರದು. ನಗರದಲ್ಲೆಡೆ ಹಬ್ಬದ ವಾತಾವರಣವಿರಬೇಕೆಂದರು. ಸಭೆ ಯಲ್ಲಿ ಉಪಸ್ಥಿ ತರಿದ್ದ ಉಪ ಸಭಾ ಪತಿ ಗಳಾದ ಎನ್. ಯೋ ಗೀಶ್ ಭಟ್ ಅವರು ಮಾತ ನಾಡಿ, ದಕ್ಷಿಣ ಕನ್ನಡ ಜಿಲ್ಲೆಯು ಆದಾರಾ ತಿಥ್ಯಕ್ಕೆ ಹೆಸ ರಾಗಿದ್ದು, ಎಲ್ಲ ವಲ ಯದ ಪರಿಣ ತರ ನೆರ ವಿನಿಂದ ಯುವ ಜನೋ ತ್ಸವ ಯಶಸ್ವಿ ಯಾಗು ವಂತೆ ನೋಡಿ ಕೊಳ್ಳುವ ಹೊಣೆ ಯರಿತು ಕಾರ್ಯೋ ನ್ಮುಖ ರಾಗ ಬೇಕೆಂ ದರು. ಆರು ಸಾವಿರ ಅತಿಥಿ ಗಳನ್ನು ದೇಶ ದೆಲ್ಲೆಡೆ ಯಿಂದ ನಿರೀಕ್ಷಿ ಸಲಾ ಗುತ್ತಿದ್ದು, ನಮ್ಮ ಪ್ರವಾಸೋದ್ಯಮ ಅಭಿವೃದ್ಧಿಗೆ ಇದೊಂದು ಅತ್ಯುತ್ತಮ ವೇದಿಕೆಯಾಗಲಿದೆ. ಉತ್ತಮವಾಗಿ ಕಾರ್ಯಕ್ರಮ ಆಯೋಜಿಸುವುದರಿಂದ ರಾಷ್ಟ್ರದೆಲ್ಲೆಡೆ ಜಿಲ್ಲೆಯ ಬಗ್ಗೆ ಉತ್ತಮ ಸಂದೇಶ ಹರಿಯಲಿದೆ ಎಂದರು. ರಾಜ್ಯ ಮಟ್ಟದಲ್ಲಿ ಈ ಸಂಬಂಧ ಪೂರ್ವಭಾವಿ ಸಭೆಯಾಗಿದ್ದು, ಜಿಲ್ಲೆಯಲ್ಲಿ ಪ್ರಥಮ ಸಭೆ ಇದಾಗಿದೆ. ಈ ಸಂಬಂಧ ಹಲವು ಸಮಿತಿಗಳನ್ನು ರಚಿಸಲಾಗಿದ್ದರೂ ಮುಂದಿನ ಸಭೆಯಲ್ಲಿ ಸಮಿತಿಗೆ ಅಂತಿಮ ರೂಪು ರೇಷೆ ನೀಡಲಾಗುವುದು ಎಂದು ಸಭೆಯಲ್ಲಿ ಪ್ರಾಸ್ತಾವಿಕ ಮಾತುಗಳನ್ನಾಡಿದ ಜಿಲ್ಲಾಧಿಕಾರಿ ಡಾ ಎನ್ ಎಸ್ ಚನ್ನಪ್ಪ ಗೌಡ ತಿಳಿಸಿದರು. ಯುವ ಜನ ಸೇವೆ ಮತ್ತು ಕ್ರೀಡಾ ಇಲಾಖೆ ನಿರ್ದೇಶಕರಾದ ಡಾ ಚಂದ್ರಶೇಖರ್ ಅವರು ಯುವಜನೋತ್ಸವದ ಆಶಯವನ್ನು ಸಭೆಗೆ ವಿವರಿಸಿದರು. ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್, ಕಸಾಪ ಅಧ್ಯಕ್ಷರಾದ ಪ್ರದೀಪ್ ಕುಮಾರ್ ಕಲ್ಕೂರ ಅವರನ್ನೊಳಗೊಂಡಂತೆ ಎಲ್ಲ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.

ಮರಳುಗಣಿಗಾರಿಕೆ ಪರವಾನಿಗೆ ಗಣಿ ಭೂವಿಜ್ಞಾನ ಇಲಾಖೆಗೆ ನೀಡಿ;ಪಾಲೆಮಾರ್

ಮಂಗಳೂರು,ಅಕ್ಟೋಬರ್.22:ದಕ್ಷಿಣ ಕನ್ನಡ ಜಿಲ್ಲೆಯ ಜನರನ್ನು ಕಾಡುತ್ತಿರುವ ಮರಳುಗಾರಿಕೆ ಸಮಸ್ಯೆಯ ಕುರಿತಂತೆ ಸರಕಾರದಿಂದ ಮುಂದಿನ ಆದೇಶ ಬರುವವರೆಗೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯು ಮರಳುಗಾರಿಕೆಗೆ ಜಿಲ್ಲೆಯಲ್ಲಿ ಪರವಾನಿಗೆ ನೀಡುವಂತೆ ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣ ಜೆ. ಪಾಲೆಮಾರ್ ನಿರ್ದೇಶನ ನೀಡಿದ್ದಾರೆ.ಜಿಲ್ಲಾ ಪಂಚಾ ಯತ್ ಸಭಾಂಗ ಣದಲ್ಲಿ ಇಂದು ನಡೆದ ತ್ರೈಮಾಸಿಕ ಕೆಡಿಪಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.ಮರಳು ನೀತಿಯಿಂದಾಗಿ ಜಿಲ್ಲೆಯಲ್ಲಿ ಮನೆಕಟ್ಟಲು ಮರಳು ಸಿಗದಂತಾಗಿದೆ. ಇದರಿಂದ ಜನಸಾಮಾನ್ಯರು ತೊಂದರೆ ಪಡುವಂತಾಗಿದೆ ಎಂದು ಸಭೆಯಲ್ಲಿ ಉಪಸ್ಥಿರಿದ್ದ ಶಾಸಕರಾದ ಯು.ಟಿ.ಖಾದರ್, ಅಭಯಚಂದ್ರ ಜೈನ್ ಹಾಗೂ ಕೋಟ ಶ್ರೀನಿವಾಸ ಪೂಜಾರಿ ವಿಷಯ ಪ್ರಸ್ತಾಪಿಸಿದರು. ಸರಕಾರದಿಂದ ಆದೇಶಬರುವವರೆಗೆ ಮಾನವಶ್ರಮದಿಂದ ಮರಳುಗಾರಿಕೆ ನಡೆಸಲು ಪರವಾನಿಗೆ ನೀಡುವಂತೆ ಸೂಚಿಸಿದರು. ಈ ಸಂದರ್ಭ ಮನೆಕಟ್ಟಲು ಅಗತ್ಯವಾದ ಕೆಂಪುಕಲ್ಲಿನ ಕೊರತೆಯ ಸಮಸ್ಯೆ ಸಭೆಯಲ್ಲಿ ಪ್ರಸ್ತಾಪವಾಯಿತು.
ಪಡಿತರ ಚೀಟಿಯಲ್ಲಾಗಿರುವ ಸಮಸ್ಯೆ ಚರ್ಚೆಗೆ ಉತ್ತರಿಸಿದ ಆಹಾರ ಮತ್ತು ನಾಗರೀಕ ಪೂರೈಕೆ ಇಲಾಖೆ ಉಪನಿರ್ದೇಶಕರು, ಬಡ ಕುಟುಂಬಗಳು ತಾವು ವಾಸ್ತವ್ಯ ಇರುವ ಕುರಿತಂತೆ ಸ್ಥಳೀಯ ಪಿಡಿಒಗಳಿಂದ ವಾಸ್ತವ್ಯ ಸರ್ಟಿಫಿಕೇಟ್ ಗಳನ್ನು ನೀಡಿದ್ದಲ್ಲಿ ಅಂತಹವರಿಗೆ ಪಡಿತರ ಚೀಟಿಗಳನ್ನು ಮತ್ತೆ ಮುಂದುವರಿಸಲಾಗುವುದು ಎಂದು ಹೇಳಿದರು.
ನಿಗ ದಿತ ದರ ಕ್ಕಿಂತ ಹೆಚ್ಚಿನ ಬೆಲೆಗೆ ರಸ ಗೊಬ್ಬ ರಗ ಳನ್ನು ಪೂ ರೈಕೆ ಮಾಡು ವುದು ಕಂಡು ಬಂದರೆ ತಕ್ಷಣ ಅಧಿ ಕಾರಿ ಗಳು ದಾಳಿ ನಡೆಸಿ ವಶ ಪಡಿಸಿ ಕೊಳ್ಳಿ. ಇದಕ್ಕೆ ಅಗತ್ಯ ವಾದ ಪೊಲೀಸ್ ನೆರವು, ಸ್ಥಳೀಯ ತಹ ಶೀಲ್ದಾ ರರ ನೆರ ವನ್ನು ಪಡೆದು ಕೊಳ್ಳಿ ಎಂದು ಜಿಲ್ಲಾ ಉಸ್ತು ವಾರಿ ಸಚಿವರು ಕೃಷಿ ಇಲಾಖೆಯ ಅಧಿಕಾ ರಿಗಳಿಗೆ ಸೂಚಿ ಸಿದರು.ಈ ಬಗ್ಗೆ ಜಾಗೃತ ದಳ ರಚಿಸಿ ದಾಳಿ ನಡೆಸಲು ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ ಕೆ ಎನ್ ವಿಜಯಪ್ರಕಾಶ್ ಸೂಚನೆ ನೀಡಿದ್ದರು. ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಪದ್ಮಯ್ಯ ನಾಯಕ್ ಸಾಮಾನ್ಯ ಸಭೆಯ ನಿರ್ಣಯದ ಹಿನ್ನೆಲೆಯಲ್ಲಿ ನಿನ್ನೆ ನಡೆದಿರುವ ಬೆಳವಣಿಗೆಯ ಕುರಿತಂತೆ ಮಾಹಿತಿ ನೀಡಿದರು. ರಸಗೊಬ್ಬರವನ್ನು ಅಕ್ರಮವಾಗಿ ಅಧಿಕ ಬೆಲೆಗೆ ಮಾರಾಟ ಮಾಡುವವರಿಗೆ ಲೈಸೆನ್ಸ್ ರದ್ದುಪಡಿಸಲು ನೋಟೀಸು ನೀಡುವ ಎಚ್ಚರಿಕೆ ನೀಡಲಾಗಿದೆ. ಮಾತ್ರವಲ್ಲದೆ ನಿನೆ ಜಾಗೃತ ದಳದ ಅಧಿಕಾರಿಗಳು ಸುಳ್ಯ ಮತ್ತು ಉಪ್ಪಿನಂಗಡಿ ಮತ್ತು ನೆಲ್ಯಾಡಿ ಪ್ರದೇಶಗಳಿಗೆ ಭೇಟಿ ನೀಡಿ ನಿಗದಿತ ದರದಲ್ಲಿ ಮಾರಾಟ ಮಾಡಲು ಸೂಚಿರುವುದಾಗಿ ತಿಳಿಸಿದರು.
ರಸಗೊಬ್ಬರದ ಮೇಲೆ ಹಾಕಲಾಗಿರುವ ನಿಗದಿತ ಬೆಲೆಗಿಂತ ಹೆಚ್ಚಿನ ಬೆಲೆಯನ್ನು ಮಾರಾಟದಾರರು ಕೇಳಿದರೆ ತಕ್ಷಣ ಸಹಾಯಕ ಕೃಷಿ ನಿರ್ದೇಶಕರಿಗೆ ದೂರು ನೀಡುವಂತೆ ಕೋರಿಕೊಂಡರಲ್ಲದೆ, ಇತರ ಅಧಿಕಾರಿಗಳ ನೆರವನ್ನು ಅವರು ಕೋರಿದರು.ಮಂಗ ಳೂರು ವಿಮಾನ ನಿಲ್ದಾ ಣದ ರನ್ ವೇ ವಿಸ್ತ ರಣೆ ಹಾಗೂ ಅಂತಾ ರಾಷ್ಟ್ರೀಯ ನಿರ್ಮಾ ಣವಾ ಗಿಸಲು ಡೆಕ್ಕನ್ ಪಾರ್ಕ್ ಭೂ ಸ್ವಾಧೀ ನಕ್ಕೆ 3,09,19,560 ರೂ. ಹಾಗೂ ರೆನ್ವೇ ವಿಸ್ತ ರಣೆಗೆ 150 ಎಕರೆ ಜಮೀನಿನ ಭೂ ಸ್ವಾಧೀ ನಕ್ಕೆ ತಗಲುವ ಅಂ ದಾಜು ವೆಚ್ಚ 138.39 ಕೋಟಿ ರೂ. ಬಿಡು ಗಡೆಗೆ ಸರ ಕಾರಕ್ಕೆ ಪ್ರಸ್ತಾ ವನೆ ಸಲ್ಲಿಸಲಾಗಿದೆ ಎಂಬ ಮಾಹಿತಿಯನ್ನು ಅಧಿಕಾರಿಗಳು ಸಭೆಗೆ ನೀಡಿದರು.
ಜಿಲ್ಲಾ ಪಂಚಾಯತ್ ವ್ಯಾಪ್ತಿಯ ಎಲ್ಲಾ ರಸ್ತೆಗಳ ಹೊಂಡಗಳನ್ನು ಮುಚ್ಚಿಸಲು ಸಂಬಂಧಪಟ್ಟ ಎಲ್ಲಾ ವಿಭಾಗದ ಅಧಿಕಾರಿಗಳು ಕಾರ್ಯತತ್ಪರರಾಗಿ ಕ್ರಮ ಕೈಗೊಳ್ಳಬೇಕು. ಜನವರಿಯೊಳಗೆ ಎಲ್ಲಾ ರಸ್ತೆಗಳ ಹೊಂಡ ಮುಚ್ಚಿಸಬೇಕು. ಈ ಬಗ್ಗೆ ಈಗಾಗಲೇ ಮುಖ್ಯಮಂತ್ರಿ ಆದೇಶ ನೀಡಿದ್ದಾರೆ ಎಂದು ಸಚಿವ ಪಾಲೆಮಾರ್ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಶೈಲಜಾ ಭಟ್, ಉಪಾಧ್ಯಕ್ಷರಾದ ಧನಲಕ್ಷ್ಮಿ, ಸ್ಥಾಯಿ ಸಮಿತಿ ಅಧ್ಯಕ್ಷರಾದ ಜನಾರ್ದನ ಗೌಡ, ನವೀನ್ ಕುಮಾರ್ ಮೇನಾಲ ಉಪಸ್ಥಿತರಿದ್ದರು.

