ಅಕ್ಟೋಬರ್ 2ರಂದು ಉರ್ವ ಕಮ್ಯುನಿಟಿ ಹಾಲ್, ನಗರಪಾಲಿಕೆ ವಾರ್ಡ್ ಆಫೀಸ್ ಕಾಟಿಪಳ್ಳ, ನಗರಪಾಲಿಕೆ ವಾಣಿಜ್ಯ ಕಟ್ಟಡ, ಕಾರ್ನಾಡು ಸದಾಶಿವ ರಾವ್ ಮೆಮೋರಿಯಲ್ ಟ್ರಸ್ಟ್ ಬಾವುಟ ಗುಡ್ಡೆ, ಜಿಲ್ಲಾಧಿಕಾರಿಗಳ ಕಚೇರಿ ವ್ಯಾಪ್ತಿಯಲ್ಲಿರುವ ರೆಡ್ ಕ್ರಾಸ್ ಕಟ್ಟಡದಲ್ಲಿ ಕೇಂದ್ರಗಳಿದ್ದು ಸಾರ್ವಜನಿಕರು ತಮ್ಮ ನಿವಾಸವನ್ನು ದೃಢೀಕರಿಸುವ ಫೋಟೋ ಐಡಿಗಳೊಂದಿಗೆ ಆಧಾರ್ ನೋಂದಣಿ ಮಾಡಿಸಬಹುದಾಗಿದೆ. ಭವಿಷ್ಯದಲ್ಲಿ ಸರ್ಕಾರದ ಸೌಲಭ್ಯಗಳನ್ನು ಪಡೆಯಲು ಆಧಾರ್ ಕಾಡ್ರ್ ನ್ನು ಕಡ್ಡಾಯಗೊಳಿಸಲಾಗುವುದು. ಹಾಗಾಗಿ ಈಗಿರುವ ಸೌಲಭ್ಯಗಳ ಸದುಪಯೋಗ ಪಡೆಯಬೇಕೆಂದೂ ಜಿಲ್ಲಾಧಿಕಾರಿಗಳು ಹೇಳಿದ್ದಾರೆ.ಸರ್ಕಾರಿ ನೌಕರರು ತಕ್ಷಣವೇ ಆಧಾರ್ ಕಾರ್ಡ್ ಮಾಡಿಸಿಕೊಳ್ಳಬೇಕೆಂದು ಜಿಲ್ಲಾಧಿಕಾರಿಗಳು ಸೂಚಿಸಿದ್ದಾರೆ.