Tuesday, March 22, 2011

'ಪತ್ರಿಕೋದ್ಯಮಕ್ಕೆ ವಿಶ್ವಾಸಾರ್ಹತೆ ಬಹುಮುಖ್ಯ'

ಮಂಗಳೂರು,ಮಾರ್ಚ್.22: ಪ್ರಜಾಪ್ರಭುತ್ವ ವ್ಯವಸ್ಥೆಯ ಪ್ರಮುಖ ಅಂಗವೆಂದು ಪರಿಗಣಿಸಲ್ಪಟ್ಟಿರುವ ಪತ್ರಿಕೋದ್ಯಮ ಇಂದು ಬಿಕ್ಕಟ್ಟಿನ ಸನ್ನಿವೇಶವನ್ನು ಎದುರಿಸುತ್ತಿದ್ದು, ಪತ್ರಿಕೋದ್ಯಮದಲ್ಲಿ ವಿಶ್ವಾಸಾರ್ಹತೆಯನ್ನು ಮರುಸ್ಥಾಪಿಸುವುದು ಪ್ರಮುಖ ಸವಾಲಾಗಿದೆ ಎಂದು ಪತ್ರಕರ್ತ ದಿನೇಶ್ ಅಮೀನ್ ಮಟ್ಟು ಅಭಿಪ್ರಾಯಪಟ್ಟರು.

ಮಂಗ ಳೂರು ವಿಶ್ವ ದ್ಯಾನಿ ಲಯದ ಸಮೂಹ ಸಂವ ಹನ ಹಾಗೂ ಪತ್ರಿ ಕೋದ್ಯಮ ವಿ ಭಾಗವು ನವ ದೆಹಲಿ ಯ ಯುಜಿಸಿ ಸ್ಯಾಪ್ ಅನು ದಾನಿತ ಆಶ್ರಯ ದಲ್ಲಿ ಮಂಗ ಳ ಗಂಗೋ ತ್ರಿಯ ಸೆನೆಟ್ ಹಾಲ್ ನಲ್ಲಿ ನಿಂದು ಆ ರಂಭ ಗೊಂಡ `ಮಾಧ್ಯಮ, ರಾಜ ಕೀಯ ಹಾಗೂ ಸಂಸ್ಕೃತಿ' ಕುರಿತ ವಿಚಾರ ಸಂಕಿರಣದಲ್ಲಿ ಅವರು ಆಶಯ ಭಾಷಣ ಮಾಡುತ್ತಿದ್ದರು.ವೃತ್ತಿ ಉದ್ಯಮವಾದಾಗ, ಆದ್ಯತೆಗಳು ಬದಲಾದಾಗ, ಲಾಭವೇ ಅಲ್ಲಿ ಮುಖ್ಯವಾಗುತ್ತದೆ. ಉತ್ಪಾದನೆ ಬೆಲೆಗಿಂತ ಅತ್ಯಂತ ಕಡಿಮೆ ಬೆಲೆಗೆ ಸಿಗುವ ವಸ್ತುವಿದ್ದಿದ್ದರೆ ಅದು ಪತ್ರಿಕೆ ಮಾತ್ರ. ಪತ್ರಿಕೆಯನ್ನು 3 ರೂ.ಗೆ ಖರೀದಿಸುವ ಓದುಗನಿಗಿಂತಲೂ ಅದರ ಉತ್ಪಾದನೆಯ ವೆಚ್ಚದ ಉಳಿದ ಭಾಗವನ್ನು ಭರಿಸುವ ಕಂಪೆನಿಗಳ ಹಿತ ಕಾಯುವುದು ಮುಖ್ಯವಾಗುತ್ತದೆ. ಸಕಾರಾತ್ಮಕ, ಜನಪರ ಎಂದು ಹೇಳುವ ಸುದ್ದಿಗಳಿಗೆ ಆದ್ಯತೆ ಇರುವುದಿಲ್ಲ.ಪತ್ರಿಕೆಯಲ್ಲಿ ಓದುಗರ ಪಾಲ್ಗೊಳ್ಳುವಿಕೆಯ ಪ್ರಾಮ್ಯುಖತೆಯಿಂದ ಸ್ವಲ್ಪ ಬದಲಾವಣೆ ಸಾಧ್ಯವಿದೆ ಎಂದ ಅವರು, ಇತರ ವೃತ್ತಿಗಳಿಂದ ಭಿನ್ನ ಪತ್ರಿಕೋದ್ಯಮ. ಇಲ್ಲಿ ಪತ್ರಕರ್ತ ತಾನು ಹೇಳುವುದನ್ನು ಪಾಲಿಸಬೇಕಾಗುತ್ತದೆ; ಇಲ್ಲದಿದ್ದರೆ ಪರಿಣಾಮ ಶೂನ್ಯ ಎಂದು ಅಭಿಪ್ರಾಯಪಟ್ಟರು.ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದ ನಿವೃತ್ತ ನ್ಯಾಯಾಧೀಶ ಎಮ್.ಎಫ್. ಸಲ್ದಾನಾ ಅವರು, ನ್ಯಾಯಾಂಗ ಮತ್ತು ಪತ್ರಿಕೋದ್ಯಮದಲ್ಲಿ ತಮ್ಮ ಅನುಭವಗಳನ್ನು ಹಂಚಿಕೊಂಡರು. ಬದಲಾವಣೆ ಸುಲಭ ಸಾಧ್ಯವಲ್ಲ; ಆದರೆ ನಿರಂತರವಾಗಿ ಒಳಿತನ್ನು ಪ್ರತಿಪಾದಿಸುವುದರಿಂದ ನಿಧಾನವಾಗಿಯಾದರೂ ಸಾಮಾಜಿಕ ಬದಲಾವಣೆ ಸಾಧ್ಯ ಎಂದರು.
ಸಮಾರಂಭದ ಅಧ್ಯಕ್ಷತೆಯನ್ನು ಕುಲಪತಿ ಪ್ರೊ.ಟಿ.ಸಿ.ಶಿವಶಂಕರಮೂರ್ತಿ ವಹಿಸಿದ್ದರು. ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಮತ್ತು ಕಾರ್ಯಕ್ರಮದ ಸಂಯೋಜಕ ಪ್ರೊ. ಜಿ.ಪಿ. ಶಿವರಾಂ ಸ್ವಾಗತಿಸಿದರು. ಡಾ. ವಹೀದಾ ಸುಲ್ತಾನ್ ವಂದಿಸಿದರು