Thursday, August 25, 2011

ಆದಾಯ ಪತ್ರ ವಿಳಂಬ; ಸಿಬಂದಿ ಅಮಾನತಿಗೆ ಜಿಲ್ಲಾಧಿಕಾರಿ ಆದೇಶ

ಮಂಗಳೂರು,ಆಗಸ್ಟ್.25:ಆದಾಯ ಧೃಡಿಕರಣ ಪತ್ರ ವಿಲೇವರಿಯಲ್ಲಿ ವಿಳಂಬಮಾಡಿದ ಕಾರಣಕ್ಕೆ ಬಂಟ್ವಾಳ ತಾಲೂಕು ಕಚೇರಿಯ ಕಡತ ವಿಲೇವಾರಿ ಸಿಬಂದಿಯನ್ನು ಅಮಾನತು ಮಾಡಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ. ಚನ್ನಪ್ಪ ಗೌಡ ಅವರು ಆದೇಶ ಹೊರಡಿಸಿದ್ದಾರೆ.ಅವರು ನಿನ್ನೆ ಬಂಟ್ಟವಾಳ ತಾಲೂಕು ಕಚೇರಿಗೆ ಹಠತ್ ಭೇಟಿ ನೀಡಿ ಕಡತಗಳನ್ನು ಪರಿಶೀಲಿಸಿದ ಸಂದರ್ಭ ಆದಾಯ ಧೃಡಿಕರಣ ಕೋರಿ ಸಲ್ಲಿಸಿದ್ದ 798 ಅರ್ಜಿಗಳು ವಿಲೇವಾರಿಯಾಗದೇ ಬಾಕಿ ಉಳಿದ ಹಿನ್ನೆಲೆಯಲ್ಲಿ ಮತ್ತು ಸಮರ್ಪಕ ವಿವರ ನೀಡದ ಹಿನ್ನೆಲೆಯಲ್ಲಿ ತಾಲೂಕು ಕಚೇರಿಯ ಕಡತ ವಿಲೇವಾರಿ ಸಿಬಂದಿಯಾದ ಗ್ರೆಟ್ಟಾ ಅವರನ್ನು ಅಮಾನತು ಗೊಳಿಸುವಂತೆ ಆದೇಶಿಸಿಸಿದರು.ಈ ಬಾಕಿ ಅರ್ಜಿಗಳನ್ನು ಇಂದು ಸಂಜೆಯ ಒಳಗೆ ಸಂಬಂದಿಸಿದ ಅರ್ಜಿದಾರರ ಮನೆಗೆ ಖುದ್ದಾಗಿ ತಲುಪಿಸುವಂತೆ ಕಂದಾಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಅಂತ್ಯೋದಯ ಯೋಜನೆಯಲ್ಲಿ 286 ಫಲಾನುಭವಿಗಳ ಅರ್ಜಿ ಬಾಕಿ ಇರಿಸಿದ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ಸಿಬಂದಿಗಳ ಮಾಸಿಕ ವೇತನ ಪಾವತಿಗೂ ಜಿಲ್ಲಾಧಿಕಾರಿಗಳು ತಡೆ ವಿಧಿಸಿದ್ದಾರೆ.ಬಿಪಿಎಲ್ ವ್ಯಾಪ್ತಿಗೊಳಪಟ್ಟ ಮೃತ ಕುಟುಂಬಗಳಿಗೆ ತಲಾ ರೂ.1000 ಸಾವಿರ ಪಾವತಿಯಾಗಬೇಕಿತ್ತು.ಆದರೆ ಈ ಅರ್ಜಿ ವಿಲೇವಾರಿಯಾಗದೆ ಬಾಕಿ ಉಳಿದಿತ್ತು.ಇದನ್ನು 2 ದಿನದೊಳಗೆ ವಿಲೇ ಮಾಡಲು ಜಿಲ್ಲಾಧಿಕಾರಿಗಳು ಸೂಚನೆ ನೀಡಿದರು. ಯಾವುದೇ ಕಾರಣಕ್ಕೂ ಅರ್ಜಿ ವಿಲೇವಾರಿ ವಿಳಂಬವಾದರೆ,ಸಂಬಂಧಿಸಿದವರ ಮೇಲೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ಚನ್ನಪ್ಪ ಗೌಡ ಅವರು ಎಚ್ಚರಿಕೆ ನೀಡಿದ್ದಾರೆ.

Wednesday, August 24, 2011

ಭೂರಹಿತರಿಗೆ ಜಲಾನಯನ ಪ್ರದೇಶದಲ್ಲಿ ಆದಾಯೋತ್ಪನ್ನ ಚಟುವಟಿಕೆಗಳು

ಮಂಗಳೂರು,ಆಗಸ್ಟ್.24:ಜಲಾನಯನ ಅಭಿವೃದ್ಧಿ ಇಲಾಖೆಯು ಜಲಾನಯನ ಪ್ರದೇಶದಲ್ಲಿ ಭೂರಹಿತರಿಗೆ ಸ್ವಸಹಾಯಸಂಘಗಳನ್ನು ರೂಪಿಸಿ ಅಭಿವೃದ್ದಿ ಚಟುವಟಿಕೆಗಳನ್ನು ಪ್ರೇರೇಪಿಸುತ್ತಿದೆ.ಜಲಾ ನಯನ ಉಪ ಸಮಿತಿಗೆ ಗ್ರಾಮ ಪಂಚಾ ಯಿತಿ ಅಧ್ಯಕ್ಷ ರೇ ಅಧ್ಯಕ್ಷ ರಾಗಿರು ತ್ತಾರೆ. ಇಸ್ರೋ ದ ಮೂಲಕ ಇಂತಹ ಪ್ರದೇಶ ಗಳನ್ನು ಗುರುತಿ ಸಲಾಗಿದೆ. ತೋಟ ಗಾರಿಕೆ, ಅರಣ್ಯ ಮತ್ತು ಕೃಷಿ ಇಲಾಖೆ ಯವರು ವಿವಿಧ ಯೋಜನೆ ಗಳನ್ನು ರೂಪಿಸು ತ್ತಾರೆ. ಭೂ ರಹಿತ ಬಡವರಿಗೆ ಜಲಾನಯನ ಅಭಿವೃದ್ದಿ ಇಲಾಖೆಯಿಂದ ಸ್ವಸಹಾಯ ಸಂಘದ ಮೂಲಕ ಹೊಲಿಗೆ ಯಂತ್ರ, ಕೋಳಿ ವಿತರಣೆ, ಹಾಳೆತಟ್ಟೆ ತಯಾರಿಸಲು, ಹಪ್ಪಳ ಮಾಡಲು ನೆರವು ನೀಡಲಾಗುತ್ತದೆ ಎಂದು ಜಲಾನಯನ ಅಭಿವೃದ್ಧಿ ಇಲಾಖಾಧಿಕಾರಿ ಜಿ ಟಿ ಪುತ್ರ ಅವರು ಹೇಳಿದ್ದಾರೆ.ಜಲಾನಯನ ಅಭಿವೃದ್ದಿ ಇಲಾಖೆಯಿಂದ ಅನುಪ್ಟಾನ ಗೊಳ್ಳುತ್ತಿರುವ ವಿವಿಧ ಯೋಜನೆಗಳಲ್ಲಿ ಪಶ್ಚಿಮ ಘಟ್ಟ ಅಭಿವೃದ್ದಿ ಯೋಜನೆ ಕೂಡ ಒಂದು. ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ, ಪುತ್ತೂರು ಮತ್ತು ಸುಳ್ಯ ತಾಲೂಕುಗಳಲ್ಲಿ ಸದ್ರಿ ಯೋಜನೆಯನ್ನು ಅನುಪ್ಟಾನಗೊಳಿಸಲಾಗುತ್ತಿದೆ. ಈ ಯೋಜನೆ ಯಡಿ ಯಲ್ಲಿ ಅರಣ್ಯ, ತೋಟ ಗಾರಿಕೆ ಮತ್ತು ಕೃಷಿ ಕಾಮ ಗಾರಿ ಗಳನ್ನು ಕೈ ಗೊಂಡು ಮಣ್ಣು ಮತ್ತು ನೀರು ಸಂ ರಕ್ಷಣೆ ಮಾಡುವು ದರೊಂ ದಿಗೆ ಜೈವಿಕ ವೈ ವಿಧ್ಯತೆ ಅಭಿ ವೃದ್ದಿ ಪಡಿಸ ಲಾಗು ವುದು. ಜನರ ಸಹ ಭಾಗಿತ್ವ ದಲ್ಲಿ ಈ ಕಾರ್ಯ ಕ್ರಮ ಗಳನ್ನು ಅನು ಪ್ಟಾನ ಗೊಳಿ ಸಲಾ ಗುತ್ತದೆ. ಅಂತ ರ್ಜಲ ನೀರಿನ ಗುಣಮಟ್ಟವನ್ನು ಹೆಚ್ಚಿಸುವುದು, ಹಸಿರೀಕರಣ ಅಭಿವೃದ್ದಿ, ಜಲಮರುಪೂರಣ ಮಟ್ಟವನ್ನು ಹೆಚ್ಚಿಸುವುದು, ಬೆಳೆಗಳಿಗೆ ರಕ್ಷಣಾತ್ಮಕ ನೀರಾವರಿ ಒದಗಿಸುವುದು, ಭೂ ಉಪಚಾರ ಮಾಡುವುದರ ಒಟ್ಟಿಗೆ ಜಲಾನಯನ ಪ್ರದೇಶದ ಭೂ ರಹಿತರಿಗೆ ಆದಾಯೋತ್ಪನ್ನ ಚಟುವಟಿಕೆಗಳಾದ ಕೋಳಿ ಸಾಕಣೆಗಾಗಿ ಕೋಳಿಗಳ ವಿತರಣೆ, ಹೊಲಿಗೆ ಯಂತ್ರವನ್ನು ಒದಗಿಸುವುದು, ಕರ ಕುಶಲ ಕರ್ಮಿಗಳಿಗೆ ಬೇಕಾದ ಸಲಕರಣೆಗಳ ವಿತರಣೆ ಇತ್ಯಾದಿ, ಭೂ ಹಿಡುವಳಿದಾರರಿಗೆ ತೋಟಗಾರಿಕಾ ಗಿಡಗಳಾದ ಕಸಿ ಕಟ್ಟಿದ ಗೇರು ಗಿಡ,ತೆಂಗು, ಕೊಕ್ಕೊ ಮಾವು, ಹಲಸು ಮುಂತಾದ ಗಿಡಗಳನ್ನು ನೀಡಲಾಗುತ್ತದೆ.

