Tuesday, July 19, 2011

ಹೆಣ್ಣು ಮಕ್ಕಳಿಗಾಗಿ 2.9 ಕೋ.ರೂ ವೆಚ್ಚದಲ್ಲಿ ಐಟಿಐ :ಪಾಲೆಮಾರ್

ಮಂಗಳೂರು,ಜುಲೈ.19:ಹೆಣ್ಣು ಮಕ್ಕಳಿಗಾಗಿ 2.9 ಕೋಟ.ರೂ.ವೆಚ್ಚದಲ್ಲಿ ಕೈಗಾರಿಕಾ ತರಬೇತಿ ಸಂಸ್ಥೆಯನ್ನು(ಐಟಿಐ) ಮಂಗಳೂರಿನಲ್ಲಿ ನಿರ್ಮಿಸಲಾಗುತ್ತಿದೆ. ಕಟ್ಟಡದ ಕಾಮಗಾರಿ ಪ್ರಗತಿಯಲ್ಲಿದೆ ಎಂದು ರಾಜ್ಯದ ಮೀನುಗಾರಿಕೆ, ಬಂದರು, ಪರಿಸರ, ಜೀವಿಶಾಸ್ತ್ರ ಮತ್ತು ಒಳನಾಡು ಜಲಸಾರಿಗೆ ಹಾಗೂ ಜಿಲ್ಲಾ ಉಸ್ತುವರಿ ಸಚಿವರಾದ ಕೃಷ್ಣ ಜೆ.ಪಾಲೆಮಾರ್ ತಿಳಿಸಿದ್ದಾರೆ.ಅವರು ಯೆಯ್ಯಾಡಿ ಸಮೀಪದ ಶರಬತ್ ಕಟ್ಟೆ ಯಲ್ಲಿ ಕರ್ನಾ ಟಕ ಪಾಲಿ ಟೆಕ್ನಿಕ್ ನೂತನ ವಿದ್ಯಾ ರ್ಥಿನಿ ನಿಲಯ ಕಟ್ಟಡ ವನ್ನು ಉದ್ಘಾ ಟಿಸಿ ಮಾತ ನಾಡು ತ್ತಿದ್ದರು.ರೂ.1 ಕೋಟಿ ವೆಚ್ಚ ದಲ್ಲಿ ಬೋಂದೆಲ್ ನಲ್ಲಿ ಡಬ್ಲ್ಯೂ ಪಿಟಿ ವಿದ್ಯಾ ರ್ಥಿನಿ ಯರಿ ಗಾಗಿ ವಿದ್ಯಾ ರ್ಥಿನಿ ನಿಲಯ ನಿರ್ಮಾ ಣಕ್ಕೆ ಮಂಜೂರಾತಿ ದೊರೆತಿದೆ. ಕರ್ನಾಟಕ ಪಾಲಿಟೆಕ್ನಿಕ್ ಸಂಸ್ಥೆಯ ವಿದ್ಯಾರ್ಥಿನಿಯರಿಗಾಗಿ ರೂ.1 ಕೋಟಿ ವೆಚ್ಚದಲ್ಲಿ ಇನ್ನೊಂದು ವಿದ್ಯಾರ್ಥಿನಿ ನಿಲಯ ನಿರ್ಮಾಣಗೊಳ್ಳಲಿದೆ ಎಂದು ಸಚಿವರು ಹೇಳಿದರು.ಶೈಕ್ಷಣಿಕ ಕ್ಷೇತ್ರದಲ್ಲಿ ದಕ್ಷಿಣ ಕನ್ನಡ ಜಿಲ್ಲೆ ಮುಂದಿದ್ದು, ಖಾಸಗಿಯವರೊಂದಿಗೆ ಸರ್ಕಾರಿ ಶಿಕ್ಷಣ ಕ್ಷೇತ್ರಗಳು ಪೈಪೋಟಿಯನ್ನು ಸಮರ್ಥವಾಗಿ ಎದುರಿಸಿ ಉತ್ತಮ ಶಿಕ್ಷಣ ನೀಡುತ್ತಿದೆ ಎಂದರು. ಸರ್ಕಾರ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆಯನ್ನು ನೀಡಿದೆ. ಗ್ರಾಮೀಣ ವಿದ್ಯಾರ್ಥಿನಿಯರ ಅನುಕೂಲಕ್ಕೆ ವಿದ್ಯಾರ್ಥಿನಿ ನಿಲಯಗಳನ್ನು ತೆರೆಯಲು ಆದ್ಯತೆ ನೀಡಲಾಗಿದೆ ಎಂದರು.