Saturday, January 7, 2012

ಎನ್ ವೈಎಫ್; ಯುವಜನ ಒಕ್ಕೂಟಗಳ ಪೂರ್ಣ ಸಹಕಾರ

ಮಂಗಳೂರು,ಜನವರಿ.07:ಮಂಗಳೂರು ನಗರದಲ್ಲಿ ಇದೇ ಮೊದಲ ಸಲ ನಡೆಯುತ್ತಿರುವ ಮೆಗಾ ರಾಷ್ಟ್ರೀಯ ಯುವಜನೋತ್ಸವ ಕಾರ್ಯಕ್ರಮದ ಯಶಸ್ಸಿಗೆ ಜಿಲ್ಲೆಯ ಎಲ್ಲಾ ತಾಲೂಕುಗಳ ಯುವಜನ ಒಕ್ಕೂಟಗಳು ತುಂಬು ಹೃದಯದ ಸಹಕಾರ ನೀಡುವುದಾಗಿ ರಾಷ್ಟ್ರೀಯ ಯುವಜನೋತ್ಸವ ಅಧ್ಯಕ್ಷರಾದ ಡಾ.ಎನ್.ಎಸ್. ಚನ್ನಪ್ಪ ಗೌಡರಿಗೆ ತಿಳಿಸಿದರು.
ಇಂದು ಜಿಲ್ಲಾ ಕ್ರೀಡಾಂಗಣದ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ ಹಾಗೂ ತಾಲೂಕು ಮಟ್ಟದ ಯುವಜನ ಒಕ್ಕೂಟಗಳ ಪದಾಧಿಕಾರಿಗಳ ಸಭೆಯಲ್ಲಿ ಪದಾಧಿಕಾರಿಗಳು ಈ ವಿಷಯ ತಿಳಿಸಿದರುಸ್ವಾಗತ ಸಮಿತಿ,ಆಹಾರ ಸಮಿತಿ,ಪ್ರಚಾರ ಸಮಿತಿ ಇನ್ನಿತರೆ ಸಮಿತಿಗಳೊಂದಿಗೆ ಯುವಜನ ಒಕ್ಕೂಟದ ಸದಸ್ಯರು ಸ್ಪಂದಿಸಿ ಕಾರ್ಯ ನಿರ್ವಹಿಸುವುದಾಗಿ ತಿಳಿಸಿದ್ದಾರೆ.ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಡಾ.ವಿಜಯಪ್ರಕಾಶ್,ಯುವಜನ ಒಕ್ಕೂಟಗಳ ಪದಾಧಿಕಾರಿಗಳಾದ ಶೈಲೇಶ್,ಹರೀಶ್ ಬೈಕಂಪಾಡಿ,ವಿಠಲ ಸಿ.ಪೂಜಾರಿ,ರಮೇಶ್, ಹಮೀದ್ಇಗ್ನೂರ್,ಶ್ರೀಮತಿ ಕಾಂತಿಮಾಲ್ ಸುಳ್ಯ, ದಿನೇಶ್ ಪುತ್ತೂರು ಮುಂತಾದವರು ಭಾಗವಹಿಸಿದ್ದರು.