Saturday, March 19, 2011

ರಾಜ್ಯ ನೈರ್ಮಲ್ಯ ಪ್ರಶಸ್ತಿ ಪ್ರದಾನ ಸಮಾರಂಭ; ಮಾನ್ಯ ಮುಖ್ಯ ಮಂತ್ರಿಯವರ ಭಾಷಣ

ಮಂಗಳೂರು,ಮಾರ್ಚ್.19:ರಾಜ್ಯ ಮಟ್ಟದ 'ನೈರ್ಮಲ್ಯ ರತ್ನ ಪ್ರಶಸ್ತಿ' ಗೆ ಆಯ್ಕೆಯಾಗಿದ್ದ ದಕ್ಷಿಣ ಕನ್ನಡ ಜಿಲ್ಲೆಯ ಹೊಸಂಗಡಿ ಗ್ರಾಮ ಪಂಚಾಯತ್ ಗೆ ಪ್ರಶಸ್ತಿಯನ್ನು ಇಂದು ಸನ್ಮಾನ್ಯ ಮುಖ್ಯಮಂತ್ರಿಗಳು ಬೆಂಗಳೂರಿನ ವಿಧಾನಸೌಧದ ಬಾಂಕ್ವೆಟ್ ಹಾಲ್ ನಲ್ಲಿ ನಡೆದ ಸಮಾರಂಭದಲ್ಲಿ ಪ್ರದಾನ ಮಾಡಿ ಮಾತನಾಡಿದರು.
ಬ್ಯಾಂಕ್ವೆಟ್ ಹಾಲ್, ವಿಧಾನಸೌಧ.
ಬಂಧುಗಳೆ,
ಗ್ರಾಮೀಣ ಪ್ರದೇಶ ದಲ್ಲಿ ಸಂಪೂರ್ಣ ಸ್ವಚ್ಛತೆ ಸಾಧಿಸಿ ಇತರರಿಗೆ ಮಾದರಿ ಯಾಗಿರುವ ಗ್ರಾಮ ಪಂಚಾಯಿತಿ, ತಾಲ್ಲೂಕು ಪಂಚಾ ಯಿತಿ ಹಾಗೂ ಜಿಲ್ಲಾ ಪಂಚಾ ಯಿತಿ ಗಳಿಗೆ ನೈ ರ್ಮಲ್ಯ ಹೆಸರಿನ ರಾಜ್ಯ ಮಟ್ಟದ ಪ್ರಶಸ್ತಿ ಯನ್ನು ಸಂತೋಷ ದಿಂದ ನಾನು ಇಂದು ಪ್ರದಾನ ಮಾಡಿ ದ್ದೇನೆ.ರಾಜ್ಯದ ಎಲ್ಲಾ ಭಾಗಗಳ ಪ್ರತಿನಿಧಿ ಗಳಾಗಿ ಇಲ್ಲಿಗೆ ಆಗಮಿ ಸಿರುವ ಪ್ರಶಸ್ತಿ ವಿಜೇತ ಗ್ರಾಮ, ತಾಲ್ಲೂಕು ಹಾಗೂ ಜಿಲ್ಲಾ ಪಂಚಾ ಯತ್ ಗಳ ಎಲ್ಲಾ ಅಧ್ಯಕ್ಷರು, ಪದಾಧಿ ಕಾರಿ ಗಳು ಮತ್ತು ಅಧಿ ಕಾರಿ ಮಿತ್ರರಿಗೆ ನನ್ನ ತುಂಬು ಹೃದಯದ ಅಭಿ ನಂದನೆ ಗಳು.