
ಎಲ್ಲರ ಪಾಲ್ಗೊಳ್ಳುವಿಕೆಯನ್ನು ಖಚಿತಪಡಿಸಿಕೊಂಡು ಆಧಾರ್ ನ ಅಗತ್ಯವನ್ನು ಜನರಿಗೆ ತಿಳಿಹೇಳಿ ಎಂದ ಅವರು, ಯಾವುದೇ ಸಮಸ್ಯೆ ಇದ್ದರೂ ತಮ್ಮನ್ನು ಇ ಮೇಲ್ ಮುಖಾಂತರ ಸಂಪರ್ಕಿಸಿ ಎಂದು ಸಹಾಯಕ ಆಯುಕ್ತರಾದ ಡಾ ವೆಂಕಟೇಶ್ ಅವರಿಗೆ ಹೇಳಿದರು.ವಿಡಿಯೋ ಕಾನ್ಫರೆನ್ಸ್ ನಲ್ಲಿ ಸಿಇಒ ರವೀಂದ್ರನ್ ಅವರು ಉಪಸ್ಥಿತರಿದ್ದರು.
ಆಧಾರ್ ಎನ್ ರೋಲ್ ಮೆಂಟ್ ಗೆ ವೆರಿಫೈಯರ್ಸ್ ನ್ನು ಚುನಾವಣಾ ಪ್ರಕ್ರಿಯೆಗೆ ನೇಮಿಸುವ ತರಹವೇ ಗಂಭೀರವಾಗಿ ಪರಿಗಣಿಸಿ ನೇಮಿಸಿ ಎಂದು ವಿದ್ಯಾಶಂಕರ್ ಹೇಳಿದರು. ಜಿಲ್ಲೆಯಲ್ಲಿ ಆಧಾರ್ ಮೇಲ್ವಿಚಾರಣೆ ನೋಡಿಕೊಳ್ಳುತ್ತಿರುವ ಸಾಂಖ್ಯಿಕ ಅಧಿಕಾರಿ ಸಂಧ್ಯಾ ಉಪಸ್ಥಿತರಿದ್ದರು.