ಮಂಗ ಳೂರಿ ನಲ್ಲಿ ಹಿಂದು ಳಿದ ಮತ್ತು ಅಲ್ಪ ಸಂ ಖ್ಯಾತ ಇಲಾಖೆ ಯ ವತಿ ಯಿಂದ ಇದೇ ಶೈಕ್ಷ ಣಿಕ ವರ್ಷ ದಲ್ಲಿ ವಿದ್ಯಾ ರ್ಥಿನಿ ನಿಲಯ ಆರಂ ಭಗೊ ಳ್ಳಲಿದೆ. ಕಟ್ಟ ಡದ ಹುಡು ಕಾಟ ನಡೆ ದಿದೆ. 100 ವಿದ್ಯಾ ರ್ಥಿನಿ ಯರಿಗೆ ಇಲ್ಲಿ ಪ್ರವೇಶಾವಕಾಶವಿದೆ ಎಂದು ಸಚಿವರು ತಿಳಿಸಿದರು.ಸಮಾ ರಂಭ ದಲ್ಲಿ ಮುಖ್ಯ ಅತಿಥಿ ಸ್ಥಾನ ದಿಂದ ಮಾತ ನಾಡಿದ ಮಂಗ ಳೂರು ನಗರಾ ಭಿವೃದ್ಧಿ ಪ್ರಾಧಿ ಕಾರದ ಅಧ್ಯಕ್ಷ ಡಾ.ಮಾಧವ ಭಂಡಾರಿ ಮಾತ ನಾಡಿ, ಮಹಿಳಾ ಸಬಲೀ ಕರ ಣದ ಜೊತೆಗೆ ನಮ್ಮ ಸಂ ಸ್ಕೃತಿಯ ರಕ್ಷಣೆ ಯ ಹೊಣೆ ಯನ್ನು ವಿದ್ಯಾ ರ್ಥಿನಿ ಯರು ವಹಿಸಿ ಕೊಳ್ಳ ಬೇಕಾಗಿದೆ ಎಂದರು.
ವಿಧಾನ ಸಭೆಯ ಉಪಸಭಾಪತಿ ಎನ್.ಯೋಗೀಶ್ ಭಟ್, ಲೋಕಸಭಾ ಸದಸ್ಯ ನಳಿನ್ ಕುಮಾರ್ ಕಟೀಲ್, ಶಾಸಕ ಯು.ಟಿ.ಖಾದರ್ ಉಪಸ್ಥಿತರಿದ್ದರು.ಈ ಸಂದರ್ಭದಲ್ಲಿ ಕಟ್ಟಡಗಳ ಗುತ್ತಿಗೆದಾರರಾದ ಮಹಾಬಲ ಸುವರ್ಣ ಅವರನ್ನು ಸನ್ಮಾನಿಸಲಾಯಿತು.
ಕರ್ನಾಟಕ ಪಾಲಿಟೆಕ್ನಿಕ್ ನ ಪ್ರಾಚಾರ್ಯ ಮೇಜರ್ ಬಿ.ವಿಜಯ್ ಕುಮಾರ್ ಸ್ವಾಗತಿಸಿದರು. ಶಿಕ್ಷಕಿ ಕೀರ್ತಿ ಅವರು ಪ್ರಾಸ್ತಾವಿಕ ಮಾತುಗಳನ್ನಾಡಿದರು. ಕಾಲೇಜಿನ ಇ ಎಂ ಜೋಸ್ ವಂದಿಸಿದರು.
ರೂ.60 ಲಕ್ಷ ವೆಚ್ಚದಲ್ಲಿ ನಿರ್ಮಿಸಲಾದ ನೂತನ ವಿದ್ಯಾರ್ಥಿನಿ ನಿಲಯವು 800 ಚದರ ಮೀಟರ್ ವಿಸ್ತೀರ್ಣ ಹೊಂದಿದೆ. ಎರಡು ಅಂತಸ್ತಿನಲ್ಲಿ 14 ಕೊಠಡಿಗಳಿದ್ದು ನೆಲಮಹಡಿಯಲ್ಲಿ ಅಡುಗೆ ಕೋಣೆ, ವಾರ್ಡನ್ ರೂಮ್ ಒಳಗೊಂಡಂತೆ ಎಲ್ಲ ಮೂಲಸೌಕರ್ಯಗಳನ್ನು ಹೊಂದಿದೆ. ಸುಮಾರು 80 ವಿದ್ಯಾರ್ಥಿನಿಯರು ಇಲ್ಲಿ ಸೌಲಭ್ಯ ಪಡೆಯಬಹುದಾಗಿದೆ.