'ಮರಣ ಕಾರಣ ನಮೂದಿಸಿ'

ಮಂಗಳೂರು,ಅಕ್ಟೋಬರ್.22: ವೈದ್ಯಾಧಿಕಾರಿಗಳು ಮರಣ ಕಾರಣ ವೈದ್ಯಕೀಯ ಪ್ರಮಾಣಪತ್ರದ ನಮೂನೆ-4, 4-ಎ ಯಲ್ಲಿ ಮರಣ ಹೊಂದಿರುವ ವ್ಯಕ್ತಿಯ ಮರಣಕ್ಕೆ ಸಂಬಂಧಿಸಿದ ತಕ್ಷಣ ಹಾಗೂ ಮೂಲ ಕಾರಣಗಳ ಬಗ್ಗೆ ಸರಿಯಾಗಿ ಮಾಹಿತಿ ಭರ್ತಿ ಮಾಡಬೇಕು ಎಂದು ಡಾ. ಜಯಪ್ರಕಾಶ್ ಕೆ. ಹೇಳಿದರು.ಇಂದು ನಗರದ ಮಂಗ ಳಾದೇವಿ ದೇವ ಸ್ಥಾನದ ಬಳಿ ಇರುವ ದೇವಿ ಕೃಪಾ ಸಭಾ ಭವನ ದಲ್ಲಿ ಭಾರ ತೀಯ ಜನನ ಮರಣ ಮಹಾ ನೋಂದ ಣಾಧಿ ಕಾರಿಗಳು ಭಾರತ ಸರ್ಕಾರ ಇವರ ಸೂಚನೆ ಯಂತೆ ಜಿಲ್ಲಾ ಸಂಖ್ಯಾ ಸಂಗ್ರ ಹಣಾ ಧಿಕಾರಿ ಹಾಗೂ ಅಪರ ಜಿಲ್ಲಾ ಜನನ ಮರಣ ಗಳ ರಿಜಿಸ್ಟ್ರಾರ್ ಅವರು ಆಯೋಜಿಸಿದ್ದ 2011-12 ನೇ ಸಾಲಿನ ಮರಣ ಕಾರಣ ವೈದ್ಯಕೀಯ ಪ್ರಮಾಣಪತ್ರ ತರಬೇತಿ ಕಾರ್ಯಾಗಾರದಲ್ಲಿ ಮಾತನಾಡುತ್ತಿದ್ದರು.
ವೈದ್ಯಕೀಯ ಪ್ರಮಾಣ ಪತ್ರ ನೀಡುವಾಗ ಸರಿಯಾದ ಕಾರಣ ನೀಡಬೇಕಲ್ಲದೆ ಯಾವುದೇ ಅಥವಾ ಯಾರದೇ ಒತ್ತಡಕ್ಕೆ ಮಣಿಯಬಾರದು ಎಂದ ಅವರು, ಮುಂದಿನ ಎರಡು ವರ್ಷಗಳಲ್ಲಿ ಈ ಅಂಕಿ ಅಂಶಗಳು ಸಮಗ್ರವಾಗಿ ಆನ್ ಲೈನ್ ನಲ್ಲಿ ಲಭ್ಯವಾಗಲಿದೆ ಎಂದು ಕಾರ್ಯಾಗಾರದ ಮುಖ್ಯ ತರಬೇತುದಾರರೂ ಆದ ಡಾ. ಜಯಪ್ರಕಾಶ್ ವಿವರಿಸಿದರು.ರಾಷ್ಟ್ರದಲ್ಲಿ ಮರಣ ಕಾರಣ ವೈದ್ಯಕೀಯ ಪ್ರಮಾಣ ಪತ್ರ ಮರಣಕಾರಣಗಳ ಬಗ್ಗೆ ವೈಜ್ಞಾನಿಕವಾಗಿ ಸಂಗ್ರಹಿಸುವಂತಹ ಮಾಹಿತಿಯಾಗಿರುತ್ತದೆ. 1967ರಿಂದ ರಾಜ್ಯದಲ್ಲಿ ಇದನ್ನು ಆರಂಭಿಸಲಾಗಿದ್ದು, 1969ರ ನಂತರ ಜನನ ಮರಣ ನೋಂದಣಿಯ ಅಧಿನಿಯಮದಡಿ ರೋಗಿಗೆ ಶುಶ್ರೂಷೆ ನೀಡಿದ ವೈದ್ಯರು ಮರಣದ ನಂತರ ಮರಣ ಕಾರಣ ವೈದ್ಯಕೀಯ ಪ್ರಮಾಣ ಪತ್ರ ನೀಡುವುದನ್ನು ಕಡ್ಡಾಯ ಮಾಡಲಾಗಿದೆ. ಮರಣ ಕಾರಣಕ್ಕೆ ಸಂಬಂಧಿಸಿದ ಅಂಕಿ ಅಂಶಗಳನ್ನು ಅಧಿನಿಯಮದ ಪ್ರಕಾರ ವಾರ್ಷಿಕವಾಗಿ ಸಂಗ್ರಹಿಸಲಾಗುತ್ತದೆ. ಇದರಿಂದ ಯೋಜನಾ ಕಾರ್ಯಕ್ರಮಗಳನ್ನು ರೂಪಿಸಲು ನೆರವಾಗುವುದು ಎಂದು ಜನನ ಮರಣ ಮುಖ್ಯ ನೋಂದಣಾಧಿಕಾರಿ ಬಿ.ಜಿ. ಕೃಷ್ಣ ಮೂರ್ತಿ ಅವರು ವಿವರಿಸಿದರು.ಜಾಗತಿಕ ವೈದ್ಯಕೀಯ ಸಂಸ್ಥೆಯ ಆಶ್ರಯದಲ್ಲಿ ಬರುವ ಅಂತಾರಾಷ್ಟ್ರೀಯ ವೈದ್ಯಕೀಯ ಸಮೂಹ ರೋಗಗಳನ್ನು ಅಂತರ ರಾಷ್ಟ್ರೀಯ ರೋಗಗಳ ವರ್ಗೀಕರಣ ಪ್ರಕಾರ ವರ್ಗೀಕರಿಸುತ್ತಾರೆ. ಭಾರತದಲ್ಲಿ ಇದನ್ನು ಮರಣ ಕಾರಣ ವೈದ್ಯಕೀಯ ಪ್ರಮಾಣ ಪತ್ರದ ಕಾರ್ಯಕ್ರಮದಡಿಯಲ್ಲಿ ಅಳವಡಿಸಲಾಗುತ್ತಿದೆ.
ಭಾರತದ ಮಹಾ ನೋಂದಣಾಧಿಕಾರಿಗಳು ಗೊತ್ತುಪಡಿಸಿರುವ ಮರಣ ಕಾರಣ ವೈದ್ಯಕೀಯ ಪ್ರಮಾಣಪತ್ರಗಳ ಕೋಷ್ಟಕಗಳನ್ನು ತಯಾರಿಸಲು ಆರ್ಥಿಕ ಮತ್ತು ಸಾಂಖ್ಯಿಕ ನಿರ್ದೇಶನಾಲಯ ನಿಗದಿತ ನಮೂನೆ-4, 4-ಎ ಯಲ್ಲಿ ಮರಣ ಕಾರಣಗಳ ಮಾಹಿತಿಯನ್ನು ಸಂಗ್ರಹಿಸುತ್ತದೆ. ಮತ್ತೆ ಈ ಮಾಹಿತಿಗಳನ್ನು ಅಂತರರಾಷ್ಟ್ರೀಯ ರೋಗಗಳ ವರ್ಗೀಕರಣ, ಹತ್ತನೇ ಪರಿಷ್ಕೃತ ಸಂಕೇತ ಪ್ರಕಾರ ಕ್ರೂಢೀಕರಿಸಲಾಗುವುದು. ಪ್ರಮುಖ ಜನಸಂಖ್ಯಾ ಶಾಸ್ತ್ರದ ಸೂಚಿಗಳಾದ ಶಿಶುಮರಣ ಪ್ರಮಾಣ,ತಾಯಂದಿರ ಮರಣ ಪ್ರಮಾಣ ಹಾಗೂ ಮಕ್ಕಳ ಮರಣ ಪ್ರಮಾಣ ಇವುಗಳನ್ನು ಈ ಮಾಹಿತಿಯಿಂದ ತಯಾರಿಸಲಾಗುತ್ತಿದೆ ಎಂದೂ ಅವರು ವಿವರಿಸಿದರು.
ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಕೆ. ರಮೇಶ ಉಪಾಧ್ಯ ಅಧ್ಯಕ್ಷತೆ ವಹಿಸಿದ್ದರು. ಸಹಾಯಕ ನಿರ್ದೇಶಕರಾದ ಪ್ರದೀಪ್ ಡಿ ಸೋಜಾ ಸ್ವಾಗತಿಸಿದರು. ಸಹಾಯಕ ಸಾಂಖ್ಯಿಕ ಅಧಿಕಾರಿ ಎನ್. ಗಣಪತಿ ಭಟ್ ಧನ್ಯವಾದ ಗೈದರು. ನೀತಾ ಅಂಜಲಿನ್ ಡೇಸಾ ಕಾರ್ಯಕ್ರಮ ನಿರೂಪಿಸಿದರು.

ರಾಜ್ಯೋತ್ಸವ ಪೂರ್ವಭಾವಿ ಸಭೆ

ಮಂಗಳೂರು,ಅಕ್ಟೋಬರ್.22:ನವೆಂಬರ್ ಒಂದರಂದು ಕನ್ನಡ ರಾಜ್ಯೋತ್ಸವವನ್ನು ಅರ್ಥಪೂರ್ಣವಾಗಿ ಹಾಗೂ ಅದ್ದೂರಿಯಾಗಿ ಆಚರಿಸಲು ಜಿಲ್ಲಾಧಿಕಾರಿ ಡಾ ಎನ್ ಎಸ್ ಚೆನ್ನಪ್ಪಗೌಡ ಅವರ ಅಧ್ಯಕ್ಷತೆಯಲ್ಲಿ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಅ. 21 ರಂದು ಅಧಿಕಾರಿಗಳ ಸಭೆ ನಡೆಯಿತು.ರಾಜ್ಯೋತ್ಸವ ಮೆರವಣಿಗೆಯನ್ನು ಆಕರ್ಷಕವಾಗಿ ಹಾಗೂ ಅದ್ದೂರಿಯಾಗಿ ನಡೆಸಲು ಜಿಲ್ಲಾಧಿಕಾರಿಗಳು ಉಪಸಮಿತಿಗಳ ಅಧಿಕಾರಿಗಳಿಗೆ ಸೂಚನೆ ನೀಡಿದರು. ವಿವಿಧ ಇಲಾಖೆಗಳಿಂದ ಕನಿಷ್ಠ ಎಂಟು ಟ್ಯಾಬ್ಲೊಗಳು ಹಾಗೂ ಒಂದು ಸಾವಿರ ಮಕ್ಕಳು ಬೆಳಗ್ಗಿನ ಮೆರವಣಿಗೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಬೆಳಗ್ಗೆ 7.45 ಕ್ಕೆ ಮೆರವಣಿಗೆ ಜ್ಯೋತಿ ವೃತ್ತದಿಂದ ಆರಂಭಗೊಳ್ಳಲಿದೆ. ಮೈದಾನವನ್ನು ಸಿಂಗರಿಸಲು ಮಹಾನಗರಪಾಲಿಕೆಯವರಿಗೆ ಹಾಗೂ ಮಕ್ಕಳಿಗೆ ಉಪಹಾರ ಹಾಗೂ ಸಿಹಿತಿಂಡಿ ವಿತರಿಸಲು ವಿದ್ಯಾಂಗ ಉಪನಿರ್ದೇಶಕರಿಗೆ ಸೂಚನೆ ನೀಡಿದರು. ಸಮಾರಂಭದಲ್ಲಿ ಯಾವುದೇ ಕಾರಣಕ್ಕೂ ಪ್ಲಾಸ್ಟಿಕ್ ಬಳಕೆಯನ್ನು ಜಿಲ್ಲಾಧಿಕಾರಿಗಳು ನಿಷೇಧಿಸಿದ್ದಾರೆ. ಸಮಾರಂಭ ಸುವ್ಯವಸ್ಥಿತವಾಗಿ ಹಾಗೂ ಸಮರ್ಪಕವಾಗಿ ನಡೆಸಲು ವಿವಿಧ ಅಧಿಕಾರಿಗಳಿಗೆ ಹೊಣೆಗಾರಿಕೆಯನ್ನು ವಹಿಸಲಾಗಿದೆ. ಮೈದಾನದಲ್ಲಿ ಮಕ್ಕಳ ಕಾರ್ಯಕ್ರಮ ಹಾಗೂ ಅಪರಾಹ್ನ ಪುರಭವನದಲ್ಲಿ ನಡೆಯಲಿರುವ ಕಾರ್ಯಕ್ರಮಗಳ ಪೂರ್ವತಯಾರಿ ಎಲ್ಲವನ್ನೂ ಜಿಲ್ಲಾಧಿಕಾರಿಗಳು ಖುದ್ದಾಗಿ ವೀಕ್ಷಿಸಲಿದ್ದಾರೆ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ, ಅಪರ ಜಿಲ್ಲಾಧಿಕಾರಿ ದಯಾನಂದ ಕೆ ಎ, ಸಹಾಯಕ ಆಯುಕ್ತರಾದ ಡಾ.ವೆಂಕಟೇಶ್ ಅವರನ್ನೊಳಗೊಂಡಂತೆ ವಿವಿಧ ಇಲಾಖಾಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.

