Thursday, August 4, 2011

ನೂತನ ಸಿಎಂ ಸದಾನಂದ ಗೌಡ ಪ್ರಮಾಣ ವಚನ ಸ್ವೀಕಾರ

ಮಂಗಳೂರು,ಆಗಸ್ಟ್.04:ಉಡುಪಿ ಮತ್ತು ಚಿಕ್ಕಮಗಳೂರು ಲೋಕಸಭಾ ಸದಸ್ಯರೂ,
ಸುಳ್ಯ ಮೂಲದ ವರೂ ಆದ ದೇವರ ಗುಂಡ ವೆಂಕಪ್ಪ ಸದಾ ನಂದ ಗೌಡ ರಾಜ್ಯದ 26ನೇ ಮುಖ್ಯ ಮಂತ್ರಿ ಯಾಗಿ ಇಂದು ಪ್ರಮಾಣ ವಚನ ಸ್ವೀಕ ರಿಸಿ ದರು.ಬೆಂಗ ಳೂರಿನ ರಾಜ ಭವನ ದ ಗಾಜಿನ ಮನೆ ಯಲ್ಲಿ ನಡೆದ ವಿಶೇಷ ಸಮಾ ರಂಭ ದಲ್ಲಿ ಗೌರ ವ್ವನಿತ ರಾಜ್ಯ ಪಾಲ ಹಂಸ ರಾಜ್ ಭಾರ ದ್ವಾಜ್ ಅವರು ನೂತನ ಮುಖ್ಯ ಮಂತ್ರಿಗೆ ಅಧಿ ಕಾರ ಪದ ಹಾಗೂ ಗೌಪ್ಯತಾ ಪ್ರಮಾಣ ವಚನ ಬೋಧಿ ಸಿದರು.ಸದಾ ನಂದ ಗೌಡ ಅವರು ದೇವರ ಹೆಸರಿ ನಲ್ಲಿ ಪ್ರಮಾಣ ವಚನ ಸ್ವೀಕಾರ ಮಾಡಿದರು. ಈ ಸಂದರ್ಭ ದಲ್ಲಿ ನಿರ್ಗ ಮಿತ ಮುಖ್ಯ ಮಂತ್ರಿ ಬಿ. ಎಸ್. ಯಡಿ ಯೂರಪ್ಪ, ನಿಕಟ ಪೂರ್ವ ಸರ್ಕಾ ರದಲ್ಲಿ ಸಚಿವ ರಾಗಿದ್ದ ಡಾ. ವಿ. ಎಸ್. ಆಚಾರ್ಯ,ಜೆ.ಕೃಷ್ಣ ಪಾಲೆಮಾರ್, ಎಸ್. ಸುರೇಶ್ ಕುಮಾರ್, ಬಸವರಾಜ್ ಬೊಮ್ಮಾಯಿ, ಎಂ. ಪಿ. ರೇಣುಕಾಚಾರ್ಯ, ವಿ. ಸೋಮಣ್ಣ, ಕು. ಶೋಭಾ ಕರಂದ್ಲಾಜೆ,ಮುರುಗೇಶ್ ಆರ್. ನಿರಾಣಿ,ಬಿಜೆಪಿ ರಾಜ್ಯಾಧ್ಯಕ್ಷ ಕೆ. ಎಸ್. ಈಶ್ವರಪ್ಪ, ಲೋಕಸಭಾ ಸದಸ್ಯ ಅನಂತಕುಮಾರ್.ಶಾಸಕರಾದ ಎನ್. ಯೋಗೀಶ್ ಭಟ್,ವಿಧಾನ ಪರಿಷತ್ ಸದಸ್ಯ ಕ್ಯಾಪ್ಟನ್ ಗಣೇಶ್ ಕಾರ್ಣಿಕ್, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಎಸ್. ವಿ. ರಂಗನಾಥ್,ಡಿ.ವಿ. ಸದಾನಂದ ಗೌಡರ ಪತ್ನಿ ಡಾಟಿ ಸದಾನಂದ ಗೌಡ, ಕುಟುಂಬದವರು ಸೇರಿದಂತೆ ಹಲವಾರು ಗಣ್ಯರು ಈ ಪ್ರಮಾಣ ವಚನ ಸಮಾರಂಭದಲ್ಲಿ ಹಾಜರಿದ್ದು,ನೂತನ ಮುಖ್ಯಮಂತ್ರಿಗಳಿಗೆ ಶುಭ ಹಾರೈಸಿದರು.