Monday, August 22, 2011

ಸರ್ವಶಿಕ್ಷಣ ಅಭಿಯಾನದಡಿ ಪ್ರಸಕ್ತ ಸಾಲಿನಲ್ಲಿ 31ಕೋಟಿ 11ಲಕ್ಷ ರೂ.ಅನುದಾನಕ್ಕೆ ಮಂಜೂರಾತಿ

ಮಂಗಳೂರು,ಆಗಸ್ಟ್.22: ಶೈಕ್ಷಣಿಕ ವಲಯದಲ್ಲಿ ಉತ್ತಮ 20 ಜಿಲ್ಲೆಗಳಲ್ಲಿ ಒಂದು ಎಂದು ಗುರುತಿಸಲ್ಪಟ್ಟಿರುವ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸರ್ವ ಶಿಕ್ಷಣ ಅಭಿಯಾನ ಯೋಜನೆಯಿಂದ ಸರ್ಕಾರಿ ಶಾಲೆಗಳು ಮೂಲಭೂತ ಸೌಕರ್ಯಗಳೊಂದಿಗೆ ಗುಣಮಟ್ಟದ ಶಿಕ್ಷಿಣ ನೀಡುವಲ್ಲಿ ಯಶಸ್ವಿಯಾಗಿದೆ. ಪ್ರಸಕ್ತ ಸಾಲಿನಲ್ಲಿ ಸರ್ವಶಿಕ್ಷಣ ಅಭಿಯಾನದ ಕ್ರಿಯಾಯೋಜನೆಗೆ ಇಂದು ಜಿಲ್ಲಾ ಪಂಚಾಯತ್ ನಲ್ಲಿ ಅನುಮೋದನೆ ದೊರೆತಿದ್ದು, ಅನುದಾನವನ್ನು ಸದ್ಬಳಕೆ ಮಾಡಿಕೊಳ್ಳಬೇಕೆಂದು ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣ ಜೆ. ಪಾಲೆಮಾರ್ ಹೇಳಿದರು. ನಗರದ ಜಿಲ್ಲಾ ಪಂಚಾ ಯತ್ ಮಿನಿ ಸಭಾಂ ಗಣದಲ್ಲಿ ಇಂದು ಸರ್ವ ಶಿಕ್ಷಣ ಅಭಿಯಾ ನದ ಜಿಲ್ಲಾ ಅನು ಷ್ಠಾನ ಸಮಿತಿ ಯ ಸಭೆಯ ಅಧ್ಯ ಕ್ಷತೆ ವಹಿಸಿ ಅವರು ಮಾತ ನಾಡು ತ್ತಿದ್ದರು. 2001-02 ನೇ ಸಾಲಿ ನಲ್ಲಿ 7656 ಮಕ್ಕಳು ಶಾಲೆ ಯಿಂದ ಹೊರ ಗುಳಿ ದಿದ್ದರೆ ಈಗ ಆ ಸಂಖ್ಯೆ 64ಕ್ಕೆ ಇಳಿಕೆ ಯಾಗಿದೆ. ಶಾಲೆಯಿಂದ ಹೊರಗುಳಿದ ಮಕ್ಕಳ ಪ್ರಮಾಣ ಜಿಲ್ಲೆಯಲ್ಲಿ ಶೇ. 0.06 ಆಗಿದ್ದು, ರಾಜ್ಯದಲ್ಲೇ ಕನಿಷ್ಠ ಸಂಖ್ಯೆಯಲ್ಲಿ ಶಾಲೆಯಿಂದ ಮಕ್ಕಳು ಹೊರಗುಳಿದಿರುವ ಜಿಲ್ಲೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಇದು ಶೇ.0ಗೆ ತಲುಪುವಲ್ಲಿ ಅಧಿಕಾರಿಗಳು ಶ್ರಮಿಸುವಂತೆ ಕರೆ ನೀಡಿದ ಸಚಿವ ಪಾಲೆಮಾರ್, ಸರಕಾರಿ ಶಾಲೆಗಳಲ್ಲಿನ ಮಕ್ಕಳ ಹಾಜರಾತಿ ಸಂಖ್ಯೆಯನ್ನು ಹೆಚ್ಚಿಸುವಲ್ಲಿ ಕ್ರಮ ಕೈಗೊಳ್ಳಬೇಕೆಂದರು.
ಜಿಲ್ಲೆ 933 ಸರಕಾರಿ ಪ್ರಾಥಮಿಕ ಶಾಲೆಗಳಲ್ಲಿ ಹೆಣ್ಣು ಮಕ್ಕಳ ಶೌಚಾಲಯ, ಕುಡಿಯುವ ನೀರು, ವಿದ್ಯುಚ್ಛಕ್ತಿ, ಅಗ್ನಿನಂದಕ, ವಿಕಲಚೇತನ ಮಕ್ಕಳಿಗೆ ಇಳಿಜಾರು ಸೌಲಭ್ಯ ಕಲ್ಪಿಸಲಾಗಿದೆ. ಕಳೆದ 10 ವರ್ಷಗಳಲ್ಲಿ ಜಿಲ್ಲೆಯಲ್ಲಿ ಏಳು ಬ್ಲಾಕ್ ಸಂಪನ್ಮೂಲ ಕೇಂದ್ರಗಳನ್ನು ತೆರೆಯಲಾಗಿದ್ದು, 52.80 ಲಕ್ಷ ರೂ. ವೆಚ್ಚದಲ್ಲಿ ಸ್ವಂತ ಕಟ್ಟಡವನ್ನು ನಿರ್ಮಿಸಲಾಗಿದೆ ಎಂದವರು ತಿಳಿಸಿದರು.
ಜೋಕಟ್ಟೆಯ ಬೋರುಗುಡ್ಡ ಶಾಲೆ ಎಸ್ಇಝೆಡ್ ಪ್ರದೇಶದಲ್ಲಿದ್ದು, ಈ ಶಾಲೆ ತೀರಾ ನಾದುರಸ್ತಿಯಲ್ಲಿದ್ದು, ಮಳೆಗಾಲದಲ್ಲಿ ಹಾವುಗಳ ಕಾಟದಿಂದ ತೊಂದರೆಯಾಗುತ್ತಿದೆ. ಅಲ್ಲಿ ಪಕ್ಕದಲ್ಲೇ ಸುಮಾರು ಮೂರು ಎಕರೆಯಷ್ಟು ಭೂಮಿ ಇದ್ದು, ಅಲ್ಲಿ ಎಸ್ಇಝೆಡ್ ನೆರವಿನಿಂದಲೇ ಶಾಲೆ ಕಟ್ಟಡ ನಿಮರ್ಾಣಕ್ಕೆ ಸರಕಾರ ಕ್ರಮ ಕೈಗೊಳ್ಳಬೇಕು ಎಂದು ಶಾಸಕ ಅಭಯಚಂದ್ರ ಜೈನ್ ಸಚಿವರ ಗಮನ ಸೆಳೆದರು.
ಜಿಲ್ಲೆಯಲ್ಲಿ 447 ಪ್ರಾಥಮಿಕ ವಿಭಾಗದ, 190 ಹೈಸ್ಕೂಲ್ ವಿಭಾಗದ ಶಿಕ್ಷಕರ ಕೊರತೆ ಇದ್ದು, 81 ಉಸ್ತುವಾರಿ ಅಧಿಕಾರಿಗಳ ಕೊರತೆ ಇರುವುದಾಗಿ ಸಚಿವರ ಗಮನ ಸೆಳೆದ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಕೆ.ಎನ್. ವಿಜಯಪ್ರಕಾಶ್, ಜಿಲ್ಲೆಗೆ ಮಂಜೂರಾಗಿರುವ 56 ಅತಿಥಿ ಉಪನ್ಯಾಸಕರ ಹುದ್ದೆಯನ್ನು ದ್ವಿಗುಣಗೊಳಿಸಬೇಕೆಂದು ಮನವಿ ಮಾಡಿದರು. ನಲಿಕಲಿ ಯೋಜನೆಯಡಿ ಪೀಠೋಪಕರಣ ಅಗತ್ಯವಿರುವುದನ್ನೂ ಅವರು ಸಚಿವರ ಗಮನಕ್ಕೆ ತಂದರು. ಎಲ್ಲ ಸರ್ಕಾರಿ ಶಾಲೆಗಳನ್ನು ಘನತ್ಯಾಜ್ಯ ವಿಲೇವಾರಿ ಮತ್ತು ಸ್ವಚ್ಛತೆ ಹಾಗೂ ಹಸುರೀಕರಣ ಯೋಜನೆಯಡಿ ಜಿಲ್ಲಾ ಪಂಚಾಯತ್ ಸೇರಿಸಲಿದೆ ಎಂದರು.
ಅಂಗನವಾಡಿ ಶಾಲೆಗಳ ಕಟ್ಟಡ ಸಮಸ್ಯೆಯನ್ನು ಬಗೆಹರಿಸುವ ನಿಟ್ಟಿನಲ್ಲಿ ಕೊರಗರಿಗೆ ಮನೆಗಳನ್ನು ನಿರ್ಮಿಸಲು ರೂಪಿಸಲಾಗಿರುವ ಯೋಜನೆಯಂತೆಯೇ ಹೊಸ ಪ್ಯಾಕೇಜನ್ನು ಆರಂಭಿಸಲಾಗು ವುದು. ಈ ಯೋಜನೆಯಡಿ ಅಂಗನವಾಡಿಗಳ ಕೊರತೆ ಹಾಗೂ ಅಂಗನವಾಡಿ ಗಳಲ್ಲಿನ ಸೌಲಭ್ಯಗಳ ಕೊರತೆಗಳ ಬಗ್ಗೆ ಸಮಗ್ರವಾಗಿ ಪರಿಶೀಲಿಸಿ ಕ್ರಮ ಕೈಗೊಳ್ಳಲು ಮುಂದಾಗುವುದಾಗಿ ಸಚಿವ ಪಾಲೆಮಾರ್ ಸಭೆಯಲ್ಲಿ ಹೇಳಿದರು.
ಜಿಲ್ಲೆಯಲ್ಲಿ 2010-11ನೆ ಸಾಲಿನಲ್ಲಿ ಒಟ್ಟು 58 ಶಾಲಾ ಕೊಠಡಿಗಳ ಅಗತ್ಯವಿದ್ದು, 47 ಪೂರ್ಣಗೊಂಡಿವೆ. ಉಳಿದ ಕೊಠಡಿಗಳು ಮಾಸಾಂತ್ಯದಲ್ಲಿ ಪೂರ್ಣವಾಗಲಿವೆ. ಇದೇ ಅವಧಿಯಲ್ಲಿ ಒಟ್ಟು 2 ಶಾಲಾ ಕಟ್ಟಡಗಳು ಮಂಜೂರಾಗಿದ್ದು, ಒಂದು ಪೂರ್ಣಗೊಂಡಿದೆ ಎಂದು ಸರ್ವಶಿಕ್ಷಣ ಅಭಿಯಾನದ ಜಿಲ್ಲಾ ಉಪಯೋಜನಾಧಿಕಾರಿ ಶಿವಪ್ರಕಾಶ್ ತಿಳಿಸಿದರು.
ಶಾಲಾಧಾರಿತ ಶಿಕ್ಷಣ, ಗ್ರಂಥಾಲಯಗಳಿಗೆ ಪುಸ್ತಕ ಹಾಗೂ ಓದಿನ ಬಗ್ಗೆ ಆಸಕ್ತಿ ಬೆಳೆಸಲು ಓದುವ ಮೂಲೆಯನ್ನು ಮಕ್ಕಳು ಉಪಯೋಗಿಸುವಂತೆ ಮಾಡುವಲ್ಲಿ ಕಳೆದ ಸಾಲಿನಲ್ಲಿ ಸರ್ವಶಿಕ್ಷಣ ಅಭಿಯಾನ ಯಶಸ್ಸು ಕಂಡಿದೆ ಎಂದ ಅವರು, ರಾಜ್ಯ ಮಟ್ಟದಲ್ಲಿ ನೂತನ ಆವಿಷ್ಕಾರಕ್ಕೆ ಒಂದು ಕೋಟಿ ರೂ. ಮೀಸಲಿರಿಸಿದೆ ಎಂದರು.
ಅನಾಥ ಮಕ್ಕಳಿಗೆ ನಗರದಲ್ಲಿ ಟ್ರಾನ್ಸಿಟ್ ಹೋಮ್ ನ್ನು ಪ್ರಸಕ್ತ ಸಾಲಿನಲ್ಲಿ ಆರಂಭಿಸಲಾಗುವುದು. ಶಾಲಾ ಆವರಣದಲ್ಲೇ ಇರುವ ಈ ಹೋಮ್ ನಲ್ಲಿ 50 ಮಕ್ಕಳಿಗೆ ಅವಕಾಶವಿದೆ ಎಂದರು. ಸಭೆಯಲ್ಲಿ ಸಮಿತಿ ಸದಸ್ಯರು ಗಮನ ಸೆಳೆದ ಸಮಸ್ಯೆಗಳ ಬಗ್ಗೆ ಮಾತನಾಡಿದ ಸಿಇಒ ಅವರು, ಮಂಗಳೂರು ತಾಲೂಕಿನ 3 ಶೈಕ್ಷಣಿಕ ವಲಯಗಳನ್ನು ಭೌಗೋಳಿಕವಾಗಿ/ ಸಂಖ್ಯಾತ್ಮಕವಾಗಿ ಪುನರ್ ವಿಂಗಡಿಸುವ ಬಗ್ಗೆ, ನಗರದ ಮಕ್ಕಳು ಮಾದಕ ದ್ರವ್ಯ ವ್ಯಸನಿಗಳಾಗದಂತೆ ಸಂಯುಕ್ತ ಕಾರ್ಯಾಚರಣೆ ನಡೆಸುವ ಬಗ್ಗೆ, ಮಕ್ಕಳ ಗುಣ ನಡತೆ ಹಾಗೂ ಪೋಷಕರ ಸಹಕಾರದ ಬಗ್ಗೆಯೂ ಪೂರಕ ಕ್ರಮಗಳನ್ನು ರೂಪಿಸುವುದಾಗಿ ಹೇಳಿದರು.
ಸಭೆಯಲ್ಲಿ ಉಪಸ್ಥಿತರಿದ್ದ ಕ್ಯಾ. ಗಣೇಶ್ ಕಾರ್ಣಿಕ್ ಅವರು ಮಾತನಾಡಿ, ಸರಕಾರಿ ಕನ್ನಡ ಶಾಲೆಗಳ ಸಂಖ್ಯೆ ಹಾಗೂ ವಿದ್ಯಾರ್ಥಿ ಸಂಖ್ಯೆ ಇಳಿಮುಖವಾಗುತ್ತಿರುವ ಬಗ್ಗೆ ಸಭೆಯ ಗಮನಸೆಳೆದರಲ್ಲದೆ, ನಮ್ಮ ಜೀವನ ಶೈಲಿಯಲ್ಲಾಗಿರುವ ಬದಲಾವಣೆ ಮಕ್ಕಳ ಬೆಳವಣಿಗೆಯಲ್ಲಿ ಪ್ರತಿಫಲಿಸುತ್ತಿದ್ದು, ಸಭೆಯಲ್ಲಿ ಸದಸ್ಯರು ಗಮನಸೆಳೆದಿರುವ ಗಂಭೀರ ಸವಾಲುಗಳನ್ನು ಪರಿಹರಿಸಲು ತಮ್ಮೆಲ್ಲ ಸಹಕಾರವನ್ನು ನೀಡುವುದಾಗಿ ಹೇಳಿದರು. ವಿದ್ಯಾರ್ಥಿಗಳ ಸಂಖ್ಯೆ ಕಡಿಮೆ ಇರುವ ಶಾಲೆಗಳನ್ನು ಒಗ್ಗೂಡಿಸಿ ಒಂದು ಶಾಲೆಯನ್ನಾಗಿ ರೂಪಿಸುವುದರಿಂದ ಆಗಬಹುದಾದ ಅನುಕೂಲ ಹಾಗೂ ಮಕ್ಕಳ ಅನುಕೂಲಕ್ಕೆ ಅಭಿಯಾನದಿಂದ ವಾಹನ ಒದಗಿಸಲು ಸಾಧ್ಯವಿದ್ದು ಶಾಲೆಗಳ ಸಬಲೀಕರಣವಾಗಲಿದೆ ಎಂದರು.
ಸಭೆಯಲ್ಲಿ ಜಿ.ಪಂ. ಅಧ್ಯಕ್ಷೆ ಶೈಲಜಾ ಭಟ್, ಉಪಾಧ್ಯಕ್ಷೆ ಧನಲಕ್ಷ್ಮಿ ಜನಾರ್ದನ್, ಸ್ಥಾಯಿ ಸಮಿತಿ ಅಧ್ಯಕ್ಷ ಈಶ್ವರ ಕಟೀಲ್ ಉಪಸ್ಥಿತರಿದ್ದರು.
ವಿದ್ಯಾಂಗ ಉಪನಿರ್ದೇಶಕ ಮೋಸೆಸ್ ಜಯಶೇಖರ್ ಸ್ವಾಗತಿಸಿದರು.

ನಗರದ ಪ್ರಥಮ `ವನಿತಾ ವನ' ಉದ್ಘಾಟನೆ

ಮಂಗಳೂರು,ಆಗಸ್ಟ್.22: ಮಹಿಳೆಯರಿಗಾಗಿ ಮೀಸಲು ಈ ಉದ್ಯಾನವನ. ಹಲವು ಜಂಜಡಗಳಿಂದ ಕ್ಷಣಿಕವಾಗಿ ಹೊರಬರಲು, ಪ್ರಕೃತಿಯೊಂದಿಗೆ ಮಾತನಾಡಲು, ಏಕಾಂತವನ್ನು ಅನುಭವಿಸಲು ಮಹಿಳೆ ಮತ್ತು ಮಕ್ಕಳ ಹಿತಚಿಂತನೆಯನ್ನು ಗಮನದಲ್ಲಿರಿಸಿ ಮಂಗಳೂರು ಮಹಾ ನಗರ ಪಾಲಿಕೆ ಆಯುಕ್ತರಾದ ಡಾ.ಕೆ.ಎನ್ ವಿಜಯಪ್ರಕಾಶ್ ಅವರು ರೂಪಿಸಿದ ವನಿತಾವನ ಇಂದು ಉದ್ಘಾಟನೆಗೊಂಡಿತು.ವಿನೂತನ ಪರಿಕಲ್ಪನೆಯ ಈ ಉದ್ಯಾನವನ್ನು ಇಂದು ಜಿಲ್ಲಾ ಉಸ್ತುವಾರಿ ಸಚಿವರಾದ ಕೃಷ್ಣ ಜೆ. ಪಾಲೆಮಾರ್ ಉದ್ಘಾಟಿಸಿ ಶುಭ ಹಾರೈಸಿದರು.ಈ ಸಂದ ರ್ಭದಲ್ಲಿ ಪತ್ರ ಕರ್ತ ರೊಂದಿಗೆ ಮಾತ ನಾಡಿದ ಅವರು, ದೈ ನಂದಿನ ಕೌಟುಂ ಬಿಕ ಒತ್ತಡ ಹಾಗೂ ಜಂಜಾ ಟದ ಬದು ಕಿನ ನಡುವೆ ಮಹಿಳೆ ಯರಿಗೆ ಕೊಂಚ ನೆಮ್ಮದಿ ನೀಡುವ ಪ್ರಶಾಂತ ವಾತಾ ವರಣ ವನ್ನು ಈ ಉದ್ಯಾನ ವನದಲ್ಲಿ ನಿರ್ಮಿಸಿ ರುವುದಾಗಿ ನುಡಿದರು.ಪರಿಸರವನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಇಂತಹ ಯೋಜನೆ ಮಹತ್ವದ್ದಾಗಿದ್ದು, ಮುಂದೆ ಪುರುಷರಿಗಾಗಿಯೂ ಪ್ರತ್ಯೇಕ ಪಾರ್ಕನ್ನು ರೂಪಿಸುವ ಆಲೋಚನೆ ಇದೆ ಎಂದರು. ತಮ್ಮ ನಿಧಿಯಿಂದ 2 ಲಕ್ಷ ರೂ. ಅನುದಾನವನ್ನು ಸಚಿವರು ಪಾರ್ಕಿಗಾಗಿ ಪ್ರಕಟಿಸಿದ್ದು, ಇದೇ ವೇಳೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಂಸದ ನಳಿನ್ ಕುಮಾರ್ ಕಟೀಲ್ ಹಾಗೂ ಸ್ಥಳೀಯ ಶಾಸಕ ಯೋಗೀಶ್ ಭಟ್ ಅವರು ಕೂಡಾ ತಮ್ಮ ನಿಧಿಯಿಂದ ತಲಾ ಎರಡು ಲಕ್ಷ ರೂ.ಗಳ ಅನುದಾನವನ್ನು ಘೋಷಿಸಿದರು. ವನಿತಾವನದಲ್ಲಿ ವಾಚನಾಲಯ, ಮಹಿಳಾ ಕ್ಲಿನಿಕ್, ಹಾಗೂ ಮಹಿಳಾ ಪೊಲೀಸರೆ ರಕ್ಷಣೆಗೂ ಇರುತ್ತಾರೆ ಎಂದು ಸಚಿವರು ಹೇಳಿದರು.
1.5 ಎಕರೆ ಭೂಮಿಯಲ್ಲಿ ಅಲ್ಲಿದ್ದ ಮರಗಳನ್ನೇ ಉಳಿಸಿಕೊಂಡು ಈ ಉದ್ಯಾನವನ ಯೋಜನೆಯನ್ನು ರೂಪಿಸಲಾಗಿದ್ದು, ಈಗಾಗಲೇ ಆರು ಲಕ್ಷ ರೂ.ಗಳನ್ನು ಖರ್ಚು ಮಾಡಲಾಗಿದೆ. ಒಟ್ಟು 25 ಲಕ್ಷ ರೂ.ಗಳಲ್ಲಿ ಪಾರ್ಕಿನಲ್ಲಿ ವಿವಿಧ ಸೌಕರ್ಯಗಳನ್ನು ಒದಗಿಸಲು ಯೋಜನೆ ರೂಪಿಸಲಾಗಿದೆ ಎಂದು ಆಯುಕ್ತರಾದ ಡಾ.ಕೆ.ಎನ್. ವಿಜಯಪ್ರಕಾಶ್ ತಿಳಿಸಿದರು. ನಗರ ಪಾಲಿಕೆ ಯಲ್ಲಿ ರುವ 28 ಉದ್ಯಾ ನವನ ಗಳನ್ನು ಅಭಿ ವೃದ್ಧಿ ಪಡಿ ಸುವ ಯೋಜನೆ ಯನ್ನು ಹಮ್ಮಿ ಕೊಳ್ಳ ಲಾಗಿದೆ. ಈಗಾ ಗಲೇ ಮುಖ್ಯ ಮಂತ್ರಿ ಗಳ ಪ್ರಥಮ ಹಂತದ 100 ಕೋಟಿ ರೂ. ವಿಶೇಷ ಅನು ದಾನ ದಲ್ಲಿ ನಾಲ್ಕು ಪಾರ್ಕ್ ಗಳ ಅಭಿ ವೃದ್ಧಿ ಗಾಗಿ 40 ಲಕ್ಷ ರೂ. ವ್ಯಯಿ ಸಲಾ ಗಿದೆ. ದ್ವಿತೀಯ ಹಂತದ 100 ಕೋಟಿ ರೂ. ವಿಶೇಷ ಅನುದಾನದಲ್ಲಿ ತಲಾ 20 ಲಕ್ಷ ರೂ. ಗಳಂತೆ ಒಂದು ಕೋಟಿ ರೂ. ಟೆಂಡರ್ ಕರೆಯಲಾಗಿದೆ. ಗುಜ್ಜರಕೆರೆಯ ಅಭಿವೃದ್ಧಿಗೆ 160 ಲಕ್ಷ ರೂ.ಗಳ ಟೆಂಡರ್ ಕರೆಯಲಾಗಿದೆ ಎಂದರು. ಒಟ್ಟು 263 ಲಕ್ಷ ರೂ. ವೆಚ್ಚದಲ್ಲಿ ಒಂದು ಕೆರೆ ಹಾಗೂ 6 ಉದ್ಯಾನವನಗಳ ಅಭಿವೃದ್ಧಿಗೆ ಯೋಜಿಸಲಾಗಿದೆ ಎಂದರು. ನಗರದ ಇನ್ನೂ ಐದು ಉದ್ಯಾನವನಗಳನ್ನು 'ಓನ್ ಯುವರ್ ಪಾರ್ಕ್, ಓನ್ ಯುವರ್ ರೋಡ್' ಯೋಜನೆಯಡಿ ಅಭಿವೃದ್ಧಿ ಪಡಿಸಲಾಗುವುದು ಎಂದರು.
ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಪಾಲಿಕೆ ಮೇಯರ್ ಪ್ರವೀಣ್, ಉಪ ಮೇಯರ್ ಗೀತಾ ನಾಯಕ್, ಸ್ಥಾಯಿ ಸಮಿತಿ ಅಧ್ಯಕ್ಷ ಶರತ್, ಮನಪಾ ಮುಖ್ಯ ಸಚೇತಕ ಸುಧೀರ್ ಶೆಟ್ಟಿ, ಪಾಲಿಕೆ ಸದಸ್ಯರುಗಳು ಮತ್ತು ಅಧಿಕಾರಿಗಳು ಉಪಸ್ಥಿತರಿದ್ದರು. ಮನಪಾ ಸ್ಥಾಯಿ ಸಮಿತಿ ಅಧ್ಯಕ್ಷ ಪ್ರೇಮಾನಂದ ಶೆಟ್ಟಿ ಸ್ವಾಗತಿಸಿದರು. ಮನೋಹರ್ ಪ್ರಸಾದ್ ಕಾರ್ಯಕ್ರಮ ನಿರೂಪಿಸಿದರು.

