Sunday, November 14, 2010

ಸದಭಿರುಚಿಯ ಚಲನಚಿತ್ರಗಳು ಗುಣಾತ್ಮಕ ಸಾಮಾಜಿಕ ಬದಲಾವಣೆಗೆ ನಾಂದಿ: ಜಿಲ್ಲಾಧಿಕಾರಿ ಸುಬೋಧ್ ಯಾದವ್

ಮಂಗಳೂರು,ನವೆಂಬರ್ 14: ಪ್ರಬಲ ಸಂವಹನ ಮಾಧ್ಯಮವಾಗಿರುವ ಚಲನಚಿತ್ರಗಳು ಮನರಂಜನೆಯನ್ನು ಮೀರಿದ ಸಂದೇಶಗಳು, ಚಿಂತನೆಗಳನ್ನು ಜನಸಾಮಾನ್ಯರ ಬಳಿಗೆ ಕೊಂಡೊಯ್ಯುವುದರಿಂದ ಸಾಮಾಜಿಕ ಜೀವನದಲ್ಲಿ ಗುಣಾತ್ಮಕ ಬದಲಾವಣೆ ಸಾಧ್ಯ ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸುಬೋಧ್ ಯಾದವ್ ಹೇಳಿದರು.ಅವರಿಂದು ನಗರದ ಡಾನ್ ಬೋಸ್ಕೊ ಸಭಾಂಗಣದಲ್ಲಿ ಕರ್ನಾಟಕ ಚಲನಚಿತ್ರ ಅಕಾಡಮಿ ಹಾಗು ಸ್ಥಳೀಯ ವಿವಿಧ ಸಂಘಟನೆಗಳ ಆಶ್ರಯದಲ್ಲಿ ಹಮ್ಮಿಕೊಂಡ ಅಂತರಾಷ್ಟ್ರೀಯ ಚಲನಚಿತ್ರೋತ್ಸವನ್ನು ಉದ್ಘಾಟಿಸಿ ಮಾತನಾಡಿದರು.
ಸದಭಿ ರುಚಿಯ ಚಲನಚಿತ್ರ ವೀಕ್ಷಿಸುವ ಅಭಿರು ಚಿಯನ್ನು ಜನರಲ್ಲಿ ಬೆಳೆಸು ವಲ್ಲಿ ಕರ್ನಾಟಕ ಚಲನ ಚಿತ್ರ ಅಕಾಡೆಮಿ ಅಂತ ರಾಷ್ಟ್ರೀಯ ಚಲನ ಚಿತ್ರೋ ತ್ಸವ ಕಾರ್ಯ ಕ್ರಮ ಹಮ್ಮಿ ಕೊಂಡಿ ರುವುದು ಸ್ವಾಗ ತಾರ್ಹ. ಸಿನಮಾ ಮಾಧ್ಯಮ ಇಂದು ಕೇವಲ ಮನೋ ರಂಜನೆ ಗಾಗಿ ಮಾತ್ರ ಸೀಮಿತ ವಾಗಿಲ್ಲ.ನಮ್ಮಲ್ಲಿ ಚಲನಚಿತ್ರ ಮಾಧ್ಯಮ ವಿವಿಧ ಹಂತ ಗಳಲ್ಲಿ ತನ್ನ ಪ್ರಭಾವ ವನ್ನು ಬೀರು ತ್ತದೆ.ಸದ ಭಿರು ಚಿಯ ಚಲನ ಚಿತ್ರ ಗಳು ಆರೋಗ್ಯ ಕರ ಸಂಸ್ಕೃತಿ ಯ ಬಗ್ಗೆ ಜನರ ನ್ನು ಚಿಂತಿ ಸುವಂತೆ ಮಾಡು ತ್ತದೆ. ಈ ನಿಟ್ಟಿನಲ್ಲಿ ಸದಭಿ ರುಚಿಯ ಚಲನ ಚಿತ್ರಗಳು ಜನ ಸಾಮಾನ್ಯ ರನ್ನು ತಲುಪು ವಂತಾ ಗಲಿ ಎಂದರು.