Monday, August 1, 2011

'ಪ್ರಾಕೃತಿಕ ಪೌಷ್ಠಿಕ ಆಹಾರ ಎದೆಹಾಲು'

ಮಂಗಳೂರು,ಆಗಸ್ಟ್.01:ಎದೆಹಾಲು ಅತ್ಯುತ್ತಮ ಪೌಷ್ಠಿಕ ಆಹಾರವಾಗಿದ್ದು, ಮಗು ಹುಟ್ಟಿದ ತಕ್ಷಣ ಹಾಲುಣಿಸುವ ಬಗ್ಗೆ ತಾಯಂದಿರಿಗೆ ಮಾಹಿತಿ ನೀಡಬೇಕಾದ ಅಗತ್ಯವಿದೆ ಎಂದು ಯೆನಪೋಯ ಮೆಡಿಕಲ್ ಕಾಲೇಜಿನ ಪ್ರಾಂಶುಪಾಲರಾದ ಡಾ. ಗುಲಾಮ್ ಜಿಲಾನಿ ಖಾದಿರಿ ಹೇಳಿದರು.
ಇಂದು ದೇರಳ ಕಟ್ಟೆಯ ಯೆನ ಪೋಯಾ ಕಾಲೇ ಜಿನ ಅಕಾ ಡೆಮಿಕ್ ಬ್ಲಾಕ್ ನಲ್ಲಿ ಮಾನವ ಸಂಪ ನ್ಮೂಲ ಅಭಿವೃದ್ಧಿ ಸಚಿ ವಾಲ ಯದ ಆಹಾರ ಮತ್ತು ಪೌಷ್ಠಿ ಕತಾ ಮಂಡಳಿ, ಮಹಿಳೆ ಮತ್ತು ಮಕ್ಕಳ ಅಭಿ ವೃದ್ಧಿ ಇಲಾಖೆ, ಸಮು ದಾಯ ಆಹಾರ ಮತ್ತು ಪೌಷ್ಠಿಕ ವಿಸ್ತರಣಾ ಘಟಕ ಬೆಂಗಳೂರು ಮತ್ತು ಯೆನಪೋಯ ಮೆಡಿಕಲ್ ಕಾಲೇಜಿನ ಮಕ್ಕಳ ವಿಭಾಗ ಸಂಯುಕ್ತವಾಗಿ ಜಾಗತಿಕ ಸ್ತನ್ಯಪಾನ ಸಪ್ತಾಹ-2011 ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.
ಪ್ರಕೃತಿ ನೀಡುವ ಪೌಷ್ಠಿಕ ಹಾಗೂ ರೋಗ ನಿರೋ ಧಕ ಶಕ್ತಿ ಯಿರುವ ಕೊಲೆ ಸ್ಟ್ರಮ್ ಬಗ್ಗೆ ತಾಯಿ ಯಂದಿರಲ್ಲಿ ಜಾಗೃತಿ ಮೂಡಿ ಸಬೇಕು. ಕಾಲೇ ಜಿನ ವೈದ್ಯ ಕೀಯ ವಿದ್ಯಾರ್ಥಿ ಗಳು ಸಮು ದಾಯ ಆರೋ ಗ್ಯದ ಬಗ್ಗೆ ಹೆಚ್ಚಿನ ಕಾಳ ಜಿಯನ್ನು ವಹಿಸ ಬೇಕೆಂ ದರು. ಎದೆ ಹಾಲು ಣಿಸು ವಿಕೆ ಮತ್ತು ಮಗು ವನ್ನು ಹಿಡಿದುಕೊಳ್ಳುವ ರೀತಿಯ ಬಗ್ಗೆ ಅಮ್ಮಂದಿರಲ್ಲಿ ಅರಿವಿನ ಕೊರತೆ ಹಾಗೂ ಮೂಢನಂಬಿಕೆಗಳು ಇನ್ನೂ ಚಾಲ್ತಿಯಲ್ಲಿವೆ. ಇಂತಹ ಮೂಢನಂಬಿಕೆಗಳನ್ನು ಅಳಿಸಿ ಉತ್ತಮ ಅರಿವು ಹಾಗೂ ತಿಳುವಳಿಕೆ ನೀಡುವ ಅಗತ್ಯವನ್ನು ಅವರು ಪ್ರತಿಪಾದಿಸಿದರು.
