Thursday, January 26, 2012

ಮಂಗಳೂರಿನಲ್ಲಿ 63 ನೇ ಗಣರಾಜ್ಯೋತ್ಸವದ ಸಂಭ್ರಮ

ಮಂಗಳೂರು,ಜನವರಿ.26:ಜಿಲ್ಲೆಯು ನಿರಂತರ ಅಭಿವೃದ್ಧಿಯ ಜೊತೆ, ಹಲವು ರಾಷ್ಟ್ರಮಟ್ಟದ ಕಾರ್ಯಕ್ರಮಗಳನ್ನು ಆಯೋಜಿಸುವುದರೊಂದಿಗೆ ರಾಷ್ಟ್ರಮಟ್ಟದಲ್ಲಿ ತನ್ನ ಹೆಸರನ್ನು ದಾಖಲಿಸಿದೆ ಎಂದು ಎಂದು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣ ಜೆ. ಪಾಲೆಮಾರ್ ತಿಳಿಸಿದ್ದಾರೆ.



ನಗರದ ನೆಹರೂ ಮೈದಾ ನದಲ್ಲಿ 63ನೇ ಗಣ ರಾಜ್ಯೋ ತ್ಸವದ ಅಂಗ ವಾಗಿ ಧ್ವಜಾ ರೋಹಣ ನೆರ ವೇರಿಸಿ ತಮ್ಮ ಸಂದೇ ಶದಲ್ಲಿ ಜಿಲ್ಲೆಯ ಅಭಿವೃ ದ್ಧಿಯನ್ನು ಉಲ್ಲೇಖಿಸಿದರು.ದ.ಕ. ಜಿಲ್ಲೆಯಲ್ಲಿ 2011-12ನೆ ಸಾಲಿನ ಆಯವ್ಯಯದಲ್ಲಿ 69 ಹೊಸ ಕಾಮಗಾರಿಗಳನ್ನು 7,250 ಲಕ್ಷ ರೂ. ಅಂದಾಜು ವೆಚ್ಚದಲ್ಲಿ 232 ಕಿ.ಮೀ. ಉದ್ದದ ರಸ್ತೆಯನ್ನು ಅಭಿವೃದ್ಧಿ ಪಡಿಸುವ ಗುರಿಯನ್ನು ಹೊಂದಲಾಗಿದೆ ಜಿಲ್ಲೆಯಲ್ಲಿ ಸಾಕಷ್ಟು ಪ್ರಗತಿ ಕಾರ್ಯಗಳು ನಡೆದಿದ್ದು, 528 ಕಿ.ಮೀ. ಉದ್ದದ ರಾಜ್ಯ ಹೆದ್ದಾರಿ ಹಾಗೂ 775 ಕಿ.ಮೀ. ಉದ್ದದ ಜಿಲ್ಲಾ ಮುಖ್ಯ ರಸ್ತೆಗಳಿದ್ದು 9545 ಲಕ್ಷ ರೂ. ವೆಚ್ಚದಲ್ಲಿ ಒಟ್ಟು 138 ಕಾಮಗಾರಿಗಳನ್ನು ನಬಾರ್ಡ್ ಯೋಜನೆಯಡಿ ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ ಎಂದರು. ಈಗಾಗಲೇ 45 ಕಾಮಗಾರಿಗಳನು ಪೂರ್ಣಗೊಳಿಸಲಾಗಿದೆ ಎಂದವರು ಈ ಸಂದರ್ಭ ತಿಳಿಸಿದರು.
