Wednesday, January 26, 2011

ಮುಂದಿನ 2.5 ವರ್ಷದೊಳಗೆ ರಾಜ್ಯವಿದ್ಯುತ್ ಸ್ವಾವಲಂಬಿ: ಸಚಿವೆ ಶೋಭಾ ಕರಂದ್ಲಾಜೆ

ಮಂಗಳೂರು,ಜನವರಿ.26:ಕರ್ನಾಟಕ ರಾಜ್ಯ ಮುಂದಿನ ಎರಡೂವರೆ ವರ್ಷದೊಳಗೆ ವಿದ್ಯುತ್ ಸ್ವಾವಲಂಬಿಯಾಗಲಿದೆ ಎಂದು ರಾಜ್ಯ ಇಂಧನ ಸಚಿವರಾದ ಶೋಭಾ ಕರಂದ್ಲಾಜೆ ಹೇಳಿದರು.ಮಂಗಳೂರು ವಿದ್ಯುಚ್ಛಕ್ತಿ ಸರಬರಾಜು ಕಂಪೆನಿ ವತಿಯಿಂದ ಮಂಗಳೂರು ನಗರದಲ್ಲಿ ಗುಣಮಟ್ಟದ ವಿದ್ಯುತ್ ಸರಬರಾಜಿಗಾಗಿ 33/ 11ಕೆವಿ ಕುದ್ರೋಳಿ ಮತ್ತು ನಂದಿಗುಡ್ಡ ವಿದ್ಯುತ್ ಉಪಕೇಂದ್ರಗಳನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಬಳ್ಳಾರಿ ಮತ್ತು ಉಡುಪಿ ಯಲ್ಲಿ 2012 ರ ಮೇ ಒಳಗೆ ಉಷ್ಣ ವಿದ್ಯುತ್ ಸ್ಥಾವರ ದ 2ನೇ ಘಟಕ ಪೂರ್ಣ ಗೊಳಿಸ ಲಾಗು ವುದು.ಉಷ್ಣ ಸ್ಥಾವರ ದ 2 ನೇ ಘಟಕ ಆರಂಭಿ ಸುವು ದರಿಂದ ಬಹು ತೇಕ ವಿದ್ಯುತ್ ಸಮಸ್ಯೆ ಪರಿಹಾರ ಸಾಧ್ಯ ವಿದೆ. ಜನತೆಗೆ ಗುಣಮಟ್ಟದ ವಿದ್ಯುತ್ ನೀಡಬೇಕೆಂಬುದು ಸರಕಾರದ ಧ್ಯೇಯ. ತಾನು ಇಂಧನ ಖಾತೆಯ ಅಧಿಕಾರ ವಹಿಸಿಕೊಂಡ ಬಳಿಕ ಕಳೆದ ಒಂದು ತಿಂಗಳಿನಿಂದ ಎಂಟು ಘಟಕಗಳಲ್ಲಿ 1,500 ಮೆಗಾ ವ್ಯಾಟ್ ವಿದ್ಯುತ್ ಉತ್ಪಾದಿಸಲಾಗುತ್ತಿದೆ. ಪ್ರತಿ ಘಟಕದಲ್ಲಿ 600 ಮೆಗಾ ವ್ಯಾಟ್ ವಿದ್ಯುತ್ ಉತ್ಪಾದಿಸಬೇಕೆಂಬುದು ಉದ್ದೇಶ. ಆದರೆ ಸದ್ಯ 500 ರಿಂದ 550 ಮೆ.ವ್ಯಾ. ವಿದ್ಯುತ್ ಉತ್ಪಾದಿಸಲಾಗುತ್ತಿದೆ. ಈಗಾಗಲೇ ಮಂಗಳೂರಿನಲ್ಲಿದ್ದ 3 ಕೇಂದ್ರಗಳನ್ನು ವಿಸ್ತರಿಸಿ 7 ಕೇಂದ್ರಗಳನ್ನಾಗಿ ಮಾಡಲಾಗಿದೆ.ಮಂಗಳೂರಿನ ಬಿಜೈನಲ್ಲೂ ವಿದ್ಯುತ್ ಸ್ಟೇಶನ್ ಸ್ಥಾಪಿಸಲು ಒತ್ತು ನೀಡಲಾಗಿದೆ ಎಂದರು.