Friday, October 21, 2011

ಪೋಲಿಸರಿಗೆ ಸಾಮಾಜಿಕ ಭದ್ರತೆ ಅವಶ್ಯಕ;ಪ್ರೊ.ಟಿ.ಸಿ.ಶಿವಶಂಕರ ಮೂರ್ತಿ

ಮಂಗಳೂರು,ಅಕ್ಟೋಬರ್.21: ಸಭ್ಯ ಸಮಾಜದ ಸ್ವಾಸ್ಯ್ಥ ಕಾಪಾಡುವಲ್ಲಿ ಸಮಗ್ರ ಪೋಲಿಸ್ ವ್ಯವಸ್ಥೆ ಅತ್ಯವಶ್ಯಕ. ಅವರ ಕರ್ತವ್ಯ ತತ್ಪರೆಯಿಂದ ನಮ್ಮ ಸಮಾಜ ಸುರಕ್ಷಿತವಾಗಿದೆ. ಇಂತಹವರ ಬಗ್ಗೆ ನಾಗರೀಕರಾದ ನಾವೆಲ್ಲರು ಅವರಿಗೆ ಗೌರವ ಸಲ್ಲಿಸಬೇಕು; ಅವರಿಗೆ ಸಾಮಾಜಿಕ ಭದ್ರತೆಯನ್ನು ಒದಗಿಸುವುದು ಸಮಾಜದ ಕರ್ತವ್ಯ . ಪೋಲಿಸ್ ವ್ಯವಸ್ಥೆ ಬಗ್ಗೆ ಜನರಲ್ಲಿರುವ ಭಯ ಹೋಗಲಾಡಿಸಲು ಅವರ ಕರ್ತವ್ಯಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸಬೇಕು ಎಂದು ಮಂಗಳೂರು ವಿಶ್ವವಿದ್ಯಾಲಯದ ಉಪಕುಲಪತಿಗಳಾದ ಪ್ರೊ|ಟಿ.ಸಿ.ಶಿವಶಂಕರ ಮೂರ್ತಿ ಅವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಅವರು ಇಂದು ಮಂಗ ಳೂರಿನ ಪೋಲೀಸ್ ಕಮಿಷ ನರೇಟ್ ಹಾಗೂ ಜಿಲ್ಲಾ ಪೋ ಲೀಸ್ ವತಿ ಯಿಂದ ಆಯೋ ಜಿಸಿದ್ದ ಪೋಲೀಸ್ ಹುತಾತ್ಮ ದಿನಾ ಚರಣೆ ಅಂಗ ವಾಗಿ ಪ್ರಾಣಾ ರ್ಪಣೆ ಮಾಡಿದ ಪೊಲೀ ಸರಿಗೆ ಗೌರವ ಸಲ್ಲಿಸಿ ಮಾತ ನಾಡು ತ್ತಿದ್ದರು.ಪೋಲೀ ಸರು ಕರ್ತವ್ಯ ದಲ್ಲಿ ದ್ದಾಗ ಮೃತ ಪಟ್ಟರೆ ಅವರ ಕುಟುಂಬ ವರ್ಗ ದವ ರಿಗೆ ಹೆಚ್ಚಿನ ಸಾಮಾ ಜಿಕ ಭದ್ರತೆ ಯನ್ನು ಸರ್ಕಾ ರಗಳು ಒದಗಿ ಸಬೇಕು, ಅವರಿಗೆ ಉಚಿತ ಪಡಿತರ,ಸಾರಿಗೆ ಮುಂತಾದ ಸೌಲಭ್ಯ ಗಳನ್ನು ದೊರಕಿ ಸುವುದು ಸಮಾ ಜದ ಕರ್ತವ್ಯ ಎಂದ ಉಪ ಕುಲಪ ತಿಗಳು, ಶಿಕ್ಷಣ ವ್ಯವಸ್ಥೆ ಕೆಟ್ಟರೆ ಸಮಾಜ ಹಾಳಾಗುತ್ತದೆ.ಆರಕ್ಷಕ ವ್ಯವಸ್ತೆ ಹದಗೆಟ್ಟರೆ ಇಡೀ ವ್ಯವಸ್ಥೆಯೇ ಹಾಳಾಗುತ್ತದೆ ಎಂದು ತಿಳಿಸಿದರು.ದಕ್ಷಿಣ ಕನ್ನಡ ಜಿಲ್ಲಾ ಧಿಕಾರಿ ಡಾ|ಎನ್.ಎಸ್. ಚನ್ನಪ್ಪ ಗೌಡ ಅವರು, ಮಾತ ನಾಡಿ ದಿನದ 24 ಗಂಟೆ ಯೂ ಕರ್ತವ್ಯ ಮಾಡುವ ಆರ ಕ್ಷಕ ರಿಗೆ ಕೆಲ ವೊಮ್ಮೆ ಜೀವನ ಪಣ ಕ್ಕಿಟ್ಟು ಕಾರ್ಯ ನಿರ್ವ ಹಿಸ ಬೇಕಾದ ಪರಿ ಸ್ಥಿತಿ ಗಳು ಎದು ರಾಗು ತ್ತವೆ ಅವು ಗಳನ್ನು ಎದು ರಿಸಿ ಸಮಾ ಜದ ಸ್ವಾಸ್ಥ್ಯ ವನ್ನು ಕಾಪಾ ಡುತ್ತಾ ನಮ್ಮೆ ಲ್ಲರ ಪ್ರಾಣ,ಮಾನ,ಆಸ್ತಿ ಪಾಸ್ತಿ ಗಳ ರಕ್ಷಣೆ ಯಲ್ಲಿ ಅವರು ಜೀವ ವನ್ನೆ ಬಲಿ ಕೊಡು ತ್ತಾರೆ ಇಂತ ಹವರ ಬಗ್ಗೆ ಹಗುರವಾಗಿ ಟೀಕಿಸುವುದನ್ನು ಬಿಟ್ಟು ಅವರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುವ ಮೂಲಕ ಅವರಿಗೆ ಗೌರವ ತೋರೋಣ ಎಂದರು. ಐಜಿ ಪಶ್ವಿಮ ವಲಯ ಶ್ರೀ ಅಲೋಕ್ ಮೋಹನ್ ಅವರು ಪ್ರಥಮವಾಗಿ ಹುತಾತ್ಮರಿಗೆ ಗೌರವ ವಂದನೆ ಸಲ್ಲಿಸಿದರು.

ಕಳೆದ ವರ್ಷ ದೇಶದಲ್ಲಿ 636 ಭಾರತೀಯ ಪೋಲೀ ಸರು ಕರ್ತ ವ್ಯದ ಲ್ಲಿದ್ದಾಗ ಮೃತ ರಾಗಿ ದ್ದರೆ ಕರ್ನಾ ಟಕ ದಲ್ಲಿ 10 ಜನ ಪೋಲೀ ಸರು ಪ್ರಾಣಾ ರ್ಪಣೆ ಮಾಡಿ ದ್ದಾರೆ ಎಂದು ಮಂಗ ಳೂರು ಪೋ ಲೀಸ್ ಆಯುಕ್ತ ಸೀ ಮಂತ ಕುಮಾರ್ ಸಿಂಗ್ ಹಾಗೂ ದ.ಕ.ಎಸ್ ಪಿ ಲಾಬೂ ರಾಮ್ ಮಾಹಿತಿ ನೀಡಿ ದರು. ಮುಖ್ಯ ಅತಿಥಿ ಗಳಾಗಿ ಆಗ ಮಿಸಿದ್ದ ನವ ಮಂಗ ಳೂರು ಬಂದ ರಿನ ಭಾರ ತೀಯ ಕಂದಾಯ ಇಲಾಖೆ ಅಧಿಕಾರಿ ಟಿ.ಎಸ್.ಎನ್.ಮೂರ್ತಿ,ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಕಾರಿ ಡಾ|ವಿಜಯಪ್ರಕಾಶ್, ವಿಧಾನ ಪರಿಷತ್ ಸದಸ್ಯರಾದ ಕ್ಯಾಪ್ಟನ್ ಗಣೆಶ್ ಕಾರ್ಣಿಕ್ ಮುಂತಾದವರು ಈ ಸಂದರ್ಭದಲ್ಲಿ ಮಾತನಾಡಿ ತಮ್ಮ ನುಡಿನಮನಗಳನ್ನು ಸಲ್ಲಿಸಿದರು.

