Thursday, March 17, 2011

ನಾಲ್ಕು ಸ್ಥಾಯಿ ಸಮಿತಿಗಳಿಗೆ ಸದಸ್ಯರ ಆಯ್ಕೆ

ಮಂಗಳೂರು,ಮಾರ್ಚ್.17: ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ನೂತನ ಸ್ಥಾಯಿ ಸಮಿತಿಗಳಿಗೆ ಗುರುವಾರ ನಡೆದ ಸದಸ್ಯರ ಆಯ್ಕೆ ಪ್ರಕ್ರಿಯೆಯಲ್ಲಿ ನಾಲ್ಕು ಸ್ಥಾಯಿ ಸಮಿತಿಗಳಿಗಷ್ಟೆ ಸದಸ್ಯರ ಆಯ್ಕೆ ನಡೆಯಿತು.
ಜಿ.ಪಂ. ಅಧ್ಯಕ್ಷೆ ಶೈಲಜಾ ಭಟ್ ಅವರ ಅಧ್ಯಕ್ಷತೆಯಲ್ಲಿ ಜಿಲ್ಲಾ ಪಂಚಾಯತ್ ಪ್ರಥಮ ವಿಶೇಷ ಸಾಮಾನ್ಯ ಸಭೆಯಲ್ಲಿ ಈ ಪ್ರಕ್ರೀಯೆ ನಡೆಯಿತು.
ಜಿ.ಪಂ.ಸ್ಥಾಯಿ ಸಮಿತಿಗೆ ಆಯ್ಕೆ:
1.ಸಾಮಾನ್ಯ ಸ್ಥಾಯಿ ಸಮಿತಿ
ಧನಲಕ್ಷ್ಮೀ ಜನಾರ್ಧನ(ಅಧ್ಯಕ್ಷೆ), ಫಕೀರ ಎಂ., ಸಂಪತ್ ಕುಮಾರ್ ರೈ, ಸುನಿತಾ ಸುಚರಿತ ಶೆಟ್ಟಿ, ನಳಿನಿ ಶೆಟ್ಟಿ, ಮಮತಾ ಗಟ್ಟಿ, ದೇವರಾಜ್ ಕೆ.ಎಸ್.(ಸದಸ್ಯರು).
2.ಹಣಕಾಸು ಮತ್ತು ಲೆಕ್ಕ ಪರಿಶೋಧನೆ ಮತ್ತು ಯೋಜನಾ ಸಮಿತಿ
ಶೈಲಜಾ ಭಟ್(ಅಧ್ಯಕ್ಷೆ), ಆಶಾ ತಿಮ್ಮಪ್ಪ ಗೌಡ, ದೇವಕಿ ಸಂಜೀವ ಗೌಡ, ಆರ್.ಚೆನ್ನಪ್ಪ ಕೋಟ್ಯಾನ್, ರಿತೇಶ್ ಶೆಟ್ಟಿ, ಪ್ರಕಾಶ್, ಸರಸ್ವತಿ ಕಾಮತ್(ಸದಸ್ಯರು).
3.ಸಾಮಾಜಿಕ ನ್ಯಾಯ ಸಮಿತಿ
ಜನಾರ್ದನ ಗೌಡ, ಕೆ.ಮೀನಾಕ್ಷಿ ಮಂಜುನಾಥ್, ಬಾಲಕೃಷ್ಣ ಸುವರ್ಣ, ಕೆ.ಕೊರಗಪ್ಪ ನಾಯ್ಕ್, ಸಿ.ಕೆ.ಚಂದ್ರಕಲಾ, ಎನ್.ಎಸ್.ಕರೀಂ, ಮೆಲ್ವಿನ್ ಡೋಜ.
4.ಶಿಕ್ಷಣ ಮತ್ತು ಆರೋಗ್ಯ ಸಮಿತಿ
ಈಶ್ವರ್ ಕಟೀಲ್, ಸತೀಶ್ ಕುಂಪಲ, ಸಾವಿತ್ರಿ ಎಚ್.ಎಸ್., ಜಯಶ್ರೀ, ಗಿರಿಜ, ಎಂ.ಎಸ್.ಮಹಮ್ಮದ್, ಯಶವಂತಿ ಆಳ್ವ.
ಸಾಮಾನ್ಯ ಸ್ಥಾಯಿ ಸಮಿತಿ, ಹಣಕಾಸು ಮತ್ತು ಲೆಕ್ಕ ಪರಿ ಶೋಧನೆ ಮತ್ತು ಯೋಜನಾ ಸಮಿತಿ, ಸಾಮಾಜಿಕ ನ್ಯಾಯ ಸಮಿತಿ ಮತ್ತು ಶಿಕ್ಷಣ ಮತ್ತು ಆರೋಗ್ಯ ಸಮಿತಿಗೆ ಸದಸ್ಯರ ಆಯ್ಕೆ ಸುಲಲಿತವಾಗಿ ನಡೆಯಿತು. ಕೃಷಿ ಮತ್ತು ಕೈಗಾರಿಕಾ ಸಮಿತಿಗೆ ಆಯ್ಕೆಯಲ್ಲಿ ಗೊಂದಲ ನಡೆಯಿತು. ಅಧ್ಯಕ್ಷೆ ಶೈಲಜಾ ಭಟ್ ಸಭೆಯನ್ನು ಅರ್ಧ ತಾಸು ಮುಂದೂಡಿದರು. ಈ ನಡುವೆ ಪಕ್ಷದ ಇತರ ಸದಸ್ಯರೊಂದಿಗೆ ತಮ್ಮ ಕಚೇರಿಯಲ್ಲಿ ಸಭೆ ನಡೆಸಿದ ಶೈಲಜಾ ಭಟ್ ಸಮಸ್ಯೆ ಬಗೆಹರಿಸಲು ಯತ್ನಿಸಿದರು.ಅಪರಾಹ್ನ 3.20ಕ್ಕೆ ಮತ್ತೆ ಸಭೆ ಆರಂಭಗೊಂಡಿತು. ಆದರೆ ಸರಿಯಾದ ನಿರ್ಣಯ ಕೈಗೊಳ್ಳಲು ಅಸಾಧ್ಯವಾದ ಕಾರಣ ಅವರು ಸಭೆಯನ್ನು ಮುಂದೂಡಿ ಶೀಘ್ರದಲ್ಲಿ ಸಭೆ ನಡೆಸಿ ಸಮಸ್ಯೆ ಇತ್ಯರ್ಥಪಡಿಸುವುದಾಗಿ ತಿಳಿಸಿದರು. ಇದರಿಂದ ಕೃಷಿ ಮತ್ತು ಕೈಗಾರಿಕಾ ಸಮಿತಿಯ ಆಯ್ಕೆ ಪ್ರಕ್ರಿಯೆ ಗೊಂದಲದಲ್ಲೇ ಕೊನೆಗೊಂಡಿತು.