ಇಂದು ತಮ್ಮ ಕಚೇ ರಿಯ ಸಭಾಂ ಗಣ ದಲ್ಲಿ ಜರು ಗಿದ ಪ್ರಾ ದೇಶಿಕ ಸಾರಿಗೆ ಪ್ರಾಧಿ ಕಾರದ ಸಭೆ ಯಲ್ಲಿ ಸಾರ್ವ ಜನಿಕರ ಹಾಗೂ ಖಾಸಗಿ ಬಸ್ ಮಾ ಲೀಕರ ಅಹ ವಾಲು ಆಲಿಸಿದ ನಂತರ ಜಿಲ್ಲಾಧಿ ಕಾರಿ ಗಳು ಪರಿ ಶೀಲನೆ ನಂತರ ಖಾಸಗಿ ಬಸ್ ಪ್ರಯಾಣ ದರ ನಿಗಧಿಗೆ ಸರ್ಕಾ ರದ ಮಾರ್ಗ ದರ್ಶ ನದಂತೆ ತೀ ರ್ಮಾನ ಕೈ ಗೊಳ್ಳುವುದಾಗಿ ತಿಳಿಸಿದರು.
ಸಭೆಯಲ್ಲಿ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಮಾತನಾಡಿ ಈಗಾಗಲೇ ಎಲ್ಲಾ ದರಗಳು ಏರಿಕೆಯಾಗಿ ಸಾರ್ವಜನಿಕರಿಗೆ ತುಂಬಾ ತೊಂದರೆಯಾಗಿರುವುದರಿಂದ ಹಾಗೂ ಕಡಿಮೆ ಸಂಬಳಗಾರರು ದರ ಏರಿಕೆಯಿಂದ ತತ್ತರಿಸುತ್ತಿರುವಾಗ ಖಾಸಗಿ ಪ್ರಯಾಣ ದರವನ್ನು ಏರಿಕೆ ಮಾಡಬಾರದಾಗಿ ಸಭೆಯಲ್ಲಿ ತಮ್ಮ ಅಭಿಪ್ರಾಯ ಮಂಡಿಸಿದರು. ಖಾಸಗಿ ಬಸ್ ಗಳ ರಹದಾರಿಯನ್ನು ರದ್ದು ಪಡಿಸಿ ಮಾರ್ಗಗಳನ್ನು ರಾಷ್ಟ್ರೀಕರಣಗೊಳಿಸಿ ಸರ್ಕಾರಿ ಬಸ್ ಸಂಚಾರ ಆರಂಭಿಸುವಂತೆ ಪ್ರಾಧಿಕಾರದವರಲ್ಲಿ ಮನವಿ ಮಾಡಿದರು.
ಸಭೆಯಲ್ಲಿ ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಕಾರ್ಯದರ್ಶಿ ಮಲ್ಲಿಕಾರ್ಜುನ,ಸದಸ್ಯರು ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾದಿಕಾರಿ ಲಾಬುರಾಂ ಅವರು ಉಪಸ್ಥಿತರಿದ್ದರು.