Wednesday, January 25, 2012

ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳಿ: ಡಾ.ವಿ.ಎಸ್. ಆಚಾರ್ಯ

ಮಂಗಳೂರು,ಜನವರಿ.25: ಇಂದಿನ ಮಕ್ಕಳೇ ಮುಂದಿನ ಜನಾಂಗ; ಎಂಬ ವಾಕ್ಯ ಇಂದಿನ ಯುವಪೀಳಿಗೆಯನ್ನು ಗಮನದಲ್ಲಿರಿಸಿ ಹೇಳಲಾಗಿದ್ದು ಮಕ್ಕಳಿಗೆ ಇಂದು ಸರ್ವಾಂಗೀಣ ಅಭಿವೃದ್ಧಿಗೆ ಪೂರಕವಾಗಿ ವಿಫುಲ ಅವಕಾಶಗಳು ಸೃಷ್ಟಿಯಾಗಿವೆ. ಶೈಕ್ಷಣಿಕ ಕೇಂದ್ರವೆಂದೇ ಬಿಂಬಿತವಾಗಿರುವ ದಕ್ಷಿಣ ಕನ್ನಡ ಜಿಲ್ಲೆಗೆ ರಾಷ್ಟ್ರದಾದ್ಯಂತದಿಂದ ಆಗಮಿಸಿದ ಮಕ್ಕಳು ಸೃಜನೋತ್ಸವದಲ್ಲಿ ಭಾಗಿಯಾಗಿ ಆನಂದಿಸಿದ್ದಾರೆ. ಇವರೆಲ್ಲರಿಗೂ ಮಾಜಿ ರಾಷ್ಟ್ರಪತಿ ಡಾ. ಎ ಪಿ ಜೆ ಅಬ್ದುಲ್ ಕಲಾಂ ಅವರ ಜೀವನ ಆದರ್ಶವಾಗಲಿ ಎಂದು ಉನ್ನತ ಶಿಕ್ಷಣ ಸಚಿವರಾದ ಡಾ ವಿ ಎಸ್ ಆಚಾರ್ಯ ಅವರು ಹೇಳಿದರು.
ಮೊದಲು ಮಾನವ ರಾಗಿ ಎಂಬ ಸಂದೇಶ ದೊಂದಿಗೆ ಗೌರ ವಾನ್ವಿತ ಅತಿಥಿ ಗಳಾಗಿ ಬಾಲ್ ಭಾರತ್ ಸೃಜ ನೋತ್ಸವ ಸಮಾ ರೋಪ ಸಮಾ ರಂಭದಲ್ಲಿ ಮಾತ ನ್ನಾರಂ ಭಿಸಿ ದರು. ಹಿರಿಯರು ಮಕ್ಕಳ ಮೇಲೆ ಇರಿಸಿರುವ ಭರವಸೆಯನ್ನು ಸಾಕಾರಗೊಳಿಸಬೇಕೆಂದ ಅವರು, ಜಿಲ್ಲೆಯಲ್ಲಿ ನಡೆದ ಯುವಜನೋತ್ಸವ ಮತ್ತು ಸೃಜನೋತ್ಸವ ಜಿಲ್ಲೆಯ ಗರಿಮೆಯನ್ನು ಹೆಚ್ಚಿಸಿದೆ ಎಂದರು. ರಾಜ್ಯ ಬಾಲಭವನ ಸೊಸೈಟಿಯುದ.ಕ. ಜಿಲ್ಲಾಡಳಿತದ ಸಹಕಾರದೊಂದಿಗೆ ಕಳೆದ ನಾಲ್ಕು ದಿನಗಳಿಂದ ಹಮ್ಮಿಕೊಂಡ ಬಾಲ ಭಾರತ ಸೃಜನೋತ್ಸವದ ಸಮಾರೋಪ ಸಮಾರಂಭದಲ್ಲಿ ಸಮೂಹ ಚಿತ್ರಕಲೆ, ಉಬ್ಬು ಶಿಲ್ಪ, ಥರ್ಮೋಫೋಮ್ ಮಾಸ್ಕ್, ಸಾಂಜಿಆರ್ಟ್ ಮೊದಲಾದ ಸೃಜನಾತ್ಮಕ ಕಲೆಗಳಲ್ಲಿ ಉತ್ತಮ ಕಲೆಯನ್ನು ಸೃಷ್ಟಿಸಿದ ಮಕ್ಕಳಿಗೆ ರಾಜ್ಯದ ಉನ್ನತ ಶಿಕ್ಷಣ ಸಚಿವರು ಬಹುಮಾನ ನೀಡಿ ಗೌರವಿಸಿದರು.
ಈ ಸಂದರ್ಭ ಜಿಲ್ಲಾಉಸ್ತುವಾರಿ ಸಚಿವ ಕೃಷ್ಣ ಜೆ. ಪಾಲೆಮಾರ್ ಅವರು ಪಿಲಿಕುಲ ನಿಸರ್ಗ ಧಾಮದಲ್ಲಿ ದತ್ತು ಪಡೆದಿರುವ ಹುಲಿ ಮತ್ತು ಚಿರತೆ ಮರಿಗಳ ನಿರ್ವಹಣೆಗಾಗಿ ನೀಡಿದ ಎರಡು ಲಕ್ಷ ರೂ.ಗಳ ಚೆಕ್ಕನ್ನು ಡಾ.ವಿ.ಎಸ್. ಆಚಾರ್ಯ ಅವರು ನಿಸರ್ಗಧಾಮದ ಕಾರ್ಯವಾಹಕ ನಿರ್ದೇಶಕ ಜೆ.ಆರ್.ಲೋಬೋಗೆ ಹಸ್ತಾಂತರಿಸಿದರು.ರಾಜ್ಯ ಬಾಲ ಭವನ ಸೊಸೈ ಟಿಯ ಅಧ್ಯಕ್ಷೆ ಸುಲೋ ಚನಾ ಜಿ.ಕೆ.ಭಟ್ ಮಾತ ನಾಡಿ, ಹೊರ ರಾಜ್ಯ ಒಟ್ಟು 55 ಬಾಲ ಭವನ ಗಳಿಂದ 487 ಮಕ್ಕಳು, 333 ಮೇಲ್ವಿ ಚಾರ ಕರು, 1820 ಮಂದಿ ಶಿಬಿ ರಾರ್ಥಿ ಗಳಲ್ಲದೆ, ಜಿಲ್ಲೆಯ ಸುಮಾರು 4000 ಕ್ಕೂ ಅಧಿಕ ಮಕ್ಕಳು ಕಳೆದ ನಾಲ್ಕು ದಿನ ಗಳಲ್ಲಿ ಸೃಜ ನೋತ್ಸ ವದ ಕಾರ್ಯ ಕ್ರಮ ಗಳನ್ನು ವೀಕ್ಷಿ ಸಿರು ವುದಾಗಿ ತಿಳಿಸಿದರು.

