Wednesday, March 23, 2011

ದಕ್ಷಿಣ ಏಷ್ಯಾ ಪ್ರಾದೇಶಿಕ ಒಕ್ಕೂಟದ ಕಾರ್ಯಾಗಾರಕ್ಕೆ ಚಾಲನೆ

ಮಂಗಳೂರು,ಮಾರ್ಚ್.23:ಸಮುದಾಯ ಮತ್ತು ಬಡವರ ಪರವಾಗಿರುವ ಸಹಕಾರಿ ತತ್ವಗಳನ್ನು ಪ್ರೋತ್ಸಾಹಿಸಲು ಹಾಗೂ ಯುವಜನಾಂಗವನ್ನು ಸಹಕಾರಿ ತತ್ವದತ್ತ ಆಕರ್ಷಿಸಲು ಮಂಗಳೂರು ವಿಶ್ವವಿದ್ಯಾಲಯದಲ್ಲಿ ದಕ್ಷಿಣ ಏಷ್ಯಾ ಪ್ರಾದೇಶಿಕ ಒಕ್ಕೂಟದ ಸಹಕಾರಿಗಳ ಮೂರು ದಿನಗಳ ಅಂತಾರಾಷ್ಟ್ರೀಯ ಕಾರ್ಯಾಗಾರವನ್ನು ಆಯೋಜಿಸಲಾಗಿದೆ ಎಂದು ಭಾರತ ರಾಷ್ಟ್ರೀಯ ಸಹಕಾರಿ ಸಂಘದ ಅಧ್ಯಕ್ಷ ಚಂದ್ರಪಾಲ್ ಸಿಂಗ್ ಅವರು ಹೇಳಿದರು.