ಸಮಸ್ಯೆ ಪರಿಹಾ ರಕ್ಕಾಗಿ ವಿಶೇಷ ವಾಹನ:
ವಿದ್ಯುತ್ ಸಮಸ್ಯೆ ನೀಗಿ ಸಲು ದಿನದ 24 ಗಂಟೆ ಸೇವೆ ನಿರ್ವಹಿ ಸಲಿ ರುವ 58 ಗ್ರಾಹಕ ಸ್ನೇಹಿ ವಾಹನ ಗಳನ್ನು ಬೆಂಗ ಳೂರಿ ನಲ್ಲಿ ಈಗಾಗಲೇ ಸಾರ್ವಜನಿಕ ಸೇವೆಗೆ ಬಿಡುಗಡೆ ಮಾಡಲಾಗಿದೆ. ಈ ವ್ಯವಸ್ಥೆಯನ್ನು ರಾಜ್ಯದ ಗ್ರಾಮೀಣ ಭಾಗಕ್ಕೂ ವಿಸ್ತರಿಸಲಾಗುವುದು. ವಾಹನದಲ್ಲಿ ಒಬ್ಬ ಇಂಜಿನಿಯರ್ ಮತ್ತು 4 ಮಂದಿ ತಾಂತ್ರಿಕ ತಜ್ಞರು ಕಾರ್ಯನಿರ್ವಹಿಸುತಿದ್ದು, ಜನ ತಮ್ಮ ಊರಿನಲ್ಲಿ ವಿದ್ಯುತ್ ಅಡಚಣೆ ಉಂಟಾದಾಗ ಈ ವಿಶೇಷ ವಾಹನದ ಮೊರೆ ಹೋಗಿ ಸಹಾಯ ಪಡೆದುಕೊಳ್ಳಬಹುದು. ಹಳ್ಳಿಯ ಜನತೆಗೆ ಈ ವಾಹನ ಹೆಚ್ಚು ಉಪಯಕ್ತವಾಗಲಿದೆ ಎಂದ ಅವರು ರಾಜ್ಯದಲ್ಲಿನ ವಿದ್ಯುತ್ ಕೇಂದ್ರಗಳಲ್ಲಿನ ಸಮಸ್ಯೆಗಳನ್ನು ಸರಿಪಡಿಸಿಕೊಂಡು ಮುಂದಿನ 10 ವರ್ಷಗಳಿಗೆ ಬೇಕಾಗುವಷ್ಟು ವಿದ್ಯುತ್ ಸಂಗ್ರಹದತ್ತ ಗಮನಹರಿಸಲಾಗಿದೆ ಎಂದು ಹೇಳಿದರು. ಸಮಾ ರಂಭ ದಲ್ಲಿ ಮುಖ್ಯ ಅತಿಥಿ ಯಾಗಿದ್ದ ಪಾ ಲ್ಗೊಂಡು ಮಾತ ನಾಡಿದ ಜಿಲ್ಲಾ ಉಸ್ತು ವಾರಿ ಸಚಿವ ಜೆ.ಕೃಷ್ಣ ಪಾಲೆ ಮಾರ್ ಅವರು ರಾಜ್ಯ ಸರ ಕಾರ ಮೂಲ ಭೂತ ಸೌಕರ್ಯ ಗಳಾದ ನೀರು, ರಸ್ತೆ ಮತ್ತು ನಿ ರಂತರ ಗುಣ ಮಟ್ಟದ ವಿದ್ಯುತ್ ಪೂರೈ ಕೆಗೆ ಒತ್ತು ನೀಡಿದೆ ಮತ್ತು ಮೆಸ್ಕಾಂ ಉತ್ತಮ ವಾಗಿ ಕೆಲಸ ನಿರ್ವಹಿ ಸುತ್ತಿದೆ ಎಂದು ಶ್ಲಾಘಿ ಸಿದರು. ವಿಧಾನ ಸಭೆಯ ಉಪ ಸಭಾ ಧ್ಯಕ್ಷ ಎನ್.ಯೋಗೀಶ್ ಭಟ್,ಶಾಸಕ ಯು.ಟಿ.ಖಾದರ್,ವಿಧಾನ ಪರಿಷತ್ ಸದಸ್ಯ ಕ್ಯಾ.ಗಣೇಶ್ ಕಾರ್ಣಿಕ್, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಿ.ನಾಗರಾಜ ಶೆಟ್ಟಿ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದರು. ಮಂಗಳೂರು ಮೇಯರ್ ರಜನಿ ದುಗ್ಗಣ್ಣ, ಉಪ ಮೇಯರ್ ರಾಜೇಂದ್ರ ಕುಮಾರ್, ಜಿಲ್ಲಾ ಪಂಚಾಯತ್ ಅಧ್ಯಕ್ಷ ಸಂತೋಷ್ ಕುಮಾರ್ ಭಂಡಾರಿ, ಮೀನುಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷ ನಿತಿನ್ ಕುಮಾರ್ ಮುಖ್ಯ ಅತಿಥಿಗಳಾಗಿದ್ದರು. ಮೆಸ್ಕಾಂ ವ್ಯವಸ್ಥಾಪಕ ನಿರ್ದೇಶಕರಾದ ಎಸ್.ಸುಮಂತ್ ಅವರು ಅಥಿತಿಗಳನ್ನು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.