ಬಹುಮಾನ ವಿಜೇತರು:

ಸಮೂಹ ಚಿತ್ರಕಲೆಯಲ್ಲಿ ಮಂಡ್ಯದ ಎಂ.ಇ.ಸ್ಕೂಲ್ನ ಬಿ.ರಕ್ಷಿತ್ಕುಮಾರ್ ಪ್ರಥಮ, ಸಾಗರದ ರಾಘವೇಂದ್ರ ದ್ವಿತೀಯ ಹಾಗೂ ಮೂಡಬಿದ್ರೆಯ ಆದರ್ಶ್ ಜೈನ್ ತೃತೀಯ ಸ್ಥಾನ ಗಳಿಸಿದ್ದಾರೆ.

ಥರ್ಮೋ ಫೋಮ್ ನಲ್ಲಿ ಬೆಳಗಾಂನ ಆರಿಫ್ ಕೆ.ಮುಲ್ಲಾ ಪ್ರಥಮ, ಕನ್ಯಾನದ ನಿಶಾಂತ್ಕಮಾರ್ ದ್ವಿತೀಯ ಹಾಗೂ ಆಂಧ್ರಪ್ರದೇಶದ ನಿಶ್ಚಯ್ ತೃತೀಯ.

ಉಬ್ಬು ಶಿಲ್ಪದಲ್ಲಿ ಸುಳ್ಯದ ಸುದೀಪ್ ನಾರಾಯಣ್ ಪ್ರಥಮ, ಚಿಕ್ಕಬಳ್ಳಾಪುರದ ರಶ್ಮಿ ಎಸ್.,ಕೊಡಗಿನ ಉತ್ತಪ್ಪ ಎಂ.ಸಿ. ತೃತೀಯ.

ಕಾರ್ಟೂನ್ ರಚನೆಯಲ್ಲಿ ಹಾಸನದ ವಿ.ಕೆ.ಕಾರ್ತಿಕ್ ಪ್ರಥಮ, ಬೆಳಗಾವಿಯ ಅಕ್ಷಯ್ಎ.ಎಸ್. ದ್ವಿತೀಯ ಹಾಗೂ ಬಳ್ಳಾರಿಯ ವಿನಾಯಕ ತೃತೀಯ.

