Saturday, November 13, 2010

ಗ್ರಾ.ಪಂ. ಜನಪ್ರತಿನಿಧಿಗಳಿಗೆ ಕಾನೂನು ಅರಿವು ಕಾರ್ಯಾಗಾರ

ಮಂಗಳೂರು, ನ.13: ಹುಟ್ಟಿನಿಂದ ಸಾಯುವವರೆಗೆ ಕಾನೂನಿನ ಪರಿಮಿತಿಯಲ್ಲೇ ಬಾಳುವ ನಾವು ಕಾನೂನಿನ ಬಗ್ಗೆ ತಿಳಿಯಬೇಕಾದ ಅಗತ್ಯವನ್ನು ಕರ್ನಾಟಕ ಉಚ್ಛ ನ್ಯಾಯಾಲಯದ ನ್ಯಾಯಾಧೀಶ ಎಚ್.ಎನ್. ನಾಗಮೋಹನದಾಸ್ ವಿವರಿಸಿದರು. ಸ್ವಾತಂತ್ರ ಕಳೆದು 55 ವರ್ಷಗಳ ಬಳಿಕ ನಮ್ಮ ಗ್ರಾಮಗಳಲ್ಲಿ ಇಂದು ಆರ್ಥಿಕ, ನೈತಿಕ ಹಾಗೂ ಸಾಂಸ್ಕೃತಿಕ ದಿವಾಳಿತನ ಬಹುವಾಗಿ ಕಾಡುತ್ತಿದ್ದು, ಈ ಬಗ್ಗೆ ಗಂಭೀರ ಚಿಂತನೆ ನಡೆಸದಿದ್ದರೆ ಅಪಾಯ ಕಟ್ಟಿಟ್ಟ ಬುತ್ತಿ ಎಂದು ಗಂಭೀರ ಆತಂಕವನ್ನು ವ್ಯಕ್ತಪಡಿಸಿದ್ದಾರೆ. ನಗರದ ಪುರ ಭವನದಲ್ಲಿ ಇಂದು ದ.ಕ. ಜಿಲ್ಲಾ ಪಂಚಾ ಯತ್ ಮತ್ತು ದ.ಕ. ಜಿಲ್ಲಾ ಕಾನೂನು ಸೇವೆಗಳ ಪ್ರಾಧಿ ಕಾರದ ಆಶ್ರಯದಲ್ಲಿ ಮಂಗಳೂರು ತಾಲೂಕಿನ ಎಲ್ಲಾ ಚುನಾ ಯಿತ ಗ್ರಾಮ ಪಂಚಾ ಯತ್ ಜನ ಪ್ರತಿ ನಿಧಿ ಗಳಿಗೆ ಆಯೋಜಿ ಸಲಾದ ಕಾನೂನು ಅರಿವು ಕಾರ್ಯಾ ಗಾರವನ್ನು ಉದ್ಘಾಟಿಸಿ ಅವರು ಮಾತ ನಾಡಿದರು.ಭಯೋ ತ್ಪಾದನೆ, ಕೋಮು ವಾದ, ಭ್ರಷ್ಟಾಚಾರ, ವ್ಯಾಪಾ ರೀಕರಣ ಮೊದ ಲಾದ ಸಮಸ್ಯೆ ಗಳನ್ನಿಂದು ನಾವು ಎದುರಿ ಸುತ್ತಿದ್ದು, ವ್ಯವಸ್ಥೆಯ ಅಡಿ ಪಾಯ ವಾದ ಗ್ರಾಮ ಪಂಚಾ ಯತ್ ನ ವ್ಯವಸ್ಥೆಯು ಈ ಸಮಸ್ಯೆಯ ಸುಳಿಗೆ ಸಿಲುಕಿದೆ. ಪ್ರತಿಯೊಬ್ಬ ಜನ ಪ್ರತಿ ನಿಧಿಗೂ ಜನರು ನಮ್ಮನ್ನು ಗಮನಿ ಸುತ್ತಿದ್ದಾ ರೆಂಬ ಪರಿ ಜ್ಞಾನ ಹೊಂದಿ ರಬೇಕು.