ವಿಶೇಷ ಘಟಕ ಯೋಜನೆಯಡಿ, ಗಿರಿಜನ ಉಪಯೋಜನೆಯಡಿ ಹಾಗೂ ಸಿಆರ್ಎಫ್ ಯೋಜನೆಯಡಿ ಒಟ್ಟು 107 ಕಿ.ಮೀ. ಉದ್ದ ರಸ್ತೆಯನ್ನು ಅಭಿವೃದ್ಧಿಪಡಿಸಲಾಗಿದೆ. ಇದಲ್ಲದೆ ಕನರ್ಾಟಕ ರಸ್ತೆ ಅಭಿವೃದ್ಧಿ ನಿಗಮದಡಿ ಒಟ್ಟು 2921 ಲಕ್ಷ ರೂ. ವೆಚ್ಚದಲ್ಲಿ 81 ಕಿ.ಮೀ. ಉದ್ದದ ರಸ್ತೆ ಅಭಿವೃದ್ಧಿ ಪಡಿಸಲಾಗಿದೆ. 2,028 ಲಕ್ಷ ರೂ. ವೆಚ್ಚದಲ್ಲಿ 30 ಸೇತುವೆ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ. 18 ಕೋಟಿ ರೂ. ವನೆಚ್ಚದ ಮಂಗಳೂರು ನ್ಯಾಯಾಲಯ ಕಟ್ಟಡ ಕಾಮಗಾರಿ ಪ್ರಗತಿಯಲ್ಲಿದೆ. ಸರ್ಕೂಟ್ ಹೌಸ್ ನ 3 ಕೋಟಿ ರೂ. ವೆಚ್ಚದ ಕಟ್ಟಡ ಕಾಮಗಾರಿ ಪ್ರಗತಿಯಲ್ಲಿದೆ. ಪುತ್ತೂರು ಮಿನಿ ವಿಧಾನಸೌಧದ ಎರಡನೆ ಹಂತದ ಕಾಮಗಾರಿಯನ್ನು ಈಗಾಗಲೆ 550 ಲಕ್ಷ ರೂ. ವೆಚ್ಚದಲ್ಲಿ ಕೈಗೊಳ್ಳಲಾಗುವುದು. ಸುಳ್ಯ ಮಿನಿ ವಿಧಾನಸೌಧ ಕಾಮಗಾರಿ ಮಾರ್ಚ್ ಗೆ ಅಂತ್ಯಗೊಳ್ಳಲಿದೆ. ಮಂಗಳೂರು, ಮೂಡಬಿದ್ರೆ ಹಾಗೂ ಬಂಟ್ವಾಳಗಳಲ್ಲಿ 32 ಕೋಟಿ ರೂ. ವೆಚ್ಚದಲ್ಲಿ ನ್ಯಾಯಾಲಯ ಕಟ್ಟಡ ಕಾಮಗಾರಿ ಪ್ರಗತಿಯಲ್ಲಿದೆ. ಗ್ರಾಮೀಣ ಕುಡಿಯುವ ನೀರಿನ ಯೋಜನೆಯಡಿ ಪ್ರಸಕ್ತ ಸಾಲಿನಲ್ಲಿ 5638 ಲಕ್ಷ ರೂ. ಕ್ರಿಯಾ ಯೋಜನೆ ಸರಕಾರ ಮಂಜೂರು ಮಾಡಿದ್ದು 1331 ಲಕ್ಷ ರೂ. ಖರ್ಚು ಮಾಡಲಾಗಿದೆ. ಇಂದಿರಾ ಆವಾಜ್ ಯೋಜನೆಯಡಿ 2233 ಮನೆಗಳ ಭೌತಿಕ ಗುರಿ ಹಾಗೂ 1116 ಲಕ್ಷ ರೂ. ಆರ್ಥಿಕ ಗುರಿ ನಿಗದಿ ಮಾಡಲಾಗಿದೆ. ಇದುವರೆಗೆ 2011 ಫಲಾನುಭವಿಗಳನ್ನು ಆಯ್ಕೆ ಮಾಡಲಾಗಿದ್ದು, 28 ಮನೆಗಳು ಪೂರ್ಣಗೊಂಡು ಉಳಿದವು ಪ್ರಗತಿ ಹಂತದಲ್ಲಿದೆ ಎಂದವರು ಜಿಲ್ಲೆಯ ವಿವಿಧ ಅಭಿವೃದ್ಧಿ ಯೋಜನೆಗಳ ಕುರಿತಂತೆ ವಿವರ ನೀಡಿದರು.

ಕಾರ್ಯ ಕ್ರಮ ದಲ್ಲಿ ಸಮಗ್ರ ಕೃಷಿ ಪದ್ಧ ತಿಗಳು ಮತ್ತು ಬೆಳೆ ಗಳ ವೈ ವಿದ್ದೀ ಕರಣ ವಿಭಾ ಗದಲ್ಲಿ ರಾಜ್ಯ ಮಟ್ಟದ ಕೃಷಿ ಪಂಡಿತ ಪ್ರಶ ಸ್ತಿಯ ತೃ ತೀಯ ಸ್ಥಾನ ಪಡೆದ ಚೇ ಳೂರಿನ ಜಾನ್ ವೇಗಸ್ ಹಾಗೂ ವಿಟ್ಲ ಕಸಬಾ ಗ್ರಾ ಮದ ಪಿ. ಶಂ ಕರ್ ಭಟ್ ಅವರನ್ನು ಜಿಲ್ಲಾ ಡಳಿ ತದ ವತಿ ಯಿಂದ ಗೌರ ವಿಸಲಾ ಯಿತು.
