Saturday, July 23, 2011

ವಿಜ್ಞಾನ ತಂತ್ರಜ್ಞಾನ ಸೌಲಭ್ಯ ಗ್ರಾಮೀಣ ಪ್ರದೇಶಗಳಿಗೂ ವಿಸ್ತರಿಸಲಿ :ಜೆ.ಕೃಷ್ಣ ಪಾಲೆಮಾರ್

ಮಂಗಳೂರು,ಜುಲೈ.23:ಕರ್ನಾಟಕ ರಾಜ್ಯ ಭಾರತದ ಮಾಹಿತಿ ತಂತ್ರಜ್ಞಾನದ ರಾಜಧಾನಿಯಾಗಿದ್ದು,ಮಾಹಿತಿ ತಂತ್ರಜ್ಞಾನ ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರ ,ತಾಲೂಕು ಕೇಂದ್ರಗಳಲ್ಲಿ ಕಾರ್ಯಾಚರಿಸುತ್ತಿದ್ದು,ಇದು ಗ್ರಾಮೀಣ ಪ್ರದೇಶಕ್ಕೂ ವಿಸ್ತರಣೆ ಆಗಬೇಕು ಎಂದು ವಿಜ್ಞಾನ ಮತ್ತು ತಂತ್ರಜ್ಞಾನ,ಪರಿಸರ ಜೀವಶಾಸ್ತ್ರ,ಒಳನಾಡು ಬಂದರು,ಮೀನುಗಾರಿಕೆ ಹಾಗೂ ದಕ್ಷಿಣಕನ್ನಡ ಜಿಲ್ಲಾ ಉಸ್ತುವಾರಿ ಸಚಿವರಾದ ಕೃಷ್ಣ ಜೆ.ಪಾಲೆಮಾರ್ ಅವರು ತಿಳಿಸಿದ್ದಾರೆ.ಅವರು ಇಂದು ಮಂಗ ಳೂರಿ ನಲ್ಲಿ ಕರ್ನಾ ಟಕ ಸರ್ಕಾ ರದ ಕರ್ನಾ ಟಕ ವಿದ್ಯು ನ್ಮಾನ ಅಭಿ ವೃದ್ಧಿ ನಿಗಮ ನಿಯ ಮಿತ ಮಾಹಿತಿ ತಂತ್ರ ಜ್ಞಾನ - ಜೈವಿಕ ತಂತ್ರ ಜ್ಞಾನ ಹಾಗೂ ವಿಜ್ಞಾನ ತಂತ್ರಜ್ಞಾನ ಇಲಾಖೆಗಳ ಸಹಯೋಗದೊಂದಿಗೆ ಕರ್ನಾಟಕ ರಾಜ್ಯದಲ್ಲೇಪ್ರಥಮ ಸರಕಾರಿ ಸೈಬರ್ ಲ್ಯಾಬ್ ನ್ನು ಉದ್ಘಾಟಿಸಿ ಮಾತನಾಡಿದರು. ರಾಜ್ಯ ದಲ್ಲಿ ರೂ.26 ಕೋಟಿ ವೆಚ್ಚ ದಲ್ಲಿ 10 ಉಪ ವಿಜ್ಞಾನ ಕೇಂದ್ರ ಗಳನ್ನು ಹಾಗೂ ರೂ.14.4 ಕೋಟಿ ವೆಚ್ಚ ದಲ್ಲಿ 3 ವಲಯ ವಿಜ್ಞಾನ ಕೇಂದ್ರ ಗಳನ್ನು ಸ್ಥಾಪಿ ಸಲಾ ಗುತ್ತಿದೆ ಎಂದ ಸಚಿ ವರು ರಾಜ್ಯ ದಲ್ಲೇ ಪ್ರಥಮ ಬಾರಿಗೆ ಸೈಬರ್ ಲ್ಯಾಬ್ ನ್ನು ಮಂಗ ಳೂರಿ ನಲ್ಲಿ ಮಾಡು ತ್ತಿರು ವುದ ರಿಂದ ಕರಾವಳಿ ಜಿಲ್ಲೆಯಲ್ಲಿ ಇತ್ತೀಚೆಗೆ ಹೆಚ್ಚಿಸುವ ಅಪರಾಧ ಪ್ರಮಾಣ ತಗ್ಗಲಿದೆ ಎಂದರು.ಮುಖ್ಯ ಅತಿಥಿ ಗಳಾಗಿ ಆಗ ಮಿಸಿದ್ದ ಕರ್ನಾ ಟಕ ರಾಜ್ಯ ಉನ್ನತ ಶಿಕ್ಷಣ,ಮಾಹಿತಿ ತಂತ್ರ ಜ್ಞಾನ ಜೈವಿಕ ತಂತ್ರ ಜ್ಞಾನ ಹಾಗೂ ಉಡುಪಿ ಜಿಲ್ಲಾ ಉಸ್ತು ವಾರಿ ಸಚಿವರಾದ ಡಾ. ವಿ.ಎಸ್. ಆಚಾರ್ಯ ಅವರು ಮಾತ ನಾಡಿ ನಮ್ಮ ದೇಶ ಕಚ್ಚಾ ತೈಲ ಆಮದಿ ಗಾಗಿ ವೆಚ್ಚ ಮಾಡು ವಷ್ಟೇ ಹಣ ವನ್ನು ಮಹಿತಿ ತಂತ್ರ ಜ್ಞಾನ ರಫ್ತಿ ನಿಂದ ಗಳಿಸಲಾಗುತ್ತಿದೆ. ರಾಷ್ಟ್ರದ ರಕ್ಷಣಾ ದೃಷ್ಠಿಯಿಂದ ಸೈಬರ್ ಲ್ಯಾಬ್ ಗಳ ಆವಶ್ಯಕತೆ ಇದೆ. ಸೈಬರ್ ಸೆಕ್ಯೂರಿಟಿ ಕುರಿತು ಸಂಶೋಧನೆ ಮತ್ತು ಅಭಿವೃದ್ಧಿ ಆಗಬೇಕಿದೆ ಎಂದು ತಿಳಿಸಿದರು.