ಈ ಬಗ್ಗೆ ಗ್ರಾಮ ಪಂಚಾ ಯತ್ ನ ಚುನಾ ಯಿತ ಪ್ರತಿ ನಿಧಿಗಳು ಪಕ್ಷ ಬೇಧ ಮರೆತು ಭ್ರಷ್ಟಾ ಚಾರ ಮುಕ್ತ ಹಾಗೂ ಪಾರ ದರ್ಶಕ ವಾಗಿ ಗ್ರಾಮ ಸೇವೆ ಮಾಡಿ ದಾಗ ಮಾತ್ರವೇ ಸಶಕ್ತ ಸಮಾಜ ನಿರ್ಮಾಣ ಸಾಧ್ಯ; ವಿನಾ ಶವನ್ನು ತಡೆಯಲು ಸಾಧ್ಯ ಎಂದು ಜನ ಪ್ರತಿ ನಿಧಿ ಗಳಿಗೆ ಕಿವಿಮಾತು ಹೇಳಿದರು.ಕೇವಲ ವಿದ್ಯಾ ವಂತ ರಾದರೆ ಸಾಲದು ಅದರ ಜೊತೆಗೆ ಕಾನೂನಿನ ಅರಿವು ಅತ್ಯಗತ್ಯ ಎಂದು ಹೇಳಿದ ಅವರು, ಪ್ರತಿಯೊಬ್ಬ ಮನುಷ್ಯನ ಪ್ರತಿಯೊಂದು ಚಟು ವಟಿಕೆ ಗಳನ್ನು ಕಾನೂನು ಯಾವ ರೀತಿ ನಿಯಂತ್ರಿಸುತ್ತದೆ ಎಂಬುದನ್ನು ಅವರು ಉದಾಹರಣೆಯ ಸಹಿತ ವಿಶ್ಲೇಷಿಸಿದರು.
2500 ಲೆಕ್ಕ ಸಹಾಯಕರ ನೇಮಕ:
ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ರಾಜ್ಯ ಸರಕಾರದ ಕಾರ್ಯದರ್ಶಿ ಜಿ.ಎಸ್. ನಾರಾಯಣ ಸ್ವಾಮಿ ಮಾತನಾಡಿ, ಗ್ರಾಮ ಪಂಚಾಯತ್ ಗಳ ಆಡಳಿತವನ್ನು ಆರ್ಥಿವಾಗಿ ಸದೃಡಗೊಳಿಸುವ ನಿಟ್ಟಿನಲ್ಲಿ ಕಳೆದ ವರ್ಷ 2500 ಪಂಚಾಯತ್ ಅಭಿವೃದ್ಧಿ ಅಧಿಕಾರಿ(ಪಿಡಿಒ)ಗಳನ್ನು ನೇಮಕ ಮಾಡಲಾಗಿದೆ. ಮತ್ತೆ 1400 ಪಿಡಿಒಗಳ ಬೇಡಿಕೆ ಇದೆ. ಇದರೊಂದಿಗೆ ಈ ವ್ಯವಸ್ಥೆಗೆ ಬಲ ತುಂಬಲು 2500 ಮಂದಿ ಲೆಕ್ಕ ಸಹಾಯಕರನ್ನು ಗ್ರಾಮ ಪಂಚಾಯತ್ ಗಳಿಗೆ ನೇಮಕಾತಿ ಮಾಡುವ ಪ್ರಕ್ರಿಯೆ ನಡೆಯುತ್ತಿದೆ ಎಂದು ತಿಳಿಸಿದರು.
