Thursday, November 4, 2010

ಮಳೆಹಾನಿ ಪರಿಹಾರಕ್ಕೆ ಮಾಹಿತಿ ಸಲ್ಲಿಸಲು ಸೋಮವಾರ ಅಂತಿಮ ಗಡುವು

ಮಂಗಳೂರು, ನವೆಂಬರ್ 04 : ಮುಂಗಾರು ಮಳೆಯಿಂದಾಗಿರುವ ಹಾನಿಗೆ ಪರಿಹಾರ ನೀಡಲು ಈಗಾಗಲೇ ದುಡ್ಡು ಬಂದಿದ್ದು, ಪಟ್ಟಿಯನ್ನು ಆದಷ್ಟು ಶೀಘ್ರವಾಗಿ ನೀಡಬೇಕೆಂದು ತಹಸೀಲ್ದಾರ್ ಅವರಿಗೆ, ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಸೂಚಿಸಿದರು.ನವೆಂಬರ್ 3 ರಂದು ಸಭೆ ನಡೆಸಿದ ಜಿಲ್ಲಾಧಿಕಾರಿಗಳು, ನವೆಂಬರ್ 4 ರ ಸಂಜೆಯೊಳಗೆ ಕ್ಷೇತ್ರದ ಶಾಸಕರ ಜೊತೆ ಚರ್ಚಿಸಿ ಪಟ್ಟಿ ಸಿದ್ಧಪಡಿಸಿ ಕಳುಹಿಸಿದ ಬಳಿಕ ಸೋಮವಾರ ಪಟ್ಟಿಯನ್ನು ಸಿದ್ಧಪಡಿಸಿ ಅನುಮೋದನೆಗೆ ಕಳುಹಿಸಲಾಗುವುದು ಎಂದರು. ಸಭೆಯಲ್ಲಿ ಸಂಬಂಧ ಪಟ್ಟ ಇಲಾಖೆಯ ಎಲ್ಲ ಅಧಿಕಾರಿಗಳು ಉಪಸ್ಥಿತರಿದ್ದರು.