ಇಂದು ನಿಮಗೆ ಸಂದಿ ರುವ ಪ್ರಶಸ್ತಿ ನೀವು ಹಾಲಿ ಸಾಧಿ ಸಿರುವ ಸ್ವಚ್ಛತೆ ಯನ್ನು ಇನ್ನೂ ಗುಣಾತ್ಮಕವಾಗಿ ಮುಂದು ವರಿಸಿ ಕೊಂಡು ಹೋಗಲು ಹಾಗೂ ಇತರರೂ ಸಹ ನಿಮ್ಮಿಂದ ಪ್ರೇರಣೆ ಪಡೆದು ಸ್ವಚ್ಛತೆಗೆ ಆದ್ಯತೆ ನೀಡುವಂತಾಗಲಿ ಎಂದು ನಾನು ಆಶಿಸುತ್ತೇನೆ.ಸ್ವಚ್ಛತೆ ಹಾಗೂ ನೈರ್ಮ ಲ್ಯದ ಮಹತ್ವ ವನ್ನು ಅರಿತ ನಮ್ಮ ಸ ರ್ಕಾರ, ಈ ಕ್ಷೇತ್ರ ಗಳಲ್ಲಿ ಗ್ರಾ ಮೀಣ ಜನತೆ ಗೆ ಅರಿವು ಮೂಡಿಸಿ, ಉತ್ತಮ ಸಾಧನೆ ಮಾಡಿದ ವರಿಗೆ ಪ್ರೋ ತ್ಸಾಹ ನೀಡು ವ ಆಶಯ ದಿಂದ ಪ್ರಸಕ್ತ ಸಾಲಿ ನಿಂದ ಈ ನೈ ರ್ಮಲ್ಯ ಪ್ರಶಸ್ತಿ ಗಳನ್ನು ಪ್ರದಾನ ಮಾ ಡುತ್ತಿದೆ.ಪ್ರಶಸ್ತಿ ಯ ಮೊತ್ತ ವಾಗಿ ಪ್ರಥಮ ಸ್ಥಾನಕ್ಕೆ ಗ್ರಾಮ ಪಂಚಾ ಯಿತಿಗೆ 19 ಲಕ್ಷ ರೂ.ಗಳು, ತಾಲ್ಲೂಕು ಪಂಚಾ ಯಿತಿಗೆ 20 ಲಕ್ಷ ರೂ.ಗಳು ಹಾಗೂ ಜಿಲ್ಲಾ ಪಂಚಾ ಯಿತಿಗೆ 30 ಲಕ್ಷ ರೂ.ಗಳ ನಗದು ಬಹು ಮಾನದ ಜೊತೆಗೆ ಪ್ರಶಸ್ತಿ ಫಲಕ ಹಾಗೂ ಪ್ರಶಸ್ತಿ ಪತ್ರ ಗಳನ್ನು ನೀಡ ಲಾಗಿದೆ.
ಅದೇ ರೀತಿ ದ್ವಿ ತೀಯ ಹಾಗೂ ತೃತಿಯ ಸ್ಥಾನ ಗಳಿಗೂ ಆಕ ರ್ಷಕ ಪ್ರೋ ತ್ಸಾಹ ನೀಡ ಲಾಗು ತ್ತ್ತಿದೆ. ಜೊತೆಗೆ ವಿಭಾಗ ಮಟ್ಟ ದಲ್ಲಿಯೂ ಪ್ರಥಮ, ದ್ವಿ ತೀಯ ಹಾಗೂ ತೃತಿಯ ನೈ ರ್ಮಲ್ಯ ರತ್ನ ಪ್ರಶಸ್ತಿ ಪಡೆದ ಗ್ರಾಮ ಪಂಚಾ ಯಿತಿ ಗಳಿಗೆ ಅನು ಕ್ರಮ ವಾಗಿ ತಲಾ 9, 7, ಮತ್ತು 5 ಲಕ್ಷ ರೂ.ಗಳ ನಗದು ಬಹು ಮಾನ ನೀಡ ಲಾಗಿದೆ.
