Sunday, March 20, 2011

ಲಕ್ಷ್ಮಿಮಚ್ಚಿನರಿಗೆ ಗ್ರಾಮೀಣ ವರದಿಗಾರಿಕೆಯ ಪ.ಗೋ ಪ್ರಶಸ್ತಿ

ಮಂಗಳೂರು,ಮಾರ್ಚ್.20:ಪತ್ರಿಕಾ ಸ್ವಾತಂತ್ರ್ಯ, ಸ್ವತಂತ್ರ್ಯ ನ್ಯಾಯಾಂಗ, ಸ್ವಚ್ಛ ಮತ್ತು ಪ್ರಾಮಾಣಿಕ ಆಡಳಿತ ಪ್ರಜಾಪ್ರಭುತ್ವದ ಆದ್ಯತೆಗಳು. ಎಲ್ಲಿ ಪತ್ರಿಕಾ ರಂಗ ಸ್ವತಂತ್ರವಾಗಿರುತ್ತದೋ ಅಲ್ಲಿ ಉತ್ತಮ ಕೆಲಸಗಳಾಗುತ್ತವೆ ಎಂದು ಉನ್ನತ ಶಿಕ್ಷಣ ಸಚಿವ ಡಾ. ವಿ. ಎಸ್ ಆಚಾರ್ಯ ಅವರು ಹೇಳಿದರು.

ಅವರಿಂದು ಮಂಗ ಳೂರಿನ ಪ್ರೆಸ್ ಕ್ಲಬ್ ನಲ್ಲಿ ಗ್ರಾ ಮೀಣ ವರದಿ ಗಾರಿ ಕೆಗೆ ಕೊಡ ಮಾಡುವ 2010-11ನೇ ಸಾಲಿನ ಪ.ಗೋ ಪ್ರಶಸ್ತಿ ಯನ್ನು ಉದಯ ವಾಣಿಯ ಬೆಳ್ತಂಗಡಿ ತಾಲೂಕಿನ ವರದಿ ಗಾರ ಲಕ್ಷ್ಮೀ ಮಚ್ಚಿನ ಅವರಿಗೆ ಪ್ರದಾನ ಮಾಡಿ ಮಾತನಾಡುತ್ತಿದ್ದರು. ಸ್ವಾಭಾವಿಕ ಪ್ರತಿಭೆಯ ಜೊತೆ ಶ್ರಮವೂ ಸೇರಿದಾಗ ಉತ್ತಮ ಫಲ ದೊರೆಯುತ್ತದೆ. ಸಮಾಜಕ್ಕೆ ಉಪಕಾರವಾಗುವಂತಹ ವರದಿಗಳನ್ನು ಪತ್ರಕರ್ತರು ಮಾಡಬೇಕು. ಸಮಾಜಮುಖಿ ಪತ್ರಿಕೆಗಳಿಂದ ಪತ್ರಿಕಾರಂಗಕ್ಕೆ ಗೌರವ ಎಂದ ಅವರು, ಅಭಿವೃದ್ಧಿಗೆ ಪೂರಕವಾಗಿ, ಸಮರ್ಪಕ ಹಾಗೂ ಸಮಗ್ರವಾಗಿ ವರದಿಗಳು ಬರಬೇಕು. ಎಲ್ಲ ವಿಷಯಗಳನ್ನು ನಕರಾತ್ಮಕವಾಗಿ ನೋಡದೆ ಸಕಾರಾತ್ಮಕವಾಗಿ ವರದಿಗಳು ಮೂಡಿಬರಬೇಕು ಎಂದ ಅವರು, ವಿಶ್ಲೇಷಣೆಗಳಿರಲಿ ಬರೀ ವಿರೋಧಗಳಿಂದ ಆದ್ಯತೆ ಮತ್ತು ಸಾಧ್ಯತೆಗಳು ಸೊರಗುತ್ತವೆ ಎಂದರು. ಉತ್ತಮ ವಿಚಾರ, ಜನರು ಹಾಗೂ ಯೋಜನೆಗಳನ್ನು ಎಲ್ಲರೂ ಬೆಂಬಲಿಸ ಬೇಕೆಂದರು. ಪ್ರಶಸ್ತಿ ಪ್ರದಾನ ಮಾಡಿದ ಬಳಿಕ ಯುಪಿ ಸಿಎಲ್ ಯೋಜನೆ ಬಗ್ಗೆ, ಪಶ್ಚಿಮ ವಾಹಿನಿ, ಮುಜ ರಾಯಿ ಇಲಾಖೆ ಗೆ ಸಂಬಂ ಧಿಸಿ ದಂತೆ ಪತ್ರ ಕರ್ತರ ಪ್ರಶ್ನೆ ಗಳಿಗೆ ಸಚಿ ವರು ಉತ್ತ ರಿಸಿದರು.
ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಲಕ್ಷ್ಮೀ ಮಚ್ಚಿನ ಅವರು, ವರದಿಗಳು ಪ್ರಕಟವಾದಾಗ ಆಡಳಿತ ಅದಕ್ಕೆ ಸ್ಪಂದಿಸಿ ಸಮಸ್ಯೆ ಪರಿಹಾರವಾದರೆ ಅದೇ ವರದಿಗಾರನಿಗೆ ಸಿಗುವ ಉತ್ತಮ ಪ್ರಶಸ್ತಿ ಎಂದರು. ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಹಿರಿಯ ಪತ್ರಕರ್ತರಾದ ಯು ನರಸಿಂಹ ರಾವ್, ಪತ್ರಕರ್ತರ ಸಂಘದ ಅಧ್ಯಕ್ಷ ಹರ್ಷ, ಪ್ರಧಾನ ಕಾರ್ಯದರ್ಶಿಗಳಾದ ಗುರುವಪ್ಪ ಎನ್. ಟಿ. ಬಾಳೆಪುಣಿ,ಪ್ರೆಸ್ ಕ್ಲಬ್ ಅಧ್ಯಕ್ಷ ಆನಂದ ಶೆಟ್ಟಿ, ಪದ್ಯಾಣ ಗೋಪಾಲಕೃಷ್ಣ ಅವರ ಮಗ ವಿಶ್ವೇಶ್ವರ ಭಟ್ ಅವರು ಉಪಸ್ಥಿತರಿದ್ದರು.