ಇಂದು ಮಂಗ ಳೂರು ವಿಶ್ವ ವಿದ್ಯಾ ನಿಲ ಯದ ಎಂಬಿಎ ಸೆಮಿ ನಾರ್ ಹಾಲ್ ನಲ್ಲಿ ದಕ್ಷಿಣ ಏಷ್ಯಾ ಪ್ರಾ ದೇಶಿಕ ಒಕ್ಕೂ ಟದ ಸಹ ಕಾರಿ ಗಳ ಕಾರ್ಯಾ ಗಾರ ವನ್ನು ಉದ್ಘಾ ಟಿಸಿ ಮಾತ ನಾಡು ತ್ತಿದ್ದರು. ಬಾಂಗ್ಲಾ, ಬೂತಾನ್, ಇಂಡೋ ನೇಷಿಯಾ, ಜಪಾನ್, ಮಲೇ ಷಿಯಾ, ಥ್ಯೆ ಲ್ಯಾಂಡ್ ಸೇ ರಿದಂತೆ ಸುಮಾರು 9 ದೇಶ ಗಳಿಂದ ಪ್ರತಿ ನಿಧಿಗಳು ಆಗ ಮಿಸಿದ್ದು, ಸಂವಾದ ಮತ್ತು ಸಹಕಾರಿ ಯೋಜನೆಗಳ ಬಗ್ಗೆ ಸವಿವರವಾಗಿ ಕಾರ್ಯಾಗಾರದಲ್ಲಿ ಚರ್ಚಿಸುವುದಾಗಿ ಹೇಳಿದರು.
ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿದ್ದ ಕರ್ನಾಟಕ ಸಹಕಾರಿ ಸಂಘಗಳ ಅಧ್ಯಕ್ಷರಾದ ಜಿ.ಟಿ. ದೇವೇಗೌಡ ಅವರು, ಸಹಕಾರಿ ನೀತಿಯನ್ನು ಮೊತ್ತ ಮೊದಲನೆಯದಾಗಿ ರೂಪಿಸಿದ ರಾಜ್ಯ ಕರ್ನಾಟಕ. ವ್ಯವಸಾಯ ಕ್ಷೇತ್ರ, ಹಾಲು ಸೇರಿದಂತೆ ಪ್ರಮುಖ ಕ್ಷೇತ್ರಗಳಲ್ಲಿ ಸಹಕಾರಿಗಳು ಯಶಸ್ವಿಯಾಗಿದ್ದಾರೆ. ಸಹಕಾರಿಗಳನ್ನು ಪ್ರಸಕ್ತ ಸಂದರ್ಭದಲ್ಲಿ ಸಕ್ರಿಯವಾಗಿಸಲು ಯುವ ಜನಾಂಗ ಮತ್ತು ಮಹಿಳೆಯರ ಪಾಲ್ಗೊಳ್ಳುವಿಕೆಯ ಅಗತ್ಯವನ್ನು ಪ್ರತಿಪಾದಿಸಿದರು.ಕ್ಯಾಂಪಸ್ ಕೋ ಆಪರೇಷನ್ ಮೂವಮೆಂಟ್ ಇಂದಿನ ಅಗತ್ಯ ಎಂದ ಅವರು, ಪ್ರಸಕ್ತ ಸನ್ನಿವೇಶದಲ್ಲಿ ವಿಶ್ವವಿದ್ಯಾಲಯದಲ್ಲಿ ಕಾರ್ಯಾಗಾರ ಆಯೋಜಿಸಿದ್ದಕ್ಕೆ ಅಭಿನಂದನೆ ಸಲ್ಲಿಸಿದರು. ಮಲೇಷಿಯಾದ ಮಲಯ ವಿಶ್ವವಿದ್ಯಾಲಯದ ಪ್ರೊ. ಮೊಹಮ್ಮದ್ ಆಲಿ ಹಸನ್ ಅವರು ಕಾರ್ಯಾಗಾರದ ಉದ್ದೇಶದ ಬಗ್ಗೆ ವಿವರಿಸಿದರು. ಕಾರ್ಯಾಗಾರದ ಅಧ್ಯಕ್ಷತೆ ವಹಿಸಿದ್ದ ಕುಲಪತಿಗಳಾದ ಪ್ರೊ. ಟಿ ಸಿ ಶಿವಶಂಕರ ಮೂರ್ತಿ ಅವರು, 260 ವರ್ಷಗಳ ಸಹಕಾರಿ ತತ್ವದ ಇತಿಹಾಸ ಹಾಗೂ ಇಂತಹ ಉತ್ತಮ ಕಾರ್ಯಾಗಾರವನ್ನು ವಿಶ್ವ ವಿದ್ಯಾಲಯದಲ್ಲಿ ಆಯೋಜಿಸಿದ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದರು. ಕರಾವಳಿಯಲ್ಲೂ ಮೊಳಹಳ್ಳಿ ಶಿವರಾಮ್ ಅವರ ಕೊಡುಗೆಯನ್ನು ಈ ಸಂದರ್ಭದಲ್ಲಿ ಸ್ಮರಿಸಿದರು. ನ್ಯಾಷನಲ್ ಕೋ ಆಪರೇಟಿವ್ ಯೂನಿಯನ್ ಆಫ್ ಇಂಡಿಯಾದ ಚೀಫ್ ಎಕ್ಸಿಕ್ಯೂಟಿವ್ ಅನಿತಾ ಮಾನ್ಚಂದಾ, ರಾಜ್ಯ ವಲಯದ ಎಂ.ಡಿ.ಕೆ. ಎ ವೆಂಕಟೇಶ್, ರಿಜಿಸ್ಟ್ರಾರ್ ಡಾ. ಚಿನ್ನಪ್ಪ ಗೌಡ ಅವರು ಉಪಸ್ಥಿತರಿದ್ದರು. ಡಾ. ಟಿ ವೈ ಮಲ್ಲಯ್ಯ ಅವರು ಸ್ವಾಗತಿಸಿದರು. ಎಂಬಿಎ ವಿಭಾಗದ ಮುಖ್ಯಸ್ಥರಾದ ಮುಷ್ತಿಯಾರಿ ಬೇಗಂ ವಂದಿಸಿದರು.