Wednesday, November 17, 2010

' ಬಸಿರಲ್ಲಿ ಜನನಿಯ ಅಕ್ಕರೆ; ಭವಿಷ್ಯದಲ್ಲಿ ಭಾಗ್ಯಲಕ್ಷ್ಮಿ ಆಸರೆ '

ಮಂಗಳೂರು,ನ.17: ಭಾಗ್ಯಲಕ್ಷ್ಮಿ ಯೋಜನೆ ದೇಶಕ್ಕೆ ಮಾದರಿ ಯೋಜನೆಯಾಗಿದ್ದು, ರಾಜ್ಯದ ಎಲ್ಲ ದು:ಖಿತ ಅಮ್ಮಂದಿರ ಕಣ್ಣೀರು ಒರೆಸುವ ಮತ್ತು ಮಹಿಳೆಯರ ಗೌರವ ರಕ್ಷಣೆಯ ಹೊಣೆ ಹೊತ್ತ ತನ್ನ ಸರ್ಕಾರದ ಅತ್ಯುತ್ತಮ ಯೋಜನೆ ಎಂದರು. ಮುಂದಿನ ವರ್ಷದಲ್ಲಿ ಹತ್ತು ಲಕ್ಷ ಹೆಣ್ಣು ಮಕ್ಕಳಿಗೆ ನೆರ ವಾಗು ವ ನಿಟ್ಟಿನಲ್ಲಿ 3 ಸಾವಿರ ಕೋಟಿ ಹೆಚ್ಚಿನ ಅನುದಾನ ಮೀಸಲಿ ಡಲಾ ಗುವುದು. ಸುಮಾರು ಒಂದು ಲಕ್ಷ ಇಪ್ಪತ್ತೈದು ಸಾವಿರ ಸ್ತ್ರೀ ಶಕ್ತಿ ಸಂಘಟ ನೆಗ ಳಿಗೆ ನೆರವಾಗಲು ಮಾರುಕಟ್ಟೆಯನ್ನು ರೂಪಿಸುವ ಆಶ್ವಾಸನೆಯನ್ನು ರಾಜ್ಯದ ಮುಖ್ಯಮಂತ್ರಿಗಳಾದ ಬಿ.ಎಸ್ ಯಡಿಯೂರಪ್ಪನವರು ನೀಡಿದರು.ಅವ ರಿಂದು ಪುತ್ತೂ ರಿನಲ್ಲಿ ಏರ್ಪಡಿ ಸಲಾದ ಭಾಗ್ಯ ಲಕ್ಷ್ಮಿ ಯೋಜ ನೆಯ ಫಲಾನು ಭವಿ ಗಳಿಗೆ ಉಚಿತ ಆರೋಗ್ಯ ತಪಾ ಸಣೆ,ಬಾಂಡ್ ವಿತ ರಣೆ, ತಾಯಂ ದಿರಿಗೆ ಸೀರೆ ವಿತ ರಣೆ, ವಿವಿಧ ಕಾಮ ಗಾರಿಗಳ ಉದ್ಘಾ ಟನೆ ಮತ್ತು ಶಿಲಾ ನ್ಯಾಸ ಸಮಾ ರಂಭ ನೆರ ವೇರಿಸಿ ಮಾತ ನಾಡು ತ್ತಿದ್ದರು.ರಾಜ್ಯದ ಬಡ ಜನರು ಸ್ವಾಭಿ ಮಾನ ದಿಂದ ಬದುಕಲು ಅಗತ್ಯ ಹಾಗೂ ಅರ್ಹ ವೆನಿ ಸುವ ಯೋಜನೆ ಗಳನ್ನು ರೂಪಿ ಸುವ ಭರವ ಸೆಯನ್ನು ನೀಡಿದ ಮುಖ್ಯ ಮಂತ್ರಿ ಗಳು, ಗಾಡಿ ವ್ಯಾಪಾರಿ ಗಳ ಶ್ರೀಮಂತ ಬಡ್ಡಿ ವ್ಯಾಪಾರಿ ಗಳಿಂದ ಸಾಲ ಪಡೆಯು ವುದನ್ನು ತಪ್ಪಿ ಸಲು 500 ಕೋಟಿ ರೂ., ಮೀಸ ಲಿಟ್ಟು ಕಡಿಮೆ ಬಡ್ಡಿ ಯಲ್ಲಿ ಸಾಲ ನೀಡುವ ವ್ಯವಸ್ಥೆ ಮಾಡುವು ದಾಗಿ ಹೇಳಿದ ಅವರು, ಅಂಗನ ವಾಡಿ ಕಾರ್ಯ ಕರ್ತೆ ಯರಿಗೆ ಗೌರ ವಧನ ಹೆಚ್ಚಿಸುವ ಭರವಸೆ ನೀಡಿ ದರು. ಅಮೃತ ಯೋಜನೆ ಯಡಿ ಶೇಕಡ 6ರ ಬಡ್ಡಿಗೆ ರಾಸುಗಳ ಖರೀದಿಗೆ ಸೌಲಭ್ಯ ಒದಗಿ ಸುವು ದಾಗಿ ಹೇಳಿದರು. ದುಡಿಯುವ ಕೈಗಳಿಗೆ ಉದ್ಯೋಗ ಹಾಗೂ ಮಹಿಳಾ ಸಬಲೀಕರಣಕ್ಕೆ ಒತ್ತುನೀಡುವುದು ರಾಜ್ಯ ಸರ್ಕಾರದ ಧ್ಯೇಯ ಎಂದು ಘೋಷಿಸಿದರು.
ಬಸಿರಲ್ಲಿ ಜನನಿಯ ಅಕ್ಕರೆ; ಭವಿಷ್ಯದಲ್ಲಿ ಭಾಗ್ಯಲಕ್ಷ್ಮಿ ಆಸರೆ

ಎಂಬ ಘೋಷಣೆ ಯೊಂ ದಿಗೆ ಸರ್ಕಾರ ಕೈ ಗೊಂಡ ಜನಪರ ಕಾರ್ಯ ಕ್ರಮ ಗಳನ್ನು ವಿವರಿ ಸಿದ ಮುಖ್ಯ ಮಂತ್ರಿ ಗಳು ಜನರು ಸರ್ಕಾ ರದ ಯೋಜನೆ ಗಳ ಬಗ್ಗೆ ವಿವೇಕ ಯುತ ವಾಗಿ ವಿವೇ ಚಿಸಲಿ ಎಂದರು. ಅವಳಿ ಜಿಲ್ಲೆ ಗಳ ಅಭಿ ವೃದ್ಧಿಗೆ ನೀಡಿ ರುವ ವಿಶೇಷ ಅನು ದಾನದ ಸದ್ಬ ಳಕೆ ಯಿಂದ ಜಿಲ್ಲೆ ಗಳು ಅಭಿ ವೃದ್ಧಿ ಪಥದಲ್ಲಿ ಸಾಗಲಿ ಎಂದರು.14.21 ಕೋಟಿ ರೂ.ಗಳ ಕಾಮಗಾರಿ ಉದ್ಘಾಟನೆ ಮತ್ತು 94.54 ಕೋಟಿ ರೂ. ವೆಚ್ಚದಲ್ಲಿ ಕಾಮಗಾರಿಗಳಿಗೆ ಶಿಲಾನ್ಯಾಸ ನೆರವೇರಿಸಿದ ಬಳಿಕ ರಾಜ್ಯ ಮತ್ತು ಜಿಲ್ಲಾ ಪ್ರಗತಿ ಪುಸ್ತಕಗಳನ್ನು ಬಿಡುಗಡೆ ಮಾಡಿದರು. ಭಾಗ್ಯಲಕ್ಷ್ಮಿ ಫಲಾನುಭವಿಗಳಿಗೆ ಬಾಂಡ್ ವಿತರಿಸಿದರು. ತಾಯಂದಿರಿಗೆ ಸೀರೆ ಹಂಚಿದರು. ಯಾವುದೇ ಸಮಸ್ಯೆಗಳಿದ್ದರೆ ನೇರವಾಗಿ ತಮಗೆ ಪತ್ರ ಬರೆಯಬಹುದು ಅಥವಾ ಜನಪ್ರತಿನಿಧಿಗಳು, ಜಿಲ್ಲಾಧಿಕಾರಿಗಳ ಮುಖಾಂತರ ತಮ್ಮನ್ನು ಸಂಪರ್ಕಿ ಸಬಹು ದೆಂದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವ ರಾದ ಸಿ. ಸಿ.ಪಾಟೀಲ್ ಅವರು,ಭಾಗ್ಯ ಲಕ್ಷ್ಮಿ ಯೋಜನೆ ಗಾಗಿ ಮೀಸ ಲಿಟ್ಟು 500 ಕೋಟಿ ಅನು ದಾನ ದಲ್ಲಿ 300 ಕೋಟಿ ರೂ.