Monday, August 22, 2011

ರಾಸುಗಳಿಗೆ ಕಾಲುಬಾಯಿ ಜ್ವರ ನಿಯಂತ್ರಣಕ್ಕೆ ಲಸಿಕೆ ನೀಡುವ ಕಾರ್ಯಕ್ರಮ

ಮಂಗಳೂರು,ಆಗಸ್ಟ್.22 :ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಟ್ಟು 3,96,609 ದನ,15,119 ಎಮ್ಮೆಗಳಿಗೆ ಒಟ್ಟು 4,11,728 ರಾಸುಗಳಿಗೆ ಕಾಲುಬಾಯಿ ಜ್ವರ ನಿಯಂತ್ರಣಕ್ಕೆ ಲಸಿಕಾ ಕಾರ್ಯಕ್ರಮವನ್ನು ಆಗಸ್ಟ್ 1,2011 ರಿಂದ ಸೆಪ್ಟೆಂಬರ್ 2011 ರವರೆಗೆ ಪಶುಪಾಲನಾ ಇಲಾಖೆ ಮತ್ತು ದಕ್ಷಿಣಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ಸಹಭಾಗಿತ್ವದಲ್ಲಿ ಗ್ರಾಮವಾರು ನಿರ್ವಹಿಸಲು ಆಯೋಜಿಸಲಾಗಿದೆ.ಈ ನಿಟ್ಟಿನಲ್ಲಿ ಜಿಲ್ಲೆಯ 5 ತಾಲೂಕುಗಳಲ್ಲಿ ಹಾಲು ಉತ್ಪಾದಕರ ಸಹಕಾರಿ ಸಂಘಗಳ ಅಧ್ಯಕ್ಷರು,ಕಾರ್ಯದರ್ಶಿಗಳು,ಪಶು ವೈದ್ಯರುಗಳಿಗೆ ತಾಂತ್ರಿಕ ಅರಿವು ಕಾರ್ಯಾಗಾರವನ್ನು ನಡೆಸಲಾಗಿದೆ. ವೈರಾಣುಗಳಿಂದ ಬರುವ ಕಾಲುಬಾಯಿ ಜ್ವರ ರೋಗವನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಲು ಏಕಕಾಲಕ್ಕೆ ರಾಜ್ಯದಾದ್ಯಂತ ಲಸಿಕಾ ಕಾರ್ಯಕ್ರಮವನ್ನು ಏರ್ಪಡಿಸಲಾಗಿದ್ದು,ದಕ್ಷಿಣಕನ್ನಡಜಿಲ್ಲೆಯಲ್ಲಿ ಎಲ್ಲಾ 5 ತಾಲೂಕುಗಳ ಪಶುಪಾಲನಾ ಇಲಾಖೆ ಮತ್ತು ಹಾಲು ಉತ್ಪಾದಕರ ಒಕ್ಕೂಟದ ಸಹಭಾಗಿತ್ವದಲ್ಲಿ ಈ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ.
ದಕ್ಷಿಣಕನ್ನಡ ಜಿಲ್ಲೆಯಲ್ಲಿ 1-8-11 ರಿಂದ 19-8-11 ರ ವರೆಗೆ ಒಟ್ಟು 1,22,572 ಹಸು/ಎಮ್ಮೆಗಳಿಗೆ ಲಸಿಕೆ ಹಾಕಿ ಶೇಕಡಾ 87.14 ಪ್ರಗತಿ ಸಾಧಿಸಲಾಗಿದೆ. ದಿನಾಂಕ 30-9-11 ರ ವರೆಗ ಈ ಲಸಿಕಾ ಕಾರ್ಯಕ್ರಮವು ನಡೆಯಲಿದ್ದು,ಜಾನುವಾರು ಮಾಲೀಕರು ಹತ್ತಿರದ ಪಶು ವೈದ್ಯಕೀಯ ಸಂಸ್ಥೆ /ಹಾಲು ಉತ್ಪಾದಕರ ಸಹಕಾರಿ ಸಂಘಗಳ ಅಧಿಕಾರಿ/ಸಿಬ್ಬಂದಿ ವರ್ಗದವರನ್ನು ಸಂಪರ್ಕಿಸಬಹುದಾಗಿದೆ.

ಹೆಚ್ಚಿನ ಮಾಹಿತಿಗೆ ಈ ಕೆಳಕಂಡ ನೋಡಲ್ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳನ್ನು ಸಂಪರ್ಕಿಸಬಹುದಾಗಿದೆ.

ಪಶುಪಾಲನಾ ಇಲಾಖೆ ಸಹಾಯಕ ನಿರ್ದೇಶಕರು :- ಡಾ.ಎ.ಗುರುಮೂರ್ತಿ,ಜಿಲ್ಲಾ ನೋಡಲ್ ಅಧಿಕಾರಿ ದೂ.ಸಂ.0824-2492322/9845666743,ಡಾಕೆ.ಅಶೋಕ್ ಕುಮಾರ್ 0824-2492369/9448124601, ಡಾ ಸಿ.ನಾಗರಾಜ ಬಂಟ್ವಾಳ 08255-232512/9980322369,ಡಾ ಹೆಚ್.ಸುಧಾಕರ ಶೆಟ್ಟಿ ಬೆಳ್ತಂಗಡಿ 08256-232067/9448329065, ಡಾ ಕೆ.ರಾಮಚಂದ್ರ ಶೆಟ್ಟಿ ಪುತ್ತೂರು 08251-230664/9448869129,ಡಾ ಎಂ.ಎನ್. ರಾಜಣ್ಣ ಸುಳ್ಯ 08257-230412/9448725696.
ದಕ್ಷಿಣಕನ್ನಡ ಹಾಲು ಒಕ್ಕೂಟ ಕ್ಯಾಂಪ್ ಆಫೀಸರ್: ಡಾ ಚಂದ್ರಶೇಖರ ಭಟ್ ಮೂಡಬಿದ್ರೆ 08258-261002/9448869034, ಡಾ ಮಾಧವ ಐತಾಳ್ ಬಂಟ್ವಾಳ 08255-234802/9480157384, ಡಾ ಡಿ.ಪಿ.ಶ್ರೀನಿವಾಸ ಬೆಳ್ತಂಗಡಿ 08256-234298/9448203159,ಡಾ ಸತೀಶ್ ರಾವ್ ಪುತ್ತೂರು 08251-230891/9448260467, ಡಾ ದಿನೇಶ್ ಸರಳಾಯ ಉಪ್ಪಿನಂಗಡಿ 08251-252249/9448724672 ಡಾ ರಾಜಾ ಸುಳ್ಯ 08257-232191/9902332855.ಜಾನುವಾರು ಮಾಲೀಕರು ಇವರುಗಳ ದೂರವಾಣಿ ಯನು ಸಂಪರ್ಕಿಸಿ ತಮ್ಮ ರಾಸುಗಳಿಗೆ ಕಾಲುಬಾಯಿ ಜ್ವರ ಲಸಿಕೆಗಳನ್ನು ಹಾಕಿಸಿಕೊಳ್ಳಬಹುದಾಗಿದೆ.