`ಮಾಹಿತಿ ಹಕ್ಕು ಕಾಯ್ದೆ-ಪ್ರಜೆಗಳೇ ಪ್ರಭುಗಳು' 2005ರ ಅಕ್ಟೋಬರ್ 12ರಂದು ಜಾರಿಗೆ ಬಂದ ಮಾಹಿತಿ ಹಕ್ಕು ಕಾಯ್ದೆ ಈ ಶತಮಾನದ ಜಾರಿಗೆ ಬಂದ ಕ್ರಾಂತಿಕಾರಕ ಮಸೂದೆ ಎಂದು ಮಾಹಿತಿ ಹಕ್ಕು ಕಾಯ್ದೆಯ ಉಪಯೋಗಗಳು, ಅದರಿಂದ ಸಮಾಜ ದಲ್ಲಿ ಆಗಿರುವ ಮಹತ್ತರ ಬದಲಾ ವಣೆ ಗಳ ಕುರಿತು ರಾಜ್ಯ ಮಾಹಿತಿ ಆಯುಕ್ತ ಡಾ.ಎಚ್.ಎನ್. ಕೃಷ್ಣ ವಿಶ್ಲೇಷಿ ಸಿದರು. 1947 ರಲ್ಲಿ ದೇಶಕ್ಕೆ ಸ್ವಾತಂತ್ರ ದೊರಕಿ ದ್ದರೂ ನಿಜವಾಗಿ ಜನ ಸಾಮಾ ನ್ಯರಿಗೆ ಸ್ವಾ ತಂತ್ರ ದೊರ ಕಿದ್ದು, ಈ ಕಾಯ್ದೆ ಜಾರಿಗೆ ಬಂದ ಬಳಿಕ ಎಂದು ಹೇಳಿದ ಅವರು, ಅಲ್ಲಿಯ ವರೆಗೆ ಪ್ರಜಾ ತಂತ್ರ ದಲ್ಲಿ ರಾಜ ಕಾರಣಿ ಗಳು, ಅಧಿಕಾರ ವರ್ಗದ್ದೇ ದರ್ಬಾರಿ ನಿಂದಾಗಿ ಜನ ಸಾಮಾ ನ್ಯ ಉಪ ಸ್ಥಿತರಿದ್ದ ಗ್ರಾಮ ಪಂಚಾ ಯತ್ ಜನಪ್ರತಿ ನಿಧಿಗಳ ಪ್ರಶ್ನೆ ಗಳಿಗೆ ಅವರು ಉತ್ತರಿಸಿದರು.ಅಧ್ಯಕ್ಷತೆ ವಹಿಸಿದ್ದ ಜಿ.ಪಂ. ಅಧ್ಯಕ್ಷ ಸಂತೋಷ್ ಕುಮಾರ್ ಭಂಡಾರಿ ಮಾತ ನಾಡಿ, ತಾಲೂಕು ಪಂಚಾಯತ್, ಜಿಲ್ಲಾ ಪಂಚಾ ಯತ್ ಹಾಗೂ ಗ್ರಾಮ ಪಂಚಾಯತ್ ಗಳಿಗೆ ಆರ್ಥಿಕವಾಗಿ ಶಕ್ತಿ ನೀಡ ಬೇಕೆಂದು ಆಗ್ರಹಿಸಿದರು.ಮುಖ್ಯ ಅತಿಥಿಗಳಾಗಿ ಜಿಲ್ಲಾಧಿಕಾರಿ ಸುಬೋದ್ ಯಾದವ್, ಮನಪಾ ಆಯುಕ್ತ ಡಾ. ಕೆ.ಎನ್. ವಿಜಯ ಪ್ರಕಾಶ್, ಮೂಡಬಿದ್ರೆ ವಕೀಲರ ಸಂಘದ ಅಧ್ಯಕ್ಷ ಎಂ.ಎಸ್. ಕೋಟ್ಯಾನ್, ಮಂಗಳೂರು ವಕೀಲರ ಸಂಘದ ಅಧ್ಯಕ್ಷ ಎಸ್.ಪಿ. ಚೆಂಗಪ್ಪ ಉಪಸ್ಥಿತರಿದ್ದರು. ಜಿಲ್ಲಾ ಮತ್ತು ಪ್ರಧಾನ ಸತ್ರ ನ್ಯಾಯಾಧೀಶ ಎಚ್.ಆರ್. ದೇಶಪಾಂಡೆ ಸ್ವಾಗತಿಸಿದರು. ಇದೇ ವೇಳೆ, ನ್ಯಾಯಮೂರ್ತಿ ಎಚ್.ಎನ್. ನಾಗಮೋಹನ್ ದಾಸ್ರವರ `ಗ್ರಾಮ ರಾಜ್ಯ' ಮಹಾತ್ಮ ಗಾಂಧೀಜಿಯವರ ಕಲ್ಪನೆ ಎಂಬ ಪುಸ್ತಕವನ್ನು ಜಿ.ಎಸ್.ನಾರಾಯಣ ಸ್ವಾಮಿ ಬಿಡುಗಡೆಗೊಳಿಸಿದರು ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶಿವಶಂಕರ್ ವಂದಿಸಿದರು.