ಗಳನ್ನು ಈಗಾಗಲೇ ಬಿಡು ಗಡೆ ಗೊಳಿ ಸಿದ್ದು, ಉಳಿದ ಹಣ ವನ್ನು ಶೀಘ್ರ ದಲ್ಲೇ ಬಿಡು ಗಡೆ ಗೊಳಿಸಲು ಕ್ರಮ ಕೈಗೊ ಳ್ಳುವುದಾಗಿ ಹೇಳಿದರು. ಇಂಧನ ಖಾತೆ ಸಚಿವರಾದ ಶೋಭಾ ಕರಂದ್ಲಾಜೆ ಅವರು, ಸ್ತ್ರೀ ಶಕ್ತಿ ಸಬಲೀಕರಣಕ್ಕೆ ಸರ್ಕಾರ ಹಮ್ಮಿಕೊಂಡಿರುವ ಯೋಜನೆಗಳನ್ನು ವಿವರಿಸಿದರು. ಪುತ್ತೂರು ಶಾಸಕಿ ಮಲ್ಲಿಕಾ ಪ್ರಸಾದ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಉಸ್ತುವಾರಿ ಸಚಿವರಾದ ಕೃಷ್ಣ ಜೆ. ಪಾಲೇಮಾರ್ ಅವರು ಸ್ವಾಗತಿಸಿ, ಪ್ರಾಸ್ತಾವಿಕ ನುಡಿಗಳನ್ನಾಡಿದರು. ಉನ್ನತ ಶಿಕ್ಷಣ ಸಚಿವ ಡಾ. ವಿ.ಎಸ್. ಆಚಾರ್ಯ, ಸಂಸ ದರಾದ ನಳಿನ್ ಕುಮಾರ್ ಕಟೀಲ್,ಡಿ.ವಿ. ಸದಾ ನಂದ ಗೌಡ, ಶಾಸಕ ರಾದ ಎಸ್ ಅಂಗಾರ, ಯೋಗೀಶ್ ಭಟ್, ವಿಧಾನ ಪರಿ ಷತ್ ಸದಸ್ಯ ಕ್ಯಾಪ್ಟನ್ ಗಣೇಶ್ ಕಾರ್ಣಿಕ್,ಭಾರತಿ ಶೆಟ್ಟಿ, ಕರಾ ವಳಿ ಅಭಿವೃದ್ಧಿ ಪ್ರಾಧಿ ಕಾರದ ಅಧ್ಯಕ್ಷ ಬಿ.ನಾಗ ರಾಜ ಶೆಟ್ಟಿ, ಜಿ.ಪಂ ಅಧ್ಯಕ್ಷ ಸಂತೋಷ್ ಕುಮಾರ್ ಭಂಡಾರಿ, ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಸರೋಜಿನಿ ಭಾರದ್ವಾಜ, ಮೇಯರ್ ರಜನಿ ದುಗ್ಗಣ್ಣ, ಅಮೃತ ಕುಮಾರ್, ಜಿ.ಪಂ. ಉಪಾಧ್ಯಕ್ಷ ಜಗನ್ನಾಥ್ ಸಾಲಿಯಾನ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿ ಸಿ. ಎನ್. ಸೀತಾರಾಂ, ಜಿಲ್ಲಾಧಿಕಾರಿ ಸುಬೋಧ ಯಾದವ್, ಐಜಿಪಿ ಅಲೋಕ್ ಮೋಹನ್, ಸಿಇಒ ಶಿವಶಂಕರ್, ಎಸ್ ಪಿ ಡಾ. ಸುಬ್ರಮಣ್ಯೇಶ್ವರ, ಜಿಲ್ಲಾ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕರಾದ ಶಕುಂತಲಾ ವೇದಿಕೆಯಲ್ಲಿದ್ದರು.