
ಸಾವಯವ ಕೃಷಿಗೆ ಸಹಾಯಧನ: ಸಾವಯವ ಕೃಷಿಗೆ ಪೂರಕವಾದ ಎರೆ ಹುಳ ಗೊಬ್ಬರ ಘಟಕ ಹಾಗೂ ಬಯೋ ಡೈಜೆಸ್ಟರ್ ಘಟಕಗಳ ಸ್ಥಾಪನೆಗೆ ಶೇಕಡಾ 50 ರ ಸಹಾಯ ಧನ ಗರಿಷ್ಠ ರೂ.30,000 ದವರೆಗೆ ಸಹಾಯಧನ ಲಭ್ಯವಿದೆ. ತೋಟಗಾರಿಕೆ ಬೆಳೆ ಹೊಂದಿದ ರೈತರು ಇಲಾಖಾ ಅಧಿಕಾರಿ/ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳೊಂದಿಗೆ ಸಂಪರ್ಕಿಸಿ ನಿರ್ಮಾಣದ ತಾಂತ್ರಿಕ ಮಾಹಿತಿ ಪಡೆದು ಅದರಂತೆ ಘಟಕವನ್ನು ಸ್ಥಾಪಿಸಬೇಕು. ತೋಟಗಾರಿಕೆ ಬೆಳೆ ದಾಖಲಾತಿಯುಳ್ಳ ಪಹಣಿ ಪತ್ರ, ಕಾಮಗಾರಿಗೆ ಸಂಬಂಧಿಸಿದಂತೆ ಖರ್ಚಿನ ಬಿಲ್ಲುಗಳು, ಅಂದಾಜು ಪತ್ರ ಅಥವಾ ಮೌಲ್ಯ ಮಾಪನ ವರದಿ ಹಾಗೂ ಕೆಲಸ ಪೂರ್ಣಗೊಂಡ ವರದಿ ರೂ.20 ಛಾಪಾ ಕಾಗದದಲ್ಲಿ ನಿಗಧಿತ ನಮೂನೆಯಲ್ಲಿ ದೃಢೀಕರಣ ಮತ್ತು ಬ್ಯಾಂಕ್ ಖಾತೆ ವಿವರಗಳನ್ನು ಅರ್ಜಿಯೊಂದಿಗೆ ಲಗತ್ತಿಸಿ ರೈತ ಸಂಪರ್ಕ ಕೇಂದ್ರದ ಅಥವಾ ತಾಲೂಕು ಅಧಿಕಾರಿಗಳಿಗೆ ಸಲ್ಲಿಸಬಹುದಾಗಿದೆ. ಅವರು ಘಟಕ ಪರಿಶೀಲಿಸಿ ಅನುದಾನದ ಲಭ್ಯತೆಯ ಮೇರೆಗೆ ಅರ್ಜಿಯನ್ನು ಸಹಾಯ ಧನಕ್ಕೆ ಪರಿಗಣಿಸಲಾಗುವುದೆಂದು ತೋಟಗಾರಿಕಾ ಉಪನಿರ್ದೇಶಕರು ಮಾಹಿತಿ ನೀಡಿದ್ದಾರೆ.
ಜೇನು ಕೃಷಿಗೆ ಸಹಾಯಧನ:

ಟ್ರ್ಯಾಕ್ಟರ್ ಖರೀದಿಗೆ ಸಹಾಯಧನ: ರೈತರಿಗೆ ಟ್ರಾಕ್ಟರ್ ಖರೀದಿಗೆ ರೂ. 75,000/- ಗಳ ಸಹಾಯಧನ ಒದಗಿಸ ಲಾಗುವುದು.ರೈತರು ಕನಿಷ್ಠ 10 ಎಕರೆ ಜಮೀನು ಹೊಂದಿದ್ದು, ಅದರಲ್ಲಿ ಕನಿಷ್ಠ 5 ಎಕರೆ ಪ್ರದೇಶದಲ್ಲಿ ಬಹುವಾಷರ್ಿಕ ತೋಟಗಾರಿಕೆ ಬೆಳೆ ಹೊಂದಿರಬೇಕು. ರೈತರು ಆದಾಯ ಪಾವತಿದಾರರಾಗಿರಬಾರದು ಹಾಗೂ ಈಗಾಗಲೇ ಟ್ರಾಕ್ಟರ್ ಹೊಂದಿರಬಾರದು.2010-11 ನೇ ಸಾಲಿನಲ್ಲಿ ಖರೀದಿಸಿದ ಟ್ರಾಕ್ಟರ್ಗಳಿಗೆ ಮಾತ್ರ ಸಹಾಯಧನ ಒದಗಿಸಲಾಗುವುದು. ಟ್ರಾಕ್ಟರ್ಗಳಿಗೆ ಆರ್ಟಿಒ ದೃಢೀಕರಣ ಇರಬೇಕು. ಅರ್ಹ ರೈತರು ಟ್ರಾಕ್ಟರ್ ಖರೀದಿಸಿ ಮೂಲ ದಾಖಲಾತಿ ಗಳೊಂದಿಗೆ ಅರ್ಜಿಯನ್ನು ಸಂಬಂಧಪಟ್ಟ ತಾಲೂಕು ಅಧಿಕಾರಿಗಳ ಮೂಲಕ ತೋಟಗಾರಿಕೆ ಉಪನಿರ್ದೇಶಕರಿಗೆ ಸಲ್ಲಿಸ ಬಹುದಾಗಿದೆ. ಈ ಎಲ್ಲ ಸೌಲಭ್ಯಗಳಿಗೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿಯನ್ನು ತೋಟಗಾರಿಕಾ ಉಪನಿರ್ದೇಶಕರ ಕಚೇರಿಯಿಂದ ಪಡೆಯಬಹುದು.