Wednesday, November 24, 2010

ಕನಕದಾಸರು ಓರ್ವ ಶ್ರೇಷ್ಟ ಮಾನವತಾವಾದಿ : ಸಚಿವ ಪಾಲೇಮಾರ್

ಮಂಗಳೂರು,ನವೆಂಬರ್ 24:ಇಂದಿನ ಸಮಾಜದಲ್ಲಿ ತಲೆದೋರಿರುವ ರಾಜಕೀಯ,ಧಾರ್ಮಿಕ, ಸಾಮಾಜಿಕ ಜಂಜಾಟಗಳನ್ನು ನಿವಾರಣೆ ಮಾಡಿ ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ಎಲ್ಲರೂ ದಾಸ ಶ್ರೇಷ್ಟ ಕನಕ ದಾಸರಕೀರ್ತನೆಗಳ ತತ್ವ ಸಿದ್ದಾಂತಗಳನ್ನು ಪಾಲಿಸಬೇಕು ಎಂದು ರಾಜ್ಯ ಜೀವಿಶಾಸ್ತ್ರ, ಪರಿಸರ,ಬಂದರು,ಮೀನುಗಾರಿಕೆ,ಒಳನಾಡು ಜಲಸಾರಿಗೆ ಹಾಗೂ ಜಿಲ್ಲಾ ಉಸ್ತುವರಿ ಸಚಿವರಾದ ಕೃಷ್ಣ ಜೆ. ಪಾಲೇಮಾರ್ ಕರೆ ನೀಡಿದ್ದಾರೆ.
ನಗರದ ಪುರ ಭವನ ದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಡಳಿತ,ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ದಕ್ಷಿಣ ಕನ್ನಡ ಮತ್ತು ಕರಾ ವಳಿ ಕುರು ಬರ ಸಂಘ ದ ಆಶ್ರಯ ದಲ್ಲಿ ನಡೆದ ದಾಸವ ರೇಣ್ಯ, ದಾರ್ಶ ನಿಕ ಕವಿ,ಸಂತ ಶ್ರೇಷ್ಟ ರಾದ ಕನಕ ದಾಸರ 523 ನೇ ಜಯಂತಿ ಕಾರ್ಯ ಕ್ರಮವನ್ನು ಉದ್ಘಾ ಟಿಸಿ ಮಾತ ನಾಡಿ ದರು.ಕನಕ ದಾಸರು ಕೇವಲ ಕುರುಬ ಸಮಾಜಕ್ಕೆ ಮಾತ್ರ ಸೀಮಿತ ರಾದ ವರಲ್ಲ, ಬದ ಲಾಗಿ ಎಲ್ಲಾ ಮನು ಕುಲದ ವರಿಗೂ ಕೀರ್ತನೆ ಗಳ ಮೂಲಕ ಅತ್ಯಂತ ಪ್ರೀತಿ ಪಾತ್ರ ರಾದವರು.6 ನೇ ಶತ ಮಾನ ದಲ್ಲೇ ಮಾನವತಾ ವಾದವನ್ನು ಪ್ರತಿಪಾದಿಸಿದ,ಸಮಾಜದ ಅಂಕುಡೊಂಕುಗಳನ್ನು ತಿದ್ದಿದ ಮಾಹಾನ್ ದಾರ್ಶನಿಕ ಎಂದು ಪ್ರಶಂಸಿಸಿದರು.ಕನಕ ದಾಸರ ಜೀವನ ಮತ್ತು ಸಾಹಿತ್ಯ ಕುರಿತು ಕಟೀಲು ಶ್ರಿ ದುರ್ಗಾ ಪರ ಮೇಶ್ವರಿ ಪ್ರಥಮ ದರ್ಜೆ ಕಾಲೇಜಿ ನ ಸಂಸ್ಕೃತ ವಿಭಾಗದ ಮುಖ್ಯ ಸ್ಥರಾದ ಡಾ.ಸೋಂದೆ ಭಾಸ್ಕರ್ ಭಟ್ ಅವರು ಮಾತ ನಾಡಿ ದರು.ಸಮಾ ರಂಭದ ಅಧ್ಯಕ್ಷತೆ ವಹಿಸಿ ಮಾತ ನಾಡಿದ ಮಂಗ ಳೂರು ದಕ್ಷಿಣ ಶಾಸಕ ರಾದ ಎನ್. ಯೋಗಿಶ್ ಭಟ್ ಅವರು ಸಮಾಜ ದ ಅನಿಷ್ಟ ಪದ್ದತಿ ಗಳನ್ನು ಹೋಗ ಲಾಡಿ ಸಲು ಕನಕ ದಾಸರ ಸಾಹಿತ್ಯ ಪ್ರತಿ ಮನೆ ಮನ ಗಳಿಗೆ ಪ್ರಚಾರ ವಾಗಬೇಕೆಂದರು.ಶಾಸಕರಾದ ಯು.ಟಿ.ಖಾದರ್,ಕರಾವಳಿ ಅಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಬಿ.ನಾಗರಾಜ ಶೆಟ್ಟಿ, ಜಿಲ್ಲಾಧಿಕಾರಿ ಸುಬೋಧ್ ಯಾದವ್, ಕರ್ನಾಟಕ ಬ್ಯಾರಿ ಅಕಾಡೆಮಿ ಅಧ್ಯಕ್ಷ ಎಂ.ಬಿ. ಅಬ್ದುಲ್ ರೆಹಮಾನ್, ಕರಾವಳಿ ಕುರುಬರ ಸಂಘದ ಅದ್ಯಕ್ಷ ಬಸವರಾಜ್ ನೋಟಗಾರ್, ರಾಜ್ಯ ಸಂಘದ ಸಹ ಕಾರ್ಯದರ್ಶಿ ಎಂ.ಪ್ರಸನ್ನ ಕುಮಾರ್ ಮತ್ತಿತರ ಗಣ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.ಸಮಾ ರಂಭಕ್ಕೂ ಮುನ್ನ ನಗರ ದ ಶರವು ಮಹಾ ಗಣಪತಿ ದೇವ ಸ್ಥಾನದ ಮುಂಭಾ ಗದಿಂದ ಪುರ ಭವನದ ವರೆಗೆ ನಡೆದ ಕನಕ ದಾಸರ ಭಾವ ಚಿತ್ರ ವನ್ನೊ ಳಗೊಂಡ ಆಕ ರ್ಷಕ ಮೆರ ವಣಿ ಗೆಗೆ ಮಂಗ ಳೂರು ಪಾಲಿಕೆ ಮೇಯರ್ ರಜನಿ ದುಗ್ಗಣ್ಣ ಅವರು ಚಾಲನೆ ನೀಡಿದರು.