Tuesday, October 11, 2011

ಪಾರದರ್ಶಕ ಆಡಳಿತ ನೀತಿಗೆ ಸರ್ಕಾರ ಬದ್ದ: ಡಿ.ವಿ.ಸದಾನಂದ ಗೌಡ

ಮಂಗಳೂರು,ಅಕ್ಟೋಬರ್.11:ಪಾರದರ್ಶಕ ಆಡಳಿತ ನೀತಿಗೆ ರಾಜ್ಯ ಸರ್ಕಾರ ಬದ್ದವಾಗಿದ್ದು,ಆಡಳಿತದಲ್ಲಿ ಯಾವುದೇ ಕಾರಣಕ್ಕೂ ಭ್ರಷ್ಟಚಾರ ಸಹಿಸುದಿಲ್ಲ ಎಂದು ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡರು ಹೇಳಿದರು.ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಈಶ್ವರ ಮಂಗಲದ ಪಂಚಮುಖಿ ಆಂಜನೇಯ ಕ್ಷೇತ್ರದಲ್ಲಿ ನಡೆದ ಸಾರ್ವಜನಿಕ ಸನ್ಮಾನವನ್ನು ಸ್ವೀಕರಿಸಿ ಮುಖ್ಯಮಂತ್ರಿಗಳು ಮಾತನಾಡಿದರು.ಈಗಾ ಗಲೇ ಸರ್ಕಾರ ದಲ್ಲಿನ ಉನ್ನತ ಮಟ್ಟದ ಅಧಿ ಕಾರಿ ಗಳು ಆಡ ಳಿತ ವ್ಯ ವಸ್ಥೆಗೆ ವೇಗ ನೀಡಲು ಇಚ್ಚಾ ಶಕ್ತಿ ಹೊಂದಿ ದ್ದಾರೆ.ತಾಲೂಕು ಕಚೇರಿ ಗಳಲ್ಲಿ ಜನ ಸಾಮ ನ್ಯರ ಕಡತ ಗಳು 15 ದಿನ ಕ್ಕಿಂತ ಹೆಚ್ಚು ಉಳಿ ಯಬಾ ರದು.15 ದಿನ ಗಳ ಬಳಿಕವೂ ಕಡತಗಳು ವಿಲೆಯಾಗದೆ ಉಳಿದರೆ ಸಂಬಂಧಪಟ್ಟ ಅಧಿಕಾರಿಗೆ ದಿನವೊಂದಕ್ಕ ನೂರು ರೂಪಾಯಿಗಳ ದಂಡ ವಿಧಿಸಲಾಗುವುದು.ಇದು ಮುಂದಿನ ನಾಲ್ಕು ತಿಂಗಳೊಳಗೆ ಅನುಷ್ಟಾನಕ್ಕೆ ತರುವಂತೆ ಈಗಾಗಲೇ ಸೂಚಿಸಲಾಗಿದೆ ಎಂದರು.ಪಾರದರ್ಶಕ ಆಡಳಿತ ನೀತಿಗೆ ಅನುಗುಣವಾಗಿ ಮುಖ್ಯಮಂತ್ರಿ ಕಚೇರಿ,ವಿಧಾನ ಸೌಧ ಸೇರಿದಂತೆ ತನ್ನ ಸರ್ಕಾರಿ ಕಚೇರಿಗಳಲ್ಲಿ ಸಿಸಿಟಿವಿ ಕ್ಯಾಮರಗಳನ್ನು ಅಳವಡಿಸಲಾಗುವುದು.ಮುಖ್ಯಮಂತ್ರಿಗಳ ಇಮೇಲ್ ವಿಳಾಸವನ್ನು ಸಾರ್ವಜನಿಕರಿಗೆ ನೀಡಲಾಗುವುದು ಇದರಿಂದ ಜನರು ತಮ್ಮ ದೂರುದುಮ್ಮನಗಳನ್ನು ನೇರವಾಗಿ ಮುಖ್ಯಮಂತ್ರಿಗೆ ಸಲ್ಲಿಸಲು ಅನುಕೂಲವಾಗುವುದು,ಮುಂದಿನ ಬಜೆಟ್ ರಾಜ್ಯದ ಸಮಗ್ರ ಅಭಿವೃದ್ಧಿಗೆ ಪೂರಕವಾಗಲಿದೆ ಎಂದು ಮುಖ್ಯಮಂತ್ರಿಗಳು ನುಡಿದರು.ಡಾ.ಕಲ್ಲಡ್ಕ ಪ್ರಭಾ ಕರ ಭಟ್ ಅವರು ಸಮಾ ರಂಭದ ಅಧ್ಯ ಕ್ಷತೆ ಯನ್ನು ವಹಿ ಸಿದ್ದರು. ಕುಂ ಟಾರು ರವೀಶ ತಂತ್ರಿ ಅವರು ಮುಖ್ಯ ಮಂತ್ರಿ ಗಳನ್ನು ಸನ್ಮಾ ನಿಸಿ ಅಭಿ ನಂದಿ ಸಿದರು.ಜಿಲ್ಲಾ ಉಸ್ತು ವರಿ ಸಚಿವ ರಾದ ಕೃಷ್ಣ ಜೆ.ಪಾಲೆ ಮಾರ್,ವಿಧಾನ ಸಭಾ ಉಪ ಸಭಾ ಧ್ಯಕ್ಷ ಎನ್.ಯೋಗಿಶ್ ಭಟ್,ದಕ್ಷಿಣ ಕನ್ನಡ ಸಂಸದ ನಳಿನ್ ಕುಮಾರ್ ಕಟೀಲ್,ಶಾಸಕಿ ಮಲ್ಲಿಕಾ ಪ್ರಸಾದ್,ಕೆಎಸ್ ಆರ್ ಟಿಸಿ ಉಪಾ ಧ್ಯಕ್ಷ ಜಗ್ಗೇಶ್,ರಾಜ್ಯ ಬಾಲ ಭವನ ಸೊಸೈಟಿ ಅಧ್ಯಕ್ಷೆ ಸುಲೋಚನ ಭಟ್, ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ರಂಗಮೂರ್ತಿ,ವಿಜಯ ರೆಡ್ಡಿ,ಮಂತ್ರಾಲಯದ ಕಾರ್ಯದರ್ಶಿ ಸುಯಮೀಂದ್ರ ಆಚಾರ್,ಕೃಷ್ಣ ಪ್ರಸಾದ್ ಅಡ್ಯಂತಯ,ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಶೈಲಜಾ ಭಟ್,ಸಮಾರಂಭದಲ್ಲಿ ಉಪಸ್ಥಿತರಿದ್ದರು.

ಜನಸ್ನೇಹಿ ಠಾಣೆಯಾಗಲಿ:ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ

ಮಂಗಳೂರು,ಅಕ್ಟೋಬರ್.11: ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ
ಈಶ್ವರ ಮಂಗ ಲದಲ್ಲಿ ನೂತನ ವಾಗಿ ನಿರ್ಮಿ ಸಲಾದ ಪೋಲಿಸ್ ಹೊರ ಠಾಣೆ ಯನ್ನು ಮುಖ್ಯ ಮಂತ್ರಿ ಡಿ.ವಿ.ಸದಾ ನಂದ ಗೌಡ ಅವರು ಇಂದು ಉದ್ಘಾ ಟಿಸಿ ದರು.ಈಶ್ವರ ಮಂಗಲ ದಲ್ಲಿ ಪೋಲಿಸ್ ಹೊರ ಠಾಣೆ ಬೇ ಕೆಂಬ ಸ್ಥಳಿಯ ಜನ ತೆಯ ಬೇಡಿಕೆ ಯನ್ನು ಮನ್ನಿಸಿ ಕೇವಲ ಎರಡು ದಿನ ಗಳಲ್ಲಿ ಆಡಳಿ ತಾತ್ಮಕ ಮಂಜೂ ರತಿ ಯನ್ನು ನೀಡ ಲಾಯಿತು ಎಂದು ಈ ಸಂದ ರ್ಭದಲ್ಲಿ ನುಡಿ ದರು. " ಈ ಠಾಣೆ ಜನಸ್ನೇಹಿ ಪೋಲಿಸ್ ಠಾಣೆಯಾಗಲಿ.ಇಲ್ಲಿ ಯಾವುದೇ ಕ್ರಿಮಿನಲ್ ಕೇಸುಗಳು ದಾಖಲಾಗದೆ,ಜನರ ಮನಸ್ಸಿನ ನೋವುಗಳನ್ನು ಪರಿಹರಿಸುವ ಠಾಣೆಯಾಗಲಿ " ಎಂದು ಠಾಣಾ ಪುಸ್ತಕದಲ್ಲಿ ಶುಭ ಹಾರೈಕೆಯ ನುಡಿಗಳನ್ನು ಬರೆದು ನೂತನ ಠಾಣೆಗೆ ಶುಭ ಹಾರೈಸಿದರು. ಜಿಲ್ಲಾ ಉಸ್ತುವರಿ ಸಚಿವರಾದ ಕೃಷ್ಣ ಜೆ.ಪಾಲೆಮಾರ್, ಸಂಸದ ನಳಿನ್ ಕುಮಾರ್ ಕಟೀಲ್,ರಾಜ್ಯ ಪೋಲಿಸ್ ಮಹಾ ನಿರ್ದೇಶಕ ನೀಲಂ ಅಚ್ಯುತ ರಾವ್,ಸ್ಥಳಿಯ ಶಾಸಕಿ ಮಲ್ಲಿಕಾ ಪ್ರಸಾದ್,ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಶೈಲಜಾ ಭಟ್,ಪಶ್ಚಿಮ ವಲಯ ಐಜಿಪಿ ಅಲೋಕ್ ಮೋಹನ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ವಿದ್ಯುತ್ ಕೊರತೆ ನೀಗಿಸಲು ಕೇಂದ್ರಕ್ಕೆ ನಿಯೋಗ: ಮುಖ್ಯಮಂತ್ರಿಗಳು

ಮಂಗಳೂರು,ಅಕ್ಟೋಬರ್.11:ಪ್ರಸ್ತುತ ಸನ್ನಿವೇಶದಲ್ಲಿ ಕರ್ನಾಟಕ ರಾಜ್ಯ ಎದುರಿಸುತ್ತಿರುವ ವಿದ್ಯುತ್ ಕೊರತೆಯನ್ನು ನೀಗಿಸಲು ಬೇಕಾದ ತುರ್ತು ಕ್ರಮಗಳನ್ನು ಸರ್ಕಾರ ಕೈಗೊಳ್ಳಲಿದೆ ಎಂದು ಮುಖ್ಯಮಂತ್ರಿಗಳಾದ ಡಿ.ವಿ.ಸದಾನಂದ ಗೌಡರು ಹೇಳಿದ್ದಾರೆ.ಇಂದು ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು ತನ್ನ ಹುಟ್ಟೂರು ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿಗೆ ಆಗಮಿಸಿದ ಸಂದರ್ಭದಲ್ಲಿ ಇಲ್ಲಿನ ಕಾವು ಮಣಿಯಡ್ಕ ಮೈದಾನ ಹೆಲಿಪ್ಯಾಡ್ ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು. ರಾಜ್ಯಕ್ಕೆ ಹೆಚ್ಚುವರಿ ವಿದ್ಯುತ್ ನೀಡುವಂತೆ ಈಗಾಗಲೇ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಲಾಗಿದೆ.ಈ ಹಿನ್ನೆಲೆಯಲ್ಲಿ ಅಕ್ಟೋಬರ್ 14 ರಂದು ಉನ್ನತ ಮಟ್ಟದ ನಿಯೋಗ ದೆಹಲಿಗೆ ತೆರಳಲಿದೆ ಎಂದರು.ರಾಜ್ಯದಲ್ಲಿನ ನಕ್ಸಲ್ ಧಮನಕ್ಕೆ ಸರ್ಕಾರ ಕ್ರಮಕೈಗೊಳ್ಳಲಿದೆ. ಜಿಲ್ಲೆಯಲ್ಲಿನ ಅಡಿಕೆಗೆ ಕೊಳೆರೋಗದಿಂದ ಆದ ನಷ್ಟದ ಬಗ್ಗೆ ಸರ್ವೆ ಮಾಡಿ ವರದಿ ತರಿಸಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಮುಖ್ಯಮಂತ್ರಿಗಳು ಭರವಸೆ ನೀಡಿದರು.ಹೆಲಿಪ್ಯಾಡಿಗೆ ಬಂದಿಳಿದ ಮುಖ್ಯಮಂತ್ರಿಗಳನ್ನು ಜಿಲ್ಲಾಡಳಿತದ ಪರವಾಗಿ ಜಿಲ್ಲಾಧಿಕಾರಿ ಡಾ.ಎನ್.ಎಸ್.ಚನ್ನಪ್ಪ ಗೌಡ, ಸಿಇಓ ಡಾ.ವಿಜಯ ಪ್ರಕಾಶ್,ಸಂಸದ ನಳಿನ್ ಕುಮಾರ್ ಕಟೀಲ್, ಪಕ್ಷದ ಮುಖಂಡರುಗಳು, ಸ್ಥಳಿಯ ಜನಪ್ರತಿನಿಧಿಗಳು ಸ್ವಾಗತಿಸಿದರು.

Monday, October 10, 2011

ಡಾ. ಸರ್.ಎಂ. ವಿಶ್ವೇಶ್ವರಯ್ಯ ರಸ್ತೆ ಉದ್ಘಾಟನೆ

ಮಂಗಳೂರು,ಅಕ್ಟೋಬರ್.10 : ಎಲ್ಲರ ಸಹಕಾರದಿಂದ ಅಭಿವೃದ್ಧಿ ಕೆಲಸ ಮಾಡುವುದಷ್ಟೆ ತಮ್ಮ ಸರ್ಕಾರದ ಉದ್ದೇಶವಾಗಿದ್ದು, ನಾಗರೀಕರು ಮೂಲಭೂತ ಸೌಲಭ್ಯಗಳಿಂದ ವಂಚಿತರಾಗಬಾರದು. ಬಿಡುಗಡೆಯಾದ ಅನುದಾನದ ಸದ್ಬಳಕೆಯಾಗಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವರಾದ ಜೆ ಕೃಷ್ಣ ಪಾಲೆಮಾರ್ ಹೇಳಿದರು.
ಅವ ರಿಂದು ಮನಾಪ ವ್ಯಾ ಪ್ತಿಯ ಕೆ ಪಿ ಟಿ - ವಿಮಾನ ನಿಲ್ದಾಣ ರಸ್ತೆಗೆ ಡಾ ಸರ್ ಎಂ ವಿಶ್ವೇ ಶ್ವರಯ್ಯ ರಸ್ತೆ ಎಂದು ನಾಮ ಕರಣ ಮಾಡುವ ಸಮಾ ರಂಭ ದಲ್ಲಿ ಪಾ ಲ್ಗೊಂಡು ಮಾತ ನಾಡು ತ್ತಿದ್ದರು. ಒಳ ರಸ್ತೆ ಗಳನ್ನೂ ಆದ್ಯತೆ ಮೇಲೆ ಅಭಿ ವೃದ್ಧಿ ಪಡಿ ಸುವು ದಾಗಿ ಹೇಳಿದ ಅವರು, ಪಂಪ್ ವೆಲ್ ನ ಹೊಸ ಬಸ್ ನಿಲ್ದಾಣಕ್ಕೆ 15 ದಿವಸ ಗಳೊ ಳಗೆ ಚಾಲನೆ ನೀಡಿ 6 ತಿಂಗ ಳೊಳಗೆ ಕೆಲಸ ಸಂಪೂರ್ಣ ಗೊಳಿಸುವುದಾಗಿ ನುಡಿದರು.
ವಿಮಾನ ನಿಲ್ದಾಣ ರಸ್ತೆಯನ್ನು ಕಾಂಕ್ರೀಟೀಕರಣ ಗೊಳಿಸಲಾಗಿದ್ದು ರಸ್ತೆಯ ಇಕ್ಕೆಲಗಳಲ್ಲಿ ಚರಂಡಿ ಹಾಗೂ ಫುಟ್ ಪಾತ್ ನಿರ್ವಹಣೆಗೆ ಇಂಜಿನಿಯರ್ಸ್ ಗಳ ಸಹಕಾರ ಪಡೆಯಲಾಗಿದೆ ಎಂದರು. ಕೆಪಿಟಿ ವಿಮಾನ ನಿಲ್ದಾಣ ರಸ್ತೆಗೆ ಒಟ್ಟು 29.32 ಕೋಟಿ ರೂ. ವೆಚ್ಚ ವಾಗಿದ್ದು ಅದ ರಲ್ಲಿ ಪಾಲಿ ಕೆಯ 4.57 ಕೋಟಿ ಹಾಗೂ ಎಸ್ ಎಫ್ ಸಿ ಯ 2008-09 ರಡಿ ರೂ. 12.50 ಕೋಟಿ ಮತ್ತು ASIDE ಯೋಜನೆ ಯಡಿ ರೂ. 12.25 ಕೋಟಿ ರೂ.ಗಳನ್ನು ಭರಿಸ ಲಾಗಿದೆ.
ಈ ಯೋಜನೆ ಯಡಿ ಕೆಪಿಟಿ ಯಿಂದ ಮರ ವೂರು ವರೆಗೆ 7 ಕಿ ಮೀ ನಷ್ಟು ಚತು ಷ್ಪಥ ರಸ್ತೆ ಯನ್ನು ಕಾಂಕ್ರೀ ಟಿಕರ ಗೊಳಿಸ ಲಾಗಿದ್ದು ಪ್ರಾ ರಂಭ ದಲ್ಲಿ ಈ ರಸ್ತೆ ಯನ್ನು ರೂ. 17.50 ಕೋಟಿ ವೆಚ್ಚದಲ್ಲಿ ಡಾಂಬರೀಕರಣಗೊಳಿಸಲು ತೀರ್ಮಾನಿಸಲಾಗಿತ್ತು. ಆದರೆ ಹೆಚ್ಚು ಮಳೆ ಮತ್ತು ಭೌಗೋಳಿಕ ಸ್ಥಿತಿಗತಿಗಳಿಗನುಗುಣವಾಗಿ ರಸ್ತೆಯನ್ನು ಕಾಂಕ್ರೀಟಿಕರಣಗೊಳಿಸಲು ತೀರ್ಮಾನಿಸಲಾಯಿತು.
ಉಪಸಭಾಧ್ಯಕ್ಷರಾದ ಎನ್ ಯೋಗೀಶ್ ಭಟ್ ಅವರು ಉಪಸ್ಥಿತರಿದ್ದರು. ಸಮಾರಂಭದ ಅಧ್ಯಕ್ಷತೆಯನ್ನುಪಾಲಿಕೆ ಮೇಯರ್ ಪ್ರವೀಣ್ ವಹಿಸಿದ್ದರು. ಜಿಲ್ಲಾಧಿಕಾರಿ ಡಾ ಎನ್ ಎಸ್ ಚನ್ನಪ್ಪ ಗೌಡ ಉಪಸ್ಥಿತರಿದ್ದರು. ಉಪಮೇಯರ್ ಶ್ರೀಮತಿ ಗೀತಾ ಎನ್ ನಾಯಕ್, ಶರತ್ ಕುಮಾರ್, ಪ್ರೇಮಾನಂದ ಶೆಟ್ಟಿ, ಶ್ರೀಮತಿ ಎಂ ರಾಜಶ್ರೀ, ಸಚೇತಕರಾದ ಸುಧೀರ್ ಶೆಟ್ಟಿ, ,ಪಾಲಿಕೆ ಆಯುಕ್ತರಾದ ಡಾ ಹರೀಶ್ ಕುಮಾರ್, ಪಾಲಿಕೆ ಸದಸ್ಯರುಗಳು ಪಾಲ್ಗೊಂಡಿದ್ದರು.

ರಾಷ್ಟ್ರಮಟ್ಟದ ಮಕ್ಕಳ ಕಲಾ ಉತ್ಸವ

ಮಂಗಳೂರು,ಅಕ್ಟೋಬರ್.10 : ಜನವರಿ 26, 27 ಮತ್ತು 28 ರಂದು ಮಂಗಳೂರಿನ ಪಿಲಿಕುಳದಲ್ಲಿ ಜವಾಹರ ಬಾಲಭವನ ಕಬ್ಬನ್ ಪಾರ್ಕ್ ಇವರು ದಕ್ಷಿಣ ಕನ್ನಡ ಜಿಲ್ಲಾಡಳಿತದ ಸಹಕಾರದಿಂದ ರಾಷ್ಟ್ರ ಮಟ್ಟದ ಮಕ್ಕಳ ಕಲಾ ಉತ್ಸವ ಆಚರಿಸುವ ಸಂಬಂಧ ಇಂದು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ಪೂರ್ವಭಾವಿ ಸಭೆ ಕರೆಯಲಾಯಿತು.ಮೂರು ದಿನಗಳ ಕಾಲ ನಡೆ ಯುವ ಉತ್ಸವ ಮಾದರಿ ಯಾಗಿ ನಡೆಯ ಬೇಕೆಂದು ಜಿಲ್ಲಾ ಉಸ್ತು ವಾರಿ ಸಚಿವ ರಾದ ಜೆ ಕೃಷ್ಣ ಪಾಲೆ ಮಾರ್ ಅವರು ಹೇಳಿ ದರು. ಶೈಕ್ಷಣಿ ಕವಾಗಿ ಉತ್ತಮ ವಾತಾ ವರಣ ಇರುವ ಜಿಲ್ಲೆಯಲ್ಲಿ ನಡೆಯುವ ರಾಷ್ಟ್ರ ಮಟ್ಟದ ಮಕ್ಕಳ ಉತ್ಸವದಿಂದ ಜಿಲ್ಲೆಗೆ ಉತ್ತಮ ಹೆಸರು ಬರಬೇಕೆಂದರು. ಸಭೆಯಲ್ಲಿ ಉಪಸ್ಥಿತರಿದ್ದ ಉಪಸಭಾಪತಿಗಳಾದ ಎನ್ ಯೋಗೀಶ್ ಭಟ್ ಅವರು ಮಾತನಾಡಿ, ಉತ್ಸವದಲ್ಲಿ ಜಿಲ್ಲೆಯ ವಿಶೇಷ ಪ್ರತಿಭೆಗಳನ್ನು ಗುರುತಿಸಿ ಸನ್ಮಾನ ನೀಡುವ ಕಾರ್ಯಕ್ರಮವಾಗಬೇಕೆಂದರು. ರಾಷ್ಟ್ರೀಯ ಮಟ್ಟದ 73 ಬಾಲಭವನಗಳಿಂದ 1500 ಮಕ್ಕಳು ಮತ್ತು ಸ್ಥಳೀಯ ಮಕ್ಕಳು ಪಾಲ್ಗೊಳ್ಳುವಿಕೆಯಿಂದ ಒಟ್ಟು 2500 ಮಕ್ಕಳು ಉತ್ಸವದಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದ್ದು, ಮಕ್ಕಳಿಗೆ ಉತ್ತಮ ವಸತಿ ಮತ್ತು ಊಟೋಪಚಾರ ನೀಡಬೇಕೆಂದು ಹೇಳಿದರು. ಜಿಲ್ಲಾ ಡಳಿತದ ವತಿ ಯಿಂದ ಊಟೋ ಪಚಾರ ಮತ್ತು ವಸತಿ ಹಾಗೂ ಸಾರಿಗೆ ವ್ಯವಸ್ಥೆ ಕಲ್ಪಿ ಸುವು ದಾಗಿ ಜಿಲ್ಲಾ ಧಿಕಾರಿ ಡಾ ಎನ್ ಎಸ್ ಚನ್ನಪ್ಪ ಗೌಡ ಹೇಳಿದರು. ಸಭೆ ಯಲ್ಲಿ ಪ್ರಾಸ್ತಾ ವಿಕ ಮಾತು ಗಳ ನ್ನಾಡಿದ ರಾಜ್ಯ ಬಾಲ ಭವನ ಸೊಸೈಟಿ ಅಧ್ಯಕ್ಷ ರಾದ ಶ್ರೀಮತಿ ಸುಲೋ ಚನ ಜಿ ಕೆ ಭಟ್ ಅವರು, ಉತ್ಸವದ ಉದ್ದೇಶ ಮತ್ತು ರೂಪುರೇಷೆಗಳನ್ನು ವಿವರಿಸಿದರು. ಎಲ್ಲ ಮಕ್ಕಳಿಗೆ ಕಲಾ ಶಿಬಿರ, ಕ್ರಿಯಾತ್ಮಕ ಕಲೆ, ಬರವಣಿಗೆ, ವಿಜ್ಞಾನದಲ್ಲಿ ನೂತನ ಆವಿಷ್ಕಾರಗಳ ಪ್ರದರ್ಶನ ಹಾಗೂ ಕ್ರಿಯಾತ್ಮಕ ಪ್ರದರ್ಶನ ಕಲೆಯನ್ನು ಇತರ ರಾಜ್ಯಗಳಿಂದ ವಿನಿಮಯ ಕಾರ್ಯಕ್ರಮ ನಡೆಸಲಾಗುವುದು. ಎಲ್ಲ ರಾಜ್ಯಗಳಿಂದ ಮಕ್ಕಳಿಂದ ಉತ್ಸವವನ್ನು ಬಿಂಬಿಸುವ ಸಾಮೂಹಿಕ ಚಿತ್ರ ಬಿಡಿಸುವುದು ಅಥವಾ ಮ್ಯೂರಲ್ ತಯಾರಿಸುವುದು ಎಂದರು.
ಸ್ಥಳೀಯ ಅಥವಾ ನುರಿತ ಸಂಪನ್ಮೂಲ ವ್ಯಕ್ತಿಗಳಿಂದ ರಾಷ್ಟ್ರ ಪ್ರೇಮ, ಐಕ್ಯತೆ ಹಾಗೂ ಸದ್ಭಾವನೆ ಮೂಡಿಸುವ ನಿಟ್ಟಿನಲ್ಲಿ ಉಪನ್ಯಾಸ ನೀಡುವುದು, ರಾಜ್ಯದ ಪಾರಂಪರಿಕ ಆಟಗಳ ಪ್ರದರ್ಶನ, ಮಕ್ಕಳಿಗೆ ಲೇಜರ್ ಷೋ ಆಯೋಜಿಸುವುದು, ಸ್ಥಳೀಯ ಪ್ರೇಕ್ಷಣೀಯ ಸ್ಥಳಗಳಿಗೆ ಭೇಟಿ ನೀಡುವುದು, ಸಾಮೂಹಿಕ ಗಾಳಿಪಟ ಹಾರಾಟ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುವುದಾಗಿ ನುಡಿದರು. ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ನಾಗರಾಜ್ ಶೆಟ್ಟಿ, ಜಿಲ್ಲಾ ಪಂಚಾಯತ್ ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷರಾದ ಜನಾರ್ಧನ, ಸಿಇಒ ಡಾ.ಕೆ.ಎನ್ ವಿಜಯಪ್ರಕಾಶ್, ಪಾಲಿಕೆ ಆಯುಕ್ತರಾದ ಡಾ ಹರೀಶ್ ಕುಮಾರ್, ಸಹಾಯಕ ಆಯುಕ್ತರಾದ ಡಾ ವೆಂಕಟೇಶ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕರಾದ ಶ್ರೀಮತಿ ಶಕುಂತಲಾ ಅವರು ಉಪಸ್ಥಿತರಿದ್ದರು. ಅಪರ ಜಿಲ್ಲಾಧಿಕಾರಿ ದಯಾನಂದ ಕೆ ಎ ಸ್ವಾಗತಿಸಿ ವಂದಿಸಿದರು.

