Tuesday, March 29, 2011

ಜೆಪ್ಪು ಮತ್ತು ಅಳಕೆಯಲ್ಲಿ ಮೀನು ಮಾರುಕಟ್ಟೆಗೆ ಶಿಲಾನ್ಯಾಸ

ಮಂಗಳೂರು,ಮಾ.29:ಮೀನು ಮಾರಾಟಗಾರರ ಅನುಕೂಲಕ್ಕೆ ಜೆಪ್ಪು ಮಾರ್ಕೆಟ್ ನಲ್ಲಿ 92.50 ಲಕ್ಷ ರೂ. ವೆಚ್ಚದಲ್ಲಿ ಕಟ್ಟಡ ನಿರ್ಮಿಸಲು ಜಿಲ್ಲಾ ಉಸ್ತುವಾರಿ ಸಚಿವರಾದ ಜೆ. ಕೃಷ್ಣ ಪಾಲೆಮಾರ್ ಅವರು ಶಂಕುಸ್ಥಾಪನೆ ನೆರವೇರಿಸಿದರು. ರಾಷ್ಟ್ರೀಯ ಮೀನು ಗಾರಿಕಾ ಅಭಿವೃದ್ದಿ ನಿಗಮದ ಪಾಲು 83.25 ಲಕ್ಷ ರೂ. 1048.49 ಚ. ಮೀ ಕಟ್ಟಡ ನೆಲ ಮತ್ತು ಮೊದಲ ಮಹಡಿ ಯನ್ನು ಹೊಂದಿದೆ. 32 ಅಂಗಡಿ ಗಳಿರುತ್ತವೆ.
ಅಳಕೆ ಮಾರ್ಕೆಟ್ 361.73ಚ.ಮೀಟರ್ ಯೋಜನಾ ವೆಚ್ಚ ರೂ. 58.5 ಲಕ್ಷ. ಎರಡು ಮಹಡಿ ಗಳು. 48ಕೊಠಡಿ ಗಳು. 6 ತಿಂಗ ಳಲ್ಲಿ ನಿರ್ಮಾಣ ಕಾಮಗಾರಿ ಮುಗಿಸ ಬೇಕಿದೆ. ಶಂಕು ಸ್ಥಾಪನೆ ಕಾರ್ಯ ಕ್ರಮದ ಬಳಿಕ ಮಾತ ನಾಡಿದ ಜಿಲ್ಲಾ ಉಸ್ತು ವಾರಿ ಸಚಿ ವರು, ಸ್ಟೇಟ್ ಬ್ಯಾಂಕ್ ಬಳಿ ಇರುವ ಮೀನು ಮಾರ್ಕೆಟ್ ನ್ನು ಕೇಂದ್ರ ಮಾರು ಕಟ್ಟೆಗೆ ಸ್ಥ ಳಾಂತ ರಿಸಲಾ ಗುವುದು. ಸ್ಟೇಟ್ ಬ್ಯಾಂಕ್ ನಲ್ಲಿ ಉದ್ಯಾನವನ ಹಾಗೂ ಆಟದ ಮೈದಾನ ನಿರ್ಮಿಸಲಾಗುವುದು ಎಂದರು. ಸಮಾರಂಭದಲ್ಲಿ ವಿಧಾನಸಭೆಯ ಉಪಸಭಾಪತಿ ಎನ್ ಯೋಗೀಶ್ ಭಟ್, ಮೀನುಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷ ನಿತಿನ್ ಕುಮಾರ್, ಮೇಯರ್ ಪ್ರವೀಣ್ ಅಂಚನ್, ಉಪಮೇಯರ್ ಗೀತಾ ಎಸ್. ನಾಯಕ್, ಸ್ಥಾಯಿ ಸಮಿತಿ ಅಧ್ಯಕ್ಷ ಪ್ರೇಮಾನಂದ ಶೆಟ್ಟಿ, ಮೀನುಗಾರಿಕಾ ಇಲಾಖೆಯ ಉಪನಿರ್ದೇಶಕರಾದ ಸುರೇಶ್ ಕುಮಾರ್ ಮೊದಲಾದವರು ಪಾಲ್ಗೊಂಡಿದ್ದರು.