Wednesday, January 25, 2012

ಜಿಲ್ಲಾ ಉಸ್ತುವಾರಿ ಸಚಿವರಿಂದ ಹುಲಿಮರಿ ದತ್ತು ಸ್ವೀಕಾರ

ಮಂಗಳೂರು,ಜನವರಿ.25:ಮಂಗಳೂರಿನ ಪಿಲಿಕುಳ ನಿಸರ್ಗಧಾಮದಲ್ಲಿ
ಇತ್ತೀಚೆಗೆ ಜನಿಸಿದ ಒಂದು ಹುಲಿಮರಿ ಮತ್ತು ಒಂದು ಚಿರತೆಯ ಮರಿಯನ್ನು ಜಿಲ್ಲಾ ಉಸ್ತುವಾರಿ ಸಚಿವರಾದ ಕೃಷ್ಣ ಜೆ.ಪಾಲೆಮಾರ್ ಅವರು ಅವುಗಳ ಪೋಷಣೆಗಾಗಿ ದತ್ತು ಸ್ವೀಕರಿಸಿದ್ದು,ಇಂದು ಪಿಲಿಕುಳದಲ್ಲಿ ನಡೆದ ಬಾಲ ಭಾರತ್ ಸೃಜನೋತ್ಸವ ಸಮಾರೋಪ ಸಮಾರಂಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರ ಪರವಾಗಿ ರಾಜ್ಯ ಉನ್ನತ ಶಿಕ್ಷಣ ಮತ್ತು ಮುಜರಾಯಿ ಸಚಿವರಾದ ಡಾ. ವಿ.ಎಸ್. ಆಚಾರ್ಯ ಅವರು ರೂ.2 ಲಕ್ಷದ ಚೆಕ್ಕನ್ನು ಪಿಲಿಕುಳ ನಿಸರ್ಗಧಾಮದ ಕಾರ್ಯನಿರ್ವಾಹಕ ನಿರ್ದೇಶಕರಾದ ಜೆ.ಆರ್.ಲೋಬೋ ಅವರಿಗೆ ಹಸ್ತಾಂತರಿಸಿದರು.