Sunday, March 20, 2011

ಕದ್ರಿ ಉದ್ಯಾನವನದಲ್ಲಿ ಫಲಪುಷ್ಪ ಪ್ರದರ್ಶನ

ಮಂಗಳೂರು,ಮಾರ್ಚ್.20: ಮಂಗಳೂರು ನಗರದ ಕದ್ರಿ ಉದ್ಯಾನವನದಲ್ಲಿ
ಜಿಲ್ಲಾ ಪಂಚಾ ಯತ್,ತೋಟ ಗಾರಿಕ ಇಲಾಖೆ ಹಾಗೂ ಸಿರಿ ತೋಟ ಗಾರಿಕೆ ಸಂಘ ಗಳ ಸಂ ಯುಕ್ತ ಆಶ್ರಯ ದಲ್ಲಿ ಆಯೋಜಿ ಸಲಾ ಗಿದ್ದ ಫಲಪುಷ್ಪ ಪ್ರದರ್ಶ ನವನ್ನು ಜಿಲ್ಲಾ ಉಸ್ತು ವಾರಿ ಸಚಿವ ರಾದ ಕೃಷ್ಣ ಜೆ. ಪಾಲೆ ಮಾರ್ ಅವರು ಶನಿ ವಾರ ಉದ್ಘಾ ಟಿಸಿದರು.ವಿಧಾನ ಸಭಾ ಉಪ ಸಭಾ ಪತಿ ಎನ್. ಯೋಗಿಶ್ ಭಟ್,ಸಂಸದ ನಳಿನ್ ಕುಮಾರ್ ಕಟೀಲ್,ಕರಾ ವಳಿ ಅಭಿ ವೃದ್ದಿ ಪ್ರಾಧಿ ಕಾರದ ಅಧ್ಯಕ್ಷ ಬಿ. ನಾಗ ರಾಜ ಶೆಟ್ಟಿ,ಶಾಸಕ ಯು.ಟಿ. ಖಾದರ್,ತೋಟ ಗಾರಿಕೆ ಇಲಾಖೆ ಯ ಹಿರಿಯ ಸಹಾ ಯಕ ನಿರ್ದೇ ಶಕ ಜೋ ಪ್ರದೀಪ್ ಡಿ'ಸೋಜ,ಮತ್ತಿ ತರ ಗಣ್ಯರು ಕಾರ್ಯ ಕ್ರಮ ದಲ್ಲಿ ಪಾ ಲ್ಗೊಂಡಿ ದ್ದರು.
ಪ್ರದರ್ಶನದಲ್ಲಿ ತೋಟಗಾರಿಕಾ ಇಲಾಖೆ ವತಿಯಿಂದ ಬೇಳೆಸಲಾದ ವಿವಿಧ ರೀತಿಯ ತರಕಾರಿಗಳು, ಅಲಂಕಾರಿಕ ಪುಷ್ಪ ಗಿಡಗಳು,ಔಷಧಿಯ ಸಸ್ಯಗಳು ಮತ್ತು ಯಂತ್ರೋಪಕರಣಗಳನ್ನು ಸಮಗ್ರ ಮಾಹಿತಿಯೊಂದಿಗೆ ಇಡಲಾಗಿದೆ.ಪ್ರಸ್ತುತ ಎಲ್ಲೆಲ್ಲೂ ವಿಶ್ವಕಪ್ ಕ್ರಿಕೆಟ್ ಸುದ್ದಿಯಾಗಿರುವ ಹಿನ್ನೆಲೆಯಲ್ಲಿ ಪುಷ್ಪಗಳಿಂದ ತಯಾರಿಸಿದ ವಿಶ್ವಕಪ್ ಟ್ರೋಫಿ ಪ್ರಮುಖ ಆಕರ್ಷಣೆಯಾಗಿದೆ.ಸುಮಾರು 10 ಅಡಿ ಎತ್ತರ ವಿರುವ ಈ ಟ್ರೋಫಿಯನ್ನು ಸಿದ್ದಪಡಿಸಲು 9 ಸಾವಿರ ಗುಲಾಬಿ ಹೂ ಗಳನ್ನು ಬಳಸಲಾಗಿದೆ.ಪಕ್ಕದಲ್ಲೇ ಇದಕ್ಕೆ ಪೂರಕವಾಗಿ ಕ್ರಿಕೆಟ್ ಪಿಚ್,ವಿಕೆಟ್, ಬ್ಯಾಟ್ ಮತ್ತು ಬಾಲನ್ನು ಇಡಲಾಗಿದ್ದು,ಫಲ ಪುಷ್ಪಪ್ರದರ್ಶನದ ಪ್ರಮುಖ ಆಕರ್ಷಣೆ ಯಾಗಿದೆ.