ಇದೇ ವೇಳೆ ಜಿಲ್ಲಾ ಮಟ್ಟದ ಭತ್ತದ ಬೆಳೆ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ಬಾಳ್ತಿಲ ಗ್ರಾಮದ ಆನಂದ ಶೆಟ್ಟಿ, ದ್ವಿತೀಯ ಸ್ಥಾನ ಪಡೆದ ಬೆಳ್ತಂಗಡಿ ಸೋಣಂದೂರಿನ ಶಂಕರ ಪ್ರಭು ಹಾಗೂ ತೃತೀಯ ಸ್ಥಾನ ಪಡೆದ ಸುಳ್ಯ ಕಸಬಾದ ಕಮಲ ರೈ ಹಾಗೂ ತಾಲೂಕು ಮಟ್ಟದ ಭತ್ತದ ಬೆಳೆ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಹಂಚಿಕೊಂಡಿರುವ ಪಂಜಿಮೊಗರು ಗ್ರಾಮದ ಎಲಿಯಾಸ್ ಡಿಸೋಜಾ, ಬೆಳ್ಮ ಗ್ರಾಮದ ಡಿ. ಅಬೂಬಕರ್, ದ್ವಿತೀಯ ಸ್ಥಾನ ಪಡೆದ ತಾಳಿಪ್ಪಾಡಿ ಗ್ರಾಮದ ರಮೇಶ್ ಎನ್. ರಾವ್ ರಾಗೂ ತೃತೀಯ ಸ್ಥಾನ ಪಡೆದ ಶೀಮಂತೂರು ಗ್ರಾಮದ ಸುಂದರಿ ಶೆಡ್ತಿಯವರನ್ನು ಗೌರವಿಸಲಾಯಿತು.ಇದೇ ಸಂದರ್ಭ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪವರ್ ಲಿಫ್ಟಿಂಗ್ನಲ್ಲಿ ಸಾಧನೆ ಮಾಡಿದ ಕ್ರೀಡಾಪಟು ಸುಪ್ರೀತರನ್ನು ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಸಂಸದ ನಳಿನ್ ಕುಮಾರ್ ಕಟೀಲ್, ವಿಧಾನ ಸಭಾ ಉಪಸಭಾಧ್ಯಕ್ಷರಾದ ಎನ್.ಯೋಗೀಶ್ ಭಟ್, ಯು.ಟಿ.ಖಾದರ್, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ನಾಗರಾಜ ಶೆಟ್ಟಿ, ಕ್ಯಾಪ್ಟನ್ ಗಣೇಶ್ ಕಾರ್ಣಿಕ್, ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಶೈಲಜಾ ಭಟ್, ಮೇಯರ್ ಪ್ರವೀಣ್, ಜಿಲ್ಲಾಧಿಕಾರಿ ಡಾ.ಎನ್.ಎಸ್. ಚನ್ನಪ್ಪ ಗೌಡ, ಪಶ್ಚಿಮ ವಲಯ ಐಜಿಪಿ ಪ್ರತಾಪ್ ರೆಡ್ಡಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಭಿಷೇಕ್ ಗೋಯಲ್, ಮಂಗಳೂರು ಪೊಲೀಸ್ ಕಮಿಷನರ್ ಸೀಮಂತ್ ಕುಮಾರ್ ಸಿಂಗ್ ಮೊದಲಾದವರು ಉಪಸ್ಥಿತರಿದ್ದರು.
ರಾಷ್ಟ್ರ ಧ್ವಜಾರೋಹಣದ ಬಳಿಕ ಪೊಲೀಸ್ ಬ್ಯಾಂಡ್ ನೊಂದಿಗೆ ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ದೊರೆಯಿತು. ಕಪಿತಾನಿಯಾ ವಿದ್ಯಾರ್ಥಿಗಳು ನಾಡಗೀತೆ ಹಾಗೂ ರೈತಗೀತೆ ಹಾಡಿದರು. ಬಳಿಕ ತೆರೆದ ಜೀಪಿನಲ್ಲಿ ಸಚಿವರು ಪರೇಡ್ ವೀಕ್ಷಿಸಿ ಗೌರವ ರಕ್ಷೆ ಸ್ವೀಕರಿಸಿದರು. ಕೊನೆಯಲ್ಲಿ ಶಾಲಾ ಸೈಂಟ್ ಜೆರೋಸಾ ವಿದ್ಯಾರ್ಥಿಗಳಿಂದ ಆಕರ್ಷಕ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದು, ಬಳಿಕ ವಿಂಟೇಜ್ ಕಾರು ರಾಲಿ ನಡೆಯಿತು.