Monday, July 18, 2011

'ಪರಿಸರ ಸಂರಕ್ಷಣೆ ಪ್ರತಿಯೊಬ್ಬರ ಕರ್ತವ್ಯ'

ಮಂಗಳೂರು,ಜುಲೈ.18 :ಪರಿಸರ ಸಂರಕ್ಷಣೆ ಪ್ರತಿಯೊಬ್ಬರ ಕರ್ತವ್ಯವಾಗಿದ್ದು, ಈ ಪ್ರಕ್ರಿಯೆಯಲ್ಲಿ ನಿರಂತರತೆಯ ಅಗತ್ಯವೂ ಇದೆ ಎಂದು ಹೊಸಂಗಡಿ ಗ್ರಾಮಪಂಚಾಯಿತಿ ಅಧ್ಯಕ್ಷರಾದ ಶ್ರೀಮತಿ ಲಕ್ಷ್ಮೀ ರಮೇಶ್ ಹೇಳಿದರು.
ಅವರು ಶನಿ ವಾರ ದ.ಕ. ಜಿ.ಪ. ಹಿ.ಪ್ರಾ ಶಾಲೆ ಪೆರಿಂಜೆ ಯಲ್ಲಿ ಪರಿ ಸರ ದಿನಾ ಚರಣೆ ಸಂ ಬಂಧ ಏರ್ಪ ಡಿಸಿದ ಸಭಾ ಕಾರ್ಯ ಕ್ರಮ ವನ್ನು ದ್ದೇಶಿಸಿ ಮಾತ ನಾಡು ತ್ತಿದ್ದರು. ಹೊ ಸಂಗ ಡಿಯಲ್ಲಿ ಪ್ರತಿ ಯೊಂದು ಕಾರ್ಯ ಕ್ರಮ ವನ್ನು ಎಲ್ಲರ ಸಹ ಕಾರ ದೊಂದಿಗೆ ಅರ್ಥ ಪೂರ್ಣ ವಾಗಿ ಆಚ ರಿಸ ಲಾಗುತ್ತಿದೆ. ರಾಜ್ಯ ನೈರ್ಮಲ್ಯ ರತ್ನ ಪ್ರಶಸ್ತಿ ಪುರಸ್ಕೃತ ಹಾಗೂ ಕೇಂದ್ರ ಸರ್ಕಾರದ ನಿರ್ಮಲ ಗ್ರಾಮ ಪ್ರಶಸ್ತಿ ಪುರಸ್ಕಾರ ಪಡೆದ ನಮ್ಮ ಗ್ರಾಮಪಂಚಾಯಿತಿಯ ಹೊಣೆ ಹೆಚ್ಚಿದೆ. ಜನರು ಈ ಬಗ್ಗೆ ಸದಾ ಜಾಗೃತರಾಗಿರಲು ಹಾಗೂ ಸ್ವಚ್ಛತೆಯಲ್ಲಿ ನಿರಂತರತೆಯನ್ನು ಕಾಯ್ದುಕೊಳ್ಳುವ ಜವಾಬ್ದಾರಿ ಇಲ್ಲಿನ ಪ್ರತಿಯೊಬ್ಬರದ್ದು ಎಂದು ಅವರು ಹೇಳಿದರು.ಗ್ರಾಮ ಪಂಚಾ ಯತಿ ಹೊ ಸಂಗಡಿ, ಫ್ರೆಂಡ್ಸ್ ಕ್ಲಬ್ ಹೊ ಸಂಗಡಿ, ಅರಣ್ಯ ಇಲಾಖೆ ಬೆಳ್ತಂ ಗಡಿ, ಶ್ರೀ ಕ್ಷೇತ್ರ ಧರ್ಮ ಸ್ಥಳ ಗ್ರಾಮಾಭಿವೃದ್ಧಿ ಯೋಜನೆ (ರಿ), ಹೊಸಂಗಡಿ-ಬಡಕೋಡಿ, ಶಾಲಾಭಿವೃದ್ಧಿ ಸಮಿತಿ ದ.ಕ.ಜಿ.ಪ.ಹಿ.ಪ್ರಾ ಶಾಲೆ ಪೆರಿಂಜೆ ಹಾಗೂ ಆಳ್ವಾಸ್ ಸಮಾಜ ಕಾರ್ಯ ಕಾಲೇಜು ಮೂಡಬಿದ್ರೆ ಇವರ ಸಂಯುಕ್ತ ಆಶ್ರಯದಲ್ಲಿ ಪರಿಸರ ದಿನಾಚರಣೆಯನ್ನು ಆಚರಿಸಲಾಯಿತು.