ರಾಸುಗಳಿಗೆ ಕಾಲುಬಾಯಿ ಜ್ವರ ನಿಯಂತ್ರಣಕ್ಕೆ ಲಸಿಕೆ ನೀಡುವ ಕಾರ್ಯಕ್ರಮ

ಮಂಗಳೂರು,ಆಗಸ್ಟ್.22 :ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಟ್ಟು 3,96,609 ದನ,15,119 ಎಮ್ಮೆಗಳಿಗೆ ಒಟ್ಟು 4,11,728 ರಾಸುಗಳಿಗೆ ಕಾಲುಬಾಯಿ ಜ್ವರ ನಿಯಂತ್ರಣಕ್ಕೆ ಲಸಿಕಾ ಕಾರ್ಯಕ್ರಮವನ್ನು ಆಗಸ್ಟ್ 1,2011 ರಿಂದ ಸೆಪ್ಟೆಂಬರ್ 2011 ರವರೆಗೆ ಪಶುಪಾಲನಾ ಇಲಾಖೆ ಮತ್ತು ದಕ್ಷಿಣಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ಸಹಭಾಗಿತ್ವದಲ್ಲಿ ಗ್ರಾಮವಾರು ನಿರ್ವಹಿಸಲು ಆಯೋಜಿಸಲಾಗಿದೆ.ಈ ನಿಟ್ಟಿನಲ್ಲಿ ಜಿಲ್ಲೆಯ 5 ತಾಲೂಕುಗಳಲ್ಲಿ ಹಾಲು ಉತ್ಪಾದಕರ ಸಹಕಾರಿ ಸಂಘಗಳ ಅಧ್ಯಕ್ಷರು,ಕಾರ್ಯದರ್ಶಿಗಳು,ಪಶು ವೈದ್ಯರುಗಳಿಗೆ ತಾಂತ್ರಿಕ ಅರಿವು ಕಾರ್ಯಾಗಾರವನ್ನು ನಡೆಸಲಾಗಿದೆ. ವೈರಾಣುಗಳಿಂದ ಬರುವ ಕಾಲುಬಾಯಿ ಜ್ವರ ರೋಗವನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಲು ಏಕಕಾಲಕ್ಕೆ ರಾಜ್ಯದಾದ್ಯಂತ ಲಸಿಕಾ ಕಾರ್ಯಕ್ರಮವನ್ನು ಏರ್ಪಡಿಸಲಾಗಿದ್ದು,ದಕ್ಷಿಣಕನ್ನಡಜಿಲ್ಲೆಯಲ್ಲಿ ಎಲ್ಲಾ 5 ತಾಲೂಕುಗಳ ಪಶುಪಾಲನಾ ಇಲಾಖೆ ಮತ್ತು ಹಾಲು ಉತ್ಪಾದಕರ ಒಕ್ಕೂಟದ ಸಹಭಾಗಿತ್ವದಲ್ಲಿ ಈ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ.
ದಕ್ಷಿಣಕನ್ನಡ ಜಿಲ್ಲೆಯಲ್ಲಿ 1-8-11 ರಿಂದ 19-8-11 ರ ವರೆಗೆ ಒಟ್ಟು 1,22,572 ಹಸು/ಎಮ್ಮೆಗಳಿಗೆ ಲಸಿಕೆ ಹಾಕಿ ಶೇಕಡಾ 87.14 ಪ್ರಗತಿ ಸಾಧಿಸಲಾಗಿದೆ. ದಿನಾಂಕ 30-9-11 ರ ವರೆಗ ಈ ಲಸಿಕಾ ಕಾರ್ಯಕ್ರಮವು ನಡೆಯಲಿದ್ದು,ಜಾನುವಾರು ಮಾಲೀಕರು ಹತ್ತಿರದ ಪಶು ವೈದ್ಯಕೀಯ ಸಂಸ್ಥೆ /ಹಾಲು ಉತ್ಪಾದಕರ ಸಹಕಾರಿ ಸಂಘಗಳ ಅಧಿಕಾರಿ/ಸಿಬ್ಬಂದಿ ವರ್ಗದವರನ್ನು ಸಂಪರ್ಕಿಸಬಹುದಾಗಿದೆ.

ಹೆಚ್ಚಿನ ಮಾಹಿತಿಗೆ ಈ ಕೆಳಕಂಡ ನೋಡಲ್ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳನ್ನು ಸಂಪರ್ಕಿಸಬಹುದಾಗಿದೆ.

ಪಶುಪಾಲನಾ ಇಲಾಖೆ ಸಹಾಯಕ ನಿರ್ದೇಶಕರು :- ಡಾ.ಎ.ಗುರುಮೂರ್ತಿ,ಜಿಲ್ಲಾ ನೋಡಲ್ ಅಧಿಕಾರಿ ದೂ.ಸಂ.0824-2492322/9845666743,ಡಾಕೆ.ಅಶೋಕ್ ಕುಮಾರ್ 0824-2492369/9448124601, ಡಾ ಸಿ.ನಾಗರಾಜ ಬಂಟ್ವಾಳ 08255-232512/9980322369,ಡಾ ಹೆಚ್.ಸುಧಾಕರ ಶೆಟ್ಟಿ ಬೆಳ್ತಂಗಡಿ 08256-232067/9448329065, ಡಾ ಕೆ.ರಾಮಚಂದ್ರ ಶೆಟ್ಟಿ ಪುತ್ತೂರು 08251-230664/9448869129,ಡಾ ಎಂ.ಎನ್. ರಾಜಣ್ಣ ಸುಳ್ಯ 08257-230412/9448725696.
ದಕ್ಷಿಣಕನ್ನಡ ಹಾಲು ಒಕ್ಕೂಟ ಕ್ಯಾಂಪ್ ಆಫೀಸರ್: ಡಾ ಚಂದ್ರಶೇಖರ ಭಟ್ ಮೂಡಬಿದ್ರೆ 08258-261002/9448869034, ಡಾ ಮಾಧವ ಐತಾಳ್ ಬಂಟ್ವಾಳ 08255-234802/9480157384, ಡಾ ಡಿ.ಪಿ.ಶ್ರೀನಿವಾಸ ಬೆಳ್ತಂಗಡಿ 08256-234298/9448203159,ಡಾ ಸತೀಶ್ ರಾವ್ ಪುತ್ತೂರು 08251-230891/9448260467, ಡಾ ದಿನೇಶ್ ಸರಳಾಯ ಉಪ್ಪಿನಂಗಡಿ 08251-252249/9448724672 ಡಾ ರಾಜಾ ಸುಳ್ಯ 08257-232191/9902332855.ಜಾನುವಾರು ಮಾಲೀಕರು ಇವರುಗಳ ದೂರವಾಣಿ ಯನು ಸಂಪರ್ಕಿಸಿ ತಮ್ಮ ರಾಸುಗಳಿಗೆ ಕಾಲುಬಾಯಿ ಜ್ವರ ಲಸಿಕೆಗಳನ್ನು ಹಾಕಿಸಿಕೊಳ್ಳಬಹುದಾಗಿದೆ.

Saturday, August 20, 2011

ಪಾರದರ್ಶಕ ಆಡಳಿತಕ್ಕೆ ಬದ್ಧ: ಸಿ.ಎಂ. ಸದಾನಂದ ಗೌಡ

ಮಂಗಳೂರು,ಆಗಸ್ಟ್.20:ರಾಜ್ಯದ ಆರೂವರೆ ಜನಕೋಟಿ ಶ್ಲಾಘಿಸುವಂತೆ ಪಾರದರ್ಶಕ ಆಡಳಿತವನ್ನು ತಮ್ಮ ಸರ್ಕಾರ ನೀಡಲಿದೆ ಎಂದು ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ ಅವರು ಹೇಳಿದರು.ಅವ ರಿಂದು ತಮ್ಮ ಉಡುಪಿ ಜಿಲ್ಲಾ ಪ್ರವಾ ಸದ ವೇಳೆ ಮಂಗ ಳೂರು ವಿಮಾನ ನಿಲ್ದಾಣ ದಲ್ಲಿ ಪತ್ರ ಕರ್ತ ರೊಂದಿಗೆ ಮಾತ ನಾಡಿ, ಆಡ ಳಿತ ಯಂತ್ರ ಕ್ಕೆ ವೇಗ ನೀಡಲು ಈಗಾ ಗಲೇ 20 ಇಲಾಖೆ ಗಳ ಪ್ರಗತಿ ಪರಿ ಶೀಲನೆ ನಡೆ ಸಿದ್ದು, ಪ್ರಧಾನ ಕಾರ್ಯ ದರ್ಶಿ, ಮುಖ್ಯ ಕಾರ್ಯ ದರ್ಶಿ ಗಳೊಂ ದಿಗೆ,ಮತ್ತು ಸಂಪುಟದ ಮಂತ್ರಿಗಳೊಂದಿಗೆ ಅಭಿವೃದ್ಧಿ ಯೋಜನೆಗಳ ಅನುಷ್ಠಾನ ಸಂಬಂಧ ಸಭೆ ನಡೆಸಿರುವುದಾಗಿ ಹೇಳಿದರು.ಕಾರ್ಯ ಕ್ರಮ ಅನು ಷ್ಠಾನ ಗೊಳಿ ಸುವ ತಳ ಮಟ್ಟದ ಅಧಿ ಕಾರಿ ಗಳೊಂ ದಿಗೆ ವಿಡಿಯೋ ಕಾನ್ಫ ರೆನ್ಸ್ ನಡೆಸಿ ಜನ ಪರ ಆಡಳಿತ ನೀಡಲು ದ್ದೇಶಿ ಸಿದ್ದೇನೆ. ಕರಾ ವಳಿ ಜಿಲ್ಲೆ ಗಳ ಅಭಿ ವೃದ್ಧಿಯ ಬಗ್ಗೆ ಯೂ ಪ್ರ ತ್ಯೇಕ ಸಮಾ ಲೋಚನೆ ನಡೆಸಿ ಅಭಿ ವೃದ್ಧಿಗೆ ಒತ್ತು ಕೊಡ ಲಿದ್ದೇನೆ. ಎಲ್ಲ ರನ್ನೂ ವಿಶ್ವಾ ಸಕ್ಕೆ ತೆಗೆದು ಕೊಂಡು ಮುನ್ನ ಡೆಯುವ ಭರ ವಸೆ ಯನ್ನು ಅವರು ವ್ಯಕ್ತ ಪಡಿ ಸಿದರು.
ಮುಖ್ಯ ಮಂತ್ರಿಗಳನ್ನು ಸ್ವಾಗತಿಸಲು ಉನ್ನತ ಶಿಕ್ಷಣ ಸಚಿವರಾದ ಡಾ.ವಿ.ಎಸ್.ಆಚಾರ್ಯ,ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರಾದ ಜೆ. ಕೃಷ್ಣ ಪಾಲೆಮಾರ್, ಮೀನುಗಾರಿಕಾ ಸಚಿವ ಆನಂದ ಅಸ್ನೋಟಿಕರ್, ಸಂಸದ ನಳಿನ್ ಕುಮಾರ್ ಕಟೀಲ್, ಮೇಯರ್ ಪ್ರವೀಣ್,ವಿಧಾನ ಪರಿಷತ್ ಸದಸ್ಯ ಕ್ಯಾ.ಗಣೇಶ್ ಕಾರ್ಣಿಕ್, ಜಿಲ್ಲಾ ವರಿಷ್ಠಾಧಿಕಾರಿಗಳು ಉಪಸ್ಥಿತರಿದ್ದರು.

ರಾಷ್ಟ್ರ ಅಭಿವೃದ್ಧಿಗೆ ಶೈಕ್ಷಣಿಕ ಕ್ರಾಂತಿ ಕಾರಣ: ಡಾ.ಹೆಗ್ಗಡೆ

ಮಂಗಳೂರು,ಆಗಸ್ಟ್.20:ಸ್ವಾತಂತ್ರ್ಯ ಭಾರತದಲ್ಲಾದ ಬದಲಾವಣೆ ಮತ್ತು ಸಾಮಾಜಿಕ ಅಭಿವೃದ್ಧಿಗೆ ನಮ್ಮ ಶಿಕ್ಷಣ ವ್ಯವಸ್ಥೆ ಅತ್ಯಮೂಲ್ಯ ಕೊಡುಗೆ ನೀಡಿದೆ ಡಾ.ಡಿ. ವೀರೇಂದ್ರ ಹೆಗ್ಗಡೆ ಹೇಳಿದರು.ಅವರು ಇಂದು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ನೇತ್ರಾವತಿ ಸಭಾಂಗ ಣದಲ್ಲಿ ಇಂದು ಜಿ.ಪಂ. ಸಾರ್ವ ಜನಿಕ ಶಿಕ್ಷಣ ಇಲಾಖೆ, ಸರ್ವ ಶಿಕ್ಷಣ ಅಭಿಯಾನ ಜಂಟಿಯಾಗಿ ಹಮ್ಮಿ ಕೊಂಡಿದ್ದ 'ಗುಣಾತ್ಮಕ ಶಿಕ್ಷಣಕ್ಕಾಗಿ ಕ್ರಿಯಾಶೀಲ ಆಡಳಿತ' ಕುರಿತ ಜಿಲ್ಲಾ ಮಟ್ಟದ ಶೈಕ್ಷಣಿಕ ಸಮಾವೇಶ ಹಾಗೂ ಮಾಹಿತಿ ಕಾರ್ಯಾಗಾರದ ಉದ್ಘಾಟನೆ ನೆರವೇರಿಸಿ ದಿಕ್ಸೂಚಿ ಭಾಷಣ ನೀಡಿದರು.
ವಿಶ್ವದಲ್ಲಿ ಇಂದು ಭಾರತ ಪ್ರಬಲ ರಾಷ್ಟ್ರವಾಗಿ ಗುರುತಿಸಿ ಕೊಳ್ಳುವಲ್ಲಿ ನಮ್ಮ ಶೈಕ್ಷಣಿಕ ವ್ಯವಸ್ಥೆ ಪ್ರಮುಖ ಕಾರಣ ವಾಗಿದೆ. ಗ್ರಾಮೀಣ ಪ್ರದೇಶ ದಲ್ಲಿಯೂ ಇಂದು ಕೈಗೆಟಕುವ, ಗುಣಮಟ್ಟದ ಶಿಕ್ಷಣ ಸರಕಾರ ನೀಡಿದೆ. ಗುಣ ಗ್ರಹಣ ಶಕ್ತಿಗೆ ಪ್ರೋತ್ಸಾಹ ಇನ್ನಷ್ಟು ಬೇಕಿದೆ ಎಂದ ಅವರು, ಅಕ್ಷರ ದಾಸೋಹದ ಪರಿಕಲ್ಪನೆಯಿಂದ ಎಲ್ಲ ಮಕ್ಕಳು ಇಂದು ಶಾಲೆಯಲ್ಲಿದ್ದಾರೆ. ಇದರಿಂದಿ ಪರೋಕ್ಷವಾಗಿ ಹಾಗೂ ನೇರವಾಗಿ ಹಲವರಿಗೆ ಉದ್ಯೋಗ ಲಭಿಸಿದೆ ಎಂದರು.ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆಯ ಸರಕಾರದ ಕಾರ್ಯದರ್ಶಿ ಕುಮಾರ್ ನಾಯಕ್ ಮಾತನಾಡಿ, ಅಧಿಕಾರಿಗಳಿಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಕಾರ್ಯಾಗಾರವನ್ನು ಹಮ್ಮಿಕೊಂಡಿರುವುದಾಗಿ ತಿಳಿಸಿದರು.ಶಿಕ್ಷಣ ಕ್ಷೇತ್ರಕ್ಕೆ ಸರಕಾರದ ಅನುದಾನ ಇಂದು 10,100 ಕೋಟಿ. ವಿಫುಲ ಅನುದಾನ ಶಿಕ್ಷಣ ಕ್ಷೇತ್ರಕ್ಕೆ ಲಭ್ಯವಿದೆ. ಪ್ರಮಾಣದಲ್ಲಿ ಹೆಚ್ಚಿದ್ದು, ಅಕ್ಷರ ದಾಸೋಕ್ಕೆ ಆರಂಭದಲ್ಲಿದ್ದ 320 ಕೋಟಿ ರೂ. ಅನುದಾನವನ್ನು 850 ಕೋಟಿ ರೂ.ಗಳಿಗೆ ಏರಿಕೆಯಾಗಿದೆ. ಈ ಕಾರ್ಯಕ್ರಮದಲ್ಲಿ ರಾಜ್ಯದಲ್ಲಿ 99,000 ಮಹಿಳೆಯರು ಕಾರ್ಯ ನಿರ್ವಹಿಸುತ್ತಿದ್ದು, ಪ್ರತಿನಿತ್ಯ 69ರಿಂದ 70 ಲಕ್ಷ ವಿದ್ಯಾರ್ಥಿಗಳು ಈ ಯೋಜನೆಯ ಉಪಯೋಗ ಪಡೆಯುತ್ತಿದ್ದಾರೆ ಎಂದರು.
ಜಿಲ್ಲಾಧಿಕಾರಿ ಡಾ. ಚೆನ್ನಪ್ಪ ಗೌಡ ಮಾತನಾಡಿ, ಜಿಲ್ಲೆಯಲ್ಲಿ 2,23,000 ವಿದ್ಯಾರ್ಥಿಗಳು ಅಕ್ಷರ ದಾಸೋಹ ಯೋಜನೆಯ ಲಾಭ ಪಡೆಯುತ್ತಿದ್ದು, ಪ್ರತಿ ತಿಂಗಳು ಈ ಯೋಜನೆಗಾಗಿ ಸರಕಾರ 2ಕೋಟಿ 60 ಲಕ್ಷ ರೂ.ಗಳನ್ನು ಖರ್ಚು ಮಾಡುತ್ತಿದೆ ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿ.ಪಂ. ಅಧ್ಯಕ್ಷೆ ಕೆ.ಟಿ. ಶೈಲಜಾ ಭಟ್ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ವಿಜಯ ಪ್ರಕಾಶ್, ಮಧ್ಯಾಹ್ನ ಉಪಹಾರ ಯೋಜನೆಯ ಜಂಟಿ ನಿರ್ದೇಶಕ ಬಿ.ಜಿ. ನಾಯ್ಕ್, ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯದ ಜಂಟಿ ನಿರ್ದೇಶಕಿ ಹಾಗೂ ಪ್ರಾಂಶುಪಾಲರಾದ ಫಿಲೋಮಿನಾ ಲೋಬೋ ಉಪಸ್ಥಿತರಿದ್ದರು.
ಜಿಲ್ಲಾ ಶಿಕ್ಷಣ ಉಪನಿರ್ದೇಶಕ ಮೋಸೆಸ್ ಜಯಶೇಖರ್ ಸ್ವಾಗತಿಸಿದರು. ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯ ಪಾಲಾಕ್ಷಪ್ಪ ವಂದಿಸಿದರು.

