Tuesday, July 19, 2011

ದ.ಕ. ಜಿಲ್ಲೆಯಲ್ಲಿ ಮಳೆ ಹಾನಿ

ಮಂಗಳೂರು,ಜುಲೈ.19:ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರಾಕೃತಿಕ ವಿಕೋಪದಿಂದ ಸಂಭ ವಿಸಿದ ಹಾನಿ ಯಲ್ಲಿ ಪ್ರಸಕ್ತ ಸಾಲಿನಲ್ಲಿ ಒಟ್ಟು ಆರು ಜನ ಮರಣ ಹೊಂದಿದ್ದು, 7 ಜನ ಗಾಯ ಗೊಂಡಿ ರುತ್ತಾರೆ. 12 ಮನೆಗಳು ಪೂರ್ಣ ಹಾನಿ ಯಾಗಿದ್ದು,56 ಮನೆಗಳಿಗೆ ತೀವ್ರ ಹಾನಿ ಯಾಗಿರುತ್ತದೆ. 142 ಮನೆಗಳಿಗೆ ಭಾಗಶ: ಹಾನಿಯಾಗಿದೆ. 5 ಜಾನುವಾರುಗಳು ಹಾನಿಯಾಗಿವೆ.
210 ಖಾಸಗಿ ಮನೆಗಳ ಹಾನಿಗೆ ರೂ.26.57 ಲಕ್ಷ ನಷ್ಟ ಅಂದಾಜಿಸಲಾಗಿದೆ. 392.13 ಕಿಲೋಮೀಟರ್ ರಸ್ತೆಗೆ ರೂ.1707 ಲಕ್ಷ ,56 ಸೇತುವೆ ಮತ್ತು ಮೋರಿಗಳಿಗೆ ರೂ.161 ಲಕ್ಷ, 171 ಖಾಸಗಿ ಕಟ್ಟಡಗಳ ನಷ್ಠಕ್ಕೆ ರೂ.24.30 ಲಕ್ಷ, 966 ವಿದ್ಯುತ್ ಸರಬರಾಜು ನಷ್ಟಕ್ಕೆ 43.70ಲಕ್ಷ, ಬೆಳೆಹಾನಿಯಡಿ 2 ಪ್ರಕರಣ ದಾಖಲಾಗಿದ್ದು, 5.70 ಲಕ್ಷ ಮತ್ತು ಇತರೆ ನಷ್ಟಗಳಿಗೆ ರೂ.202 ಲಕ್ಷ ,ಹೀಗೆ ಒಟ್ಟು ರೂ.2170.27 ಲಕ್ಷ ರೂ.ಗಳ ಹಾನಿಯನ್ನು ಅಂದಾಜಿಸಲಾಗಿದೆ. ಜಿಲ್ಲೆಯ ಪ್ರಾಕೃತಿಕ ವಿಕೋಪ (ಸಿ ಆರ್ ಎಫ್) ನಿಧಿಯಲ್ಲಿ ಕೇವಲ 50.00 ಲಕ್ಷ ಅನುದಾನ ಲಭ್ಯವಿದ್ದು ಹೆಚ್ಚಿನ ಅನುದಾನ ಸುಮಾರು 5 ಕೋಟಿ ಬಿಡುಗಡೆ ಮಾಡುವಂತೆ ಜಿಲ್ಲಾಧಿಕಾರಿ ಡಾ. ಎನ್. ಎಸ್. ಚೆನ್ನಪ್ಪ ಗೌಡ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.