ಮಂಗಳೂರು ಜನವರಿ 24::-ಭಾರತ ರತ್ನ ಪಂಡಿತ್ ಭೀಮಸೇನ್ ಜೋಷಿಯವರ

ನಿಧನವು ಸಂಗೀತ ಸಾರಸ್ವತ ಲೋಕದ ಎಲ್ಲಾ ಶೋತೃಗಳಿಗೆ ಅತೀವವಾದ ದು:ಖವನ್ನುಂಟುಮಾಡಿದೆ.ವಿಶ್ವ ಮಾನ್ಯರಾದ ಪಂಡಿತ್ ಭೀಮಸೇನ ಜೋಷಿಯವರು ದಾಸ ಸಾಹಿತ್ಯದ ಅನೇಕ ಸಂಗೀತ ಪ್ರಾಕಾರಗಳನ್ನು ತನ್ನ ಅದ್ಬುತ ಕಂಠಸಿರಿಯಿಂದ ವಿಶ್ವದೆಲ್ಲೆಡೆ ಪಸರಿಸಿದ್ದಾರೆ. ಮಂಗಳೂರು ಮತ್ತು ದಿವಂಗತ ಜೋಷಿಯವರಿಗೆ ಇದ್ದ ಆತ್ಮೀಯ ನಂಟು ಇಲ್ಲಿನ ಕಲಾರಾಧಕರಿಗೆ ಸ್ಮರಣೀಯವಾಗಿದ್ದು, ತೀವ್ರ ಆಘಾತವನ್ನುಂಟುಮಾಡಿದೆ.ಇವರ ನಿಧನಕ್ಕೆ ದ.ಕ.ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಜೆ.ಕೃಷ್ಣ ಪಾಲೇಮಾರ್ ತೀವೃ ಸಂತಾಪ ವ್ಯಕ್ತ ಪಡಿಸಿದ್ದಾರೆ.
ಜಿಲ್ಲಾಡಳಿತ ಮತ್ತು ಸಾಹಿತ್ಯ ಪರಿಷತ್ ಸಂತಾಪ ಸಭೆ: ಮಂಗಳೂರಿನ ಕರಾವಳಿ ಉತ್ಸವ ಸಾಂಸ್ಕೃತಿಕ ವೇದಿಕೆ ಭಾರ್ಗವ ಮಂಟಪದಲ್ಲಿ ನಾಳೆ (25-1-2011)ಸಂಜೆ 5.30 ಗಂಟೆಗೆ ದ.ಕ.ಜಿಲ್ಲಾಡಳಿತ ಮತ್ತು ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಭಾರತರತ್ನ ಪಂಡಿತ್ ಭೀಮಸೇನ ಜೋಷಿ ನಿಧನದ ಶೃದ್ದಾಂಜಲಿ ಸಭೆಯನ್ನು ಹಮ್ಮಿಕೊಳ್ಳಲಾಗಿದೆ.