ಬಾಲ ಕಾರ್ಮಿಕ ಕಾಯ್ದೆ:6 ಪ್ರಕರಣ ದಾಖಲು

ಮಂಗಳೂರು,ಅಕ್ಟೋಬರ್.10: ಬಾಲ ಕಾರ್ಮಿಕ ಕಾಯ್ದೆ ಕಲಂ 17 ರಡಿಯಲ್ಲಿ ಗೌರವಾನ್ವಿತ ಸರ್ವೋಚ್ಛ ನ್ಯಾಯಾಲಯದ ನಿರ್ದೇಶನದ ಪ್ರಕಾರ ಈ ಸಾಲಿನ ಎಪ್ರಿಲ್ 11 ರ ಅಂತ್ಯದ ವರೆಗೆ 6 ಪ್ರಕರಣಗಳನ್ನು ದಾಖಲು ಪಡಿಸಿ ನೇಮಿಸಿಕೊಂಡಿದ್ದ ಮಾಲಕರಿಂದ ತಲಾ 20000 ರೂ.ದಂಡ ವಸೂಲಿ ಮಾಡಲಾಗಿದೆಯೆಂದು ಮಂಗಳೂರು ಜಿಲ್ಲಾ ಸಹಾಯಕ ಕಾರ್ಮಿಕ ಆಯುಕ್ತರಾದ ವೆಂಕಟೇಶ ಎ.ಶಿಂದೆಹಟ್ಟಿ ತಿಳಿಸಿದರು.ಅವರು ಇಂದು ಡಿಸ್ಟ್ರಿಕ್ಟ್ ಚೈಲ್ಡ್ ಲೇಬರ್ ಪ್ರಾಜೆಕ್ಟ್ ಸೊಸೈಟಿ ಮಂಗಳೂರು ಇವರ ವತಿಯಿಂದ ನಡೆದ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡುತ್ತಿದ್ದರು.ಮನೆಗಳಲ್ಲಿ ಉದ್ದಿಮೆಗಳಲ್ಲಿ 14 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳನ್ನು ದುಡಿಸುವುದು ಅಥವಾ ನೇಮಿಸಿಕೊಳ್ಳುವುದು ಅಪರಾಧ.ಈ ಬಗ್ಗೆ 18 ಶಾಲಾ ಮುಖ್ಯಸ್ಥರು ದೃಢೀಕರಣ ನೀಡಿ ಘೋಷಣಾ ಪತ್ರವನ್ನು ಇಲಾಖೆಗೆ ನೀಡಿರುತ್ತಾರೆ.ಮಕ್ಕಳ ಚಲನವಲನ ಮತ್ತು ಕೆಲಸದಲ್ಲಿ ಮಕ್ಕಳ ನೇಮಕಾತಿ ಬಗ್ಗೆ ಮಾಹಿತಿ ನೀಡಲು ಪ್ರತಿ ಗ್ರಾಮ ಪಂಚಾಯತ್ ಗೆ ಒಬ್ಬರಂತೆ ಮಕ್ಕಳ ಮಿತ್ರರನ್ನು ನೇಮಕ ಮಾಡುವ ಸಂಬಂಧ ಮಹಿಳಾ ಮತ್ತು ಮಕ್ಕಳಾಭಿವೃದ್ಧಿ ಇಲಾಖೆಯವರಿಗೆ ಸೂಚನೆ ನೀಡಲಾಯಿತು.ಮಕ್ಕಳ ಮಿತ್ರರ ಜವಾಬ್ದಾರಿಯನ್ನು ಆಯಾ ತಾಲೂಕು ಶಿಶು ಅಭಿವೃದ್ಧಿ ಅಧಿಕಾರಿಗಳಿಗೆ ವಹಿಸಿಕೊಡಲಾಗಿದೆ. ಬಾಲಕಾರ್ಮಿಕ ಯೋಜನಾ ಸಂಘದ ಕಚೇರಿಗೆ ಸ್ಥಳಾವಕಾಶಒದಗಿಸಲಾಗಿದ್ದು,ವಾಮಂಜೂರು ಬಳಿ ಇರುವ ಕಟ್ಟಡವನ್ನು ಪರಿಶೀಲಿಸುವಂತೆ ಸೂಚಿಸಲಾಯಿತು.
ಈ ಸಂಘಕ್ಕೆ 3 ಹುದ್ದೆಗಳನ್ನು ಮಂಜೂರು ಮಾಡಿರುವುದಾಗಿ ದಕ್ಷಿಣಕನ್ನಡ ಜಿಲ್ಲಾಧಿಕಾರಿಗಳು ತಿಳಿಸಿರುತ್ತಾರೆ. ಸಭೆಯಲ್ಲಿ ಡಿಸ್ಟ್ರಿಕ್ಟ್ ಲೇಬರ್ ಪ್ರಾಜೆಕ್ಟ್ ಸೊಸೈಟಿಯ ಯೋಜನಾ ನಿರ್ದೇಶಕರಾದ ಎಂ.ಆನಂದಮೂರ್ತಿ ಸಭೆಗೆ ವಿವರಗಳನ್ನು ನೀಡಿದರು. ಹಿರಿಯ ಕಾರ್ಮಿಕ ನಿರೀಕ್ಷಕರಾದ ಎಚ್. ಪಿ ಜ್ಞಾನೇಶ್ ವಂದಿಸಿದರು.ವಿವಿಧ ಇಲಾಖಾಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.

Friday, October 7, 2011

ತುಳು ಸಂಶೋಧಕರಿಗೆ ಪ್ರೋತ್ಸಾಹ: ಇಂಧನ ಸಚಿವರು

ಮಂಗಳೂರು, ಅಕ್ಟೋಬರ್.07: ತುಳು ಭಾಷೆಯನ್ನು ಬೆಳೆಸಲು ಸರ್ಕಾರ ಬದ್ಧವಾಗಿದ್ದು, ಭಾಷೆಯನ್ನು ಎಂಟನೇ ಪರಿಚ್ಛೇದಕ್ಕೆ ಸೇರಿಸಲು ಸರ್ವಯತ್ನ ಮಾಡಲಾಗುವುದು. ಈಗಾಗಲೇ ಪಠ್ಯದಲ್ಲಿ ತುಳು ಭಾಷೆಯನ್ನು ಪರಿಚಯಿಸಲಾಗಿದ್ದು ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ತುಳು ಭಾಷೆಯ ಬಗ್ಗೆ ಸಂಶೋಧನೆ ನಡೆಸಲಾಗುತ್ತಿದೆ ಎಂದು ರಾಜ್ಯದ ಇಂಧನ ಹಾಗೂ ಆಹಾರ ಮತ್ತು ನಾಗರೀಕ ಪೂರೈಕೆ ಸಚಿವರಾದ ಕುಮಾರಿ ಶೋಭಾ ಕರಂದ್ಲಾಜೆಯವರು ನುಡಿದರು.ಅವರು ರಾಜ್ಯ ತುಳು ಅಕಾ ಡೆಮಿ ,ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮಂಗ ಳೂರು, ವಿದ್ಯಾ ರಶ್ಮಿ ಸಮೂಹ ಸಂಸ್ಥೆ ಗಳು ಸವಣೂ ರಿನಲ್ಲಿ ಏರ್ಪ ಡಿಸಿದ ಅಖಿಲ ಭಾರತ ತುಳು ಸಾಹಿತ್ಯ ಸಮ್ಮೇ ಳನ 2011 ರಲ್ಲಿ ತುಳು ಲೇಖ ಕರು ಬರೆದ ತುಳು ಸಾಹಿತ್ಯ ಪುಸ್ತಕ ಗಳನ್ನು ಬಿಡು ಗಡೆ ಗೊಳಿಸಿ ಮಾತ ನಾಡು ತ್ತಿದ್ದರು.2009 ರಲ್ಲಿ ಶ್ರೀ ಕ್ಷೇತ್ರ ಧರ್ಮ ಸ್ಥಳದ ವತಿ ಯಿಂದ ನಡೆಸ ಲಾದ ವಿಶ್ವ ತುಳು ಸಮ್ಮೇ ಳನ ಅತ್ಯಂತ ಯಶಸ್ವಿ ಯಾಗಿ ನೆರ ವೇರಿ ವಿಶ್ವ ದೆಲ್ಲೆಡೆ ತುಳು ಭಾಷೆ ಪಸರಿಸಿ ದಂತಾ ಗಿದೆ ಎಂದರು.
ವಿಶ್ವದೆಲ್ಲೆಡೆ ತುಳು ಭಾಷೆ ಮಾತನಾಡುವವರು ಇದ್ದಾರೆಂದ ಅವರು ತುಳು ಭಾಷೆ ಸಂಶೋಧನೆಗಾಗಿ ವಾರ್ಷಿಕ 10 ಲಕ್ಷ ರೂ. ನೀಡುವುದಾಗಿ ನುಡಿದರು. ಸಮ್ಮೇಳನವನ್ನು ಶ್ರೀ ಕ್ಷೇತ್ರ ಧರ್ಮಸ್ಥಳದ ಧಧಿಕಾರಿಯವರಾದ ಡಾ.ವೀರೇಂದ್ರ ಹೆಗಡೆಯವರು ಉದ್ಘಾಟಿಸಿ ಮಾತನಾಡುತ್ತಾ, ತುಳುನಾಡು ಪರಶುರಾಮನ ಸೃಷ್ಠಿಯಾಗಿದ್ದು, ಹಲವಾರು ಕ್ಷೇತ್ರಗಳು ರಾರಾಜಿಸುತ್ತಿವೆ. ನಾಡಿನಲ್ಲಿ ನಾಗಾರಾಧನೆ ಅತ್ಯಂತ ಶ್ರೇಷ್ಠ ಪೂಜೆಯಾಗಿದೆ. ವಿಶ್ವದಾದ್ಯಂತ ಪ್ರವಾಸಿಗರು ತುಳುನಾಡಿನ ಮಹತ್ವವನ್ನು ಅರಿತು ಎಲ್ಲಾ ಕ್ಷೇತ್ರಗಳಿಗೆ ವರ್ಷಂ ಪ್ರತಿ ಭೇಟಿ ನೀಡುತ್ತಾರೆಂದು ನುಡಿದರು.ಸಮ್ಮೇ ಳನದ ಅಧ್ಯಕ್ಷ ತೆಯನ್ನು ದಕ್ಷಿಣ ಕನ್ನಡ ಸಂಸ ದರಾದ ನಳಿನ್ ಕುಮಾರ್ ಕಟೀಲ್ ವಹಿ ಸಿದ್ದರು.ಮುಖ್ಯ ಅತಿಥಿ ಗಳಾಗಿ ತುಳು ಸಾಹಿತ್ಯ ಅಕಾಡೆ ಮಿಯ ಸ್ಥಾಪ ಕಾಧ್ಯ ಕ್ಷರಾದ ಹಾಗೂ ಹಾಲಿ ಜರ್ಮನ್ ವಿ.ವಿ.ಯಲ್ಲಿ ಸಂದ ರ್ಶಕ ಪ್ರಾದ್ಯಾ ಪಕ ರಾಗಿ ಸೇವೆ ಸಲ್ಲಿ ಸುತ್ತಿ ರುವ ಪ್ರೊ.ವಿವೇಕ ರೈ,ವಿಶ್ವ ವಿದ್ಯಾ ನಿಲಯದ ಕುಲ ಸಚಿವ ಡಾ. ಚಿನ್ನಪ್ಪ ಗೌಡ,ತುಳು ಸಾಹಿತ್ಯ ಅಕಾಡೆಮಿಯ ಹಾಲಿ ಅಧ್ಯಕ್ಷರಾಗಿರುವ ಡಾ.ಪಾಲ್ತಾಡಿ ರಾಮಕೃಷ್ಣ ಆಚಾರ್, ಮುಂಬಯಿಯ ಹಿರಿಯ ಸಾಹಿತಿ ಸುನೀತ ಶೆಟ್ಟಿ ಉಪಸ್ಥಿತರಿದ್ದರು. ವಿದ್ಯಾರಶ್ಮಿ ಸಮೂಹ ಸಂಸ್ಥೆಗಳ ಸ್ಥಾಪಕಾಧ್ಯಕ್ಷರಾದ ಸೀತಾರಾಮ ರೈ ಪ್ರಸ್ತಾವನೆಗೈದು ಅತಿಥಿಗಳನ್ನು ಸ್ವಾಗತಿಸಿದರು.

ಸರ್ಕಾರಿ ಸೌಲಭ್ಯ ಪಡೆಯಲು ಆಧಾರ್ ಅಗತ್ಯ: ಜಿಲ್ಲಾಧಿಕಾರಿ

ಮಂಗಳೂರು,ಅಕ್ಟೋಬರ್.07:ಆಧಾರ್ ಕಾರ್ಡ್ ಪಡೆಯಲು ಜಿಲ್ಲಾಡಳಿತ ನಗರದ ಹಲವೆಡೆ ಆಧಾರ್ ನೋಂದಣಿ ಕೇಂದ್ರಗಳನ್ನು ತೆರೆದಿದ್ದು ಸಾರ್ವಜನಿಕರು ಆಧಾರ್ ಕಾರ್ಡ್ ಹೊಂದಬೇಕೆಂದು ದಕ್ಷಿಣ ಜಿಲ್ಲಾಧಿಕಾರಿ ಡಾ ಎನ್ ಎಸ್ ಚನ್ನಪ್ಪ ಗೌಡ ಹೇಳಿದ್ದಾರೆ.ಸಾರ್ವಜನಿಕರು ಸರ್ಕಾರದ ಸೌಲಭ್ಯ ಪಡೆಯಲು, ಬ್ಯಾಂಕ್ ಅಕೌಂಟ್ ಹಾಗೂ ಮೊಬೈಲ್ ಪಡೆಯಲು ಈ ಕಾರ್ಡ್ ನೆರವಾಗಲಿದ್ದು ಎಲ್ಲರೂ ಆಧಾರ್ ಪಡೆಯಬೇಕೆಂದು ಜಿಲ್ಲಾಧಿಕಾರಿಗಳು ವಿನಂತಿಸಿದ್ದಾರೆ.ಅಕ್ಟೋಬರ್ 2ರಂದು ಉರ್ವ ಕಮ್ಯುನಿಟಿ ಹಾಲ್, ನಗರಪಾಲಿಕೆ ವಾರ್ಡ್ ಆಫೀಸ್ ಕಾಟಿಪಳ್ಳ, ನಗರಪಾಲಿಕೆ ವಾಣಿಜ್ಯ ಕಟ್ಟಡ, ಕಾರ್ನಾಡು ಸದಾಶಿವ ರಾವ್ ಮೆಮೋರಿಯಲ್ ಟ್ರಸ್ಟ್ ಬಾವುಟ ಗುಡ್ಡೆ, ಜಿಲ್ಲಾಧಿಕಾರಿಗಳ ಕಚೇರಿ ವ್ಯಾಪ್ತಿಯಲ್ಲಿರುವ ರೆಡ್ ಕ್ರಾಸ್ ಕಟ್ಟಡದಲ್ಲಿ ಕೇಂದ್ರಗಳಿದ್ದು ಸಾರ್ವಜನಿಕರು ತಮ್ಮ ನಿವಾಸವನ್ನು ದೃಢೀಕರಿಸುವ ಫೋಟೋ ಐಡಿಗಳೊಂದಿಗೆ ಆಧಾರ್ ನೋಂದಣಿ ಮಾಡಿಸಬಹುದಾಗಿದೆ.
ಭವಿಷ್ಯದಲ್ಲಿ ಸರ್ಕಾರದ ಸೌಲಭ್ಯಗಳನ್ನು ಪಡೆಯಲು ಆಧಾರ್ ಕಾಡ್ರ್ ನ್ನು ಕಡ್ಡಾಯಗೊಳಿಸಲಾಗುವುದು. ಹಾಗಾಗಿ ಈಗಿರುವ ಸೌಲಭ್ಯಗಳ ಸದುಪಯೋಗ ಪಡೆಯಬೇಕೆಂದೂ ಜಿಲ್ಲಾಧಿಕಾರಿಗಳು ಹೇಳಿದ್ದಾರೆ.ಸರ್ಕಾರಿ ನೌಕರರು ತಕ್ಷಣವೇ ಆಧಾರ್ ಕಾರ್ಡ್ ಮಾಡಿಸಿಕೊಳ್ಳಬೇಕೆಂದು ಜಿಲ್ಲಾಧಿಕಾರಿಗಳು ಸೂಚಿಸಿದ್ದಾರೆ.