ನಮ್ಮ ಸರ್ಕಾ ರದ ವತಿ ಯಿಂದ ಇನ್ನು ಮುಂದೆ ಪ್ರತಿ ವರ್ಷ ವೂ ಈ ರೀ ತಿಯ ಪ್ರಶಸ್ತಿ ಗಳನ್ನು ಮುಂದು ವರಿಸಿ ಕೊಂಡು ಹೋ ಗುವ ಮೂಲಕ ಗ್ರಾ ಮೀಣ ನೈ ರ್ಮಲ್ಯ ಕ್ಷೇ ತ್ರಕ್ಕೆ ಇಂಬು ನೀಡುವ ಆಶಯ ನನ್ನದು.ನಮ್ಮ ಸರ್ಕಾ ರದ ಈ ವಿ ನೂತನ ಉಪ ಕ್ರಮ ದಿಂದ ರಾಜ್ಯದ ಎಲ್ಲಾ ಗ್ರಾಮ ಗಳಲ್ಲಿ ನೈ ರ್ಮಲ್ಯ ಹಾಗೂ ಸ್ವಚ್ಛತೆ ಕಾಪಾ ಡಲು ಹೊಸ ಆಯಾಮ ದೊರೆ ಯಲಿದೆ.ನೈ ರ್ಮಲ್ಯ ಪ್ರಶಸ್ತಿ ನೀಡುವ ಪ್ರ ಕ್ರಿಯೆ ಯನ್ನು ಸಮರ್ಥ ವಾಗಿ ಅನು ಷ್ಠಾನ ಗೊಳಿ ಸಿರುವ ಗ್ರಾಮೀ ಣಾಭಿ ವೃದ್ಧಿ ಹಾಗೂ ಪಂಚಾ ಯತ್ ರಾಜ್ ಇಲಾಖೆ ಯ ಸಂ ಬಂಧ ಪಟ್ಟ ಎಲ್ಲ ರಿಗೂ ನನ್ನ ಅಭಿ ನಂದ ನೆಗಳು.
ಆತ್ಮೀಯರೆ,"ಸ್ವಚ್ಛತೆಯಲ್ಲಿ ದೈವತ್ವವಿದೆ" ಎಂಬ ಪ್ರಸಿದ್ಧ ಮಾತು ಸ್ವಚ್ಛತೆ ಹಾಗೂ ನೈರ್ಮಲ್ಯದ ಮಹತ್ವವನ್ನು ಸೂಚಿಸುತ್ತದೆ.
ಹಾಗೆಯೇ "ದೇವರು ಬಡತನವನ್ನು ನೀಡಬಹುದು, ಆದರೆ ಕೊಳಕುತನವನ್ನಲ್ಲ" ಎಂಬ ನಮ್ಮ ಗಾದೆ ಮಾತು ಸಹ ದೈನಂದಿನ ಜೀವನದಲ್ಲಿ ನೈರ್ಮಲ್ಯದ ಅವಶ್ಯಕತೆಯನ್ನು ವ್ಯಕ್ತಪಡಿಸುತ್ತದೆ.
21ನೇ ಶತಮಾನದ 2ನೇ ದಶಕದ ಆರಂಭದ ವೈಜ್ಞಾನಿಕ ಘಟ್ಟದಲ್ಲಿ ಸಮಾಜದ ಒಂದು ವರ್ಗ ಬದುಕುತ್ತಿದ್ದರೆ, ನಮ್ಮ ಗ್ರಾಮೀಣ ಬಂಧು ಭಗಿನಿಯರು ಶೌಚಾಲಯಗಳಂತಹ ಮೂಲಭೂತ ಸೌಲಭ್ಯಗಳಿಂದಲೂ ವಂಚಿತರಾಗಿರುವುದು ನಿಜಕ್ಕೂ ವಿಷಾದಕರ ಅಂಶ.