Monday, January 16, 2012

ಸಮಾರೋಪಕ್ಕೂ ತುಂಬಿದ ಸಭಾಂಗಣ

ಮಂಗಳೂರು: ಹೌದು.ಅಕ್ಷರಶಃ ಮಂಗಳೂರಿನ ಮಂಗಳಾ ಕ್ರೀಡಾಂಗಣ ಅಕ್ಷರಶಃ ಕಿಕ್ಕಿರಿದು ತುಂಬಿತ್ತು. 17ನೇ ಯುವಜನೋತ್ಸವದ ಸಮಾರೋಪ ಸಮಾರಂಭಕ್ಕೆ ತುಂಬಿ ತುಳುಕುತ್ತಿದ್ದ ಮಂಗಳಾಸ್ಟೇಡಿಯಂ ಸಾಕ್ಷಿಯಾಯಿತು. ತನ್ಮೂಲಕ ಅತ್ಯಂತ ಯಶಸ್ವಿಯಾದ ಯುವಜನೋತ್ಸವ ಎಂಬ ಹೆಗ್ಗಳಿಕೆಗೆ 17ನೇ ರಾಷ್ಟ್ರೀಯ ಯುವಜನೋತ್ಸವ ಸಾಕ್ಷಿಯಾಯಿತು ಎಂದರೆ ತಪ್ಪಾಗಲಾರದು.
ಕೈ ಬೀಸಿ ಶುಭ ಹಾರೈಸಿದರು. ಸಾಂಸ್ಕೃತಿಕ ಮೆರವಣಿಗೆಯಲ್ಲಿ ತಂಡಗಳು ಆಗಮಿಸುತ್ತಿದ್ದಂತೆ ಅತಿಥಿಗಳೂ ಸೇರಿಂದತೆ ಗಣ್ಯರು , ನೆರೆದ ಸಮಸ್ತ ಸಭಿಕರು ಕೈ ಬೀಸಿ ಶುಭ ಸ್ವಾಗತ ಕೋರಿದರು. ಹೆಜ್ಜೆ ಹೆಜ್ಜೆಗೂ ತಂಡಗಳಿಗೆ ನಿರಂತರ ಪ್ರೋತ್ಸಾಹ ನೀಡುತ್ತಿದ್ದುದು ಕಂಡು ಬಂತು.