ಪ್ರಾಕೃತಿಕ ಸಮತೋಲನ ಕಾಪಾಡುವುದು ವಿವೇಚನೆಯುಳ್ಳ ಮಾನವನ ಕರ್ತವ್ಯ. ಭಾರತ ದೇಶದಲ್ಲಿ ಅಪಾಯದಂಚಿನಲ್ಲಿರುವ ರಾಷ್ಟ್ರ ಪ್ರಾಣಿ ಹುಲಿಗೆ ನೀಡಿರುವ ರಕ್ಷಣೆಯನ್ನೇ ಅಪಾಯದಂಚಿನಲ್ಲಿರುವ ಸಮುದ್ರ ಜೀವಿಗಳು 1972ರ ವನ್ಯಜೀವಿ ಸಂರಕ್ಷಣಾ ಕಾನೂನು ನೀಡಿದೆ ಎಂದು ರಾಜ್ಯ ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕ ಕೆ ಎಸ್ ಎನ್ ಚಿಕ್ಕೆರೂರ್ ಹೇಳಿದರು.ಅವರಿಂದು ಮಂಗಳೂರಿನ ಪಣಂಬೂರಿ ನಲ್ಲಿ ಪೊಲೀಸ್ ವರಿಷ್ಠಾಧಿ ಕಾರಿಗಳು ಹಾಗೂ ಮೀನುಗಾರರ ಮುಖಂಡರು, ಮೀನುಗಾರಿಕಾ ಇಲಾಖಾ ಧಿಕಾರಿ ಗಳಿಗೆ ವನ್ಯ ಜೀವಿ ಸಂರಕ್ಷಣಾ ಕಾನೂನಿನಡಿ ಅಪಾಯ ದಂಚಿನ ಲ್ಲಿರುವ ಜಲಚರಗಳ ಸೇರ್ಪಡೆಯ ಕುರಿತು ನೀಡಿದ ಮಾಹಿತಿ ಕಾರ್ಯಾಗಾರವನ್ನುದ್ದೇಶಿಸಿ ಮಾತನಾಡು ತ್ತಿದ್ದರು. ಮೀನು, ಸರೀಸೃಪಗಳು, ಪಕ್ಷಿ, ಹವಳ ಕೂಡ ಹುಲಿಯಷ್ಟೇ ಸಂರಕ್ಷಣೆಯನ್ನು ಪ್ರತಿಪಾದಿಸುವ ಜೀವಿಗಳಾಗಿವೆ.ಉತ್ತರ ಕನ್ನಡದ ನೇತ್ರಾಣಿ ಗುಡ್ಡೆಯ ಸುತ್ತಮುತ್ತ ಅತ್ಯಪರೂಪದ ಜಲಚರಗಳಿವೆ; ಇವುಗಳ ಸಂರಕ್ಷಣೆ ಎಲ್ಲರ ಕರ್ತವ್ಯ ಎಂದರು. ಕಡಲಹಂದಿ, ಡಾಲ್ಫಿನ್, ತಿಮಿಂಗಲ, ಶಾರ್ಕ್, ಕೊಳ್ಜೆ,ಕುರುಡಿ,ತಾಟೆ,ತೊರಕೆ,ಕುದುರೆಮೀನು,ಕಡಲಾಮೆಗಳ ಸಂತತಿ ಅಳಿವಿನಂಚಿನಲ್ಲಿದೆ. ಮೀನುಗಾರರು ಜಾಗೃತರಾದರೆ ಜಲಚರಗಳ ಸಂರಕ್ಷಣೆ ಸಾಧ್ಯ ಎಂದರು. ಹುಲಿ ಸಂರಕ್ಷಣೆಗೆ ಯುನೆಸ್ಕೊ 900 ಕೋಟಿ ರೂ.ಗಳನ್ನು ನೀಡಿದ್ದು 13,000ದಿಂದ ಹುಲಿಗಳು ಇಂದು 3,450ಕ್ಕಿಳಿದಿದೆ.