Tuesday, July 19, 2011

ಜಿಲ್ಲಾ ಯೋಜನಾ ಸಮಿತಿಗೆ ಸದಸ್ಯರ ನೇಮಕ

ಮಂಗಳೂರು,ಜುಲೈ.19:ಸರಕಾರವು ದಕ್ಷಿಣ ಕನ್ನಡ ಜಿಲ್ಲೆಗೆ ಯೋಜನಾ ಸಮಿತಿಯನ್ನು ರಚಿಸಿದ್ದು,ಇದರಲ್ಲಿ ಪಂಚಾಯತ್ ಮತ ಕ್ಷೇತ್ರದಿಂದ ಒಟ್ಟು 15 ಸದಸ್ಯರನ್ನು ಆಯ್ಕೆ ಮಾಡಲಾಗಿದೆ. ಈ ಕೆಳಗಿನ ಅಭ್ಯರ್ಥಿಗಳು ಯೋಜನಾ ಸಮಿತಿಗೆ ಸದಸ್ಯರಾಗಿ ಪಂಚಾಯತ್ ಮತ ಕ್ಷೇತ್ರದಿಂದ ಆಯ್ಕೆಯಾಗಿರುತ್ತಾರೆ.
ಬೆಳ್ತಂಗಡಿಯಿಂದ ತುಳಸಿ ಜೆ.ಪೂಜಾರಿ ಹಾರಾಬೆ,ಬಂಟ್ವಾಳ ತಾಲೂಕು ಸಂತೋಷ್ ಕುಮಾರ್ ರೈ, ಪುತ್ತೂರು ತಾಲೂಕು ಸಾವಿತ್ರಿ ಹೆಚ್.ಎಸ್.ಬಂಟ್ವಾಳ ಆರ್.ಚೆನ್ನಪ್ಪ ಕೋಟ್ಯಾನ್,ಬಂಟ್ವಾಳ ನಳಿನಿ ಶೆಟ್ಟಿ, ಮಂಗಳೂರು ರೀತೇಶ್ ಶೆಟ್ಟಿ, ಮಂಗಳೂರು ಜನಾರ್ಧನ ಗೌಡ,ಕಡಂದಲೆ ಸುನಿತಾ ಸುಚರಿತ ಶೆಟ್ಟಿ,ಮಂಗಳೂರು ಈಶ್ವರ ಕಟೀಲು,ಸುಳ್ಯದ ನವೀನ್ ಕುಮಾರ್ ಮೇನಾಲ, ಮಂಗಳೂರು ಸತೀಶ್ ಕುಂಪಲ, ಉಜಿರೆ ಸಿ.ಕೆ.ಚಂದ್ರಕಲಾ,ನೆಲ್ಯಾಡಿ ಬಾಲಕೃಷ್ಣ ಸುವರ್ಣ, ಪುತ್ತೂರು ತಾಲೂಕು ಕೇಶವ ಗೌಡ ಬಜತ್ತೂರು ಮತ್ತು ಪುತ್ತೂರು ತಾಲೂಕು ಬೆಟ್ಟಂಪಾಡಿ ಕೆ.ಮೀನಾಕ್ಷಿ ಮಂಜುನಾಥ ಇವರುಗಳು ಆಯ್ಕೆಯಾಗಿರುತ್ತಾರೆ.
ಸದ್ರಿ ಸದಸ್ಯರು ಪದಾವಧಿಯು ಕರ್ನಾಟಕ ಪಂಚಾಯತ್ ರಾಜ್ ಜಿಲ್ಲಾ ಯೋಜನಾ ಸಮಿತಿ ಸದಸ್ಯರು ಚುನಾವಣೆ ನಿಯಮಗಳನ್ವಯ ಜಿಲ್ಲಾ ಪಂಚಾಯತ್ ಸದಸ್ಯರುಗಳ ಅವಧಿ ಇರುವ ತನಕ ಇರುತ್ತದೆಯೆಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿಗಳು ತಿಳಿಸಿದ್ದಾರೆ.