ಕನ್ನಡ ನುಡಿತೇರು ಉದ್ಘಾಟನಾ ಸಮಾರಂಭ

ಮಂಗಳೂರು,ಅಕ್ಟೋಬರ್.07:ಬೆಂಗಳೂರಿನ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸಹಯೋಗದಲ್ಲಿ ದಕ್ಷಿಣ ಕನ್ನಡ ಜಿಲ್ಲಾಡಳಿತದ ವತಿಯಿಂದ ಕನ್ನಡ ನುಡಿತೇರು ಜಾಗೃತಿ ಜಾಥಾ ಕಾರ್ಯಕ್ರಮವನ್ನು ದಿನಾಂಕ 12-10-11 ರಿಂದ 14-10-11 ರ ವರೆಗೆ ದಕ್ಷಿಣಕನ್ನಡ ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ಏರ್ಪಡಿಸಲಾಗಿದೆ.ಕಾರ್ಯಕ್ರಮದ ಉದ್ಘಾಟನಾ ಸಮಾರಂಭವನ್ನು ಸುಳ್ಯ ತಾಲೂಕಿನ ಶ್ರೀ ಚೆನ್ನಕೇಶವ ದೇವಸ್ಥಾನದ ಬಯಲು ರಂಗವೇದಿಕೆಯಲ್ಲಿ 12-10-11 ರಂದು ಪೂರ್ವಾಹ್ನ 10 ಗಂಟೆಗೆ ಏರ್ಪಡಿಸಲಾಗಿದೆ. ಕನ್ನಡ ಭವನ ಶಿಲಾ ನ್ಯಾಸ ಮತ್ತು ನುಡಿ ತೇರು ಉದ್ಘಾ ಟನೆ ಯನ್ನು ಸನ್ಮಾನ್ಯ ಮುಖ್ಯ ಮಂತ್ರಿ ಗಳಾದ ಡಿ.ವಿ.ಸದಾ ನಂದ ಗೌಡ ಇವರು ನೆರ ವೇರಿಸುವರು.ಸಭಾ ಕಾರ್ಯ ಕ್ರಮದ ಉದ್ಘಾ ಟನೆ ಯನ್ನು ಶ್ರೀ ಕ್ಷೇತ್ರ ಧರ್ಮ ಸ್ಥಳದ ಧರ್ಮಾ ಧಿಕಾ ರಿಗ ಳಾದ ಡಾ.ಡಿ.ವೀ ರೇಂದ್ರ ಹೆಗ್ಗಡೆ ಯವರು ನೆರವೇರಿಸುವರು.ಜಾನಪದ ಕಲಾಜಾಥಾದ ಉದ್ಘಾಟನೆಯನ್ನು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಹಿರಿಯ ಸಾಹಿತಿಗಳಾದ ಡಾ.ಚಂದ್ರಶೇಖರ ಕಂಬಾರ ಇವರು ನೆರವೇರಿಸುವರು.
ಅಧ್ಯಕ್ಷತೆಯನ್ನು ಸುಳ್ಯ ವಿಧಾನ ಸಭಾ ಕ್ಷೇತ್ರದ ಶಾಸಕರಾದ ಎಸ್.ಅಂಗಾರ ವಹಿಸುವರು.ಮುಖ್ಯ ಅತಿಥಿಗಳಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಾದ ಗೋವಿಂದ ಕಾರಜೋಳ, ಜೀವಿಶಾಸ್ತ್ರ ,ಪರಿಸರ, ಬಂದರು ಒಳನಾಡು ಜಲಸಾರಿಗೆ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಜೆ.ಕೃಷ್ಣ ಪಾಲೇಮಾರ್,ಉನ್ನತ ಶಿಕ್ಷಣ ಸಚಿವರಾದ ಡಾ.ವಿ.ಎಸ್.ಆಚಾರ್ಯ ವಿಧಾನಸಭೆ ಉಪಾಧ್ಯಕ್ಷರಾದ ಎನ್. ಯೋಗೀಶ್ ಭಟ್ ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಶೈಲಜಾ ಭಟ್ಮುಂತಾದವರು ಭಾಗವಹಿಸಲಿದ್ದಾರೆ.

Tuesday, October 4, 2011

ನಿಗದಿತ ಗುರಿ ಸಾಧಿಸಿ: ಸಂಸದ ನಳಿನ್ ಕುಮಾರ್

ಮಂಗಳೂರು,ಅಕ್ಟೋಬರ್. 04 : ಇಂದಿರಾ ಆವಾಸ್ ಮತ್ತು ಬಸವ ಇಂದಿರಾ ವಸತಿ ಯೋಜನೆಯಡಿ ನಿಗದಿತ ಗುರಿ ಸಾಧಿಸಿ ಎಂದು ದಕ್ಷಿಣ ಕನ್ನಡ ಲೋಕ ಸಭಾ ಸದಸ್ಯ ನಳಿನ್ ಕುಮಾರ್ ಕಟೀಲ್ ಅವರು ಹೇಳಿದರು.
ಇಂದು ಜಿಲ್ಲಾ ಪಂಚಾ ಯತ್ ನಲ್ಲಿ ಕೇಂದ್ರ ನೆರವಿನ ಗ್ರಾಮೀಣಾ ಭಿವೃದ್ಧಿ ಕಾರ್ಯ ಕ್ರಮಗಳ ಅನುಷ್ಠಾನದ ಬಗ್ಗೆ ಪರಿಶೀಲನೆ ನಡೆಸುವ ಸಲುವಾಗಿ ಜಿಲ್ಲಾ ಮಟ್ಟದ ಜಾಗೃತ ಮತ್ತು ಉಸ್ತುವಾರಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು,ಅಧಿಕಾರಿಗಳು ಮತ್ತು ಇಂಜಿನಿಯರ್ ಗಳು, ಗುತ್ತಿಗೆದಾರರು ಸಮನ್ವಯತೆಯಿಂದ ಕೆಲಸ ಮಾಡಿದರೆ ಮಾತ್ರ ಅಭಿವೃದ್ಧಿ ದಾಖಲಿಸಲು ಸಾಧ್ಯ ಎಂದರು. ಇಲ್ಲದಿದ್ದರೆ ಎರಡು ವರ್ಷಗಳ ಮೊದಲೇ ಅನುದಾನ ಮಂಜೂರಾಗಿದ್ದರೂ ಕೆಲಸ ಸಂಪೂರ್ಣಗೊಳ್ಳುವುದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಗುರಿ ಸಾಧನೆಗಾಗಿ ಅಧಿಕಾರಿಗಳು ಪ್ರತಿ ತಿಂಗಳು ತಾಲೂಕು ಮಟ್ಟದಲ್ಲಿ ಸಭೆ ನಡೆಸಿ ಪ್ರಗತಿ ದಾಖಲಿಸುವಂತೆ ಸಂಸದರು ನಿರ್ದೇಶನ ನೀಡಿದರು.
ಅನುದಾನ ವ್ಯತ್ಯಯವಾದರೆ ಅಧಿಕಾರಿಗಳನ್ನೇ ಹೊಣೆ ಮಾಡುವುದಾಗಿ ನುಡಿದ ಅವರು, ಮುಖ್ಯವಾಗಿ ವಸತಿ ಯೋಜನೆ, ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆ ಹಾಗೂ ಉದ್ಯೋಗ ಖಾತ್ರಿ ಯೋಜನೆಯ ಪ್ರಗತಿ ಪರಿಶೀಲಿಸಿದರು.
ಪ್ರಧಾನ ಮಂತ್ರಿ ಗ್ರಾಮಸಡಕ್ ಯೋಜನೆಯಡಿ ಜಿಲ್ಲೆಯಲ್ಲಿ 2011-12ರ ತನಕ ಒಟ್ಟು 69 ಪ್ಯಾಕೇಜ್ ಗಳು ಮಂಜೂರಾಗಿದ್ದು ಇದರಲ್ಲಿ ಒಟ್ಟು 140 ಕಾಮಗಾರಿಗಳು ಮಂಜೂರಾಗಿರುತ್ತದೆ. ಆಗಸ್ಟ್ 2011ರ ಅಂತ್ಯಕ್ಕೆ ಒಟ್ಟು 57 ಪ್ಯಾಕೇಜ್ ಗಳನ್ನು ಅನುಷ್ಠಾನ ಗೊಳಿಸಲಾಗಿದ್ದು 12 ಪ್ಯಾಕೇಜ್ ಗಳು ಪ್ರಗತಿಯಲ್ಲಿದೆ. ಈ ಕಾಮಗಾರಿಗಳಿಗೆ ಈತನಕ ಒಟ್ಟು 18722.28 ಲಕ್ಷ ಖರ್ಚು ಮಾಡಲಾಗಿದೆ ಎಂದು ಸಭೆಯಲ್ಲ ಮಾಹಿತಿ ನೀಡಲಾಯಿತು.
ಇಂದಿರಾ ಆವಾಸ್ ಯೋಜನೆ ಮತ್ತು ಬಸವ ಇಂದಿರಾ ಯೋಜನೆಯಡಿ 10-11ರ ಸಾಲಿನ ಮನೆಗಳನ್ನು ಡಿಸೆಂಬರ್ ಒಳಗಡೆ ಸಂಪೂರ್ಣಗೊಳಿಸಬೇಕೆಂದ ಸಂಸದರು, 2011-12ರ ಸಾಲಿನ ಮನೆಗಳನ್ನು ಮಾಚ್ರ್ ಅಂತ್ಯಕ್ಕೆ ಪೂರ್ಣಗೊಳಿಸಬೇಕೆಂದು ಕಾರ್ಯನಿರ್ವ ಹಣಾಧಿಕರಿಗಳಿಗೆ ಸೂಚಿಸಿದರು.
ಉದ್ಯೋಗ ಖಾತ್ರಿ ಯೋಜನೆಯಡಿ ರಾಜೀವ್ ಗಾಂಧಿ ಸೇವಾ ಕೇಂದ್ರಗಳ ಕಾಮಗಾರಿಗಳನ್ನು ಮಾರ್ಚ್ ಅಂತ್ಯದೊಳಗೆ ಪೂರ್ಣಗೊಳಿಸಬೇಕೆಂದ ಅವರು, ಸಣ್ಣ ಮತ್ತು ಅತಿಸಣ್ಣ ರೈತರ ಪಾಲ್ಗೊಳ್ಳುವಿಕೆಗೆ ತಹಸೀಲ್ದಾರ್ ನೀಡಿದ ಪಟ್ಟಿಯನ್ನು ಅಂತಿಮವಾಗಿಟ್ಟು ಕೆಲಸ ಕೇಳುವವರಿಗೆ ಕೆಲಸ ನೀಡಿ ಎಂದು ಹೇಳಿದರು. ಮೆಸ್ಕಾಂ ಮತ್ತು ಪಂಚಾಯಿತಿ ನಡುವಿನ ವಿದ್ಯುತ್ ಬಿಲ್ ಸಮಸ್ಯೆಯನ್ನು ಪರಸ್ಪರ ಕುಳಿತು ಚರ್ಚಿಸಿ ಪರಿಹಾರ ಕಂಡುಕೊಳ್ಳಬೇಕು ಎಂದ ಅವರು, ಭತ್ತದ ಬೆಳೆ ಪ್ರಗತಿ ಪರಿಶೀಲಿಸಿ ಸಲಹೆಗಳನ್ನು ನೀಡಿದರು.
ಮಳೆಹಾನಿ ಕಾಮಗಾರಿ ಪ್ರಗತಿಯನ್ನು ಲೋಕೋಪಯೋಗಿ ಇಲಾಖೆ ಅಧಿಕಾರಿಗ ಎರಡು ದಿನಗಳೊಳಗಾಗಿ ಸಲ್ಲಿಸಬೇಕೆಂದ ಅವರು, ಜಾಗೃತಿ ಸಮಿತಿ ಸದಸ್ಯರಾದ ರಾಜೀವ್ ಶೆಟ್ಟಿ ಮತ್ತು ಗುಣವತಿ ಅವರ ಸಮಸ್ಯೆಗಳನ್ನು ಆಲಿಸಿ ಸಲಹೆ ನೀಡಿದರು.
ಜಿಲ್ಲೆಯಲ್ಲಿ ರಸ್ತೆಗಳು ತೀರಾ ಹದಗೆಟ್ಟಿದ್ದು ರಾಷ್ಟ್ರೀಯ ಹೆದ್ದಾರಿ, ಲೋಕೋಪಯೋಗಿ ಮತ್ತು ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗದ ಅಧಿಕಾರಿಗಳು ರಸ್ತೆಗಳನ್ನು ಸುಸ್ಥಿತಿಗೆ ತರಲು ಸಮರೋಪಾದಿಯಲ್ಲಿ ಕ್ರಮಕೈಗೊಳ್ಳಬೇಕೆಂದರು.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರಸಕ್ತ ಸಾಲಿನಲ್ಲಿ 34 ಸಾವಿರ ಹೆಕ್ಟೇರ್ ಮುಂಗಾರು ಹಂಗಾಮಿಗೆ ಭತ್ತ ಬೆಳೆಯಲು ಗುರಿ ನಿಗದಿಯಾಗಿದ್ದು, 32,423 ಹೆಕ್ಟೇರ್ ಗುರಿ ಸಾಧಿಸಲಾಗಿದೆ. 541 ಕ್ವಿಂಟಾಲ್ ಬಿತ್ತನೆ ಬೀಜ ವಿತರಿಸಲಾಗಿದೆ. 31 ಕ್ವಿಂಟಾಲ್ ಬಿತ್ತನೆ ಬೀಜ ದಾಸ್ತಾನಿದೆ ಎಂದರು. ಸಭೆಯಲ್ಲಿ ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಶೈಲಜಾ ಭಟ್, ಉಪಾಧ್ಯಕ್ಷರಾದ ಧನಲಕ್ಷ್ಮಿ ಜನಾರ್ಧನ್, ಉಪಕಾರ್ಯದರ್ಶಿ ಶಿವರಾಮೇಗೌಡ, ಅಪರ ಜಿಲ್ಲಾಧಿಕಾರಿ ದಯಾನಂದ ಕೆ ಎ, ಪಾಲಿಕೆ ಆಯುಕ್ತರಾದ ಡಾ ಹರೀಶ್ ಕುಮಾರ್ ಉಪಸ್ಥಿತರಿದ್ದರು.