ಸರಿ ಸುಮಾರು ಶೇ.60ರಿಂದ 70ರಷ್ಟು ಮಂದಿ ಗ್ರಾಮೀಣ ಪ್ರದೇಶಗಳಲ್ಲಿಯೇ ವಾಸಿಸುತ್ತಿರುವ ಭಾರತ ದೇಶದಲ್ಲಿ ಹಾಗೆಯೇ ಕರ್ನಾಟಕ ರಾಜ್ಯದಲ್ಲಿ, ಈ ಗ್ರಾಮೀಣ ಸಮುದಾಯಕ್ಕೆ ನೈರ್ಮಲ್ಯದ ಬಗ್ಗೆ ಅರಿವು ಮೂಡಿಸಿ, ಸೌಲಭ್ಯ ಒದಗಿಸುವ ಹೊಣೆಗಾರಿಕೆ ಸರ್ಕಾರಗಳ ಮೇಲಿದೆ.ಇದನ್ನರಿತ ನಮ್ಮ ಸರ್ಕಾರ ಸಂಪೂರ್ಣ ಸ್ವಚ್ಛತಾ ಆಂದೋಲನಕ್ಕೆ ವಿಶೇಷ ಒತ್ತು ನೀಡಿದೆ.ಗ್ರಾಮೀಣ ಪ್ರದೇಶಗಳ ಸ್ವಚ್ಘತೆಗಾಗಿ ಕೆಲಸ ಮಾಡುವವರನ್ನು ಪ್ರೋತ್ಸಾಹಿಸಲು ಹಾಗೂ ಸಂಪೂರ್ಣ ನೈರ್ಮಲ್ಯ ಸಾಧನೆಗೆ ಉತ್ತೇಜನ ನೀಡಲು ನಾವು ಪ್ರಾರಂಭಿಸಿರುವ ನೈರ್ಮಲ್ಯ ಪ್ರಶಸ್ತಿಗಳು ಇದರ ಜೀವಂತ ದ್ಯೋತಕಗಳಾಗಿವೆ.ರಾಜ್ಯಾದ್ಯಂತ 125ಕ್ಕೂ ಅಧಿಕ ಗ್ರಾಮ ಪಂಚಾಯಿತಿಗಳು, 3 ತಾಲ್ಲೂಕು ಪಂಚಾಯಿತಿಗಳು ಹಾಗೂ 2 ಜಿಲ್ಲಾ ಪಂಚಾಯಿತಿಗಳು ಈ ಪ್ರಶಸ್ತಿಗಳನ್ನು ಪಡೆದುಕೊಂಡಿವೆ. ಮುಂದಿನ 2 ವರ್ಷಗಳ ಒಳಗೆ ಕರ್ನಾಟಕದಾದ್ಯಂತ ಸಂಪೂರ್ಣವಾಗಿ ಬಯಲು ಮಲ ವಿಸರ್ಜನೆಯನ್ನು ಮುಕ್ತಗೊಳಿಸಲು ಪಣ ತೊಟ್ಟಿರುವ ನಮ್ಮ ಸರ್ಕಾರ, ಬಿ.ಪಿ.ಎಲ್ ಕುಟುಂಬಗಳಿಗೆ ಶೌಚಾಲಯ ನಿರ್ಮಾಣಕ್ಕೆ ನೀಡುತ್ತಿದ್ದ ಪ್ರೋತ್ಸಾಹ ಧನವನ್ನು 2,500 ರೂ.ಗಳಿಂದ 3,000 ರೂ.ಗಳಿಗೆ ಹೆಚ್ಚಿಸಿದೆ.
ಕೇಂದ್ರ ಸರ್ಕಾರದ ನಿರ್ಮಲ ಗ್ರಾಮ ಪುರಸ್ಕಾರ ಯೋಜನೆಯನ್ನು ರಾಜ್ಯ ಸರ್ಕಾರ ಯಶಸ್ವಿಯಾಗಿ ಅನುಷ್ಠಾನ ಮಾಡುತ್ತಿದ್ದು, ರಾಜ್ಯದ 845 ಗ್ರಾಮ ಪಂಚಾಯಿತಿಗಳು ಹಾಗೂ 4 ತಾಲ್ಲೂಕು ಪಂಚಾಯಿತಿಗಳು ಕೇಂದ್ರ ಸರ್ಕಾರದ ಪ್ರತಿಷ್ಠಿತ ನಿರ್ಮಲ ಗ್ರಾಮ ಪುರಸ್ಕಾರ ಪ್ರಶಸ್ತಿ ಪಡೆದಿವೆ.
