Tuesday, July 26, 2011

ಪಿಲಿಕುಳದಲ್ಲಿ ಆಟಿದ ಗತ್ತ್ -ಗಮ್ಮತ್ತು

ಮಂಗಳೂರು,ಜುಲೈ.26:ಪಿಲಿಕುಳದ ನಿಸರ್ಗಧಾಮದಲ್ಲಿ ತುಳುನಾಡಿನ ಕೃಷಿ ಸಂಸ್ಕೃತಿಯಲ್ಲಿ ತನ್ನದೇ ಆದ ಮಹತ್ವವನ್ನು ಪಡೆದ ಆಟಿ ತಿಂಗಳ ವಿಶಿಷ್ಟತೆಯ ಅನಾವರಣ ಕಾರ್ಯಕ್ರಮ ಆಟಿಡೊಂಜಿ ದಿನ ಸೋಮವಾರದಂದು ನಡೆಯಿತು. ಇಲ್ಲಿನ ಗುತ್ತಿನ ಮನೆಯ ಪರಿಸರದಲ್ಲಿ ಆಯೋಜಿದ್ದ ಕಾರ್ಯಕ್ರಮಕ್ಕೆ ಅತಿಥಿಗಳು ನೇಜಿ ನೆಡುವ ಮೂಲಕ ಚಾಲನೆ ನೀಡಿದರು. ಶಾಸಕ ರಾದ ಅಭಯ ಚಂದ್ರ ಜೈನ್, ಜಿಲ್ಲಾ ಧಿಕಾರಿ ಡಾ.ಚನ್ನಪ್ಪ ಗೌಡ, ಜಿಲ್ಲಾ ಪಂಚಾ ಯತ್ ಅಧ್ಯಕ್ಷೆ ಶೈಲಜ ಭಟ್, ಪಾಲಿಕೆ ಮೇ ಯರ್ ಪ್ರ ವೀಣ್, ಕ್ಯಾಪ್ಕೊ ಅಧ್ಯಕ್ಷ ಕೊಂ ಕೊಡಿ ಪದ್ಮ ನಾಭ ಭಟ್,ಜಿಲ್ಲಾ ಪಂಚಾ ಯತ್ ಸದಸ್ಯೆ ಯಶ ವಂತಿ ಆಳ್ವಾ,ಕನ್ನಡ ಸಾಹಿತ್ಯ ಪರಿ ಷತ್ ಜಿಲ್ಲಾ ಧ್ಯಕ್ಷ ಪ್ರ ದೀಪ್ ಕುಮಾರ್ ಕಲ್ಕೂರ,ಪಿಲಿ ಕುಳ ನಿಸರ್ಗ ಧಾಮದ ನಿರ್ದೇ ಶಕ ಜೆ. ಆರ್. ಲೋ ಬೊ, ಮಹಿಳಾ ಮಂಡ ಳಗಳ ಒಕ್ಕೂ ಟದ ಅಧ್ಯಕ್ಷೆ ವಿಜಯ ಲಕ್ಷ್ಮೀ ಶೆಟ್ಟಿ,ವಸಂತ ಕುಮಾರ್ ಪೆರ್ಲ ಮತ್ತಿ ತರ ಗಣ್ಯರು ಕಾರ್ಯ ಕ್ರಮ ದಲ್ಲಿ ಸಕ್ರೀ ಯವಾಗಿ ಪಾಲ್ಗೊಂ ಡರು.ಇದೇ ಸಂದರ್ಭ ದಲ್ಲಿ ಮಂಗ ಳೂರು ತಾಲೂಕು ಮಹಿಳಾ ಮಂಡ ಳಗಳ ಒಕ್ಕೂ ಟದ ಪ್ರಾಯೋ ಜಕತ್ವ ದಲ್ಲಿ ಮಾಡಿದ ಆಟಿ ತಿಂಗಳ ಬಗೆ ಬಗೆಯ ತಿಂಡಿ ತಿನಸು ಗಳಾದ ಪತ್ರೊಡೆ,ಕುಡುತ್ತ ಚಟ್ನಿ,ಪೆಲಕಾಯಿದ ಗಟ್ಟಿ ಗಾರಿಗೆ ,ಮೆಂತೆದ ಗಂಜಿ,ತೇಟ್ಲದ ಗಸಿ,ಹೀಗೆ ವೈವಿಧ್ಯಮಯ ಅಡುಗೆಗಳನ್ನು ಅಥಿತಿಗಳಿಗೆ ಉಣ ಬಡಿಸಿದರು.ಕವಿಗೊಷ್ಟಿ,ರಸಪ್ರಶ್ನೆಗಳು ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.