Saturday, January 15, 2011

ಸ್ವಚ್ಛ,ಹಸಿರು,ಪ್ರಗತಿಪರ ಮಂಗಳೂರಿಗಾಗಿ ಓಟ

ಮಂಗಳೂರು, ಜನವರಿ.15: ಫೆಬ್ರವರಿ 20 ರಂದು ಮಂಗಳೂರು ನಗರದ ನೆಹರು ಮೈದಾನದಿಂದ ಮಂಗಳಾ ಸ್ಟೇಡಿಯಂವರೆಗೆ ಹಾಫ್ ಮ್ಯಾರಥಾನ್ (ಓಟ) ನಡೆಸಲು ಜಿಲ್ಲಾಡಳಿತ ನಿರ್ಧರಿಸಿದೆ.
ಸ್ವಚ್ಛ, ಹಸಿರು ಹಾಗೂ ಪ್ರಗತಿಪರ ನಗರ ಎಂಬ ಧ್ಯೇಯವಿರಿಸಿ ಈ ಓಟವನ್ನು ಆಯೋಜಿಸಲಾಗಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸುಬೋಧ್ ಯಾದವ್ ಹೇಳಿದರು.ಈ ಸಂಬಂಧ ಜಿಲ್ಲಾಧಿ ಕಾರಿಗಳ ಅಧ್ಯಕ್ಷ ತೆಯಲ್ಲಿ ನಡೆದ ಜಿಲ್ಲಾ ಮಟ್ಟದ ಅಧಿಕಾ ರಿಗಳ ಪೂರ್ವ ಭಾವಿ ಸಭೆ ಯಲ್ಲಿ ಮ್ಯಾರ ಥಾನ್ ಬಗ್ಗೆ ಸುದೀರ್ಘ ಚರ್ಚೆ ನಡೆಸ ಲಾಯಿತು. 6 ಕಿ. ಮೀ ದೂರದ ಓಟಕ್ಕೆ ಸಾರ್ವ ಜನಿಕ ರೆಲ್ಲರಿಗೂ ಮುಕ್ತ ಆಹ್ವಾ ನವಿದೆ. ಕ್ರೀಡಾಳು ಗಳಿಗೆ ಹಾಗೂ ಸಾರ್ವಜ ನಿಕರಿಗೆ ಪ್ರತ್ಯೇಕ ಬಹುಮಾನ ನೀಡುವ ಬಗ್ಗೆಯೂ ಸಭೆ ತೀರ್ಮಾನ ಕೈಗೊಂಡಿತು. ವೃತ್ತಿಪರ ಕ್ರೀಡಾಳುಗಳಿಗೆ ಹತ್ತು ಬಹುಮಾನ ನೀಡಲು ನಿರ್ಧರಿಸಿದ್ದು, ಪ್ರಥಮ ಬಹುಮಾನ 20,000 ನಗದು, ಪದಕ ಮತ್ತು ಪ್ರಮಾಣ ಪತ್ರವನ್ನೊಳಗೊಂಡಿದೆ. ಸಂಚಾರ ವ್ಯವಸ್ಥೆ ಬಗ್ಗೆ, ಆಟಗಾರರಿಗೆ ಸೌಕರ್ಯ ಒದಗಿಸುವ ಬಗ್ಗೆ ವಿವಿಧ ಸಮಿತಿಗಳನ್ನು ರಚಿಸಲಾಯಿತು. ಹೆಚ್ಚಿನ ಮಾಹಿತಿಗೆ ಉಪವಿಭಾಗಾಧಿಕಾರಿ ಮಂಗಳೂರು ಅಥವಾ ಯುವಜನಸೇವಾ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಪಾಂಡುರಂಗ ಇವರನ್ನು ಸಂಪರ್ಕಿಸಬಹುದು ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.