Saturday, January 14, 2012

ಕೂಚುಪುಡಿ ಸ್ಪರ್ಧೆ

ಮಂಗಳೂರು14:ಇಲ್ಲಿನ ಗೋಕರ್ಣನಾಥೇಶ್ವರ ಸಭಾಂಗಣದಲ್ಲಿ ಇಂದು ಬೆಳಗ್ಗೆ ಕೂಚುಪುಡಿ ನೃತ್ಯ ಸ್ಪರ್ಧೆ ಉದ್ಘಾಟನೆಗೊಂಡಿತು. ಕಾರ್ಯಕ್ರಮದ ಉದ್ಘಾಟನೆಯನ್ನು ತೀರ್ಪುಗಾರರಾದ ಗುರು ಎಸ್.ಪಿ..ಭಾರತಿ,ರಂಜನಾ ಶಂಕರ್, ಡಾ.ಸರಸ್ವತಿ ನಡೆಸಿದರು. ದೀಪ ಬೆಳಗುವುದರೊಂದಿಗೆ ಸಾಂಪ್ರದಾಯಿಕವಾಗಿ ಶುರುವಾದ ಈ ಕಾರ್ಯಕ್ರಮ ನೃತ್ಯ ಸಂಗಮಕ್ಕೆ ಎಡೆ ಮಾಡಿಕೊಟ್ಟಿತು.
ಸ್ಪರ್ಧಿಗಳಿಗೆ ತಮ್ಮ ಪ್ರತಿಭಾ ಪ್ರದರ್ಶನಕ್ಕೆ 15 ನಿಮಿಷಗಳ ಕಾಲ ಕಾಲಾವಕಾಶ ನೀಡಲಾಗಿದ್ದು ಅವರ ನೃತ್ಯ ರೀತಿ, ಅಭಿನಯ, ಕರಣಗಳ ಬಳಕೆಯ ಆದಾರದ ಮೇಲೆ ತೀರ್ಪು ನೀಡಲಾಗುವುದು. ಕರಾವಳಿಯ ರಂಗದ ಮೇಲೆ ಆಂಧ್ರದ ನೃತ್ಯ ಪ್ರಾಕಾರ ಜನಮನ ಸೂರೆಗೊಂಡಿತು.

-ರಾಧಿಕಾ.ಕೆ.ವಿಟ್ಲ