ನನ್ನೊಡನೆ ಮಾತಾಡು - ತಾಯಿ ಹಾಲುಣಿಸುವಿಕೆ - ಮೂರು ಆಯಾಮಗಳ ಅನುಭವ ((‘talk to me! Breastfeeding – a 3d experience’) ಎಂಬುದು ಈ ಸಾಲಿನ ಘೋಷ ವಾಕ್ಯವಾಗಿದ್ದು ಎದೆ ಹಾಲುಣಿಸುವಿಕೆ ಬಗ್ಗೆ ಎಲ್ಲ ತಾಯಂದಿರಲ್ಲಿ ಜಾಗೃತಿ ಮೂಡಿಸಲು ಒಂದು ವಾರಗಳ ಕಾಲ ಜಿಲ್ಲೆಯಾದ್ಯಂತ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಸಭಾ ಕಾರ್ಯ ಕ್ರಮ ದಲ್ಲಿ ಮುಖ್ಯ ಅತಿಥಿ ಗಳಾಗಿ ಮಾತ ನಾಡಿದ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪ ನಿರ್ದೇ ಶಕ ರಾದ ಶಕುಂ ತಳಾ ಅವರು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಾಗೂ ಆರೋಗ್ಯ ಇಲಾಖೆ ಒಟ್ಟಾಗಿ ಸ್ತ್ರೀ ಯರ ಬಗ್ಗೆ ಹೆಚ್ಚಿನ ಅಸ್ಥೆ ವಹಿಸು ವುದ ರಿಂದ ಉತ್ತಮ ಸಮಾಜ ನಿರ್ಮಾಣ ವಾಗ ಲಿದೆ ಎಂದರು. ನಮ್ಮ ಜಿಲ್ಲೆಯಲ್ಲಿ ಅತೀ ಹೆಚ್ಚು ಮೆಡಿಕಲ್ ಕಾಲೇಜುಗಳಿವೆ. ಅತ್ಯುತ್ತಮ ವೈದ್ಯಕೀಯ ಸೌಲಭ್ಯಗಳಿವೆ ಎಂದರು. ಇಲಾಖೆ ಜಾರಿಗೆ ತಂದಿರುವ ಬಾಲಸಂಜೀವಿನಿ ಯೋಜನೆಯ ಪ್ರಯೋಜನವನ್ನು ದಕ್ಷಿಣ ಕನ್ನಡ, ಉಡುಪಿ ಮತ್ತು ಚಿಕ್ಕಮಗಳೂರಿನ ವಿದ್ಯಾಥರ್ಿಗಳು ಪಡೆದಿದ್ದು ಅಪೌಷ್ಠಿಕತೆಯಿಂದ ನರಳುತ್ತಿರುವ ಮಕ್ಕಳಿಗೆ ಇದು ಬಹಳಷ್ಟು ನೆರವಾಗಿದೆ ಎಂದರು.
ಯೆನಪೋಯ ವಿಶ್ವವಿದ್ಯಾನಿಲಯದ ರಿಜಿಸ್ಟ್ರಾರ್ ಕೆ. ಜನಾರ್ಧನ್ ಅವರು ಸಭಾ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದರು. ಪ್ರಾಸ್ತಾವಿಕ ಮಾತುಗಳನ್ನಾಡಿದ ಎಫ್ ಎನ್ ಬಿಯ ಎನ್ ಶ್ರೀನಿವಾಸ್ ಅವರು, ವಿಶ್ವದಲ್ಲಿ ವಾರ್ಷಿಕ ಸರಾಸರಿ 1.4 ಮಿಲಿಯನ್ ಮಕ್ಕಳು ಹುಟ್ಟಿದ ಒಂದು ತಿಂಗಳೊಳಗೆ ವಿವಿಧ ಕಾರಣಗಳಿಂದ ಸಾಯುತ್ತಾರೆ. ಮಕ್ಕಳಿಗೆ ಸರಿಯಾಗಿ ಅಮ್ಮಂದಿರು ಎದೆಹಾಲುಣಿಸಿದರೆ ಇವರಲ್ಲಿ ಶೇ. 22 ರಷ್ಟು ಮಕ್ಕಳ ಮರಣ ತಡೆಯುವುದು ಸಾಧ್ಯ ಎಂದರು. ಹುಟ್ಟಿದ 6 ತಿಂಗಳು ಮಗುವಿಗೆ ಹಾಲುಣಿಸುವುದರಿಂದ ಮಕ್ಕಳ ಸಾವನ್ನು ಪರಿಣಾಮಕಾರಿಯಾಗಿ ತಡೆಗಟ್ಟಲು ಸಾಧ್ಯ ಎಂದರು. ಎದೆ ಹಾಲುಣಿಸುವಿಕೆಯಿಂದಾಗುವ ಅನುಕೂಲಗಳನ್ನು ವಿವರಿಸಿದರು. ಯೆನಪೋಯ ಮಕ್ಕಳ ವಿಭಾಗದ ಮುಖ್ಯಸ್ಥರಾದ ಡಾ ಪ್ರಕಾಶ್ ಸಲ್ಡಾನ ಅವರು ಸ್ವಾಗತಿಸಿದರು.
ಸಭಾ ಕಾರ್ಯಕ್ರಮದ ಬಳಿಕ ವೈದ್ಯರುಗಳಿಂದ ತಾಂತ್ರಿಕ ಗೋಷ್ಠಿ ನಡೆಯಿತು. ದಕ್ಷಿಣ ಕನ್ನಡ, ಉಡುಪಿ ಮತ್ತು ಚಿಕ್ಕಮಗಳೂರಿನ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿಗಳು, ಸಿಡಿಪಿಒಗಳು ಗೋಷ್ಠಿಗಳಲ್ಲಿ ಉಪಸ್ಥಿತರಿದ್ದರು.