
ಸರ್ಕಾರಿ ಜಮೀನು ಒತ್ತುವರಿ: ದಕ್ಷಿಣಕನ್ನಡ ಜಿಲ್ಲೆಯಲ್ಲಿ ಆಯಾ ತಾಲ್ಲೂಕಿನಲ್ಲಿ ಸರ್ಕಾರಿ ಜಮೀನು ಒತ್ತುವರಿಯಾಗಿರುವುದರ ಬಗ್ಗೆ ಪ್ರಾಮಾಣಿಕ ವರದಿ ಸಲ್ಲಿಸದ ಗ್ರಾಮ ಲೆಕ್ಕಾಧಿಕಾರಿ, ಕಂದಾಯ ನಿರೀಕ್ಷಕರ ವಿರುದ್ಧ ನಿರ್ದಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದೆಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.
ಪ್ರಕೃತಿ ವಿಕೋಪದಡಿ ನೀಡಲಾಗುವ ಪರಿಹಾರ ಕೇವಲ ನೆರವು ಅಷ್ಟೇ ಆದರೆ ಪೂರ್ಣ ನಷ್ಠ ತುಂಬಿಸಿ ಕೊಡಲಾಗದು ಎಂದು ಅವರು ಈ ಬಗ್ಗೆ ಪ್ರಗತಿ ಪರಿಶೀಲನೆ ನಡೆಸಿ ನುಡಿದರು. ಆರಾಧನಾ ಯೋಜನೆಯಡಿ 1991ರಿಂದ 2006-07 ರ ಸಾಲಿನಲ್ಲಿ ಮೊತ್ತ 48,73,244 ಬಾಕಿ ಇದ್ದರೆ 2007-08 ರಿಂದ 2009-10 ರ ವರೆಗೆ 59,48,770 ರೂ ಬಾಕಿ ಇದೆ. ತಹಶೀಲ್ದಾರರು ಈಗಾಗಲೇ ನೀಡಿರುವ ಹಣವನ್ನು ಬಳಸಿರುವ ಬಗ್ಗೆ ಪ್ರಮಾಣ ಪತ್ರ ನೀಡದಿರುವುದರಿಂದ ಜಿಲ್ಲೆಯಲ್ಲಿ ಆರಾಧನಾ ಯೋಜನೆಯಡಿ ಗುಡಿಗೋಪುರಗಳ ದುರಸ್ಥಿಗಾಗಿ 1,08,22,014 ರೂ.ಗಳನ್ನು ವೆಚ್ಚ ಮಾಡಲು ಬಾಕಿ ಇದೆ. ಆದ್ದರಿಂದ ಎಲ್ಲಾ ತಹಶೀಲ್ದಾರರು ಕೂಡಲೇ ತಮ್ಮ ತಾಲೂಕಿಗೆ ಮೀಸಲಿಡುವ ಹಣವನ್ನು ಪಡೆದು ಅಗತ್ಯ ಕಾಮಗಾರಿ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳು ಸೂಚಿಸಿದರು.
ಕಂದಾಯ ವಸೂಲಿ: ದಕ್ಷಿಣಕನ್ನಡ ಜಿಲೆಯಲ್ಲಿ 2010-11 ನೇ ಸಾಲಿಗೆ 70 ಕೋಟಿಗೂ ಅಧಿಕ ಕಂದಾಯ ಬಾಕಿ ಇದ್ದು ಕಳೆ ತಿಂಗಳಾಂತ್ಯಕ್ಕೆ 50.25 ಕೋಟಿಗೂಅಧಿಕ ಕಂದಾಯ ವಸೂಲಿ ಮಾಡಲಾಗಿದ್ದು,ಬಾಕಿ 19.84 ಕೋಟಿ ವಸೂಲಾಗಬೇಕಾಗಿದೆ.ಈ ಬಗ್ಗೆ ಸೂಕ್ತ ಕ್ರಮ ಕೈಗೊಂಡು ವಸೂಲಾತಿ ಮಾಡುವಂತೆ ಕಂದಾಯ ಅಧಿಕಾರಿಗಳಿಗೆ ತಿಳಿಸಿದರು.
ಕಂದಾಯ ಬಾಕಿ ವಸೂಲಿ ಮಾಡುವಾಗ ಬಡವರ ಮನೆ ಆಸ್ತಿ ಜಫ್ತಿ ಮಾಡುವಂತಹ ಕೆಲಸಕ್ಕೆ ಕೈಹಾಕದೆ ಸೌಮ್ಯವಾಗಿ ವರ್ತಿಸಿ ಅವರ ಮನವೊಲಿಸಿ ಕಂದಾಯ ವಸೂಲಿ ಮಾಡಲು ಜಿಲ್ಲಾಧಿಕಾರಿಗಳು ಕಿವಿಮಾತು ಹೇಳಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಪ್ರಭಾಕರ ಶರ್ಮಾ ಇನ್ನಿತರೆ ಜಿಲ್ಲಾ ಮಟ್ಟದ ಅಧಿಕಾರಿಗಳು,ಉಪವಿಭಾಗಾಧಿಕಾರಿಗಳು,ಹಾಗೂ ಎಲ್ಲಾ ತಾಲೂಕುಗಳ ತಹಶೀಲ್ದಾರರು ಉಪಸ್ಥಿತರಿದ್ದರು.