Thursday, August 25, 2011

ಆದಾಯ ಪತ್ರ ವಿಳಂಬ; ಸಿಬಂದಿ ಅಮಾನತಿಗೆ ಜಿಲ್ಲಾಧಿಕಾರಿ ಆದೇಶ

ಮಂಗಳೂರು,ಆಗಸ್ಟ್.25:ಆದಾಯ ಧೃಡಿಕರಣ ಪತ್ರ ವಿಲೇವರಿಯಲ್ಲಿ ವಿಳಂಬಮಾಡಿದ ಕಾರಣಕ್ಕೆ ಬಂಟ್ವಾಳ ತಾಲೂಕು ಕಚೇರಿಯ ಕಡತ ವಿಲೇವಾರಿ ಸಿಬಂದಿಯನ್ನು ಅಮಾನತು ಮಾಡಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ. ಚನ್ನಪ್ಪ ಗೌಡ ಅವರು ಆದೇಶ ಹೊರಡಿಸಿದ್ದಾರೆ.ಅವರು ನಿನ್ನೆ ಬಂಟ್ಟವಾಳ ತಾಲೂಕು ಕಚೇರಿಗೆ ಹಠತ್ ಭೇಟಿ ನೀಡಿ ಕಡತಗಳನ್ನು ಪರಿಶೀಲಿಸಿದ ಸಂದರ್ಭ ಆದಾಯ ಧೃಡಿಕರಣ ಕೋರಿ ಸಲ್ಲಿಸಿದ್ದ 798 ಅರ್ಜಿಗಳು ವಿಲೇವಾರಿಯಾಗದೇ ಬಾಕಿ ಉಳಿದ ಹಿನ್ನೆಲೆಯಲ್ಲಿ ಮತ್ತು ಸಮರ್ಪಕ ವಿವರ ನೀಡದ ಹಿನ್ನೆಲೆಯಲ್ಲಿ ತಾಲೂಕು ಕಚೇರಿಯ ಕಡತ ವಿಲೇವಾರಿ ಸಿಬಂದಿಯಾದ ಗ್ರೆಟ್ಟಾ ಅವರನ್ನು ಅಮಾನತು ಗೊಳಿಸುವಂತೆ ಆದೇಶಿಸಿಸಿದರು.ಈ ಬಾಕಿ ಅರ್ಜಿಗಳನ್ನು ಇಂದು ಸಂಜೆಯ ಒಳಗೆ ಸಂಬಂದಿಸಿದ ಅರ್ಜಿದಾರರ ಮನೆಗೆ ಖುದ್ದಾಗಿ ತಲುಪಿಸುವಂತೆ ಕಂದಾಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಅಂತ್ಯೋದಯ ಯೋಜನೆಯಲ್ಲಿ 286 ಫಲಾನುಭವಿಗಳ ಅರ್ಜಿ ಬಾಕಿ ಇರಿಸಿದ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ಸಿಬಂದಿಗಳ ಮಾಸಿಕ ವೇತನ ಪಾವತಿಗೂ ಜಿಲ್ಲಾಧಿಕಾರಿಗಳು ತಡೆ ವಿಧಿಸಿದ್ದಾರೆ.ಬಿಪಿಎಲ್ ವ್ಯಾಪ್ತಿಗೊಳಪಟ್ಟ ಮೃತ ಕುಟುಂಬಗಳಿಗೆ ತಲಾ ರೂ.1000 ಸಾವಿರ ಪಾವತಿಯಾಗಬೇಕಿತ್ತು.ಆದರೆ ಈ ಅರ್ಜಿ ವಿಲೇವಾರಿಯಾಗದೆ ಬಾಕಿ ಉಳಿದಿತ್ತು.ಇದನ್ನು 2 ದಿನದೊಳಗೆ ವಿಲೇ ಮಾಡಲು ಜಿಲ್ಲಾಧಿಕಾರಿಗಳು ಸೂಚನೆ ನೀಡಿದರು. ಯಾವುದೇ ಕಾರಣಕ್ಕೂ ಅರ್ಜಿ ವಿಲೇವಾರಿ ವಿಳಂಬವಾದರೆ,ಸಂಬಂಧಿಸಿದವರ ಮೇಲೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ಚನ್ನಪ್ಪ ಗೌಡ ಅವರು ಎಚ್ಚರಿಕೆ ನೀಡಿದ್ದಾರೆ.