Friday, August 19, 2011

ಗ್ರಾಮೀಣ ಪ್ರದೇಶದಲ್ಲೂ ಶಾಲಾ ಮಕ್ಕಳೇ ಸ್ವಚ್ಛತಾ ಸಂದೇಶಕ್ಕೆ ವಿಶೇಷ ರಾಯಭಾರಿಗಳು:ಸಿಇಒ

ಮಂಗಳೂರು,ಆಗಸ್ಟ್.19:ನರಿಂಗಾನ, ಲಾಯಿಲಾದಂತಹ ಗ್ರಾಮಗಳನ್ನು ಮಾದರಿಯಾಗಿಸಿ ಮಾಹಿತಿ, ಶಿಕ್ಷಣ ಮತ್ತು ಸಂವಹನದ ಮೂಲಕ ಮುಖ್ಯಮಂತ್ರಿಗಳ ಜಿಲ್ಲೆಯನ್ನು ರಾಜ್ಯದಲ್ಲೇ ಸ್ವಚ್ಛತೆಯಲ್ಲಿ ಮಾದರಿಯಾಗಿಸುವ ಕೆಲಸವಾಗಬೇಕಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ.ಕೆ.ಎನ್ ವಿಜಯಪ್ರಕಾಶ್ ಹೇಳಿದರು.ಅವರಿಂದು ಜಿಲ್ಲಾ ಪಂಚಾಯತ್ ನ ಮಿನಿ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಸಂಪೂರ್ಣ ನೈರ್ಮಲ್ಯ ಆಂದೋಲನದಡಿ ಸುಸ್ಥಿರತೆ ಕಾಯ್ದುಕೊಳ್ಳಲು ಜನಜಾಗೃತಿ ಮೂಡಿಸುವ ಕಾರ್ಯಕ್ರಮ ಕುರಿತ ಸಭೆಯನ್ನುದ್ದೇಶಿಸಿ ಮಾತನಾಡುತ್ತಿದ್ದರು.
ಸ್ವಚ್ಛತೆಯಲ್ಲಿ ಜನರ ಪಾಲ್ಗೊಳ್ಳುವಿಕೆ ಮತ್ತು ವಿದ್ಯಾರ್ಥಿಗಳ ಮೂಲಕ ಪ್ರೇರಪಣೆ ನೀಡುವ ಬಗ್ಗೆ ಅಧಿಕಾರಿಗಳಿಗೆ ಸೂಚನೆ ನೀಡಿದ ಅವರು, ಇಂತಹ ಆಂದೋಲನಗಳಲ್ಲಿ ಸರ್ಕಾರೇತರ ಸಂಘ ಸಂಸ್ಥೆಗಳನ್ನು ಗುರುತಿಸಿ ತೊಡಗಿಸಿಕೊಳ್ಳುವ ಹೊಣೆಯೂ ಜಿಲ್ಲಾಡಳಿತದ್ದು ಎಂದರು. ಸಮಯಮಿತಿ ನಿಗದಿಯೊಂದಿಗೆ ಕಾರ್ಯಕ್ರಮಗಳ ರೂಪುರೇಷೆಗಳಾಗ ಬೇಕು; ಜಿಲ್ಲಾ ಪಂಚಾಯತ್ ನಿಂದ ಎಲ್ಲ ಗ್ರಾಮಪಂಚಾಯತ್ ಗಳಿಗೆ ಮಾರ್ಗಸೂಚಿಗಳು ಹೋಗಬೇಕು; ತಳಮಟ್ಟದಲ್ಲಿ ಅನುಷ್ಠಾನ ಹೊಣೆ ಪಿಡಿಒ ಗಳ ಜೊತೆ ತಾಲೂಕು ಕಾರ್ಯನಿರ್ವಹಣಾಧಿಕಾರಿಗಳದ್ದು. ಕಾರ್ಯಕ್ರಮ ಅನುಷ್ಠಾನ ಸಂದರ್ಭದಲ್ಲಿ ಸ್ಥಳೀಯ ಜನಪ್ರತಿನಿಧಿಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕೆಂದ ಅವರು, ಗ್ರಾಮಪಂಚಾಯತಿ ಅಧ್ಯಕ್ಷ, ಉಪಾಧ್ಯಕ್ಷರಿಗೆ ವಿಶೇಷ ಕಾರ್ಯಾಗಾರ ಏರ್ಪಡಿಸಲು ಸೂಚನೆ ನೀಡಿದರು. ಮಾರ್ಗಸೂಚಿಯ ಜೊತೆಗೆ ಕಾನೂನು ಉಲ್ಲಂಘಿಸಿದರೆ ದಂಡ ಹಾಕುವ ಕ್ರಮವನ್ನೂ ಪಂಚಾಯತ್ ಆರಂಭಿಸಬಹುದು. ಈ ಎಲ್ಲ ವ್ಯವಸ್ಥೆಗಳನ್ನೂ ತಾನು ಖುದ್ದಾಗಿ ತಿಂಗಳಿಗೊಂದು ಬಾರಿ ಮಾನಿಟರ್ ಮಾಡಲಿರುವೆ ಎಂದು ಸಿಇಒ ಅಧಿಕಾರಿಗಳಿಗೆ ಹೇಳಿದರು. ಪ್ಲಾಸ್ಟಿಕ್ ನಿಷೇಧಕ್ಕೆ ಪರ್ಯಾಯ ಕುರಿತ ಚರ್ಚೆ ಸಭೆಯಲ್ಲಿ ನಡೆಯಿತು. ಆಂದೋಲನ ಮಾದರಿ ತಿಳುವಳಿಕೆಯಿಂದ ಶಾಲಾ ಮಕ್ಕಳ ಮೂಲಕ ಹೆತ್ತವರಿಗೆ ಹಸಿ ಕಸ, ಒಣ ಕಸ, ಶೌಚಾಲಯ ಬಳಕೆಯ ಮಹತ್ವ ತಿಳಿಸುವುದು ಹೆಚ್ಚು ಪರಿಣಾಮಕಾರಿ ಎಂದ ಅವರು, ನಗರದ ಹಲವು ಕಾಲೇಜುಗಳು ಮಹಾನಗರಪಾಲಿಕೆಯೊಂದಿಗೆ ಘನತ್ಯಾಜ್ಯ ವಿಲೇಯಲ್ಲಿ ಸಕ್ರಿಯ ಪಾತ್ರ ವಹಿಸುತ್ತಿದ್ದು, ರೋಶನಿ, ಆಗ್ನಸ್, ಎಂ ವಿ ಶೆಟ್ಟಿ ಕಾಲೇಜು, ಬೆಸೆಂಟ್, ಎಸ್ ಡಿ ಎಂ ಕಾಲೇಜುಗಳ ನೆರವನ್ನೂ, ಪಾಲಿಕೆಯ ಪರಿಸರ ಇಂಜಿನಿಯರ್ ಗಳ ನೆರವನ್ನು ಪಡೆದುಕೊಳ್ಳುವ ಮೂಲಕ ಕಸದಿಂದ ರಸ ಹಾಗೂ ಪುನರ್ ಬಳಕೆಯ ಬಗ್ಗೆಯೂ ನಿರಂತರ ಮಾಹಿತಿ ನೀಡುವ ಕೆಲಸವಾಗಬೇಕಿದೆ ಎಂದರು.
ಪ್ರತೀ ತಾಲೂಕಿನಲ್ಲಿ 5 ಗ್ರಾಮಪಂಚಾಯಿತಿಗಳಂತೆ ಆರಿಸಿ ಮಾದರಿ ನೀಡಿ. ಬಳಿಕ ಎಲ್ಲ ಗ್ರಾಮಪಂಚಾಯಿತಿಗಳು ತಂತಾನೆ ಕಾರ್ಯಪ್ರವೃತ್ತವಾಗುವ ಸಾಧ್ಯತೆಯನ್ನು ಸಿಇಒ ಸಭೆಯಲ್ಲಿ ಹೇಳಿದರು. ಜೊತೆಗೆ ಸಸಿ ನೆಡುವ, ಪರಿಸರ ಪ್ರೀತಿಯನ್ನು ಮಕ್ಕಳಲ್ಲಿ ಬೆಳೆಸುವ ಕೆಲಸವಾಗಬೇಕಿದೆ ಎಂದರು.ರಾಷ್ಟ್ರೀಯ ಹೆದ್ದಾರಿ ಅದರಲ್ಲೂ ಮುಖ್ಯವಾಗಿ ಗುಂಡ್ಯದಲ್ಲಿ ಸಾರ್ವಜನಿಕ ಶೌಚಾಲಯಗಳನ್ನು ನಿರ್ಮಿಸಿ, ನಿರ್ವಹಿಸುವ ಕುರಿತು ಹಾಗೂ ಈ ಸಂಬಂಧ ಜಾಗ ಗುರುತಿಸಲು ಪಂಚಾಯಿತಿಗಳಿಗೆ ಸಿಇಒ ಸೂಚಿಸಿದರು.
ಸಭೆಯಲ್ಲಿ ಉಪಕಾರ್ಯದರ್ಶಿ ಶಿವರಾಮೇಗೌಡ, ಮುಖ್ಯ ಯೋಜನಾಧಿಕಾರಿ ನಝೀರ್, ಯೋಜನಾ ನಿರ್ದೇಶಕರು ಸೀತಮ್ಮ, ಜನಶಿಕ್ಷಣ ಸಂಸ್ಥೆಯ ಕೃಷ್ಣ ಮೂಲ್ಯರು, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಶ್ರೀಮತಿ ಮನೋರಮಾ, ಜಯಶಂಕರ್ ಶರ್ಮಾ,ನಾಗರೀಕ ಸೇವಾ ಟ್ರಸ್ಟ್ ನ ನಾರಾಯಣ ನೀಲಂಗೋಳಿ, ಎಲ್ಲಾ ತಾಲೂಕು ಇಒಗಳು, ಪಿಡಿಒ ಗಳು, ಜಿಲ್ಲಾ ನೆರವು ಘಟಕದ ಮಂಜುಳಾ, ಇಂಜಿನಿಯರ್ ಅರುಣ್, ವಿದ್ಯಾಂಗ ಇಲಾಖೆ ಉಪನಿರ್ದೇಶಕ ಮೋಸೆಸ್ ಜಯಶೇಖರ್, ಸರ್ವಶಿಕ್ಷಣ ಅಭಿಯಾನದ ಅಧಿಕಾರಿ ಶಿವಪ್ರಕಾಶ್, ಆರೋಗ್ಯ ಇಲಾಖೆಯಿಂದ ಜ್ಯೋತಿ ಅವರು ಪಾಲ್ಗೊಂಡಿದ್ದರು.

Thursday, August 18, 2011

ಶಾಲಾ ಶಿಕ್ಷಕರ ಅನುಪಾತ ಶಿಕ್ಷಣ ಸಚಿವರೊಂದಿಗೆ ಚರ್ಚೆ: ಶೈಲಜಾ ಭಟ್

ಮಂಗಳೂರು,ಆಗಸ್ಟ್.18:ಅನುದಾನಿತ ಶಾಲೆಗಳ ಶಿಕ್ಷಕರಿಗೊಂದು ಅನುಪಾತ, ಸರಕಾರಿ ಶಾಲೆಗಳ ಶಿಕ್ಷಕರಿಗೊಂದು ಅನುಪಾತ ಸರಿಯಾದ ಕ್ರಮವಲ್ಲ. ಈ ರೀತಿ ಮಾಡುವುದರಿಂದ ಅನುದಾನಿತ ಶಾಲೆಗಳಲ್ಲಿ ಶಿಕ್ಷಕರ ಕೊರತೆ ಉದ್ಭವಿಸಲಿದೆ. ಸರಕಾರಿ ಶಾಲೆಗಳಂತೆ ಖಾಸಗಿ ಅನುದಾನಿತ ಶಾಲೆಗಳಲ್ಲೂ 30 ವಿದ್ಯಾರ್ಥಿಗಳಿಗೆ ಓರ್ವ ಶಿಕ್ಷಕರಂತೆ ನಿಯಮ ಜಾರಿಗೊಳಿಸಬೇಕು. 40 ಮಕ್ಕಳಿಗೆ ಓರ್ವ ಶಿಕ್ಷಕರೆಂಬ ನೀತಿಯನ್ನು ಕೈ ಬಿಡಬೇಕು ಎಂದು ಕೆಲವು ಜಿ.ಪಂ. ಸದಸ್ಯರು ಅಭಿಪ್ರಾಯಪಟ್ಟರು.
ಈ ಬಗ್ಗೆ ನಿರ್ಧಾರ ಕೈಗೊಂಡು ಸರಕಾರಕ್ಕೆ ಕಳುಹಿಸಿ ಕೊಡುವಂತೆ ಸದಸ್ಯರು ಒತ್ತಾಯಿಸಿದರು. ವಿಷಯದ ಕುರಿತು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರೊಂದಿಗೆ ಈಗಾಗಲೇ ಚರ್ಚಿಸಲಾಗಿದೆ. ಸರಕಾರಿ ಶಾಲೆಗಳಿಗೆ ಅನ್ವಯಿಸುವ ನಿಯಮವನ್ನೇ ಅನುದಾನಿತ ಶಾಲೆಗಳಿಗೂ ಜಾರಿಗೊಳಿಸುವ ಬಗ್ಗೆ ಸಚಿವರು ಭರವಸೆ ನೀಡಿರುವರೆಂದು ಜಿ.ಪಂ. ಅಧ್ಯಕ್ಷರಾದ ಕೆ ಟಿ ಶೈಲಜಾ ಭಟ್ ಸಭೆಗೆ ತಿಳಿಸಿದರು.
ಇಂದು ಜಿಲ್ಲಾ ಪಂಚಾಯತ್ ನ ನೇತ್ರಾವತಿ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಜಿ.ಪಂ ಸಾಮಾನ್ಯ ಸಭೆಯಲ್ಲಿ ಮಾತನಾಡುತ್ತಿದ್ದ ಅವರು, ಸಾಮಾಜಿಕ ಹಿತರಕ್ಷಣೆಯನ್ನು ಗಮನದಲ್ಲಿರಿಸಿ ಜಿಲ್ಲೆಯ ಅಭಿವೃದ್ಧಿಗೆ ಹಮ್ಮಿಕೊಂಡಿರುವ ಕಾರ್ಯಕ್ರಮಗಳನ್ನು ಜಾರಿಗೆ ತರುವುದಾಗಿ ನುಡಿದರು.
ಈ ಸಂಬಂಧ ಹಮ್ಮಿಕೊಂಡಿರುವ ಕೌನ್ಸಿಲಿಂಗ್ ನ್ನು ಮುಂದೂಡಲು ಸಭೆಯಲ್ಲಿ ನಿರ್ಧರಿಸಲಾಯಿತು.
ಪುತ್ತೂರು ತಾಲೂಕಿನ ಹಿರೇಬಂಡಾಡಿ ಗ್ರಾಮ ಪಂಚಾಯತನ್ನು ವಿಸರ್ಜಿಸಲು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಸಾಮಾನ್ಯ ಸಭೆ ಸಮ್ಮತಿಸಿದೆ.
ಹಿರೇಬಂಡಾಡಿ ಗ್ರಾ.ಪಂ.ನ್ನು ವಿಸರ್ಜಿಸುವ ಕುರಿತಾದ ಅನುಪಾಲನಾ ವರದಿ ಮೇಲೆ ಚರ್ಚೆ ನಡೆದಾಗ ಬಿಜೆಪಿ ಸದಸ್ಯರು ಅದನ್ನು ವಿಸರ್ಜಿಸಲು ಬೆಂಬಲಿಸಿದರು. ಕಾಂಗ್ರೆಸ್ ಪಕ್ಷದ ಸದಸ್ಯರು ಶಾಸಕ ಬಿ.ರಮಾನಾಥ ರೈ ಸಹಿತ ಪ್ರಸ್ತಾಪವನ್ನು ಬಲವಾಗಿ ವಿರೋಧಿಸಿದರು.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಈ ರೀತಿಯ ನಡವಳಿಕೆಗಳು ಸೂಕ್ತವಾದುದಲ್ಲ. ಪಂಚಾಯತ್ ಗಳನ್ನು ವಿಸರ್ಜಿಸುವ ಮೂಲಕ ಹೊಸ ಸಂಪ್ರದಾಯಕ್ಕೆ ಅಡಿಗಲ್ಲು ಹಾಕುವುದು ಸರಿಯಾದ ಕ್ರಮ ಅಲ್ಲ ಎಂದು ಕಾಂಗ್ರೆಸಿಗರು ವಾದಿಸಿದರು.
ಹಿರೇಬಂಡಾಡಿ ಗ್ರಾ.ಪಂ.ಗೆ ಕಾನೂನಿಗೆ ಅನುಗುಣವಾಗಿ ಅವಕಾಶಗಳನ್ನು ನೀಡಲಾಗಿದೆ. ಆದರೆ ಗ್ರಾಮ ಪಂಚಾಯತ್ ತಾ.ಪಂ. ಮತ್ತು ಜಿ.ಪಂ. ನೀಡಿರುವ ಅವಕಾಶಗಳನ್ನು ಬಳಸಿಕೊಂಡು ಸಭೆ ನಡೆಸುವಲ್ಲಿ ಯಶಸ್ವಿಯಾಗಿರಲಿಲ್ಲ. ಆದುದರಿಂದ ಗ್ರಾ.ಪಂ. ಆಡಳಿತ ಮಂಡಳಿಯನ್ನು ವಿಸರ್ಜಿಸಲು ನಿರ್ಧರಿಸಲಾಗಿದೆ ಎಂದು ಅಧ್ಯಕ್ಷರು ಪ್ರಕಟಿಸಿದರು.
ಗ್ಯಾಸ್ ಪೈಪ್ ಲೈನ್:
ಕೊಚ್ಚಿ -ಬೆಂಗಳೂರು ಗ್ಯಾಸ್ ಪೈಪ್ ಲೈನ್ ಗೆ ಭೂ ಸ್ವಾಧೀನ ಪ್ರಕ್ರಿಯೆ ಆರಂಭವಾಗಿದೆ. ಒಂದೂವರೆ ಅಡಿ ಅಗಲದ ಪೈಪ್ಗಾಗಿ 60 ಅಡಿ ಸ್ವಾಧೀನ ಪಡಿಸಿಕೊಳ್ಳುವ ಅವಶ್ಯಕತೆ ಏನಿದೆ ಎಂಬ ಸದಸ್ಯರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಜಿಲ್ಲಾ ಪಂಚಾಯತ್ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಡಾ.ಕೆ.ಎನ್.ವಿಜಯಪ್ರಕಾಶ್, ಗ್ಯಾಸ್ ಪೈಪ್ ಲೈನ್ ಭೂ ಸ್ವಾಧೀನ ಕುರಿತು ಶೀಘ್ರ ಅಧಿಕಾರಿಗಳ ಸಭೆ ಕರೆದು ಚರ್ಚಿಸುವುದಾಗಿ ತಿಳಿಸಿದರು.
ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಪ್ರಗತಿ ಕುಂಠಿತವಾಗಿದೆ. ಹೆಚ್ಚಿನ ಗ್ರಾಮ ಪಂಚಾಯತ್ ಗಳು ಈ ತನಕ 2011 -12ನೇ ಸಾಲಿನ ಕಾಮಗಾರಿಯನ್ನು ಆರಂಭಿಸಿಲ್ಲ. ಅಂತಹ ಗ್ರಾ.ಪಂ.ಗಳ ವಿರುದ್ಧ ಕ್ರಮ ಜರಗಿಸಬೇಕು ಎಂದು ಅನೇಕ ಸದಸ್ಯರು ಒತ್ತಾಯಿಸಿದರು.
ಉದ್ಯೋಗ ಖಾತರಿ ಯೋಜನೆಯ ಅನುಷ್ಠಾನದಲ್ಲಿ ವಿಳಂಬ ಸಾಧುವಲ್ಲ. ಮುಂದಿನ ಒಂದು ತಿಂಗಳೊಳಗೆ ಆಂದೋಲನದ ರೂಪದಲ್ಲಿ ಯೋಜನೆಯನ್ನು ಎಲ್ಲಾ ಗ್ರಾ.ಪಂ.ಗಳು ಕೈಗೆತ್ತಿಕೊಳ್ಳುವಂತೆ ಕಟ್ಟು ನಿಟ್ಟಿನ ಕ್ರಮ ಜರಗಿಸಲಾಗುವುದು ಎಂದು ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಸಭೆಗೆ ತಿಳಿಸಿದರು.
ನಮ್ಮ ಜಿಲ್ಲೆಯ ಎಲ್ಲಾ ಗ್ರಾ.ಪಂ.ಗಳು ನಿರ್ಮಲ ಪುರಸ್ಕಾರ ಪಡೆದಿವೆ. ಇಂತಿರುವಾಗ ನಗರದ ಕಸವನ್ನು ನಗರದಲ್ಲಿಯೇ ವಿಲೇ ಮಾಡುವ ಬದಲಾಗಿ ಹಳ್ಳಿಗಳಿಗೆ ತಂದು ಸುರಿಯುವುದು ಸರಿಯೇ ಎಂಬ ಪ್ರಶ್ನೆಗೆ,ತಕ್ಷಣಕ್ಕೆ ಈ ವಿಷಯದ ಕುರಿತು ಪ್ರತಿಕ್ರಿಯಿಸುವುದು ಸಾಧ್ಯವಾಗದು. ಪರಿಸರ ಅಧಿಕಾರಿಗಳ ಜೊತೆ ಜಿಲ್ಲಾಪಂಚಾಯತ್ಮುಖ್ಯ ಯೋಜನಾಧಿಕಾರಿ ಸ್ಥಳಕ್ಕೆ ಭೇಟಿ ನೀಡಿ ವರದಿ ಸಲ್ಲಿಸುವರು. ಬಳಿಕ ಘಟಕದ ಕುರಿತು ನಿಧರ್ಾರ ಕೈಗೊಳ್ಳಲಾಗುವುದು ಎಂದು ವಿಜಯ ಪ್ರಕಾಶ್ ಸಭೆಗೆ ತಿಳಿಸಿದರು.
ಐಟಿಡಿಪಿ ಅಧಿಕಾರಿ ಎಸ್.ಆರ್. ಪಟಾಲಪ್ಪ ವಂಚನೆ ಪ್ರಕರಣವನ್ನು ಸಿಐಡಿ ಪೊಲೀಸರಿಗೆ ಹಸ್ತಾಂತರಿಸಲಾಗಿದೆ. ಸರಕಾರದ ಪ್ರಮುಖ ಏಜೆನ್ಸಿಯೊಂದು ಪ್ರಕರಣವನ್ನು ಕೈಗೆತ್ತಿಕೊಂಡಿರುವಾಗ ಸದನ ಸಮಿತಿ ರಚಿಸಿ ಪರ್ಯಾಯ ತನಿಖೆ ನಡೆಸುವುದು ಸೂಕ್ತವಲ್ಲ ಮತ್ತು ದಾಖಲೆಗಳನ್ನು ಸಿಐಡಿಗೆ ನೀಡಬೇಕಾಗಿರುವುದರಿಂದ ಸದನ ಸಮಿತಿ ರಚನೆಯ ಪ್ರಸ್ತಾಪವನ್ನು ಕೈ ಬಿಡಲಾಗಿದೆ ಎಂದು ಸಿಇಒ ಸಭೆಗೆ ವಿವರಿಸಿದರು.
ಜಿ.ಪಂ. ಉಪಾಧ್ಯಕ್ಷೆ ಧನಲಕ್ಷ್ಮೀ ಜನಾರ್ದನ್, ಸ್ಥಾಯಿ ಸಮಿತಿ ಅಧ್ಯಕ್ಷರಾದ ಜನಾರ್ದನ ಗೌಡ ಈಶ್ವರ ಕಟೀಲು, ನವೀನಕುಮಾರ ಮೇನಾಲ ಹಾಜರಿದ್ದರು.