ಸಮಾ ರಂಭ ದಲ್ಲಿ ಮುಖ್ಯ ಅತಿಥಿ ಯಾಗಿ ಭಾಗ ವಹಿಸಿ ಮಾತ ನಾಡಿದ ರಾಷ್ಟ್ರ ಪ್ರಶಸ್ತಿ ವಿಜೇತ, ಯುವ ಚಲನ ಚಿತ್ರ ನಿರ್ದೇಶಕ ಅಭಯ ಸಿಂಹ ಸು ಶಿಕ್ಷಿತ ಸಿನಮಾ ಪ್ರೇಕ್ಷ ಕರು ಸಿನಮಾ ರಂಗ ವನ್ನು ಬೆಳೆಸು ವಲ್ಲಿ ಪ್ರಮುಖ ಪಾತ್ರ ವಹಿಸು ತ್ತಾರೆ. ಪ್ರಜ್ಞಾ ವಂತ ಪ್ರೇಕ್ಷಕ ರು ಒಳ್ಳೆಯ ಚಿತ್ರ ಗಳನ್ನು ಸದಾ ಪ್ರೋತ್ಸಾ ಹಿಸು ತ್ತಾರೆ. ಈ ರೀತಿಯ ಪ್ರೇಕ್ಷಕ ವರ್ಗ ಬೆಳೆಯ ಬೇಕಾಗಿದೆ. ಮುಂದಿನ ದಿನಗಳಲ್ಲಿ ಇಂತಹ ಸದಭಿರುಚಿಯ ಚಲನ ಚಿತ್ರಗಳು ಹೆಚ್ಚಿನ ಸಂಖ್ಯೆಯಲ್ಲಿ ಮೂಡಿಬರಲಿ ಎಂದು ಹಾರೈಸಿದರು.
ಕ್ಯಾಂಪಸ್ ಫಿಲಂ ಸೊಸೈಟಿ :ಶಾಲಾ ಕಾಲೇಜುಗಳಲ್ಲಿ ಸಿನಮಾ ರಸ ಗ್ರಹಣ ಶಿಬಿರ ಏರ್ಪಡಿಸುವುದರೊಂದಿಗೆ ಕಾಲೇಜುಗಳಲ್ಲಿ ಕ್ಯಾಂಪಸ್ ಫಿಲಂ ಸೊಸೈಟಿಗಳನ್ನು ಮತ್ತು ಪ್ರಮುಖ ಜಿಲ್ಲಾ ಕೇಂದ್ರಗಳಲ್ಲಿ ಹೊಸ ಚಲನಚಿತ್ರ ಸೊಸೈಟಿಗಳನ್ನು ಸ್ಥಾಪಿಸಲು ಚಲನಚಿತ್ರ ಅಕಾಡೆಮಿ ಪ್ರೋತ್ಸಾಹ ನೀಡುತ್ತದೆ ಎಂದು ಅಂತರಾಷ್ಟ್ರೀಯ ಚಲನಚಿತ್ರೋತ್ಸವ ರಾಜ್ಯ ಸಮಿತಿಯ ಸದಸ್ಯ ಎಂ.ಎಸ್. ಗುಣಶೀಲನ್ ತಿಳಿಸಿದರು. ಸಂಘಟಕ ಸಮಿತಿಯ ಪದಾಧಿಕಾರಿಗಳಾದ ಐವನ್ ಡಿಸಿಲ್ವ, ನಿತ್ಯಾನಂದ ಶೆಟ್ಟಿ, ಪ್ರಕಾಶ್ ಶೆಣೈ,ನಂದಾ ಪಾಯಿಸ್ ಸಮಾರಂಭದಲ್ಲಿ ಉಪಸ್ಥಿತರಿದ್ದರು. ಡಾ. ದಿನೇಶ್ ನಾಯಕ್ ಕಾರ್ಯಕ್ರಮ ನಿರೂಪಿಸಿದರು. ಡಾ. ಶಿವಪ್ರಕಾಶ್ ವಂದಿಸಿದರು.
....