
ರೈಲ್ವೆ ಇಲಾಖೆಯ ವಿಭಾಗೀಯ ವ್ಯವಸ್ಥಾಪಕರಾದ ಎಸ್.ಕೆ.ರೈನಾ ಮಾತನಾಡಿ ಸ್ವಾಮಿ ವಿವೇಕಾನಂದರ ಜೀವನಕ್ಕೆ ಸಂಬಂಧಿಸಿದ ಅಪೂರ್ವ ಛಾಯಾಚಿತ್ರಗಳನ್ನು ಹೊತ್ತ ಸಂಚಾರಿ ವಸ್ತು ಪ್ರದರ್ಶನ ರೈಲು ಈಗಾಗಲೇ 8 ರಾಜ್ಯಗಳಲ್ಲಿ ಸಂಚರಿಸಿ,80ಕ್ಕೂ ಹೆಚ್ಚು ರೈಲು ನಿಲ್ದಾಣಗಳಲ್ಲಿ ಪ್ರದರ್ಶನವನ್ನು ಏರ್ಪಡಿಸಿ ,ಸುಮಾರು 6 ಲಕ್ಷಕ್ಕೂ ಹೆಚ್ಚು ಜನರು ವೀಕ್ಷಿಸಿದ್ದಾರೆ. ಒಟ್ಟು 240 ರೈಲು ನಿಲ್ದಾಣಗಳಲ್ಲಿ ಸಂಚಾರಿ ವಸ್ತು ಪ್ರದರ್ಶನ ರೈಲು ತೆರಳಲಿದ್ದು ಜನರಿಗೆ ವಿಕವೇಕಾನಂದರ ಮಾಹಿತಿ ಒದಗಿಸಲಿದೆಯೆಂದರು.
ಮಂಗಳೂರು ರಾಮಕೃಷ್ಣ ಆಶ್ರಮದ ಸ್ವಾಮಿ ಜಿತಕಾಮಾನಂದ,ಸಾಮಾಜಿಕ ಕಾರ್ಯಕರ್ತ ಡಾ.ಕಲ್ಲಡ್ಕ ಪ್ರಭಾಕರ ಭಟ್, ಪಶ್ಚಿಮ ವಲಯ ಐಜಿಪಿ ಅಲೋಕ್ ಮೋಹನ್ ಮುಂತಾದವರು ಈ ಸಂದರ್ಭದಲ್ಲಿ ಮಾತನಾಡಿದರು.
ಇಂದಿನಿಂದ 3 ದಿನಗಳ ಕಾಲ (ಆಗಸ್ಟ್ 5,6,7 ರಂದು)ಇಲ್ಲಿನ ಕೇಂದ್ರ ರೈಲು ನಿಲ್ದಾಣದಲ್ಲಿ ವಿವೇಕ ವಸ್ತುಪ್ರದರ್ಶನ ಸಾರ್ವಜನಿಕರ ವೀಕ್ಷಣೆಗೆ ಲಭ್ಯವಿರುತ್ತದೆ.