ನ20 ರಿಂದ ಡಿ30ರವರೆಗೆ ಜಿಲ್ಲೆಯಲ್ಲಿ ಸಾಮಾಜಿಕ,ಆರ್ಥಿಕ ಮತ್ತು ಜಾತಿಗಣತಿ

ಮಂಗಳೂರು,ಅಕ್ಟೋಬರ್.04: ಕೇಂದ್ರ ಗ್ರಾಮೀಣಾಭಿವೃದ್ಧಿ ಮಂತ್ರಾಲಯ ಹಾಗೂ ಕೇಂದ್ರ ವಸತಿ ಮತ್ತು ನಗರ ಬಡತನ ನಿರ್ಮೂಲನಾ ಮಂತ್ರಾಲಯದ ನಿರ್ದೇಶನದಂತೆ ರಾಜ್ಯದಲ್ಲಿ ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳನ್ನು ಗುರುತಿಸುವ ಸಲುವಾಗಿ ಸಾಮಾಜಿಕ, ಆರ್ಥಿಕ ಮತ್ತು ಜಾತಿ ಗಣತಿ-2011 ನ್ನು ಜಿಲ್ಲೆಯಲ್ಲಿ ಪರಿಣಾಮಕಾರಿಯಾಗಿ ನಡೆಸಲು ದಕ್ಷಿಣ ಕನ್ನಡ ಅಪರ ಜಿಲ್ಲಾಧಿಕಾರಿ ದಯಾನಂದ ಕೆ ಎ ಅವರು ಅಧಿಕಾರಿಗಳ ಪೂರ್ವಭಾವಿ ಸಭೆ ನಡೆಸಿದರು.
ಜಿಲ್ಲಾಧಿ ಕಾರಿ ಗಳ ಕಚೇರಿ ಯಲ್ಲಿ ಇಂದು ನಡೆ ಸಿದ ಸಭೆ ಯಲ್ಲಿ ಗಣತಿ ಸಂ ಬಂಧ ಅಧಿ ಕಾರಿ ಗಳು ನಡೆಸಿ ರುವ ತಯಾರಿ ಯನ್ನು ಪರಿ ಶೀಲನೆ ನಡೆ ಸಿದ ಅಪರ ಜಿಲ್ಲಾ ಧಿಕಾ ರಿಗಳು, ಸಮಗ್ರ ಗಣ ತಿಗೆ ಪೂರ್ವ ತಯಾ ರಿಯ ಅಗತ್ಯ ವನ್ನು ಅಧಿ ಕಾರಿ ಗಳು ಮನ ಗಾಣ ಬೇಕೆಂದು ಸೂಚಿಸಿದರು. ಎರಡು ದಿವಸಗಳೊಳಗೆ ಗಣತಿದಾರರನ್ನು ಬ್ಲಾಕ್ ಮಟ್ಟದಲ್ಲಿ ನೇಮಿಸಲು ಪಟ್ಟಿ ಸಿದ್ಧಪಡಿಸಬೇಕೆಂದು ಸೂಚಿಸಿದ ಅಪರ ಜಿಲ್ಲಾಧಿಕಾರಿಗಳು, ಶಿಕ್ಷಕರನ್ನು ಗಣತಿ ಕಾರ್ಯದಿಂದ ಈ ಬಾರಿ ಹೊರಗಿರಿಸಲಾಗಿದ್ದು ಅಂಗನವಾಡಿ, ಆಶಾ ಕಾರ್ಯಕರ್ತೆಯರು ಅಥವಾ ಎಸ್ ಎಸ್ ಎಲ್ ಸಿ ಮುಗಿಸಿದ ಅರ್ಹರನ್ನು ನೇಮಿಸಬಹುದೆಂದು ತಿಳಿಸಿದರು.ಗಣತಿ ಕಾರ್ಯ ದಲ್ಲಿ ನಾಲ್ಕು ಬ್ಲಾಕ್ ಗಳ ಗಣತಿ ನಡೆಸಿ ದವರಿಗೆ ಗರಿಷ್ಠ 18,000 ರೂ.ಗಳ ವರೆಗೆ ಗೌರ ವ ಧನ ನೀಡಲು ಅವ ಕಾಶ ವಿದ್ದು ಅಂಗನ ವಾಡಿ ಕಾರ್ಯ ಕರ್ತೆ ಯರು ಸಕ್ರಿ ಯವಾಗಿ ಗಣತಿ ಕಾರ್ಯ ದಲ್ಲಿ ಪಾಲ್ಗೊ ಳ್ಳಲು ಕೋರಿದೆ. 1931 ರ ನಂತರ ಪ್ರಥಮ ಬಾರಿಗೆ ಈ ಮಾದರಿ ಗಣತಿ ನಡೆ ಯುತ್ತಿದ್ದು ಹಲವು ರಾಜ್ಯ ಗಳಲ್ಲಿ ಈಗಾ ಗಲೇ ಗಣತಿ ಮುಗಿ ದಿದೆ. ಜಿಲ್ಲೆ ಯಲ್ಲಿ ನವೆಂಬರ್ 20 ರಿಂದ ಡಿಸೆಂಬರ್ 30ರವರೆಗೆ 40 ದಿನಗಳ ಕಾಲ ಗಣತಿ ನಡೆಯಲಿದೆ. 2001ರ ಜನಗಣತಿ ಮಾದರಿಯಂತೆ 4 ಬ್ಲಾಕ್ ಗಳನ್ನು ಒಬ್ಬರಿಗೆ ನೀಡಲಾಗುವುದು.
ತಾಲೂಕುಗಳಿಗೆ ತಹಸೀಲ್ದಾರ್ ಮುಖ್ಯಸ್ಥರಾಗಿದ್ದು, ಕಾರ್ಯನಿರ್ವಾಹಕ ಅಧಿಕಾರಿಗಳು ನೋಡಲ್ ಅಧಿಕಾರಿಗಳಾಗಿರುತ್ತಾರೆ. ನಗರ ಪ್ರದೇಶಕ್ಕೆ ಆಯುಕ್ತರು/ ಮುಖ್ಯಾಧಿಕಾರಿಗಳು ನೋಡಲ್ ಅಧಿಕಾರಿಗಳಾಗಿರುತ್ತಾರೆ. ಅನಿವಾರ್ಯ ಸಂದರ್ಭಗಳಲ್ಲಿ ಬೇರೆಯವರನ್ನು ನೇಮಿಸುವ ಅಧಿಕಾರ ಗಣತಿ ಅಧಿಕಾರಿಯಾಗಿರುವ ಅಪರ ಜಿಲ್ಲಾಧಿಕಾರಿಗಳಿಗಿರುತ್ತದೆ.
ಜಿಲ್ಲೆಗೆ 21+7 ಮಾಸ್ಟರ್ ಟ್ರೈನರ್ಸ್ ಗಳಿದ್ದು, ಬೆಲ್ ಸಂಸ್ಥೆಯಿಂದ ಟ್ಯಾಬ್ಲೆಟ್ ಪಿ ಸಿ(ಲ್ಯಾಪ್ ಟಾಪ್) ಮತ್ತು ಆಪರೇಟರ್ ಗಣತಿದಾರರ ಜೊತೆಗಿರುತ್ತಾರೆ. ಪ್ರತೀ 48 ಗಂಟೆಗಳಿಗೊಮ್ಮೆ ಮಾಹಿತಿ ಅಪ್ ಲೋಡ್ ಮಾಡಲು ಸೂಚಿಸಲಾಗಿದೆ. ಆರು ಗಣತಿದಾರರಿಗೆ ಒಬ್ಬರು ಮೇಲ್ವಿಚಾರಕರಿರುತ್ತಾರೆ.
ಅಕ್ಟೋಬರ್ 10 ರಂದು ಜಿಲ್ಲಾಧಿಕಾರಿಗಳ ಕಾನ್ಫರೆನ್ಸ್ ಹಾಲ್ ನಲ್ಲಿ ಒಂದು ದಿನ ಎಲ್ಲ ನೋಡಲ್ ಅಧಿಕಾರಿಗಳಿಗೆ ತರಬೇತಿಯಿದ್ದು, ಪರವಾಗಿ ಯಾರನ್ನೂ ಕಳುಹಿಸದೆ ಖುದ್ದಾಗಿ ನೋಡಲ್ ಅಧಿಕಾರಿಗಳು ತರಬೇತಿಯಲ್ಲಿ ಪಾಲ್ಗೊಳ್ಳಬೇಕೆಂದು ಅಪರ ಜಿಲ್ಲಾಧಿಕಾರಿ ದಯಾನಂದ್ ಸೂಚಿಸಿದರು.
ನವೆಂಬರ್ 2, 3 ಮತ್ತು 4ರಂದು ಮಾಸ್ಟರ್ ಟ್ರೈನರ್ಸ್ ತಾಲೂಕು ಮಟ್ಟದವರಿಗೆ 3 ದಿನಗಳ ತರಬೇತಿಯನ್ನು ನೀಡಲಿರುವರು. ಕೆಲಸದ ಹೊರೆಯನ್ನು ನಿಭಾಯಿಸಲು ಹೊರಗುತ್ತಿಗೆ ಆಧಾರದಲ್ಲಿ ತಾಲೂಕು ಕೇಂದ್ರಗಳಲ್ಲಿ ಡಾಟಾ ಆಪರೇಟರ್ ಮತ್ತು ಡಿ ಗ್ರೂಪ್ ನೌಕರರನ್ನು ನೇಮಿಸಲು ಅವಕಾಶ ಕಲ್ಪಿಸಲಾಗಿದೆ.
ರಾಷ್ಟ್ರೀಯ ಜನಗಣತಿ ಮೊದಲ ಹಂತದಲ್ಲಿ ಎನ್ ಪಿ ಆರ್ (ರಾಷ್ಟ್ರೀಯ ಜನಸಂಖ್ಯಾ ರಿಜಿಸ್ಟ್ರಾರ್ ನ್ನು ಆಧಾರವಾಗಿರಿಸಿ ಹಾಗೂ ಈ ಮಾಹಿತಿಯನ್ನು ಅಪ್ ಡೇಟ್ ಮಾಡಲು ಸಾಮಾಜಿಕ, ಆರ್ಥಿಕ ಮತ್ತು ಜಾತಿ ಗಣತಿ-2011 ನೆರವಾಗಲಿದೆ.
ಮಾಸ್ಟರ್ ಟ್ರೈನರ್ ನಾಗೇಂದ್ರ ಅವರು ಟ್ಯಾಬ್ಲೆಟ್ ಪಿ ಸಿಯನ್ನು ಬಳಸುವ ಬಗ್ಗೆ,ಗಣತಿ ಕಾರ್ಯದ ಬಗ್ಗೆ ಮಾಹಿತಿಯನ್ನು ನೀಡಿದರು.