Sunday, January 15, 2012

ನೇತ್ರಾವತಿ - ಫಲ್ಗುಣಿ ಜೋಡುಕರೆ ಕಂಬಳ

ಮಂಗಳೂರೂ: 17ನೇ ರಾಷ್ಟ್ರೀಯ ಯುವಜನೋತ್ಸವದ ಅಂಗವಾಗಿ "ನೇತ್ರಾವತಿ _ ಫಲ್ಗುಣಿ" ಜೋಡುಕರೆ ಕಂಬಳ ಮಂಗಳೂರಿನ ಹೊರವಲಯದಲ್ಲಿರುವ ಪಿಲಿಕುಳ ನಿಸರ್ಗಧಾಮದ ಗುತ್ತು ಮನೆಯ ಮುಂಭಾಗದಲ್ಲಿರುವ ಬಾಕಿಮಾರು ಗದ್ದೆಯಲ್ಲಿ ನಿರ್ಮಿಸಿದ ಜೋಡುಕೆರೆಯಲ್ಲಿ ಆರಂಭಗೊಂಡಿತು.ಜಿಲ್ಲಾ ಉಸ್ತುವಾರಿ ಸಚಿವ ಜೆ.ಕೃಷ್ಣ ಪಾಲೇಮಾರ್ ಚಾಲನೆ ನೀಡಿದರು. ಜಿಲ್ಲಾಧಿಕಾರಿ ಎನ್.ಎಸ್.ಚೆನ್ನಪ್ಪ ಗೌಡ , ಮೂಡಬಿದಿರೆ ಶಾಸಕ ಕೆ.ಅಭಯಚಂದ್ರ ಉಪಸ್ಥಿತರಿದ್ದರು. ನೇಗಿಲು ಹಿರಿಯ, ಕಿರಿಯ, ಅಡ್ಡ ಹಲಗೆ, ಹಗ್ಗ ಹಿರಿಯ ಮತ್ತು ಕಿರಿಯ , ಕನೆಹಲಗೆ ವಿಭಾಗಗಳಲ್ಲಿ ಸ್ಪರ್ಧೆ ನಡೆದವು. 130ರಷ್ಟು ಜೊತೆ ಕೋಣಗಳು ಕಂಬಳದಲ್ಲಿ ಭಾಗವಹಿಸಿದ್ದವು