
ಬಳ್ಳಾರಿ ಮತ್ತು ಉಡುಪಿ ಯಲ್ಲಿ 2012 ರ ಮೇ ಒಳಗೆ ಉಷ್ಣ ವಿದ್ಯುತ್ ಸ್ಥಾವರ ದ 2ನೇ ಘಟಕ ಪೂರ್ಣ ಗೊಳಿಸ ಲಾಗು ವುದು.ಉಷ್ಣ ಸ್ಥಾವರ ದ 2 ನೇ ಘಟಕ ಆರಂಭಿ ಸುವು ದರಿಂದ ಬಹು ತೇಕ ವಿದ್ಯುತ್ ಸಮಸ್ಯೆ ಪರಿಹಾರ ಸಾಧ್ಯ ವಿದೆ. ಜನತೆಗೆ ಗುಣಮಟ್ಟದ ವಿದ್ಯುತ್ ನೀಡಬೇಕೆಂಬುದು ಸರಕಾರದ ಧ್ಯೇಯ. ತಾನು ಇಂಧನ ಖಾತೆಯ ಅಧಿಕಾರ ವಹಿಸಿಕೊಂಡ ಬಳಿಕ ಕಳೆದ ಒಂದು ತಿಂಗಳಿನಿಂದ ಎಂಟು ಘಟಕಗಳಲ್ಲಿ 1,500 ಮೆಗಾ ವ್ಯಾಟ್ ವಿದ್ಯುತ್ ಉತ್ಪಾದಿಸಲಾಗುತ್ತಿದೆ. ಪ್ರತಿ ಘಟಕದಲ್ಲಿ 600 ಮೆಗಾ ವ್ಯಾಟ್ ವಿದ್ಯುತ್ ಉತ್ಪಾದಿಸಬೇಕೆಂಬುದು ಉದ್ದೇಶ. ಆದರೆ ಸದ್ಯ 500 ರಿಂದ 550 ಮೆ.ವ್ಯಾ. ವಿದ್ಯುತ್ ಉತ್ಪಾದಿಸಲಾಗುತ್ತಿದೆ. ಈಗಾಗಲೇ ಮಂಗಳೂರಿನಲ್ಲಿದ್ದ 3 ಕೇಂದ್ರಗಳನ್ನು ವಿಸ್ತರಿಸಿ 7 ಕೇಂದ್ರಗಳನ್ನಾಗಿ ಮಾಡಲಾಗಿದೆ.ಮಂಗಳೂರಿನ ಬಿಜೈನಲ್ಲೂ ವಿದ್ಯುತ್ ಸ್ಟೇಶನ್ ಸ್ಥಾಪಿಸಲು ಒತ್ತು ನೀಡಲಾಗಿದೆ ಎಂದರು.

ಸಮಸ್ಯೆ ಪರಿಹಾ ರಕ್ಕಾಗಿ ವಿಶೇಷ ವಾಹನ:
ವಿದ್ಯುತ್ ಸಮಸ್ಯೆ ನೀಗಿ ಸಲು ದಿನದ 24 ಗಂಟೆ ಸೇವೆ ನಿರ್ವಹಿ ಸಲಿ ರುವ 58 ಗ್ರಾಹಕ ಸ್ನೇಹಿ ವಾಹನ ಗಳನ್ನು ಬೆಂಗ ಳೂರಿ ನಲ್ಲಿ ಈಗಾಗಲೇ ಸಾರ್ವಜನಿಕ ಸೇವೆಗೆ ಬಿಡುಗಡೆ ಮಾಡಲಾಗಿದೆ. ಈ ವ್ಯವಸ್ಥೆಯನ್ನು ರಾಜ್ಯದ ಗ್ರಾಮೀಣ ಭಾಗಕ್ಕೂ ವಿಸ್ತರಿಸಲಾಗುವುದು. ವಾಹನದಲ್ಲಿ ಒಬ್ಬ ಇಂಜಿನಿಯರ್ ಮತ್ತು 4 ಮಂದಿ ತಾಂತ್ರಿಕ ತಜ್ಞರು ಕಾರ್ಯನಿರ್ವಹಿಸುತಿದ್ದು, ಜನ ತಮ್ಮ ಊರಿನಲ್ಲಿ ವಿದ್ಯುತ್ ಅಡಚಣೆ ಉಂಟಾದಾಗ ಈ ವಿಶೇಷ ವಾಹನದ ಮೊರೆ ಹೋಗಿ ಸಹಾಯ ಪಡೆದುಕೊಳ್ಳಬಹುದು. ಹಳ್ಳಿಯ ಜನತೆಗೆ ಈ ವಾಹನ ಹೆಚ್ಚು ಉಪಯಕ್ತವಾಗಲಿದೆ ಎಂದ ಅವರು ರಾಜ್ಯದಲ್ಲಿನ ವಿದ್ಯುತ್ ಕೇಂದ್ರಗಳಲ್ಲಿನ ಸಮಸ್ಯೆಗಳನ್ನು ಸರಿಪಡಿಸಿಕೊಂಡು ಮುಂದಿನ 10 ವರ್ಷಗಳಿಗೆ ಬೇಕಾಗುವಷ್ಟು ವಿದ್ಯುತ್ ಸಂಗ್ರಹದತ್ತ ಗಮನಹರಿಸಲಾಗಿದೆ ಎಂದು ಹೇಳಿದರು.
