Thursday, November 11, 2010

' ಲೇಪಾಕ್ಷಿ ' ಕರ ಕುಶಲ ಮೇಳ ಉದ್ಘಾಟನೆ

ಮಂಗಳೂರು,ನವೆಂಬರ್,11:ಆಂಧ್ರ ಪ್ರದೇಶ ಸರ್ಕಾರಿ ಸೌಮ್ಯದ ಕರಕುಶಲ ಅಭಿವೃದ್ಧಿ ನಿಗಮದ ಆಶ್ರಯದಲ್ಲಿ
ಮಂಗಳೂರಿನಲ್ಲಿ ಆಯೋಜಿ ಸಲಾಗಿದ್ದ 10 ದಿನಗಳ ಕರ ಕುಶಲ ವಸ್ತು ಪ್ರದರ್ಶನ ಮತ್ತು ಮಾರಾಟ ಮೇಳ ' ಲೇಪಾಕ್ಷಿ' ಯನ್ನು ಮಂಗಳೂರು ಮಹಾ ನಗರ ಪಾಲಿಕೆಯ ಮೇಯರ್ ರಜನಿ ದುಗ್ಗಣ್ಣ ಅವರು ಗುರುವಾರ ಉದ್ಘಾಟಿಸಿದರು.ಕರ ಕುಶಲ ಅಭಿವೃದ್ದಿ ನಿಗಮದ ಅಧಿಕಾರಿಗಳಾದ ಜಾಕೋಬ್ ಡಿ'ಸೋಜ,ಲೇಪಾಕ್ಷಿ ಎಂಪೋರಿಯಂ ನ ಮೆನೆಜರ್ ಸುಬ್ಬಣ್ಣ ಮತ್ತಿತರರು ಸಮಾರಂಭದಲ್ಲಿ ಉಪಸ್ಥಿತರಿದ್ದರು.10 ದಿನಗಳ ಕಾಲ ನಗರದ ಹೋಟೇಲ್ ವುಡ್ ಲ್ಯಾಂಡಿನಲ್ಲಿ ನಡೆಯುವ ಈ ಮೇಳದಲ್ಲಿ ಸುಮಾರು 35 ಜನ ಕರಕುಶಲ ಕರ್ಮಿಗಳು ಪಾಲ್ಗೊಳ್ಳುತ್ತಿದ್ದಾರೆ.