Saturday, July 16, 2011

ಪರಿಶೀಲನೆ ನಂತರ ಬಸ್ ದರ ಏರಿಕೆ ತೀರ್ಮಾನ ; ಜಿಲ್ಲಾಧಿಕಾರಿ

ಮಂಗಳೂರು,ಜುಲೈ.16:ಇತ್ತೀಚಿನ ದಿನಗಳಲ್ಲಿ ಇಂಧನ,ವಾಹನದ ಬಿಡಿಭಾಗಗಳ ಬೆಲೆ ಏರುತ್ತಿರುವುದರಿಂದ ಖಾಸಗಿ ಬಸ್ ಪ್ರಯಾಣದರ ಏರಿಸುವುದು ಸೂಕ್ತವೇ?ಅಲ್ಲವೇ? ಎಂಬ ಬಗ್ಗೆ ಪರಿಶೀಲನೆ ನಡೆಸಿ ಸೂಕ್ತ ತೀರ್ಮಾನ ಕೈಗೊಳ್ಳುವುದಾಗಿ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಅಧ್ಯಕ್ಷರಾದ ಡಾ.ಎನ್.ಎಸ್.ಚನ್ನಪ್ಪ ಗೌಡ ಅವರು ತಿಳಿಸಿದರು.

ಇಂದು ತಮ್ಮ ಕಚೇ ರಿಯ ಸಭಾಂ ಗಣ ದಲ್ಲಿ ಜರು ಗಿದ ಪ್ರಾ ದೇಶಿಕ ಸಾರಿಗೆ ಪ್ರಾಧಿ ಕಾರದ ಸಭೆ ಯಲ್ಲಿ ಸಾರ್ವ ಜನಿಕರ ಹಾಗೂ ಖಾಸಗಿ ಬಸ್ ಮಾ ಲೀಕರ ಅಹ ವಾಲು ಆಲಿಸಿದ ನಂತರ ಜಿಲ್ಲಾಧಿ ಕಾರಿ ಗಳು ಪರಿ ಶೀಲನೆ ನಂತರ ಖಾಸಗಿ ಬಸ್ ಪ್ರಯಾಣ ದರ ನಿಗಧಿಗೆ ಸರ್ಕಾ ರದ ಮಾರ್ಗ ದರ್ಶ ನದಂತೆ ತೀ ರ್ಮಾನ ಕೈ ಗೊಳ್ಳುವುದಾಗಿ ತಿಳಿಸಿದರು.
ಸಭೆಯಲ್ಲಿ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಮಾತನಾಡಿ ಈಗಾಗಲೇ ಎಲ್ಲಾ ದರಗಳು ಏರಿಕೆಯಾಗಿ ಸಾರ್ವಜನಿಕರಿಗೆ ತುಂಬಾ ತೊಂದರೆಯಾಗಿರುವುದರಿಂದ ಹಾಗೂ ಕಡಿಮೆ ಸಂಬಳಗಾರರು ದರ ಏರಿಕೆಯಿಂದ ತತ್ತರಿಸುತ್ತಿರುವಾಗ ಖಾಸಗಿ ಪ್ರಯಾಣ ದರವನ್ನು ಏರಿಕೆ ಮಾಡಬಾರದಾಗಿ ಸಭೆಯಲ್ಲಿ ತಮ್ಮ ಅಭಿಪ್ರಾಯ ಮಂಡಿಸಿದರು. ಖಾಸಗಿ ಬಸ್ ಗಳ ರಹದಾರಿಯನ್ನು ರದ್ದು ಪಡಿಸಿ ಮಾರ್ಗಗಳನ್ನು ರಾಷ್ಟ್ರೀಕರಣಗೊಳಿಸಿ ಸರ್ಕಾರಿ ಬಸ್ ಸಂಚಾರ ಆರಂಭಿಸುವಂತೆ ಪ್ರಾಧಿಕಾರದವರಲ್ಲಿ ಮನವಿ ಮಾಡಿದರು. ಬಸ್ ಮಾಲೀ ಕರ ಸಂಘದ ಪದಾ ಧಿಕಾ ರಿಗಳು ಮಾತ ನಾಡಿ ಬಸ್ ಪ್ರಯಾಣ ದರ ವನ್ನು ಕನಿಷ್ಠ 0-50 ಪೈಸೆ ಗಳನ್ನು ಮೊದಲ 4 ಸ್ಟೇಜ್ ಗಳ ತನಕ ಹಾಗೂ ನಂತ ರದ ಸ್ಟೇಜ್ ಗಳಿಗೆ ರೂ.1.00 ಕನಿಷ್ಠ ಏರಿಕೆ ಮಾಡು ವಂತೆ ವಿನಂತಿ ಸಿದರು. ಪ್ರತೀ ಕಿಲೋ ಮೀಟರ್ ಗೆ ತಮಗೆ ತಗ ಲುವ ವೆಚ್ಚ ಹೆಚ್ಚಾ ಗಿರು ವುದರಿಂದ ಅನಿ ವಾರ್ಯ ವಾಗಿ ಪ್ರಯಾಣ ದರ ಏರಿಕೆ ಮಾಡದ ಹೊರತು ತಮಗೆ ನಷ್ಟ ಉಟಾ ಗಲಿದೆ ಯೆಂದರು.ಸಾರ್ವಜನಿಕರ ಹಾಗೂ ಖಾಸಗಿ ಬಸ್ ಮಾಲೀಕರ ಅಹವಾಲು ಆಲಿಸಿದ ಜಿಲ್ಲಾಧಿಕಾರಿಗಳು ಮತ್ತೊಂದು ಬಾರಿ ಸಭೆ ಕರೆದು ತೀರ್ಮಾನ ಕೈಗೊಳ್ಳುವುದಾಗಿ ತಿಳಿಸಿದರು.
ಸಭೆಯಲ್ಲಿ ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಕಾರ್ಯದರ್ಶಿ ಮಲ್ಲಿಕಾರ್ಜುನ,ಸದಸ್ಯರು ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾದಿಕಾರಿ ಲಾಬುರಾಂ ಅವರು ಉಪಸ್ಥಿತರಿದ್ದರು.