Saturday, January 15, 2011

ಫೆ.12ರಂದು ನೇತ್ರಾವತಿ-ಪಲ್ಗುಣಿ ಜೋಡುಕೆರೆ ಕಂಬಳ

ಮಂಗಳೂರು, ಜನವರಿ. 15: ಪಿಲಿಕುಳ ನಿಸರ್ಗಧಾಮದಲ್ಲಿ 2010-11ನೇ ಸಾಲಿನ ನೇತ್ರಾವತಿ-ಪಲ್ಗುಣಿ ಜೋಡುಕೆರೆ ಕಂಬಳ ಆಯೋಜಿಸಲು ಕಂಬಳ ಸಮಿತಿ ಸಿದ್ಧತೆ ನಡೆಸಿದ್ದು, ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ಪೂರ್ವಭಾವಿ ಸಭೆ ನಡೆಯಿತು.
ಫೆಬ್ರವರಿ 12ರಂದು ಬೆಳಗ್ಗೆ ಕಂಬಳ ಉದ್ಘಾಟನೆಯಿಂದ ಆರಂಭಗೊಂಡು, ಸಂಜೆ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮಗಳ ವ್ಯವಸ್ಥೆಯ ಬಗ್ಗೆ ಕಂಬಳ ಕರೆ ನಿರ್ಮಾಣ, ಬಂದೋಬಸ್ತಿನ ವ್ಯವಸ್ಥೆ, ಪೊಲೀಸ್ ಔಟ್ ಪೋಸ್ಟ್, ಬಸ್ಸು ಸೌಕರ್ಯ, ನೀರಿನ ವ್ಯವಸ್ಥೆ, ಹಣಕಾಸು ವ್ಯವಸ್ಥೆಯ ಬಗ್ಗೆ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಯಿತು. ಮುಖ್ಯಮಂತ್ರಿಗಳು ಹಾಗೂ ಪ್ರವಾಸೋದ್ಯಮ ಸಚಿವರನ್ನು ಸಮಾರಂಭಕ್ಕೆ ಆಹ್ವಾನಿಸಲು ಹಾಗೂ ಕುಕ್ಕುಟ ಪ್ರದರ್ಶನ ಆಯೋಜಿಸಲು, ಕೋಳಿಗಳಿಗೆ ವಿಶೇಷ ಬಹುಮಾನ ನೀಡಲು ಸಭೆ ತೀರ್ಮಾನಿಸಿತು. ಸಭೆಯಲ್ಲಿ ಜಿಲ್ಲಾಧಿಕಾರಿಗಳು ಉಪಸ್ಥಿತರಿದ್ದರು.