ಮಂಗಳೂರು,ಮಾರ್ಚ್.31: ಜಿಲ್ಲೆಯಾದ್ಯಂತ ಸರಕಾರಿ ಭೂಮಿಯ ಅತಿಕ್ರಮಣವನ್ನು
ತೆರವುಗೊಳಿಸುವ ಕಾರ್ಯ ನಡೆಸುತ್ತಿರುವ ಜಿಲ್ಲಾ ಡಳಿತ ಮಂಗ ಳೂರು ನಗರ ದಲ್ಲೂ ಅತಿ ಕ್ರಮಣ ಗಳನ್ನು ತೆರವು ಮಾಡುವ ಕಾರ್ಯಾ ಚರಣೆ ನಡೆಸಿತು.ನಗರದ ಸರ್ಕಿಟ್ ಹೌಸ್ ಸಮೀಪದ ರಾಷ್ಟ್ರೀಯ ಹೆದ್ದಾರಿ 66 ರ ಪಕ್ಕದಲ್ಲಿ ಕಳೆದ ಸುಮಾರು 20 ವರ್ಷ ಗಳಿಂದ ಸರಕಾರಿ ಭೂಮಿಯನ್ನು ಅತಿಕ್ರಮಿಸಿ ನಡೆಸ ಲಾಗುತ್ತಿದ್ದ ಪೆಟ್ರೋಲ್ ಪಂಪನ್ನು ಜಿಲ್ಲಾಡಳಿತ ತೆರವುಗೊಳಿಸಿತು. ತೆರವು ಕಾರ್ಯಾಚರಣೆಯಲ್ಲಿ ಮಂಗಳೂರು ಉಪ ವಿಭಾಗದ ಆಯುಕ್ತರಾದ ಪ್ರಭುಲಿಂಗ ಕವಳಿಕಟ್ಟಿ,ಪ್ರಭಾರ ತಹಶೀಲ್ದಾರ್ ರೋಹಿಣಿ ಸಿಂದೂರಿ ದಾಸರಿ ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳು,ಮತ್ತು ಇಂಡಿಯನ್ ಆಯಿಲ್ ಕಾರ್ಪೋರೇಷನ್ ಅಧಿಕಾರಿಗಳು ಭಾಗವಹಿಸಿದ್ದರು.