Tuesday, October 11, 2011

ಜನಸ್ನೇಹಿ ಠಾಣೆಯಾಗಲಿ:ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ

ಮಂಗಳೂರು,ಅಕ್ಟೋಬರ್.11: ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ
ಈಶ್ವರ ಮಂಗ ಲದಲ್ಲಿ ನೂತನ ವಾಗಿ ನಿರ್ಮಿ ಸಲಾದ ಪೋಲಿಸ್ ಹೊರ ಠಾಣೆ ಯನ್ನು ಮುಖ್ಯ ಮಂತ್ರಿ ಡಿ.ವಿ.ಸದಾ ನಂದ ಗೌಡ ಅವರು ಇಂದು ಉದ್ಘಾ ಟಿಸಿ ದರು.ಈಶ್ವರ ಮಂಗಲ ದಲ್ಲಿ ಪೋಲಿಸ್ ಹೊರ ಠಾಣೆ ಬೇ ಕೆಂಬ ಸ್ಥಳಿಯ ಜನ ತೆಯ ಬೇಡಿಕೆ ಯನ್ನು ಮನ್ನಿಸಿ ಕೇವಲ ಎರಡು ದಿನ ಗಳಲ್ಲಿ ಆಡಳಿ ತಾತ್ಮಕ ಮಂಜೂ ರತಿ ಯನ್ನು ನೀಡ ಲಾಯಿತು ಎಂದು ಈ ಸಂದ ರ್ಭದಲ್ಲಿ ನುಡಿ ದರು. " ಈ ಠಾಣೆ ಜನಸ್ನೇಹಿ ಪೋಲಿಸ್ ಠಾಣೆಯಾಗಲಿ.ಇಲ್ಲಿ ಯಾವುದೇ ಕ್ರಿಮಿನಲ್ ಕೇಸುಗಳು ದಾಖಲಾಗದೆ,ಜನರ ಮನಸ್ಸಿನ ನೋವುಗಳನ್ನು ಪರಿಹರಿಸುವ ಠಾಣೆಯಾಗಲಿ " ಎಂದು ಠಾಣಾ ಪುಸ್ತಕದಲ್ಲಿ ಶುಭ ಹಾರೈಕೆಯ ನುಡಿಗಳನ್ನು ಬರೆದು ನೂತನ ಠಾಣೆಗೆ ಶುಭ ಹಾರೈಸಿದರು. ಜಿಲ್ಲಾ ಉಸ್ತುವರಿ ಸಚಿವರಾದ ಕೃಷ್ಣ ಜೆ.ಪಾಲೆಮಾರ್, ಸಂಸದ ನಳಿನ್ ಕುಮಾರ್ ಕಟೀಲ್,ರಾಜ್ಯ ಪೋಲಿಸ್ ಮಹಾ ನಿರ್ದೇಶಕ ನೀಲಂ ಅಚ್ಯುತ ರಾವ್,ಸ್ಥಳಿಯ ಶಾಸಕಿ ಮಲ್ಲಿಕಾ ಪ್ರಸಾದ್,ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಶೈಲಜಾ ಭಟ್,ಪಶ್ಚಿಮ ವಲಯ ಐಜಿಪಿ ಅಲೋಕ್ ಮೋಹನ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.