Monday, January 16, 2012

ಸಮಾರೋಪ ಸಮಾರಂಭದಲ್ಲಿ ಸ್ವಾಗತ ಭಾಷಣ

ಮಂಗಳೂರು: 17ನೇ ಅಂತಾರಾಷ್ಟ್ರೀಯ ಯುವಜನೋತ್ಸವದ ಸಮಾರೋಪ ಸಮಾರಂಭದ ಸ್ವಾಗತ ಭಾಷಣ ಪ್ರಾರಂಭಗೊಂಡಿತು. ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ,ಕರ್ನಾಟಕ ವಿಧಾನ ಪರಿಷತ್ ಸಭಾಪತಿ ಡಿ.ಎಚ್.ಶಂಕರ್ ಮೂರ್ತಿ, ಜಮ್ಮು ಕಾಶ್ಮೀರದ ಸಚಿವ ರಾಜೇಂದ್ರ ಸಿಂಗ್ ಚಿಬ್, ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣ ಜೆ ಪಾಲೇಮಾರ್, ಶಾಸಕ ಯೋಗೀಶ್ ಭಟ್, ಸಂಸದ ನಳಿನ್ ಕುಮಾರ್ ಕಟೀಲು, ಕ್ಯಾ.ಗಣೇಶ್ ಕಾರ್ಣಿಕ್,ಮಂಗಳೂರು ಮೇಯರ್ ಪ್ರವೀಣ್, ಜಿ.ಪಂ.ಅಧ್ಯಕ್ಷೆ ಕೆ.ಟಿ.ಶೈಲಜಾ ಭಟ್, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ನಾಗರಾಜ ಶೆಟ್ಟಿ,ಕೇಂದ್ರ ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ ಕಾರ್ಯದರ್ಶಿ ಸಿಂಧಶ್ರೀ ಗುಲ್ಸರ್,ಅಂತಾರಾಷ್ಟ್ರೀಯ ಅಥ್ಲೇಟ್ ಗಳಾದ ಉದಯ್ ಕೆ.ಪ್ರಭು, ಅರ್ಜುನ್ ದೇವಯ್ಯ, ಒಲಿಂಪಿಕ್ ಮಾಜಿ ಆಟಗಾರ ಹಾಗೂ ಅರ್ಜುನ್ ಪ್ರಶಸ್ತಿ ಪುರಸ್ಕೃತ ಎಂ.ಪಿ.ಗಣೇಶ್ ಸೇರಿದಂತೆ ಇತರ ಗಣ್ಯರು ವೇದಿಕೆಯಲ್ಲಿದ್ದರು.ಡಿಪಾರ್ಟ್ ಮೆಂಟ್ ಆಫ್ ಯೂತ್ ಸರ್ವೀಸಸ್ ಇದರ ಪ್ರಿನ್ಸಿಪಲ್ ಸೆಕ್ರೆಟರಿ ಐ.ಆರ್. ಪೆರುಮಾಳ್ ಸ್ವಾಗತಿಸಿದರು.