ಪಂಚಾಯತ್ ರಾಜ್ ಸಂಸ್ಥೆಗಳಲ್ಲಿ ಮಹಿಳೆಯರಿಗೆ ಶೇ.50ರಷ್ಟು ಸ್ಥಾನಗಳನ್ನು ಮೀಸಲಿಟ್ಟಿರುವ ನಮ್ಮ ಸರ್ಕಾರ ಗ್ರಾಮ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಹಾಗೂ ಜಿಲ್ಲಾ ಪಂಚಾಯಿತಿಯ ಜನಪ್ರತಿನಿಧಿಗಳ ಮಾಸಿಕ ಗೌರವ ಧನವನ್ನು ಹೆಚ್ಚು ಮಾಡುವ ಮೂಲಕ ಗ್ರಾಮೀಣ ಆಡಳಿತ ವ್ಯವಸ್ಥೆಯ ಸಬಲೀಕರಣಕ್ಕೆ ಆದ್ಯತೆ ನೀಡಿದೆ. ದೇಶದಲ್ಲಿಯೇ ಮೊದಲ ಬಾರಿಗೆ ಪ್ರತ್ಯೇಕ ಕೃಷಿ ಬಜೆಟ್ ಅನ್ನು 2011-12ನೇ ಸಾಲಿಗೆ ಕರ್ನಾಟಕ ರಾಜ್ಯದಲ್ಲಿ ನಾನು ಮಂಡಿಸಿದ್ದೇನೆ. ಹಾಗೆಯೇ 2011-12ನೇ ಸಾಲಿಗೆ ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಕಾರ್ಯಕ್ರಮಗಳಿಗಾಗಿ 4,385 ಕೋಟಿ ರೂ.ಗಳ ಅನುದಾನವನ್ನು ಒದಗಿಸಲಾಗಿದೆ. ಗ್ರಾಮ ಪಂಚಾಯಿತಿಗಳಿಗೆ ವಾರ್ಷಿಕ ಅನುದಾನವನ್ನು 6 ಲಕ್ಷ ರೂ.ಗಳಿಂದ 8 ಲಕ್ಷ ರೂ.ಗಳಿಗೆ ಹೆಚ್ಚಿಸಲಾಗಿದೆ. ಪ್ರತಿ ತಾಲ್ಲೂಕು ಪಂಚಾಯಿತಿಗೆ ವಾರ್ಷಿಕ ಒಂದು ಕೋಟಿ ರೂ.ಗಳ ಅನುದಾನವನ್ನು ಒದಗಿಸಲಾಗಿದೆ.
ಇಷ್ಟು ಅಂಶಗಳನ್ನು ನಿಮ್ಮೊಂದಿಗೆ ಹಂಚಿಕೊಂಡು, ಮುಂದಿನ ಎರಡು ವರ್ಷಗಳ ಒಳಗೆ ಸಮಸ್ತ ರಾಜ್ಯದಲ್ಲಿ ಬಯಲು ಮಲ ವಿಸರ್ಜನೆಯಿಂದ ಮುಕ್ತಗೊಳಿಸುವುದೂ ಒಳಗೊಂಡಂತೆ ರಾಜ್ಯದ ಒಟ್ಟಾರೆ ವಿಕಾಸಕ್ಕೆ ನಿಮ್ಮೆಲ್ಲರ ಸಹಕಾರ ಕೋರುತ್ತಾ, ಇಂದಿನ ಪ್ರಶಸ್ತಿ ಪುರಸ್ಕೃತರನ್ನು ಮತ್ತೊಮ್ಮೆ ಅಭಿನಂದಿಸಿ ನನ್ನ ಮಾತುಗಳನ್ನು ಮುಗಿಸುತ್ತೇನೆ.

ನಮಸ್ಕಾರ