ಆವೆಮಣ್ಣಿನ ಕಲಾಕೃತಿ ರಚನೆಯಲ್ಲಿ ಉಡುಪಿ ಕುಂದಾಪುರದ ಕಾರ್ತಿಕ್ ಆಚಾರ್ ಪ್ರಥಮ, ಚಿತ್ರದುರ್ಗದ ವಿಶ್ವಾಸ್ ದ್ವಿತೀಯ ಹಾಗೂ ಬಾಗಲಕೋಟೆಯ ನಾರಾಯಣತೃತೀಯ.

ಚಿತ್ರಕಲೆಕಿರಿಯ ವಿಭಾಗದಲ್ಲಿಅಂಕಿತಾ ಸಿ. ಪ್ರಥಮ, ಮೂಡಬಿದ್ರೆಯ ಪ್ರಥ್ವೀಸ್ ದ್ವಿತೀಯ, ಬೀದರ್ ನ ಅಜಯ ತೃತೀಯ.ಹಿರಿಯ ವಿಭಾಗದಲ್ಲಿ ಪುತ್ತೂರಿನ ಉಮೇಶ್ ಪ್ರಥಮ, ಮೈಸೂರಿನ ಗಣಶ್ರೀ ದ್ವಿತೀಯ ಹಾಗೂ ರೋಶನ್ ವಿ.ಅಣ್ವೇಕರ್ ತೃತೀಯ ಸ್ಥಾನ ಪಡೆದಿದ್ದಾರೆ.

ಕಾರ್ಯಕ್ರಮದಲ್ಲಿ ಬೆಂಗಳೂರು ಬಾಲಭವನದ ಬೆಳ್ಳಿ ಹೆಜ್ಜೆಗಳ ಗುರುತಾದ `ಹೊಂಗನಸು' ಸ್ಮರಣ ಸಂಚಿಕೆ ಹಾಗೂ ಸೃಜನೋತ್ಸವದ ವಾರ್ತಾ ಪತ್ರ ಸಂದೇಶವನ್ನು ಈ ಸಂದರ್ಭ ಬಿಡುಗಡೆಗೊಳಿಸಲಾಯಿತು.
ರಾಜ್ಯದ ವಿವಿಧ ಬಾಲಭವನಗಳ ತಂಡದ ವಿದ್ಯಾರ್ಥಿಗಳು ನಾಡಗೀತೆ ಹಾಡಿದರು. ಸೈಂಟ್ ರೇಮಂಡ್ ಹೈಸ್ಕೂಲಿನ ವಿದ್ಯಾರ್ಥಿಗಳು ಪ್ರಾರ್ಥನೆ ಗೀತೆಹಾಡಿದರು.ಶಾಸಕ ಅಭಯಚಂದ್ರ ಜೈನ್ ಅಧ್ಯಕ್ಷತೆ ವಹಿಸಿದ್ದರು.
ವಿಧಾನ ಪರಿಷತ್ ಸದಸ್ಯ ಕ್ಯಾ.ಗಣೇಶ್ ಕಾರ್ಣಿಕ್, ತಾ.ಪಂ. ಅಧ್ಯಕ್ಷೆ ಭವ್ಯಾಗಂಗಾಧರ್, ಜಿ.ಪಂ. ಸದಸ್ಯೆ ಯಶವಂತಿ ಆಳ್ವ, ಉಪ ಮೇಯರ್ ಗೀತಾ ನಾಯಕ್, ಜಿಲ್ಲಾಧಿಕಾರಿ ಡಾ.ಎನ್.ಎಸ್. ಚನ್ನಪ್ಪಗೌಡ, ಜಿ.ಪಂ. ಮುಖ್ಯಕಾರ್ಯನಿರ್ವಹಣಾಧಿಕಾರಿ ಡಾ.ಕೆ.ಎನ್. ವಿಜಯಪ್ರಕಾಶ್, ಮನಪಾ ಆಯುಕ್ತ ಡಾ. ಹರೀಶ ಕುಮಾರ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕಿ ಶಕುಂತಳಾ, ಪಿಲಿಕುಲ ನಿಸರ್ಗಧಾಮದ ನಿರ್ದೇಶಕ ಜೆ.ಆರ್. ಲೋಬೋ ಮೊದಲಾದವರು ಉಪಸ್ಥಿತರಿದ್ದರು.