Tuesday, January 25, 2011

ರಾಷ್ಟ್ರೀಯ ರಸ್ತೆ ಸುರಕ್ಷಾ ಸಪ್ತಾಹಕ್ಕೆ ಚಾಲನೆ

ಮಂಗಳೂರು,ಜನವರಿ.25:ರಸ್ತೆ ಸುರಕ್ಷತೆಯು ನಮ್ಮ ನಿರಂತರ ಧ್ಯೇಯ ಎಂಬ ಘೋಷ ವಾಕ್ಯದೊಂದಿಗೆ ಆರಂಭವಾದ 22ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹಕ್ಕೆ ಇಂದು ಮಂಗಳೂರಿನಲ್ಲಿ ಚಾಲನೆ ನೀಡಲಾಯಿತು.
ದಕ್ಷಿಣ ಕನ್ನಡ ಜಿಲ್ಲಾ ಡಳಿತ,ಸಾರಿಗೆ ಇಲಾಖೆ,ಮಂಗ ಳೂರು ನಗರ ಪೊಲೀಸ್ ಮತ್ತು ದ.ಕ. ಜಿಲ್ಲಾ ಪೊಲೀಸ್ ಆಶ್ರಯ ದಲ್ಲಿ ಆಯೋ ಜಿಸಿದ ಈ ಕಾರ್ಯ ಕ್ರಮ ವನ್ನು ಮಾಹೆ ವಿಶ್ವ ವಿದ್ಯಾ ನಿಲಯ ದ ವಿ ಶ್ರಾಂತ ಕುಲ ಪತಿ ಗಳಾದ ಡಾ.ಬಿ.ಎಂ.ಹೆಗ್ಡೆ ಅವರು ಉದ್ಘಾ ಟಿಸಿ ದರು.ಮೂಡದ ಅಧ್ಯಕ್ಷ ರಾದ ಡಾ. ಮಾಧವ ಭಂಡಾರಿ,ಮುಖ್ಯ ಅತಿಥಿ ಗಳಾಗಿ ಮಂಗ ಳೂರು ನಗರ ಪೊಲೀಸ್ ಆಯುಕ್ತರಾದ ಸೀಮಂತ್ ಕುಮಾರ್ ಸಿಂಗ್, ಜಿಲ್ಲಾ ಎಸ್ಪಿ ಡಾ.ಸುಬ್ರಮಣ್ಯೇಶ್ವರ ರಾವ್, ಪ್ರಾದೇಶಿಕ ಸಾರಿಗೆ ಅಧಿಕಾರಿ ಸೇವಾ ನಾಯಕ್, ಡಿಸಿಪಿ ಮುತ್ತೂರಾಯ, ದ.ಕ. ಜಿಲ್ಲಾ ಸಿಟಿ ಬಸ್ ಮಾಲೀಕರ ಸಂಘದ ಕಾರ್ಯದರ್ಶಿಗಳಾದ ಅಜೀಜ್ ಪರ್ತಿಪಾಡಿ ಮತ್ತಿರರ ಗಣ್ಯರು ಸಮಾರಂಭದಲ್ಲಿ ಉಪಸ್ಥಿತರಿದ್ದರು.