ಸಮಾ ರಂಭ ದಲ್ಲಿ ಸೈಬರ್ ಲ್ಯಾಬ್ ಕುರಿತು ಮಹಿತಿ ನೀಡಿದ ಕರ್ನಾ ಟಕ ಸರ್ಕಾ ರದ ಮಾಹಿತಿ ತಂತ್ರ ಜ್ಞಾನ ಜೈವಿಕ ತಂತ್ರ ಜ್ಞಾನ ಪ್ರಧಾನ ಕಾರ್ಯ ದರ್ಶಿ ಗಳಾದ ಎಂ.ಎನ್.ವಿದ್ಯಾಶಂಕರ್ ಅವರು ಮಾತನಾಡಿ ನಾವು ನಮ್ಮ ಕಂಪ್ಯೂಟರ್ ಲ್ಯಾಪ್ ಟ್ಯಾಪ್ ಗಳನ್ನು ಸಂಗ್ರಹಿಸಿದ ಮಾಹಿತಿಗಳು ಅತ್ಯಂತ ಗೌಪ್ಯವಾಗಿರಬೇಕು .ಆದರೆ ಅವು ಸೋರಿಕೆಯಾಗುತ್ತದೆ,ಕೆಲವೊಮ್ಮೆ ನಮಗೆ ಅರಿವಿಲ್ಲದಂತೆ ಅಳಿಸಲಾಗುತ್ತಿದೆ. ಇದರಿಂದ ವೈಯಕ್ತಿಕವಾಗಿ ಹಾಗೂ ದೇಸದ ದೃಷ್ಠಿಯಿಂದ ಇದು ಉತ್ತಮ ಬೆಳವಣಿಗೆಯಲ್ಲ.ಇದನ್ನು ತಪ್ಪಿಸಲು ಮಾಹಿತಿ ಸಂರಕ್ಷಣೆಯನ್ನು ಯಾವ ರೀತಿ ಮಾಡಿಕೊಳ್ಳಬೇಕು ಎಂಬ ಬಗ್ಗೆ ಈ ಸೈಬರ್ ಲ್ಯಾಬ್ ನಲ್ಲಿ ಅರಿವು ಮೂಡಿಸಲಾಗುತ್ತಿದೆ.
ಕಿಯೋನಿಕ್ಸ್ ಸೈಬರ್ ಲ್ಯಾಬ್ ನ ಮುಖ್ಯ ಉದ್ದೇಶ ಎಂದರೆ ದೇಸದ ಸೈಬರ್ ಭದ್ರತೆ ವ್ಯವಸ್ಥೆಯನ್ನು ಬಲಪಡಿಸುವುದಾಗಿದೆ. ಎಲ್ಲಾ ಸರಕಾರಿ ಇಲಾಖೆಗಳಿಗೆ ಹಲವು ಸೈಬರ್ ಸುರಕ್ಷಿತ ಸಂವೇದನಾ ಶೀಲ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು ಹಾಗೂ ಸೈಬರ್ ಅಪರಾಧ ಪ್ರಕರಣಗಳ ತನಿಖೆಯಲ್ಲಿ ಅರಕ್ಷಕರಿಗೆ ಮಾರ್ಗದರ್ಶಿಯಾಗಿ ಕೆಲಸ ಮಾಡುವ ಕೆಲವೇ ಕೆಲವು ಸಂಸ್ಥೆಗಳಂತೆ ಸಂಪನ್ಮೂಲ ಕೇಂದ್ರವಾಗಿ ಕಾರ್ಯನಿರ್ವಹಿಸಲಿವೆ. ಸೈಬರ್ ಲ್ಯಾಬ್ ಪ್ರಾಥಮಿಕವಾಗಿ ಅರಕ್ಷಕ ವರ್ಗಗಳ ವಿಭಾಗ ನ್ಯಾಯಾಂಗ ಇಲಾಖೆ, ಸರಕಾರಿ ಇಲಾಖೆ, ಬ್ಯಾಂಕಿಂಗ್ ,ಶೈಕ್ಷಣಿಕ ವಿಭಾಗಗಳಿಗೆ ನೆರವಾಗಲಿದೆ ಎಂದರು.
ಕಿಯೋನಿಕ್ಸ್ ವ್ಯವಸ್ಥಾಪಕ ನಿರ್ದೇಶಕರಾದ ಅರವಿಂದ ಜನ್ನು ಅವರು ಸ್ವಾಗತಿಸಿದರು. ಅಧ್ಯಕ್ಷತೆಯನ್ನು ಮಂಗಳೂರು ವಿಧಾನಸಭಾ ಕ್ಷೇತ್ರದ ಶಾಸಕ ಯು.ಟಿ.ಖಾದರ್ ವಹಿಸಿದ್ದರು. ಮೇಯರ್ ಪ್ರವೀಣ್,ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಶೈಲಜಾ ಭಟ್ ಕಿಯೋನಿಕ್ಸ್ ಅಧ್ಯಕ್ಷ ಯಂಗಾ ರೆಡ್ಡಿ ಮತ್ತಿತರರು ಉಪಸ್ಥಿತರಿದ್ದರು.