Wednesday, July 27, 2011

ದ.ಕ.ಪತ್ರಕರ್ತರ ಸಂಘದಿಂದ ವನಮಹೋತ್ಸವ

ಮಂಗಳೂರು,ಜುಲೈ.27:ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಮತ್ತು ಮಂಗಳೂರು ಪ್ರೆಸ್ ಕ್ಲಬ್ ಆಶ್ರಯದಲ್ಲಿ ನಗರದ ಕದ್ರಿ ಉದ್ಯಾನವನದಲ್ಲಿ ವನಮಹೋತ್ಸವ ಆಚರಣೆ ನಡೆಯಿತು.ಉದ್ಯಾ ನವ ನದಲ್ಲಿ ಗಿಡ ನೆಡುವ ಮೂಲಕ ಕಾರ್ಯ ಕ್ರಮಕ್ಕೆ ಚಾಲನೆ ನೀಡಿ ಮಾತ ನಾಡಿದ ಮಂಗ ಳೂರು ಮಹಾ ನಗರ ಪಾಲಿಕೆ ಆಯುಕ್ತ ಡಾ.ಎನ್. ವಿಜಯ ಪ್ರಕಾಶ್ ಅವರು `ಪತ್ರ ಕರ್ತರು ಪರಿ ಸರ ಸಂರ ಕ್ಷಣೆಯ ಸಂ ದೇಶ ನೀ ಡಲು ಮುಂದಾ ಗಿರು ವುದು ಸ್ತು ತ್ಯಾರ್ಹ. ನಗರ ದಲ್ಲಿ ರಸ್ತೆ ಅಗಲ ಮಾಡುವ ಸಂ ದರ್ಭ ಅನಿ ವಾರ್ಯ ವಾಗಿ ಕೆಲವು ಮರ ಗಳನ್ನು ಕಡಿಯ ಬೇಕಾ ಯಿತು. ಇದನ್ನು ಸರಿದೂ ಗಿಸಲು ಕಳೆದ ವರ್ಷ ನಗರ ದಾದ್ಯಂತ ಸುಮಾರು 20 ಸಾವಿರ ಗಿಡ ಗಳನ್ನು ನೆಡ ಲಾಗಿದೆ. ಈ ವರ್ಷ ಮತ್ತೆ ಅರಣ್ಯ ಇಲಾಖೆಯ ಸಹಯೋಗದಲ್ಲಿ 22 ಸಾವಿರ ಗಿಡ ನೆಡುವ ಕಾರ್ಯ ಆರಂಭಗೊಂಡಿದ್ದು, ಒಂದು ತಿಂಗಳ ಒಳಗಾಗಿ ಈ ಕಾರ್ಯ ಪೂರ್ಣಗೊಳ್ಳಲಿದೆ ಎಂದರು.ಮುಖ್ಯ ಅತಿಥಿ ಮಂಗಳೂರು ವಲಯ ಅರಣ್ಯಾಧಿಕಾರಿ ಕ್ಲಿಫರ್ಡ್ ಲೋಬೊ ಮಾತನಾಡಿ ` ಹಸಿರು ಕವಚ ಹಸಿರು ಮಂಗಳೂರು ಅಭಿಯಾನದ ಮೂಲಕ ನಗರದ ಪರಿಸರವನ್ನು ಇನ್ನಷ್ಟು ಸುಂದರಗೊಳಿಸಲಾಗುತ್ತಿದೆ. ಕದ್ರಿ ಉದ್ಯಾನವನದಲ್ಲಿ 200ಕ್ಕೂ ಅಧಿಕ ಮರಗಳನ್ನು ನೆಡುವ ಯೋಜನೆಯಿದೆ'ಎಂದರು.
ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ಪ್ರದೀಪ್ ಡಿಸೋಜ,ಮಹಾನಗರ ಪಾಲಿಕೆಯ ಪರಿಸರ ಅಭಿಯಂತರ ಮಧು ಮನೋಹರ್ ಉಪಸ್ಥಿತರಿದ್ದರು. ಪತ್ರಕರ್ತರ ಸಂಘದ ಅಧ್ಯಕ್ಷ ಪಿ.ಬಿ.ಹರೀಶ್ ರೈ ಸ್ವಾಗತಿಸಿ, ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ್ ನಾಯಕ್ ಇಂದಾಜೆ ವಂದಿಸಿದರು.