ಬಾಲ ಕಾರ್ಮಿಕರ ನೇಮಕಾತಿ ಪ್ರಕರಣಗಳಲ್ಲಿ ರೂ.20,000 ವಸೂಲಾತಿ

ಮಂಗಳೂರು,ಆಗಸ್ಟ್.18: ದಿನಾಂಕ 26-7-11 ರಂದು ನಡೆದ ಜಿಲ್ಲಾ ಬಾಲ ಕಾರ್ಮಿಕ ಯೋಜನಾ ಸಂಘದ ಕಾರ್ಯಕಾರಿ ಮತ್ತು ಸಲಹಾ ಸಮಿತಿ ಸಭೆಯಲ್ಲಿ ಬಾಲ ಕಾರ್ಮಿಕರ ನೇಮಕಾತಿಗೆ ಸಂಬಂಧಿಸಿದ 2009-10 ಮತ್ತು 2010-11 ನೇ ಸಾಲಿನ ಪ್ರಕರಣಗಳಲ್ಲಿ ಬಾಲಕಾರ್ಮಿಕರನ್ನು ನೇಮಿಸಿಕೊಂಡಿದ್ದ ಮಾಲೀಕರಿಂದ ರೂ.20000/- ಗಳನ್ನು ಜಿಲ್ಲಾ ಬಾಲ ಕಾರ್ಮಿಕ ಪುನರ್ವಸತಿ ಮತ್ತು ಕಲ್ಯಾಣ ನಿಧಿಗೆ ವಸೂಲಾತಿ ಮಾಡಲು ಬಾಕಿ ಇರುವುದನ್ನು ಪರಿಶೀಲಿಸಿದ ಜಿಲ್ಲಾ ಬಾಲ ಕಾರ್ಮಿಕ ಯೋಜನಾ ಸಂಘದ ಅಧ್ಯಕ್ಷರಾದ ಜಿಲ್ಲಾಧಿಕಾರಿ,ದ.ಕ.ಜಿಲ್ಲೆ ಮಂಗಳೂರು ಇವರು ಸಂಬಂಧಿಸಿದ ಮಾಲೀಕರಿಂದ ಶೀಘ್ರ ವಸೂಲಾತಿಗೆ ಕ್ರಮ ಕೈಗೊಳ್ಳುವಂತೆ ನೀಡಿದ ನಿರ್ದೇಶನದಂತೆ ಪ್ರಸ್ತುತ ಎರಡು ಪ್ರಕರಣಗಳಲ್ಲಿ ಒಂದರಲ್ಲಿ ರೂ.20000/- ಹಾಗೂ ಮತ್ತೊಂದರಲ್ಲಿ ರೂ.10,000/-(4 ಕಂತುಗಳಲ್ಲಿ ವಸೂಲಿ ಮಾಡುವ ಷರತ್ತಿನೊಂದಿಗೆ ) ಮೊತ್ತವನ್ನು ವಸೂಲಿ ಮಾಡಲಾಗಿದೆ.ಉಳಿದ ಪ್ರಕರಣಗಳಲ್ಲಿ ಕ್ರಮ ಪ್ರಗತಿಯಲ್ಲಿರುತ್ತದೆ.ಮನೆ ಕೆಲಸ, ಹೊಟೇಲ್,ಡಾಬಾ ರೆಸ್ಟೊರೆಂಟ್, ಕಟ್ಟಡ ನಿರ್ಮಾಣ ಮೊದಲಾದ ಅಪಾಯಕಾರಿ ಉದ್ಯೋಗ ಮತ್ತು ವೃತ್ತಿಗಳಲ್ಲಿ 14 ವರ್ಷ ವಯಸ್ಸು ತುಂಬದ ಮಕ್ಕಳನ್ನು ಕೆಲಸಕ್ಕೆ ನೇಮಿಸಿಕೊಳ್ಳಬಾರದೆಂದು,ನೇಮಿಸಿಕೊಂಡಲ್ಲಿ ಅದು ಕಾನೂನು ರೀತ್ಯ ಶಿಕ್ಷಾರ್ಹ ಅಪರಾಧವಾಗುತ್ತದೆಂಬುದಾಗಿ ಯೋಜನಾ ನಿರ್ದೇಶಕರು, ಜಿಲ್ಲಾ ಬಾಲಕಾರ್ಮಿಕ ಯೋಜನಾ ಸಂಘ,ಮಂಗಳೂರು ಇವರು ತಿಳಿಸಿದ್ದಾರೆ.

Monday, August 15, 2011

ಜಿಲ್ಲೆಯಲ್ಲಿ 65 ನೇ ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮ

ಮಂಗಳೂರು,ಆಗಸ್ಟ್.15: 65 ನೇ ಸ್ವಾತಂತ್ರ್ಯೋತ್ಸವ ದಿನಾಚರಣೆಯನ್ನು ದಕ್ಷಿಣ ಕನ್ನಡ ಜಿಲ್ಲೆಯಲ್ಲಿಂದು ಸಂಭ್ರಮ ಸಡಗರಗಳಿಂದ ಆಚರಿಸಲಾಯಿತು.ನಗರದ ನೆಹರು ಮೈದಾನಿ ನಲ್ಲಿ ಆಯೋ ಜಿಸಿದ್ದ ಜಿಲ್ಲಾ ಮಟ್ಟದ ಕಾರ್ಯ ಕ್ರಮ ದಲ್ಲಿ ರಾಜ್ಯ ಜೀವಿ ಶಾಸ್ತ್ರ, ಪರಿ ಸರ, ಬಂದರು ಮತ್ತು ಒಳ ನಾಡು ಜಲ ಸಾರಿಗೆ ಸಚಿ ವರು ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಉಸ್ತು ವಾರಿ ಸಚಿವ ರಾದ ಕೃಷ್ಣ ಜೆ.ಪಾಲೆಮಾರ್ ಅಚರು ಧ್ವಜಾರೋಹಣ ನೆರವೇರಿಸಿ ಸ್ವಾತಂತ್ರ್ಯೋತ್ಸವ ಸಂದೇಶ ನೀಡಿದರು. ಜಿಲ್ಲೆಯಲ್ಲಿ ಕಳೆದ 38 ತಿಂಗಳ ಅವಧಿಯಲ್ಲಿ ವಿವಿಧ ಯೋಜನೆಗಳ ಮುಖಾಂತರ ರೂ.1712 ಕೋಟಿಗೂ ಮಿಕ್ಕಿದ ಪ್ರಗತಿ ಸಾಧಿಸಲಾಗಿದೆ ಎಂದರು.ಗ್ರಾ ಮೀಣ ಮಟ್ಟ ದಲ್ಲಿ ಕುಡಿ ಯುವ ನೀರಿನ ಸಮಸ್ಯೆ ಯನ್ನು ಬಗೆ ಹರಿ ಸಲು ರೂ.47.51 ಕೋಟಿ ಹಾಗೂ 2011- 12ನೇ ಸಾಲಿಗೆ ರೂ. 56.38 ಕೋಟಿ, ಮಳ ವೂರಿ ನಲ್ಲಿ ವೆಂಟೆಡ್ ಡ್ಯಾಂ ನಿರ್ಮಾ ಣಕ್ಕೆ ರೂ.32 ಕೋಟಿ, ಗ್ರಾ ಮೀಣ ರಸ್ತೆಗಳ ಅಭಿ ವೃದ್ಧಿ ಗಾಗಿ ರೂ.26.6 ಕೋಟಿ, ಹೊಸ ನಗರ ಗಳ ನಿರ್ಮಾಣ ಕ್ಕಾಗಿ ರೂ.137.59 ಕೋಟಿ,ಪಿ.ಡಬ್ಲ್ಯು.ಡಿ ರಸ್ತೆ ಗಳ ನಿರ್ಮಾಣ ಮತ್ತು ನಿರ್ವ ಹಣೆ ಗಾಗಿ ರೂ.298.27 ಕೋಟಿ, ರಾಷ್ಟ್ರೀಯ ಹೆದ್ದಾರಿ ಅಭಿ ವೃದ್ಧಿ ಗಾಗಿ ರೂ.64.68 ಕೋಟಿ ವೆಚ್ಚ ಮಾಡಲಾಗಿದೆ ಎಂದು ಸಚಿವರು ನುಡಿದರು.ಜಿಲ್ಲೆ ಯಲ್ಲಿನ ವಸತಿ ಸಮಸ್ಯೆ ಯನ್ನು ಬಗೆ ಹರಿ ಸುವ ನಿಟ್ಟಿ ನಲ್ಲಿ ವಿವಿಧ ವಸತಿ ಯೋಜನೆ ಗಳ ಡಿಯಲ್ಲಿ ಗ್ರಾ ಮೀಣ ಮಟ್ಟ ದಲ್ಲಿ 15116 ಕುಟುಂ ಬಗ ಳನ್ನು ಆಯ್ಕೆ ಮಾಡಿದ್ದು, 4089 ಕುಟುಂ ಬಳಿಗೆ ರೂ.1655.45 ಲಕ್ಷ ವೆಚ್ಚ ಮಾಡ ಲಾಗಿದೆ.ನಗರ ಪ್ರದೇಶ ದಲ್ಲಿ ಇಲ್ಲಿ ಯವ ರೆಗೆ 7241 ಮತ್ತು ಗ್ರಾ ಮೀಣ ಪ್ರದೇಶ ದಲ್ಲಿ 50559 ಮನೆಗಳಿಗೆ ಹಕ್ಕು ಪತ್ರ ನೀಡಲಾಗಿದೆ. ಬಸವ ವಸತಿ ಯೋಜನೆಯ ಅಡಿಯಲ್ಲಿ ಪ್ರತೀ ವಿಧಾನಸಭಾ ಕ್ಷೇತ್ರಕ್ಕೆ ತಲಾ 200 ಮನೆ ನಿರ್ಮಿಸುವ ಗುರಿ ಹೊಂದಿದ್ದು, 9648 ಫಲಾನುಭವಿಗಳನ್ನು ಗುರುತಿಸಲಾಗಿದೆ ಎಂದರು.ವಾಜಪೇಯಿ ನಗರಾಶ್ರಮ ಯೋಜನೆಯಡಿ ಪಾಲಿಕೆ ಹಾಗೂ ಪುರಸಭೆಗಳ ವ್ಯಾಪ್ತಿಯಲ್ಲಿ ಈ ವರ್ಷ 2600 ನಿವೇಶನಗಳು ಹಾಗೂ 1325 ವಸತಿಗಳನ್ನು ನಿರ್ಮಿಸಲು ಉದ್ದೇಶಿಸಲಾಗಿದೆ.`ನಮ್ಮ ಮನೆ' ಯೋಜನೆಯಡಿಯಲ್ಲಿ ನಿವೇಶನ ಹೊಂದಿರುವ ಬಡ ಕುಟುಂಬಗಲಿಗೆ ರೂ.50,000 ಸಹಾಯಧನದೊಂದಿಗೆ ರೂ.1ಲಕ್ಷದವರೆಗೆ ಮನೆ ನಿರ್ಮಿಸಲು ವಿಶೇಷ ಸಾಲ ನೀಡಲಾಗುವುದು. ಈ ಯೋಜನೆಯಡಿ ಜಿಲ್ಲೆಗೆ 7300 ಮನೆ ನಿರ್ಮಾಣದ ಗುರಿ ಹೊಂದಿದ್ದು, ಈ ಮುಖಾಂತರ ಕರ್ನಾಟಕವನ್ನು ಗುಡಿಸಲು ಮುಕ್ತ ರಾಜ್ಯವನ್ನಾಗಿ ಪರಿವರ್ತಿಸುವತ್ತ ಕ್ರಾಂತಿಕಾರಿ ಹೆಜ್ಜೆ ಇಡಲಾಗಿದೆ ಎಂದು ವಿವರಿಸಿದ ಸಚಿವರು ಸರ್ಕಾರ ಜನಪರ ಇದ್ದು ಜನರ ಆಶೋತ್ತರಗಳಿಗೆ ಸ್ಪಂದಿಸುತ್ತದೆ ಎಂದರು.
ಜಿಲ್ಲೆಯ 185 ದೇವಸ್ಥಾನಗಳಿಗೆ ರೂ.16.77 ಕೋಟಿ, ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಮೂಲ ಸೌಕರ್ಯಗಳಿಗಾಗಿ ರೂ.50 ಕೋಟಿ, ಹಾಗೂ ಅಭಿವೃದ್ಧಿಗಾಗಿ ರೂ.180 ಕೋಟಿ ಮೊತ್ತದ ಮಾಸ್ಟರ್ ಪ್ಲಾನ್ ಪ್ರಸ್ತಾವನೆ, ಕಟೀಲು ಶ್ರೀ ದುರ್ಗಾಪರಮೇಶ್ವರಿ ಮತ್ತು ಕದ್ರಿ ಶ್ರೀ ಮಂಜುನಾಥ ದೇವಸ್ಥಾನಗಳ ಯಾತ್ರಿ ನಿವಾಸಗಳ ನಿರ್ಮಾಣಕ್ಕೆ ರೂ.4.50 ಕೋಟಿ ಒದಗಿಸಲಾಗಿದೆ ಎಂದು ಸಚಿವರು ನುಡಿದರು.ಸಚಿ ವರ ಸಂದೇ ಶದ ನಂತರ ಜಿಲ್ಲಾ ಸಶಸ್ತ್ರ ಮೀ ಸಲು ಪಡೆ, ಸಿವಿಲ್ ಪೊ ಲೀಸ್, ಪೊಲೀಸ್ ಬ್ಯಾಂಡ್ ತಂಡ, ಸೇವಾದಳ, ಸ್ಕೌಟ್ಸ್ ಮತ್ತು ಗೈಡ್ಸ್, ಎನ್ ಸಿ ಸಿ, ರೋಡ್ ಸೇಫ್ಟಿ ಟೀಮ್ ಸೇರಿದಂತೆ ಒಟ್ಟು 17 ತಂಡ ಗಳಿಂದ ಆಕ ರ್ಷಕ ಪಥ ಸಂಚ ಲನ ನಡೆ ಯಿತು. ಇದರಲ್ಲಿ ಸೈಂಟ್ ಥೆರೆಸಾ ಹೈಸ್ಕೂಲ್ ಬೆಂದೂರು ಇಲ್ಲಿನ ವಿದ್ಯಾರ್ಥಿಗಳ ತಂಡ ಪ್ರಥಮ ಪ್ರಶಸ್ತಿ ಪಡೆಯಿತು.ಸಂತ ಅಲೋಶಿಯಸ್ ಸ್ಕೂಲ್ ಲೈಟ್ ಹೌಸ್ ಹಿಲ್ ರೋಡ್ ಇಲ್ಲಿನ ಎನ್ ಸಿ ಸಿ ವಿದ್ಯಾರ್ಥಿಗಳ ತಂಡ ದ್ವಿತೀಯ ಸ್ಥಾನಿಯಾಯಿತು.ಇದೇ ಸಂದರ್ಭ ಇತ್ತೀಚೆಗೆ ಗ್ರೀಸ್ ನ ಅಥೆನ್ಸ್ ನಲ್ಲಿ ನಡೆದ ವಿಶೇಷ ಮಕ್ಕಳ ಒಲಿಂ ಪಿಕ್ಸ್ ನಲ್ಲಿ ಚಿನ್ನದ ಪದಕ ವಿಜೇ ತರಾದ ಧನ್ಯಾ ಎಸ್.ರಾವ್, ರಾಯಿ ಸ್ಟನ್ ಪಿಂಟೋ, ಅನಿಲ್ ಮೆಂ ಡೋನ್ಸಾ ಇವರನ್ನು ಸನ್ಮಾನಿ ಗೌರ ವಿಸ ಲಾಯಿತು.ಸಮಾ ರಂಭ ದಲ್ಲಿ ವಿಧಾನ ಸಭಾ ಉಪ ಸಭಾ ದ್ಯಕ್ಷ ಎನ್.ಯೋ ಗೀಶ್ ಭಟ್, ಸಂಸದ ನಳಿನ್ ಕುಮಾರ್ ಕಟೀಲ್,ವಿಧಾನ ಪರಿ ಷತ್ ಸದಸ್ಯ ಕ್ಯಾ.ಗಣೇಶ್ ಕಾ ರ್ಣಿಕ್,ಜಿ.ಪಂ.ಅಧ್ಯಕ್ಷೆ ಶೈಲಜಾ ಕೆ.ಟಿ.ಭಟ್, ಜಿಲ್ಲಾ ಧಿಕಾರಿ ಡಾ.ಎನ್.ಎಸ್.ಚನ್ನಪ್ಪ ಗೌಡ, ಪಾಲಿಕೆ ಮೇ ಯರ್ ಪ್ರವೀಣ್ ಅಂಚನ್,ಪಶ್ಚಿಮ ವಲಯ ಐಜಿಪಿ ಅಲೋಕ್ ಮೋಹನ್, ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್,ಜಿ.ಪಂ.ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಕೆ.ಎನ್.ವಿಜಯ ಪ್ರಕಾಶ್, ಜಿಲ್ಲಾ ಕಸಾಪ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ, ರಾಜ್ಯ ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮದ ಎನ್.ಬಿ.ಅಬೂಬಕ್ಕರ್,ಕೊಂಕಣಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಕುಂದಾಪುರ ನಾರಾಯಣ ಖಾರ್ವಿ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು

Sunday, August 14, 2011

ಆಡಳಿತ ಯಂತ್ರ ಚುರುಕುಗೊಳಿಸಲು ಮುಖ್ಯಮಂತ್ರಿ ಸೂಚನೆ

ಮಂಗಳೂರು,ಆಗಸ್ಟ್.14:ಮುಖ್ಯಮಂತ್ರಿ ತವರು ಜಿಲ್ಲೆಯನ್ನು

ಮಾದರಿ ಜಿಲ್ಲೆ ಯನ್ನಾಗಿ ರೂಪಿ ಸಲು ಅಧಿ ಕಾರ ಯಂತ್ರ ಇನ್ನಷ್ಟು ಚುರುಕಿ ನಿಂದ ಕರ್ತವ್ಯ ನಿರ್ವ ಹಿಸ ಬೇಕೆಂದು ಮುಖ್ಯ ಮಂತ್ರಿ ಗಳಾದ ಡಿ. ವಿ. ಸದಾ ನಂದ ಗೌಡರು ಜಿಲ್ಲೆಯ ವರಿಷ್ಠಾ ಧಿಕಾ ರಿಗ ಳಿಗೆ ಸೂಚನೆ ನೀಡಿ ದರು.ತವರು ಜಿಲ್ಲೆಯ ಭೇಟಿಯ ಎರ ಡನೇ ದಿನ ದಂದು ಮುಂ ಜಾನೆ ಮುಖ್ಯ ಮಂತ್ರಿ ಗಳು ಕದ್ರಿ ಶ್ರೀ ಮಂಜು ನಾಥೇ ಶ್ವರನಿಗೆ ಪೂಜೆ ಸಲ್ಲಿ ಸುವ ಮೂಲಕ ಕಾರ್ಯ ಕ್ರಮ ಗಳನ್ನು ಅರಂಭಿಸಿದರು. ಬಳಿಕ ಕುದ್ರೊಳಿ ಗೋ ಕರ್ಣ ನಾಥೇ ಶ್ವರ ದೇವಾ ಲಯಕ್ಕೆ ತೆರ ಳಿದರು. ಅಲ್ಲಿಂದ ಕಡೆ ಕಾರು ದುರ್ಗಾ ಕ್ಷೇ ತ್ರಕ್ಕೆ ತೆರಳಿ ಪೂಜೆ ಸಲ್ಲಿ ಸಿದ ಬಳಿಕ ಸ ರ್ಕ್ಯುಟ್ ಹೌಸ್ ನಲ್ಲಿ ಸಾರ್ವ ಜನಿ ಕರಿಂ ದ ಅಹ ವಾಲು ಸ್ವೀ ಕರಿ ಸಿದರು. ಬಳಿಕ ಉನ್ನ ತಾಧಿ ಕಾರಿ ಗಳ ಸಭೆ ನಡೆ ಸಿದ ಮುಖ್ಯ ಮಂತ್ರಿ ಗಳು, ಜಿಲ್ಲೆ ಯನ್ನು ರಾ ಜ್ಯಕ್ಕೆ ಮಾದರಿ ಯಾಗಿ ಸುವ, ದೂರ ದೃಷ್ಟಿ ಯನ್ನಿ ರಿಸಿ ಯೋ ಜನೆ ರೂಪಿ ಸುವ ಹಾಗೂ ಯೋಜನೆ ಗಳ ಅನು ಷ್ಠಾನ ವನ್ನು ತರುವ ಕುರಿತು ಅಧಿ ಕಾರಿ ಗಳಿಗೆ ಸೂಚನೆ ನೀಡಿದರು.ಬಳಿಕ ನಗ ರದ ಪತ್ರಿಕಾ ಭವನ ದಲ್ಲಿ ಆಯೋ ಜಿಸಿದ್ದ ಪತ್ರಿಕಾ ಸಂವಾ ದದಲ್ಲಿ ಮಾತಿ ಲ್ಲದೆ ಕೃತಿ ಯಲ್ಲಿ ತಮ್ಮ ಕಾರ್ಯ ಶೈಲಿ ಯನ್ನು ಸಾಧಿಸಿ ತೋರು ವುದಾಗಿ ಹೇಳಿ ದರು. ಬಿಜೆಪಿ ಕಚೇ ರಿಗೆ ಭೇಟಿ ನೀಡಿದ ಅವರು ಬಳಿಕ ಕಟೀಲು ದೇವಾ ಲಯಕ್ಕೆ ಕು ಟುಂಬ ಸಮೇತ ತೆರಳಿ ದುರ್ಗಾ ಪರ ಮೇಶ್ವ ರಿಗೆ ಹೂವಿನ ಪೂಜೆ ಸಲ್ಲಿ ಸಿದರು. ಸಾರ್ವ ಜನಿ ಕರಿಂದ ಶುಭಾ ಶಯ ಗಳನ್ನು ಸ್ವೀಕ ರಿಸಿ ದರು. ಮುಖ್ಯ ಮಂತ್ರಿ ಗಳೊಂ ದಿಗೆ ಜಿಲ್ಲಾ ಉಸ್ತು ವಾರಿ ಸಚಿವ ರಾದ ಜೆ. ಕೃಷ್ಣ ಪಾಲೆ ಮಾರ್, ಸಂಸದ ನಳಿನ್ ಕುಮಾರ್ ಕಟೀಲ್, ವಿಧಾನ ಸಭಾ ಉಪಾ ಧ್ಯಕ್ಷ ರಾದ ಎನ್ ಯೋ ಗೀಶ್ ಭಟ್, ಕ್ಯಾ ಪ್ಟನ್ ಗಣೇಶ್ ಕಾರ್ಣಿಕ್ ಇದ್ದರು.

Saturday, August 13, 2011

ಸ್ವ ಕ್ಷೇತ್ರ ದಕ್ಷಿಣ ಕನ್ನಡದಲ್ಲಿ ಮುಖ್ಯಮಂತ್ರಿಗಳು

ಮಂಗಳೂರು,ಆಗಸ್ಟ್.13:ರಾಜ್ಯದ 26 ನೇ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ ಅವರು ಇದೇ ಮೊದಲ ಬಾರಿಗೆ 2 ದಿನಗಳ ಭೇಟಿಗೆ ತನ್ನ ತವರೂರು ದಕ್ಷಿಣ ಕನ್ನಡ ಜಿಲ್ಲೆಗೆ ಆಗಮಿಸಿ ವಿವಿಧ ಧಾರ್ಮಿಕ ಕ್ಷೇತ್ರಗಳನ್ನು ಸಂದರ್ಶಿಸಿ ದೇವರ ಆಶೀರ್ವಾದ ಪಡೆದರು. ಮಂಗ ಳೂರಿನಲ್ಲಿ ಪಕ್ಷದ ಕಾರ್ಯ ಕರ್ತರ ಅಭಿನಂದನಾ ಸಮಾ ರಂಭದಲ್ಲಿ ಪಾಲ್ಗೊಂಡ ಬಳಿಕ ನೇರವಾಗಿ ಬಂಟ್ವಾಳ ಕಲ್ಲಡ್ಕ ಶ್ರೀರಾಮ ಪ್ರೌಢ ಶಾಲೆಗೆ ಭೇಟಿ ನೀಡಿದರು.ನಂತರ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ತೆರಳಿ ಧರ್ಮಾಧಿಕಾರಿ ಡಾ. ಡಿ.ವಿರೇಂದ್ರ ಹಗ್ಗಡೆ ಅವರನ್ನು ಭೇಟಿ ಮಾಡಿ ಮಂಜುನಾಥ ಸ್ವಾಮಿಯ ದರ್ಶನ ಪಡೆದರು. ಈ ಸಂದರ್ಭದಲ್ಲಿ ಹೆಗ್ಗಡೆ ಅವರು ಮುಖ್ಯ ಮಂತ್ರಿಗಳನ್ನು ಸನ್ಮಾನಿಸಿ ಗೌರವಿಸಿ ಮಾತನಾಡಿದ ಹೆಗ್ಗಡೆಯವರು ರಾಜ್ಯದ ಅಭಿವೃದಿಗೆ ಹೆಚ್ಚಿನ ಒತ್ತು ನೀಡುವಂತೆ ಮನವಿ ಮಾಡಿದರು. ಇದೇ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ರಾಜ್ಯದ ಅಭಿವೃದ್ಧಿ ಯೊಂದೆ ತನ್ನ ಗುರಿ. ಆಡಳಿತದಲ್ಲಿ ಸಮರ್ಪಕತೆಯನ್ನು ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಆಗಸ್ಟ್ 16,17 ಮತ್ತು 18 ರಂದು ಇಲಾಖೆಯ ಅಧಿಕಾರಿಗಳೊಂದಿಗೆ ಸಭೆ ನಡೆಸುದಾಗಿ ಹೇಳಿದರು. ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಸುಬೃಹ್ಮಣ್ಯಕ್ಕೆ ಆಗಮಿಸಿದ ಮುಖ್ಯಮಂತ್ರಿಗಳು ಸುಬ್ರಹ್ಮಣ್ಯ ದೇವರ ದರ್ಶನ ಪಡೆದು ಸುಳ್ಯದ ವಳಲಾಂಬೆ ಶಂಕಪಾಲ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಭೇಟಿ ನೀಡಿದ ಸಂದರ್ಭ ಸ್ಳಳಿಯ ಜನತೆ ಆತ್ಮೀಯತೆಯಿಂದ ಮುಖ್ಯಮಂತ್ರಿಗಳನ್ನು ಬರಮಾಡಿಕೊಂಡರು. ಈ ಸಂದರ್ಭದಲ್ಲಿ ಮಾತನಾಡಿದ ಮುಖ್ಯ ಮಂತ್ರಿಗಳು ಸ್ವಕ್ಷೇತ್ರದ ಜನತೆಯ ಅಪೇಕ್ಷೆಯಂತೆ ತನ್ನ ಅಧಿಕಾದ ವಧಿಯಲ್ಲಿ ಕೆಡುಕನ್ನು ಮಾಡದೆ ಒಳ್ಳೆಯದನ್ನೇ ಮಾಡುತೇನೆ.ಕೃಷಿಕರು ಮತ್ತು ಗ್ರಾಮೀಣ ಜನರ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡುವುದಾಗಿ ಭರವಸೆ ನೀಡಿದರು. ವಳಲಾಂಬೆಯಿಂದ ಎಲಿಮಲೆಗೆ ತೆರಳಿದ ಸಂಧರ್ಭದಲ್ಲಿ ದೊಡ್ಡತೋಟದಲ್ಲಿ ಗ್ರಾಮದ ಜನತೆ ಪಟಾಕಿ ಸಿಡಿಸಿ ಸಂಭ್ರಮಿಸಿದರು. ಅಲ್ಲಿಂದ ತನ್ನ ತವ ರೂರು ಮಂಡೆ ಕೋಲಿಗೆ ಆಗ ಮಿಸಿದ ಮುಖ್ಯ ಮಂತ್ರಿ ಡಿ.ವಿ.ಸದಾ ನಂದ ಗೌಡ ಅವರು ಇಲ್ಲಿನ ಮೈತಡ್ಕ-ಪಂಜಿ ಕಲ್ಲು ಎಂಬಲ್ಲಿ ಪಯಸ್ವಿನಿ ನದಿಗೆ ನಿರ್ಮಿ ಸಲಾದ ತೂಗು ಸೇತುವೆ ಯನ್ನು ಉದ್ಘಾ ಟಿಸಿದರು.ಮಲೆ ನಾಡು ಗ್ರಾಮಾ ಭಿವೃದ್ಧಿ ಮಂಡಳಿ ವತಿಯಿಂದ ರೂ. 80 ಲಕ್ಷ ವೆಚ್ಚದಲ್ಲಿ ತೂಗು ಸೇತುವೆಗಳ ಸರ್ದಾರ ಗಿರೀಶ್ ಭಾರಧ್ವಾಜ್ ಅವರು ಈ ಸೇತುವೆಯನ್ನು ನಿರ್ಮಾಣ ಮಾಡಿದ್ದು,ಡಿ.ವಿ. ಸದಾನಂದ ಗೌಡ ಅವರು ಮುಖ್ಯ ಮಂತ್ರಿ ಯಾಗಿ ಅಧಿಕಾರ ಸ್ವೀಕರಿದ 9 ದಿನಗಳ ಬಳಿಕ ತನ್ನ ತವ ರೂರಿನ ಈ ತೂಗು ಸೇತುವೆ ಉದ್ಘಾಟನೆ ಪ್ರಥಮ ಕಾರ್ಯ ಕ್ರಮವಾಗಿದೆ.ಈ ಸಂದರ್ಭದಲ್ಲಿ ಮಾತನಾಡಿದ ಅವರು ತನ್ನ ಪ್ರಥಮ ಉದ್ಘಾಟನೆ ಸ್ವ ಕ್ಷೇತ್ರದಲ್ಲಿ ನಡೆದಿರುದು ಸಂತಸ ತಂದಿದೆ.ತನ್ನ ತಾಯಿ ಮತ್ತು ಕುಟುಂಬದ ದೈವದೇವರ ಆಶೀರ್ವಾದ ಪಡೆಯಲು ಬಂದಿದ್ದೇನೆ ಎಂದರು. ದೇವರ ಗುಂಡದ ಮನೆಗೆ ಆಗ ಮಿಸಿದ ಮುಖ್ಯ ಮಂತ್ರಿ ಗಳು ತಾಯಿ ಕಮಲ ಅವರ ಕಾಲಿಗೆ ನಮಿಸಿ ಆಶೀ ರ್ವಾದ ಪಡೆ ದರು.ತಾಯಿ ಕಮ ಲಮ್ಮ ಮನ ತುಂಬಿ ಮಗನ ನ್ನು ಹರಸಿ ದಾಗ,ಮುಖ್ಯ ಮಂತ್ರಿ ಗಳು ಭಾವ ಪರ ವಶ ರಾದರು. ದೇವರ ಗುಂಡ ದಲ್ಲಿ ನೂರಾರು ಅಭಿ ಮಾನಿ ಗಳು,ಬಂಧು ಮಿತ್ರರು ಪಕ್ಷದ ಕಾರ್ಯ ಕರ್ತರು ಮುಖ್ಯ ಮಂತ್ರಿ ಗಳನ್ನು ಹಾರ ಹಾಕಿ ಅಭಿ ನಂದಿ ಸಿದರು.

ಸರ್ವರ ಸಹಕಾರದಿಂದ ಅಭಿವೃದ್ಧಿ : ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ

