Monday, January 10, 2011

ತಾಜ್ಯ ವಿಲೇವಾರಿಗೆ ವಿಶೇಷ ಕಾರ್ಯಯೋಜನೆ : ಜಿಲ್ಲಾಧಿಕಾರಿ

ಮಂಗಳೂರು,ಜನವರಿ 10: ವೇಗವಾಗಿ ಅಭಿವೃದ್ದಿ ಹೊಂದುತ್ತಿರುವ ದಕ್ಷಿಣ ಕನ್ನಡ ಜಿಲ್ಲೆಯ ಬಹು ದೊಡ್ಡ ಸಮಸ್ಯೆಯಾಗಿರುವ ತಾಜ್ಯ ವಿಲೇವಾರಿಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಕಾರ್ಯ ಯೋಜನೆಯನ್ನು ಸಿದ್ದಪಡಿಸಲಾಗಿದ್ದು,ಹಂತ ಹಂತವಾಗಿ ಇದನ್ನು ಪುರಸಭೆ, ನಗರ ಪಂಚಾಯತ್, ಮಂಗಳೂರು ನಗರ ಸೇರಿದಂತೆ ಜಿಲ್ಲೆಯಾದ್ಯಂತ ಜಾರಿಗೆ ತರಲಾಗುವುದು ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸುಬೋದ್ ಯಾದವ್ ಹೇಳಿದ್ದಾರೆ. ಮಂಗ ಳೂರು ಮಹಾ ನಗರ ಪಾಲಿ ಕೆಯ ಘನ ತಾಜ್ಯ ವಸ್ತು ನಿರ್ವ ಹಣಾ ಯೋಜನೆ ಯಂತೆ ನಗ ದ ಉರ್ವ ಮಾರು ಕಟ್ಟೆ ಪ್ರದೇ ಶದ ಮನೆ ಮನೆಗ ಳಿಂದ ತಾಜ್ಯ ಸಂಗ್ರ ಹಣೆ ಮತ್ತು ವಿಂಗ ಡನೆ ಯ ಕಾರ್ಯ ಕ್ರಮಕ್ಕೆ ಚಾಲನೆ ನೀಡಿ ಮಾತನಾ ಡಿದರು.ಪಾಲಿಕೆ ಮೇಯರ್ ರಜನಿ ದುಗ್ಗಣ್ಣ, ಆಯುಕ್ತ ರಾದ ಡಾ.ವಿಜಯ ಪ್ರಕಾಶ್,ಸಮಾಜ ಸೇವಕಿ ಪ್ರಭಾ ಕುಡ್ವಾ, ಸ್ಥಳಿಯ ಪಾಲಿಕೆ ಸದಸ್ಯರುಗಳು ಮತ್ತು ಅಧಿಕಾರಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.