ಮಂಗಳೂರು,ಆಗಸ್ಟ್.13: ರಾಜ್ಯದ ಅಧಿಕಾರಿಗಳು ಮತ್ತು ವಿರೋಧ ಪಕ್ಷದ ಪ್ರತಿನಿಧಿಗಳೂ ಸೇರಿದಂತೆ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ರಾಜ್ಯದ ಅಭಿವೃದ್ಧಿಯನ್ನು ಸಾಧಿಸಲು ದೃಢ ಹೆಜ್ಜೆ ಇಡಲು ನಿರ್ಧರಿಸಿರುವುದಾಗಿ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಹೇಳಿದ್ದಾರೆ.ಮುಖ್ಯಮಂತ್ರಿ ಪದವಿ ಸ್ವೀಕರಿಸಿದ ಬಳಿಕ ಇದೇ ಪ್ರಥಮ ಬಾರಿ ತವರು ಜಿಲ್ಲೆಗೆ ಆಗಮಿಸಿದ ಸಂದರ್ಭದಲ್ಲಿ ಮಂಗಳೂರು ವಿಮಾನ ನಿಲ್ದಾಣದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಅವರು ಮಾತನಾಡಿದರು.ಮುಖ್ಯ ಮಂತ್ರಿ ಹುದ್ದೆ ಜನ ಸೇವೆ ಗೊಂದು ಅವ ಕಾಶ ಎಂದು ವ್ಯಾಖ್ಯಾ ನಿಸಿದ ಮುಖ್ಯ ಮಂತ್ರಿ ಗಳು ವಾರದ 3 ರಿಂದ 4 ದಿನ ವಿಧಾನ ಸೌಧ ಹಾಗೂ ಗೃಹ ಕಚೇರಿ ಕೃಷ್ಣ ದಲ್ಲಿ ದ್ದು ಕೊಂಡು ಆಡಳಿ ತಕ್ಕೆ ಚುರುಕು ಮುಟ್ಟಿ ಸುವ ನಿರ್ಧಾ ರಕ್ಕೆ ಬಂದಿ ದ್ದೇನೆ.ಎರಡು ದಿನ ವಿವಿಧ ಜಿಲ್ಲೆ ಗಳ ಪ್ರವಾಸ ಗಳಿ ಗಾಗಿ ಹಾಗೂ ಒಂದು ದಿನವನ್ನು ಖಾಸಗಿ ಮತ್ತು ಕೌಟುಂಬಿಕ ಕಾರ್ಯಕ್ರಮಗಳಿಗೆ ಮೀಸಲಿಡುವ ಯೋಜನೆ ನನ್ನದು ಎಂದರು. ಈಗಾಗಲೇ ಅಧಿಕಾರಿಗಳ ಸಭೆಯನ್ನು ಕರೆದು ಈಗಾಗಲೇ ಸಮಾಲೋಚನೆ ನಡೆಸಲಾಗಿದೆ. ಅವರೆಲ್ಲರೂ ರಾಜ್ಯ ಅಭಿವೃದ್ಧಿ ಮತ್ತು ಕಾನೂನು ಸುವ್ಯವಸ್ಥೆಯನ್ನು ಕಾಪಾಡಲು ಸಹಕರಿಸುವ ಭರವಸೆಯನ್ನು ನೀಡಿದ್ದಾರೆ ಎಂದರು.ಎರಡು ಬಾರಿ ಯಶಸ್ವಿಯಾಗಿ ಮಂತ್ರಿ ಮಂಡಲದ ರಚನೆ ವಿಸ್ತರಣೆ ನಡೆಸಲಾಗಿದೆ. ಹಿರಿಯರ ಸಲಹೆ ಸೂಚನೆಗಳನ್ನು ಪಡೆದು ಅಂತಿಮ ಸುತ್ತಿನ ಸಂಪುಟ ವಿಸ್ತರಣೆಯನ್ನು ನಡೆಸಲಾಗುವುದು ಎಂದು ನುಡಿದರು.2008ರ ಮೇ ತಿಂಗ ಳಲ್ಲಿ ಯಡಿ ಯೂ ರಪ್ಪ ನೇತೃ ತ್ವದಲ್ಲಿ ಅಧಿ ಕಾರಕ್ಕೆ ಬಂದ ಸರ್ಕಾರ ರಾಜ್ಯದ ಅಭಿ ವೃದ್ಧಿಗೆ ಹೊಸ ದಿಕ್ಕನ್ನು ತೋರಿ ಸಿದೆ. ಹೊಸ ಆಯಾ ಮವನ್ನು ನೀಡಿದೆ. ಅದಕ್ಕೆ ವೇಗ ತುಂಬು ವುದಷ್ಟೆ ನನ್ನ ಕೆಲಸ. ಹೊಸ ಯೋಜನೆ ಗಳನ್ನು,ವಿಷಯ ಗಳನ್ನು ಪ್ರಸ್ತಾಪಿ ಸುವ ಮೂಲ ವೇ ರಾಜ್ಯ ಅಭಿ ವೃದ್ಧಿ ಹೊಂದು ತ್ತದೆ ಎಂಬು ದರಲ್ಲಿ ನನಗೆ ನಂಬಿಕೆ ಇಲ್ಲ.ಈಗಾಗಲೇ ಜಾರಿಯಲ್ಲಿರುವ ನೂರಾರು ಯೋಜನೆಗಳನ್ನು ಇನ್ನಷ್ಟು ಯಶಸ್ವಿಯಾಗಿ ಮತ್ತು ಪರಿಣಾಮಕಾರಿಯಾಗಿ ಅನುಷ್ಠಾನ ಮಾಡುವುದಕ್ಕೆ ನನ್ನ ಪ್ರಥಮ ಆದ್ಯತೆ. ಇದರಿಂದಲೇ ಅಭಿವೃದ್ಧಿಯಲ್ಲಿ ರಾಷ್ಟ್ರದಲ್ಲಿ ದ್ವಿತೀಯ ಸ್ಥಾನದಲ್ಲಿರುವ ಕರ್ನಾಟಕವನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯಲು ಸಾಧ್ಯ ಎಂದು ಮುಖ್ಯಮಂತ್ರಿಗಳು ಅಭಿಪ್ರಾಯಪಟ್ಟರು.
ತವರೂರು ಅವಿಭಾಜಿತ ಜಿಲ್ಲೆಯ ಅಭಿವೃದ್ದಿ ಕುರಿತು ಮಾತನಾಡಿದ ಮುಖ್ಯಮಂತ್ರಿಗಳು ಜಿಲ್ಲೆಯ ಸಚಿವರು, ಶಾಸಕರು, ಲೋಕಸಭಾ ಸದಸ್ಯರು, ಜಿ.ಪಂ., ಮಹಾನಗರ ಪಾಲಿಕೆ, ತಾ.ಪಂ., ಪುರಸಭೆ ಮುಂತಾದ ಸ್ಥಳೀಯ ಸಂಸ್ಥೆಗಳ ಪ್ರತಿನಿಧಿಗಳೊಂದಿಗೆ ಶೀಘ್ರದಲ್ಲಿ ಸಭೆ ನಡೆಸಿ ಅಭಿವೃದ್ಧಿಯತ್ತ ಮುಂದಡಿ ಇಡಲಾಗುವುದು ಎಂದು ಮುಖ್ಯಮಂತ್ರಿಗಳು ನುಡಿದರು.ತವರಿಗೆ ಆಗ ಮಿಸಿದ ಮುಖ್ಯ ಮಂತ್ರಿ ಡಿ.ವಿ.ಸದಾ ನಂದ ಗೌಡ ರನ್ನು ಮಂಗ ಳೂರು ವಿಮಾನ ನಿಲ್ದಾ ಣದಲ್ಲಿ ಅದ್ಧೂರಿ ಯಾಗಿ ಸ್ವಾಗತಿ ಸಲಾ ಯಿತು. ಸಚಿವ ಕೃಷ್ಣ ಜೆ.ಪಾಲೆಮಾರ್, ವಿಧಾನ ಸಭಾ ಉಪ ಸಭಾಧ್ಯಕ್ಷ ಎನ್.ಯೋಗೀಶ್ ಭಟ್, ಸಂಸತ್ ಸದಸ್ಯ ನಳಿನ್ ಕುಮಾರ್ ಕಟೀಲ್, ಮೇಯರ್ ಪ್ರವೀಣ್ ಅಂಚನ್, ಶಾಸಕರಾದ ಎಸ್.ಅಂಗಾರ, ಮಲ್ಲಿಕಾ ಪ್ರಸಾದ್, ಕ್ಯಾ.ಗಣೇಶ್ ಕಾರ್ಣಿಕ್, ಜಿ.ಪಂ.ಅಧ್ಯಕ್ಷೆ ಶೈಲಜಾ ಕೆ.ಟಿ.ಭಟ್,ಜಿಲ್ಲಾಧಿಕಾರಿ ಚನ್ನಪ್ಪ ಗೌಡ,ಪೋಲಿಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್, ಮೀನುಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷ ನಿತಿನ್ ಕುಮಾರ್, ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮದ ಅಧ್ಯಕ್ಷ ಎನ್.ಬಿ.ಅಬೂಬಕ್ಕರ್, ಜವಾಹರ್ ಬಾಲಭವನ ಸೊಸೈಟಿ ಅಧ್ಯಕ್ಷೆ ಸುಲೋಚನಾ ಜಿ.ಕೆ.ಭಟ್, ಬಿಜೆಪಿ ಜಿಲ್ಲಾಧ್ಯಕ್ಷ ಕೆ.ಪದ್ಮನಾಭ ಕೊಟ್ಟಾರಿ, ಮತ್ತಿತರರು ಮುಖ್ಯಮಂತ್ರಿಗಳನ್ನು ಸ್ವಾಗತಿಸಿದರು. ಮುಖ್ಯಮಂತ್ರಿಯವರ ಪತ್ನಿ ಡಾಟಿ ಸದಾನಂದ ಜತೆಗಿದ್ದರು.

Friday, August 12, 2011

`ಉದ್ಯೋಗ ಖಾತರಿ ದಿನ'

ಮಂಗಳೂರು,ಆಗಸ್ಟ್.12:ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ 203 ಗ್ರಾಮ ಪಂಚಾಯತ್ ಗಳಲ್ಲಿ ವಾರದ ನಿರ್ದಿಷ್ಟ ದಿನವೊಂದನ್ನು `ಉದ್ಯೋಗ ಖಾತರಿ ದಿನ' ಎಂದು ಕಾದಿರುಸುವಂತೆ ಒಂಬುಡ್ಸಮನ್ ಶೀನ ಶೆಟ್ಟಿ ಸೂಚನೆ ನೀಡಿದ್ದಾರೆ.ಜಿಲ್ಲಾ ಪಂಚಾಯತ್ ನಲ್ಲಿ ಹಮ್ಮಿಕೊಂಡಿದ್ದ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆ ಕುರಿತಾದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.
ಉದ್ಯೋಗ ಕಾತರಿ ದಿನದಂದು ಗ್ರಾ.ಪಂ. ಅಧ್ಯಕ್ಷರು, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಹಾಗೂ, ಉದ್ಯೋಗ ಮಿತ್ರ ಉಪಸ್ಥಿತರಿದ್ದು, ಯೋಜನೆ ಕುರಿತಾಗಿ ಅವಲೋಕನ ನಡೆಸಬೇಕು. ಪಂಚಾಯತ್ ವ್ಯಾಪ್ತಿಯ ಉದ್ಯೋಗ ಚೀಟಿದಾರರ ಬೇಡಿಕೆ, ಸಮಸ್ಯೆಗಳನ್ನು ಆಲಿಸಿ ಇತ್ಯರ್ಥ ಪಡಿಸಬೇಕು ಎಂದರು.ಪಂಚಾಯತ್ ಮಟ್ಟದಲ್ಲಿರುವ ಜಾಗೃತಿ ಸಮಿತಿ ಹಾಗೂ ಸಾಮಾಜಿಕ ಲೆಕ್ಕ ಪರಿಶೋಧಕ ಸಮಿತಿಗಳನ್ನು ಬಲಪಡಿಸಬೇಕು. ಎಲ್ಲಾ ಗ್ರಾ.ಪಂ.ಗಳ ವ್ಯಾಪ್ತಿಯಲ್ಲಿ ವರ್ಷದ ಅಂತ್ಯದೊಳಗೆ ಕ್ರಿಯಾ ಯೋಜನೆಗಳು ತಯಾರಾಗಬೇಕು. ಮುಂದಿನ 3 ತಿಂಗಳುಗಳಲ್ಲಿ ಕ್ರಿಯಾ ಯೋಜನೆ ಅನುಷ್ಠಾನಕ್ಕೆ ಬೇಕಾದ ಸಿದ್ಧತೆಗಳು ಪೂರ್ಣಗೊಳ್ಳಬೇಕು.ಈ ರೀತಿಯಲ್ಲಿ ಯೋಜನೆಯನ್ನು ಸಮರ್ಪಕವಾಗಿ ಜಾರಿಗೊಳಿಸಲು ಎಲ್ಲಾ ಪಂಚಾಯತ್ ಗಳು ಕಾರ್ಯಕ್ರಮ ರೂಪಿಸಬೇಕು ಎಂದು ಸಲಹೆ ನೀಡಿದರು.ಎಲ್ಲಾ ಗ್ರಾಮ ಪಂಚಾಯತ್ ಗಳಲ್ಲಿ ಕಾಲಮಿತಿ ನಿಗದಿಪಡಿಸಿ ಮಾಹಿತಿ ಗೋಡೆ ಹಾಗೂ ಮಾಹಿತಿ ಫಲಕಗಳನ್ನು ಅಳವಡಿಸುವ ಕಾರ್ಯ ನಡೆಯಬೇಕು.ತಪ್ಪಿದರೆ ಮುಂದಿನ ದಿನಗಳಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.
ಸಂವಾದದಲ್ಲಿ ಪಾಲ್ಗೊಂಡ ಗ್ರಾಮ ಪಂಚಾಯತ್ ಪ್ರತಿನಿಧಿಗಳು, ಅಭಿವೃದ್ಧಿ ಅಧಿಕಾರಿಗಳು, ಸರಕಾರೇತರ ಸಂಘ ಸಂಸ್ಥೆಗಳ ಪ್ರತಿನಿಧಿಗಳು ಕ್ರಿಯಾ ಯೋಜನೆ ಸಿದ್ಧಪಡಿಸುವಲ್ಲಿ ಆಗುತ್ತಿರುವ ವಿಳಂಬ, ಆಡಳಿತ ಮಂಡಳಿಗಳ ನಿರಾಸಕ್ತಿ, ಅನುದಾನ ಲಭ್ಯತೆಯ ತೊಂದರೆಗಳ ಬಗ್ಗೆ ಚರ್ಚಿಸಿದರು.ಸಂವಾದದಲ್ಲಿ ಪಾಲ್ಗೊಂಡ ಬಹುತೇಕರು ಗ್ರಾಮೀಣ ಭಾಗಗಳಲ್ಲಿ ಯೋಜನೆಯ ಮಾಹಿತಿ ಕೊರತೆಯಿದೆ. ಜನತೆಗೆ ಹೆಚ್ಚೆಚ್ಚು ಮಾಹಿತಿ ನೀಡಿ ಜಾಗೃತಿಗೊಳಿಸುವ ಅವಶ್ಯಕತೆ ಇದೆ ಎಂದು ಅಭಿಪ್ರಾಯಪಟ್ಟರು. ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಮುಂದಿನ ಕೆಲವೇ ದಿನಗಳಲ್ಲಿ ಎಲ್ಲಾ ತಾಲೂಕುಗಳಲ್ಲಿ ಉದ್ಯೋಗ ಖಾತರಿ ಯೋಜನೆಯ ಮಾಹಿತಿ ಕಾರ್ಯಾಗಾರ ಮತ್ತು ಸಂವಾದವನ್ನು ಏರ್ಪಡಿಸಲಾಗುವುದು ಎಂದರು.
ಜಿ.ಪಂ. ಮುಖ್ಯ ಲೆಕ್ಕಾಧಿಕಾರಿ ಎ.ಎನ್.ರಾಮದಾಸ್, ಉದ್ಯೋಗ ಖಾತರಿ ಯೋಜನೆಯ ಮಾರ್ಗದರ್ಶಿ ಅಧಿಕಾರಿ ಎನ್.ಸಿ. ಸೀತಮ್ಮ, ಜನಶಿಕ್ಷಣ ಟ್ರಸ್ಟ್ ನಿರ್ದೇಶಕ ಕೃಷ್ಣ ಮೂಲ್ಯ, ಕಾಶಿಪಟ್ಣ ಗ್ರಾ.ಪಂ. ಅಧ್ಯಕ್ಷ ಸತೀಶ್, ತೋಟಗಾರಿಕಾ ಸಹಾಯಕ ನಿರ್ದೇಶಕ ಸಂಜೀವ ನಾಯ್ಕ್ ಮುಂತಾದವರು ಉಪಸ್ಥಿತರಿದ್ದರು.

ಖಾಸಗಿ ವೈದ್ಯಕೀಯ ಸಂಸ್ಥೆಗಳ ಗಮನಕ್ಕೆ

ಮಂಗಳೂರು,ಆಗಸ್ಟ್.12:ಖಾಸಗಿ ವೈದ್ಯಕೀಯ ಅಧಿನಿಯಮ 2007 ಮತ್ತು ಕಾನೂನು 2009 ರ ಪ್ರಕಾರ ಎಲ್ಲ ಖಾಸಗೀ ವೈದ್ಯಕೀಯ ಸಂಸ್ಥೆಯವರು ತಮ್ಮ ಕ್ಲಿನಿಕ್ ಗಳಲ್ಲಿ ಚಿಕಿತ್ಸೆಗೆ ಸಂಬಂಧಿಸಿದ ಶುಲ್ಕವನ್ನು ಎಲ್ಲರಿಗೂ ಕಾಣಿಸುವಂತೆ ಪ್ರಕಟಿಸಲು ಸೂಚಿಸಿದೆ.
ಯಾವ್ಯಾವ ಚಿಕಿತ್ಸೆಗೆ ಎಷ್ಟು ದರ ಎಂಬುದನ್ನು ಎಲ್ಲರೂ ಕಾಣುವ ಜಾಗದಲ್ಲಿ ಪ್ರದರ್ಸಿಸಿರಬೇಕು; ನಿಗದಿತ ದರಕ್ಕಿಂತ ಹೆಚ್ಚಿನ ಶುಲ್ಕ ವಸೂಲಿ ಮಾಡಿದರೆ ಹಾಗೂ ಕೆಪಿಎಂಇ ನಿಯಮವನ್ನು ಉಲ್ಲಂಘಿಸಿದಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುವುದು.
ಈ ಸಂಬಂಧ ಸ್ಥಳೀಯ ತಪಾಸಣಾ ತಂಡವನ್ನು ಸ್ಥಳ ತಪಾಸಣೆಗೆ ಕಳುಹಿಸಿದಾಗ ನ್ಯೂನ್ಯತೆ ಕಂಡುಬಂದ ಪಕ್ಷದಲ್ಲಿ ಸರಿಪಡಿಸಿಕೊಳ್ಳಲು ಗರಿಷ್ಠ ಕಾಲಾವಕಾಶ ನೀಡಿದರೂ ನ್ಯೂನ್ಯತೆ ಸರಿಪಡಿಸಿದ ಬಗ್ಗೆ ಮಾಹಿತಿ ಸಲ್ಲಿಸದ ಸಂಸ್ಥೆಗಳ ವಿರುದ್ಧ ಕಠಿಣ ಕ್ರಮಕೈಗೊಳ್ಳಲಾಗುವುದು ಎಂದು ಜಿಲ್ಲಾ ನೋಂದಣಿ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಪ್ರಕಟಣೆ ತಿಳಿಸಿದೆ.

Thursday, August 11, 2011

'ಸಾಮಾಜಿಕ ಅಭಿವೃದ್ಧಿಗೆ ಒತ್ತು ನೀಡಿ'

ಮಂಗಳೂರು,ಆಗಸ್ಟ್.11:ಮುಂದಿನ ಹತ್ತು ವರ್ಷಗಳಲ್ಲಿ ಗ್ರಾಮೀಣಾಭಿವೃದ್ಧಿಯನ್ನು ದೃಷ್ಟಿಯಲ್ಲಿಟ್ಟು ಕೊಂಡು ಅಭಿವೃದ್ಧಿಗೆ ವಿಶೇಷ ಒತ್ತು ನೀಡಿ ಗ್ರಾಮೀಣ ಆರೋಗ್ಯ, ರಸ್ತೆ, ಶಿಕ್ಷಣ ಮತ್ತು ಸಾಮಾಜಿಕವಾಗಿ ಹಿಂದುಳಿದವರ ಅಭಿವೃದ್ಧಿಗೆ ಪೂರಕವಾಗಿ ಜಿಲ್ಲಾ ಪಂಚಾಯತ್ನ ಇಲಾಖೆಗಳು ಕ್ರಿಯಾ ಯೋಜನೆ ರೂಪಿಸಬೇಕೆಂದು ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಶೈಲಜಾ ಭಟ್ ಹೇಳಿದರು.ಇಂದು ಜಿಲ್ಲಾ ಪಂಚಾ ಯತ್ ನ ನೇತ್ರಾ ವತಿ ಸಭಾಂ ಗಣ ದಲ್ಲಿ ನಡೆದ ಮಾಸಿಕ ಕೆಡಿಪಿ ಸಭೆಯ ಅಧ್ಯ ಕ್ಷತೆ ವಹಿಸಿ ಮಾತ ನಾಡು ತ್ತಿದ್ದರು. ಅಧಿ ಕಾರಿ ಗಳು ಪ್ರಗತಿ ಪರಿ ಶೀಲನೆ ಸಭೆ ಯಲ್ಲಿ ಭೌತಿಕ ಮತ್ತು ಆರ್ಥಿಕ ಪ್ರಗತಿ ಗಳ ಅಂಕಿ ಅಂಶ ಗಳನ್ನು ಮಾತ್ರ ನೀಡದೆ ಸಾಮಾ ಜಿಕ ಅಭಿ ವೃದ್ದಿಗೆ ಪೂರಕ ವಾಗಿ ಕರ್ತವ್ಯ ನಿರ್ವ ಹಿಸ ಬೇಕೆಂದು ಅವರು ಹೇಳಿದರು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮತ್ತು ಆರೋಗ್ಯ ಇಲಾಖೆ ಜಂಟಿಯಾಗಿ ಕೈಗೊಳ್ಳಬೇಕಾದ ಕ್ರಿಯಾ ಯೋಜನೆಗಳ ಬಗ್ಗೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ ಕೆ.ಎನ್.ವಿಜಯ್ ಪ್ರಕಾಶ್ ಅವರು ಸಲಹೆ ನೀಡಿದರು.
ಎಲ್ಲ ಇಲಾಖೆಗಳು ಅಂಗವಿಕಲರಿಗೆ ನೀಡಬೇಕಾದ ಮೀಸಲಾತಿಯನ್ನು ಅನುಷ್ಠಾನಕ್ಕೆ ತನ್ನಿ ಎಂದ ವಿಜಯಪ್ರಕಾಶ್ ಅವರು, ಇಂದಿರಾ ಆವಾಸ್ ಯೋಜನೆಯಡಿ ನಿಗದಿತ ಗುರಿ ಸಾಧಿಸಲು ಹಾಗೂ ಸಾಧನೆಯಲ್ಲಿ ವಿಫಲವಾಗಿರುವ ಡಾ ಅಂಬೇಡ್ಕರ್ ಅಭಿವೃದ್ಧಿ ನಿಗಮ ತಮ್ಮ ಸ್ವಯಂ ಉದ್ಯೋಗ ಯೋಜನೆ, ಗಂಗಾ ಕಲ್ಯಾಣ ಯೋಜನೆಗೆ ಗುರಿನಿಗದಿ ಪಡಿಸಿ ಸಾಧನೆ ಮಾಡದಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರಲ್ಲದೆ ಸೂಕ್ತ ಕ್ರಮಕ್ಕೆ ನಿದರ್ೇಶನ ನೀಡಿದರು.
ಅರಣ್ಯ ಇಲಾಖೆ ಅಧಿಕಾರಿಗಳು ಇಲಾಖೆಯ ಪ್ರಸಕ್ತ ಸಾಲಿನ ವಿವಿಧ ವಿನೂತನ ಯೋಜನೆಗಳ ಬಗ್ಗೆ ಸಮಗ್ರ ಮಾಹಿತಿ ನೀಡಿದರಲ್ಲದೆ ಕೃಷಿ ಅರಣ್ಯ ಪ್ರೋತ್ಸಾಹ ಯೋಜನೆಯಡಿ 68 ಫಲಾನುಭವಿಗಳನ್ನು ಆಯ್ಕೆ ಮಾಡಲಾಗಿದೆ ಎಂದರು.
ಹಿಂದುಳಿದ ಅಭಿವೃದ್ದಿ ನಿಗಮ ಹಾಗೂ ಅಲ್ಪಸಂಖ್ಯಾತ ನಿಗಮದಿಂದ ಚೈತನ್ಯ ಹಾಗೂ ಸ್ವಾವಲಂಬನಾ ಯೋಜನೆಯಡಿ ಈ ತಿಂಗಳಿನಲ್ಲಿ ನಿಗದಿತ ಗುರಿ ಸಾಧಿಸಿದ್ದು, ಶೇಕಡ 55 ಪ್ರಗತಿಯಾಗಿದೆ. ಅಧಿಕ ಇಳುವರಿ ಕಾರ್ಯಕ್ರಮದಡಿ 30,681 ಹೆ. ಭತ್ತದ ಕೃಷಿ ಮಾಡಲಾಗಿದೆ ಎಂದರು. ತೋಟಗಾರಿಕಾ ಇಲಾಖೆ ಯು ಫಲಾನುಭವಿಗಳ ಆಯ್ಕೆ ಮತ್ತು ದೂರದೃಷಿ ಯೋಜನೆಗಳನ್ನು ರೂಪಿಸಿಕೊಳ್ಳಬೇಕೆಂದು ಸಿಇಒ ಸೂಚಿಸಿದರು.
ಪಶುಸಂಗೋಪನೆ ಮತ್ತು ಕೆಎಂಎಫ್ ನವರು ಜಂಟಿಯಾಗಿ ಗ್ರಾಮೀಣರಿಗೆ ನೆರವಾಗುವ ಯೋಜನೆಗಳನ್ನು ರೂಪಿಸಲು ಹೇಳಿದರು.
ಎಲ್ಲ ಅಧಿಕಾರಿಗಳು ಕಡ್ಡಾಯವಾಗಿ ಸಮಗ್ರ ಮಾಹಿತಿಯೊಂದಿಗೆ ಸಭೆಗೆ ಹಾಜರಾಗಬೇಕೆಂದು ಸೂಚಿಸಿದ ಜಿಲ್ಲಾ ಪಂಚಾಯತ್ ಅಧ್ಯಕ್ಷರು, ಸಭೆಗೆ ಹಾಜರಾಗದ ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳುವುದಾಗಿ ಹೇಳಿದರು. ಕ್ರಿಯಾಶೀಲ ಆಡಳಿತಕ್ಕೆ ಜಿಲ್ಲೆ ಮಾದರಿಯಾಗಬೇಕೆಂದ ಸಿಇಒ ಅವರು, ಇಲಾಖೆಯ ಮುಖ್ಯಸ್ಥರಿಗೆ ತಳಮಟ್ಟದಲ್ಲಾಗುತ್ತಿರುವ ಕಾಮಗಾರಿಗಳ ಬಗ್ಗೆ ಮಾಹಿತಿ ಹಾಗೂ ಸಮಯಮಿತಿಯಲ್ಲಿ ಕೆಲಸಗಳಾಗಬೇಕೆಂದರು. ಜಿಲ್ಲಾ ಪಂಚಾಯತ್ ಉಪಾಧ್ಯಕ್ಷರಾದ ಧನಲಕ್ಷ್ಮಿ ಉಪಸ್ಥಿತರಿದ್ದರು. ಸ್ಥಾಯಿಸಮಿತಿ ಸದಸ್ಯರಾದ ಜನಾರ್ಧನ ಗೌಡ, ಈಶ್ವರ ಕಟೀಲ್ ಉಪಸ್ಥಿತರಿದ್ದರು.

ಸ್ವಾತಂತ್ರ್ಯೋತ್ಸವ ಪೂರ್ವ ಭಾವೀ ಸಿದ್ಧತಾ ಸಭೆ

ಮಂಗಳೂರು,ಆಗಸ್ಟ್.11: ಜಿಲ್ಲೆಯಲ್ಲಿ ಸ್ವಾತಂತ್ರ್ಯ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಲು ಸರ್ವ ಸಿದ್ಧತೆಗಳಾಗಿದ್ದು,ಈ ಸಂಭ್ರಮಾ ಚರಣೆಯಲ್ಲಿ ಪ್ಲಾಸ್ಟಿಕ್ ಧ್ವಜವನ್ನು ಖರೀದಿಸ ಬಾರದು ಅಥವಾ ಮಾರಾಟ ಮಾಡ ಬಾರದು.ಮಾರಾಟ ಮಾಡುವುದನ್ನು ಹಾಗೂ ಖರೀದಿ ಸುವದನ್ನು ನಿಷೇಧಿಸಲಾಗಿದ್ದು,ಜಿಲ್ಲಾಧಿಕಾರಿಗಳು ಸಾರ್ವಜನಿಕರ ಸಹಕಾರ ಕೋರಿದರು.ಈ ಬಗ್ಗೆ ಶಿಕ್ಷಣ ಇಲಾಖೆ ,ಮಹಾನಗರ ಪಾಲಿಕೆ ಕ್ರಮಕೈಗೊಳ್ಳಬೇಕೆಂದು ದಕ್ಷಿಣಕನ್ನಡ ಜಿಲ್ಲಾಧಿಕಾರಿ ಡಾ.ಎನ್.ಎಸ್. ಚನ್ನಪ್ಪ ಗೌಡ ಸೂಚನೆ ನೀಡಿದರು.ಅವರು ಇಂದು ಜಿಲ್ಲಾಧಿ ಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಸ್ವಾತಂತ್ರ್ಯೋತ್ಸವ ಪೂರ್ವಭಾವೀ ಸಿದ್ಧತಾ ಸಭೆಯನ್ನುದ್ದೇಶಿಸಿ ಮಾತನಾಡುತ್ತಿದ್ದರು.ಸ್ವಾತಂತ್ರ್ಯ ದಿನಾಚರಣೆಯಂದು ಪೂರ್ವಾಹ್ನ 8.55 ಕ್ಕೆ ಅತಿಥಿಗಳು ಆಗಮಿಸಿ,ರಾಷ್ಟ್ರ ಧ್ವಜಾರೋಹಣ ಗೌರವ ಸ್ವೀಕಾರ, ನಾಡಗೀತೆ,ರೈತಗೀತೆ ಹಾಗೂ ಪಥಸಂಚಲನ ಬಳಿಕ ಮುಖ್ಯ ಅತಿಥಿಗಳಿಂದ ಸ್ವಾತಂತ್ರ್ಯೋತ್ಸವ ಸಂದೇಶ.ಮಾದರಿ ವೈಮಾನಿಕ ಪ್ರದರ್ಶನ ಏರ್ಪಡಿಸಲಾಗಿದೆ.ಅಪರಾಹ್ನ 3.30 ರಿಂದ 6.00 ರ ವರೆಗೆ ಪುರಭವನದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆಯೆಂದು ತಿಳಿಸಿದರು. ಸಭೆಯಲ್ಲಿ ಮಂಗಳೂರು ಸಹಾಯಕ ಕಮೀಷನರ್ ಪ್ರಭುಲಿಂಗ ಕವಳಿಕಟ್ಟಿ,ಅಪರ ಜಿಲ್ಲಾಧಿಕಾರಿ ಕೆ.ಟಿ.ಕಾವೇರಿಯಪ್ಪ ಹಾಗೂ ಎಲ್ಲಾ ಇಲಾಖಾಧಿಕಾರಿಗಳು ಉಪಸ್ಥಿತರಿದ್ದರು.

Wednesday, August 10, 2011

ಎದೆಹಾಲು ಉಣಿಸುವ ತಾಯಂದಿರಲ್ಲಿ ಸ್ತನದ ಕ್ಯಾನ್ಸರ್ ಕಡಿಮೆ - ಡಾ.ವಿಶ್ವೇಶ್ವರ

ಮಂಗಳೂರು,ಆಗಸ್ಟ್.10:ಸ್ತನ್ಯಪಾನ ಅಮೃತ ಸಮಾನ.ಮಕ್ಕಳಿಗೆ ಸ್ತನ್ಯಪಾನ ಮಾಡಿಸುವ ತಾಯಂದಿರಲ್ಲಿ ಸ್ತನದ ಕ್ಯಾನ್ಸರ್ ಬರುವ ಸಾಧ್ಯತೆ ಕಡಿಮೆ ಎಂದು ಪೆರುವಾಯಿ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ವಿಶ್ವೇಶ್ವರ .ಬಿ.ಕೆ. ಅವರು ತಿಳಿಸಿದ್ದಾರೆ.ಕ್ಷೇತ್ರ ಪ್ರಚಾರ ಇಲಾಖೆ,ಭಾರತ ಸರ್ಕಾರ,ಸಮು ದಾಯ ಆರೋಗ್ಯ ಕೇಂದ್ರ,ವಾಮದ ಪದವು,ವಾರ್ತಾ ಇಲಾಖೆ ಮಂಗ ಳೂರು ,ಚೆನ್ನೈ ತ್ತೋಡಿ ಗ್ರಾಮ ಪಂಚಾ ಯತ್ ,ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಇವರ ಸಂಯುಕ್ತಾ ಶ್ರಯದಲ್ಲಿ ವಾಮದಪದವು ಶ್ರೀ ಗಣೇಶ ಮಂದಿರದಲ್ಲಿ ಇಂದು ಏರ್ಪಡಿಸಿದ್ದ ವಿಶ್ವ ಸ್ತನ್ಯಪಾನ ಸಪ್ತಾಹ ಹಾಗೂ ಆರೋಗ್ಯವಂತ ಮಕ್ಕಳ ಸ್ಪರ್ಧೆ ಕಾರ್ಯಕ್ರಮದಲ್ಲಿ ಅವರು ಸ್ತನ್ಯಪಾನದ ಮಹತ್ವ ಕುರಿತು ಮಾತನಾಡಿದರು.
ಹೆಣ್ತನದ ಪರಿಪೂರ್ಣತೆಗೆ ತಾಯ್ತನ ಅವಶ್ಯಕ. ತಾಯ್ತನ ಧನ್ಯತೆ ತಾಯಿ ಶಿಶುವಿಗೆ ಎದೆಹಾಲು ಉಣಿಸಿದಾಗ ಮಾತ್ರ ಸಾಧ್ಯ.ಸ್ತನ್ಯಪಾನದಿಂದ ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ. ಸ್ಮರಣ ಶಕ್ತಿ ವೃದ್ಧಿಸುತ್ತದೆ,ಶಿಶುಗಳ ದವಡೆ ಗಟ್ಟಿಯಾಗಿ ಸದೃಢವಾದ ಹಲ್ಲುಗಳು ಮೂಡುತ್ತದೆ. ಎದೆಹಾಲು ಸುಲಭವಾಗಿ ಜೀರ್ಣವಾಗುವುದರಿಂದ ಮಗು ಆರೋಗ್ಯ ಪೂರ್ಣವಾಗಿರುತ್ತದೆ ಎಂದ ಡಾ.ವಿಶ್ವೇಶ್ವರ ತಾಯಂದಿರು ಶಿಶು ಜನಿಸಿದ ಕೂಡಲೇ ಒಂದು ಗಂಟೆಯೊಳಗೆ ಮಗುವಿಗೆ ಪ್ರಥಮ ಎದೆಹಾಲು ಕಡ್ಡಾಯವಾಗಿ ಉಣಿಸಬೇಕೆಂದರು.
ಸಮಾ ರಂ ಭದ ಅಧ್ಯ ಕ್ಷತೆ ವಹಿ ಸಿದ್ದ ಜಿಲ್ಲಾ ಆ ರೋಗ್ಯ ಮತ್ತು ಕು ಟುಂಬ ಕಲ್ಯಾಣ ಅಧಿ ಕಾರಿ ಡಾ. ಓ.ಆರ್.ಶ್ರೀ ರಂಗಪ್ಪ ಅವರು ಮಾತ ನಾಡಿ ಚೊಚ್ಚಲ ಬಾಣಂ ತಿಯರು ನವ ಜಾತ ಶಿಶು ಗಳಿಗೆ ಎದೆ ಹಾಲು ಯಾವ ರೀತಿ ಹೇಗೆ ಯಾವಾಗ ಎಂಬುದನ್ನು ಆರೋಗ್ಯ ಸಹಾ ಯಕಿ ಯರಿಂದ ತಿಳಿದು ಕೊಂಡು ಎದೆ ಹಾಲು ನೀಡ ಬೇಕು.ಇಲ್ಲ ವಾದಲ್ಲಿ ಎದೆಹಾಲು ಮಗುವಿನ ಸಾವಿಗೂ ಕಾರಣವಾಗಲಿದೆ ಎಂದರು.ಕ್ಷೇತ್ರ ಪ್ರಚಾರಾಧಿಕಾರಿ ಟಿ.ಬಿ.ನಂಜುಂಡಸ್ವಾಮಿ ಅವರು ಮಾತನಾಡಿ ಸ್ತನ್ಯಪಾನದ ಮಹತ್ವ ಗ್ರಾಮೀಣರಲ್ಲಿ ತಿಳಿಸಲಿಕ್ಕಾಗಿಯೇ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆಯೆಂದರು. ಆರೋಗ್ಯ ಶಿಕ್ಷಣಾಧಿಕಾರಿ ಶ್ರೀಮತಿ ಜ್ಯೋತಿ.ಕೆ.ಉಳಿಪಾಡಿ,ತಾಲೂಕು ಪಂಚಾಯತ್ ಸದಸ್ಯರಾದ ರಮೇಶ್ ಕುಡುಮೇರು ,ಗೋಪಾಲ ಅಂಚನ್, ಗ್ರಾಮಸ್ಥರು ಇವರು ಮಾತನಾಡಿದರು.
ಗುತ್ತಿಗೆದಾರ ಅಮ್ಮು ರೈ ,ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷ ಶ್ರೀಧರ ಪೈ ,ಶಿಶು ಅಭಿವೃದ್ಧಿ ಸಹಾಯಕ ಅಧಿಕಾರಿ ಸುಬ್ರಹ್ಮಣ್ಯ ,ವಾರ್ತಾ ಇಲಾಖೆಯ ಚಂದ್ರಶೇಖರ ಅಜಾದ್ ಉಪಸ್ಥಿತರಿದ್ದರು.ಇದೇ ಸಂದ ರ್ಭದಲ್ಲಿ ಆರೋಗ್ಯ ವಂತ ಮಕ್ಕಳ ಸ್ಪರ್ಧೆ ಯನ್ನು ಏರ್ಪ ಡಿಸ ಲಾಗಿದ್ದು,ತೀರ್ಪು ಗಾರ ರಾಗಿ ಡಾ.ಸ್ಮಿತಾ ರಾಣಿ, ಡಾ. ಸೋಹನ್ ಕುಮಾರ್ ಮತ್ತು ಡಾ.ರಾಮ ರಾ ಜೇಶ್ ಅವರು ನಡೆಸಿ ಕೊಟ್ಟರು. ಸುಮಾರು 150 ಕ್ಕೂ ಹೆಚ್ಚಿನ ಮಕ್ಕಳು ತಾಯಂ ದಿರು ಈ ಕಾರ್ಯ ಕ್ರಮ ದಲ್ಲಿ ಭಾಗ ವಹಿ ಸಿದ್ದರು. ಆ ರೋಗ್ಯ ವಂತ ಮಕ್ಕಳ ಸ್ಪರ್ಧಾ ವಿಜೇ ತರಲ್ಲಿ 6 ತಿಂಗ ಳಿನಿಂದ 1 ವರ್ಷದೊಳಗಿನ ಮಕ್ಕಳಲ್ಲಿ ಅಭಿಮಾನ್,ರೌನಾಥ್,ಹರ್ಷಿತಾ,ಮೃಣಾಲ್,ಒಂದು ವರ್ಷದಿಂದ ಎರಡು ವರ್ಷದೊಳಗಿನ ಮಕ್ಕಳಲ್ಲಿ ತ್ರಿಷಾ,ಮನೀಷ್,ರಕ್ಷಾ,ಕಾರ್ತಿಕ್,ಎರಡರಿಂದ ಮೂರು ವರ್ಷದೊಳಗಿನ ಮಕ್ಕಳಲ್ಲಿ ನೀತಾ,ಶ್ವಾನ್,ರಿಸಿಕಾ ಮತ್ತು ಸಾನ್ವಿತ್ ವಿಜಯಿಗಳಾಗಿರುತ್ತಾರೆ.ವಾಮದಪದವು ಸಮುದಾಯ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ.ದುರ್ಗಾ ಪ್ರಸಾದ್ ಪ್ರಾಸ್ತಾವಿಕವಾಗಿ ಮಾತನಾಡಿದರು.ಹಿರಿಯ ಆರೋಗ್ಯ ಸಹಾಯಕಿ ಶ್ರೀಮತಿ ಗೀತಾ ಸ್ವಾಗತಿಸಿದರು. ಸಮಾರಂಭದ ಅಂಗವಾಗಿ ಯಕ್ಷಲೋಕ ಸಾಂಸ್ಕೃತಿಕ ಸಂಗಮ ಮತ್ತು ಸ್ಕಂದ ಡ್ಯಾನ್ಸ್ ತಂಡದವರಿಂದ ನೃತ್ಯ ವೈಭವ ಕಾರ್ಯಕ್ರಮ ಆಯೋಜಿಸಲಾಗಿತ್ತು.