ಪರಿಸರ ದಿನಾಚರಣೆಯ ಅಂಗವಾಗಿ ಶಾಲಾ ವಿದ್ಯಾರ್ಥಿಗಳಿಗೆ ಪರಿಸರ ಸ್ಪರ್ಧೆಗಳು, ಪರಿಸರ ಗೀತೆ, ಎಲೆ ಗುರುತಿಸುವುದು, ಚಿತ್ರಕಲೆ, ಭಾಷಣ, ಪ್ರಬಂಧ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ಅಂದು ಬೆಳಗ್ಗೆ 9ರಿಂದ 10ಗಂಟೆಯವರೆಗೆ ಗ್ರಾಮದ ವಿವಿಧ ಶಾಲಾ ಕಾಲೇಜುಗಳಲ್ಲಿ ಸ್ವಚ್ಛತಾ ಕಾರ್ಯಕ್ರಮ ನಡೆಯಿತು. ಬೆಳಗ್ಗೆ 10ರಿಂದ ಶಾಲೆಯಲ್ಲಿ ಗಿಡ ನೆಡುವುದು ಮತ್ತು ತರಕಾರಿ ತೋಟದ ರಚನೆಗೆ ಶ್ರಮದಾನವನ್ನು ಗ್ರಾಮಸ್ಥರು ಮತ್ತು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಫಲಾನುಭವಿಗಳು ಮಾಡಿದರು. ಈ ಎಲ್ಲ ಕಾರ್ಯ ಕ್ರಮಗಳು ಎಸ್ ಡಿ ಎಂ ಪ್ರೌಢ ಶಾಲೆ ಪೆರಿಂಜೆ ಹಾಗೂ ದ.ಕ. ಜಿ.ಪ. ಹಿ.ಪ್ರಾ ಶಾಲೆ ಪಡ್ಡಂ ದಡ್ಕ, ಪೆರಿಂಜೆ ಮತ್ತು ಬಡ ಕೋಡಿ ಶಾಲೆ ಗಳಲ್ಲಿ ಏಕ ಕಾಲ ದಲ್ಲಿ ನಡೆಯಿತು. ಅರಣ್ಯ ಇಲಾಖೆ ಯವರು ರಸ್ತೆಯ ಇಕ್ಕೆಲ ಗಳಲ್ಲಿ ಸಸಿ ಗಳನ್ನು ಇಲಾಖೆ ಯ ವತಿ ಯಿಂದ ನೆಟ್ಟರು.
ಕಳೆದ ಸಾಲಿನಲ್ಲಿ ಪೆರಿಂಜೆ ಶಾಲಾವನ ಹಾಗೂ ಸುತ್ತಮುತ್ತಲೂ ನೆಟ್ಟಿದ್ದ 400 ಸಸಿಗಳು ಬೆಳೆದು ನಿಂತಿದ್ದು ಇಲ್ಲಿನ ವಿದ್ಯಾರ್ಥಿಗಳಿಗೆ ಮತ್ತು ಹಿರಿಯರಿಗೆ ಶಾಲಾ ವನ ಬೆಳೆಸುವಲ್ಲಿ ಇರುವ ಆಸಕ್ತಿಗೆ ಸಾಕ್ಷಿಯಾಗಿತ್ತು. ಕಳೆದ ಸಾಲಿನಲ್ಲಿ ಆನಂದ ಬಂಗೇರ ಅವರು ಶಾಲೆಗೆ ನೀಡಿದ 30 ತೆಂಗಿನ ಸಸಿಗಳನ್ನು ಇದೇ ಸಂದರ್ಭದಲ್ಲಿ ಶಾಲಾಭಿವೃದ್ಧಿ ಸಮಿತಿಗೆ ಹಸ್ತಾಂತರ ಮಾಡಲಾಯಿತು.
ವಿದ್ಯಾರ್ಥಿಗಳಲ್ಲಿ ಪರಿಸರದ ಬಗ್ಗೆ ಆಸಕ್ತಿ ಹಾಗೂ ಜಾಗೃತಿ ಮೂಡಿಸಲು ಗ್ರಾಮದ ಸರ್ಕಾರಿ ಶಾಲೆಗಳಿಗೆ ಹಸಿರು ಪೆಟ್ಟಿಗೆಯನ್ನು ವಿತರಿಸಲಾಯಿತು. ವರ್ಷ ಪೂರ್ತಿ ಹಸಿರು ಪೆಟ್ಟಿಗೆಯಲ್ಲಿ ಪರಿಸರದ ಬಗ್ಗೆ ಉತ್ತಮ ಲೇಖನಗಳನ್ನು ಬರೆಯುವ ವಿದ್ಯಾರ್ಥಿಗಳಿಗೆ ಬಹುಮಾನ ನೀಡುವುದಾಗಿ ಗ್ರಾಮ ಪಂಚಾಯಿತಿ ಹೇಳಿತು.ಸಭಾ ಕಾರ್ಯ ಕ್ರಮದಲ್ಲಿ ಹೊ ಸಂಗಡಿ ತಾಲೂಕು ಪಂಚಾ ಯಿತಿ ಅಧ್ಯಕ್ಷ ರಾದ ಶ್ರೀಮತಿ ಲೀನಾ ಡಿ' ಕೋಸ್ಟ, ಬೆಳ್ತಂ ಗಡಿ ಎ ಪಿ ಯಂ ಸಿ ಸದಸ್ಯ ರಾದ ಧರ ಣೇಂದ್ರ ಕುಮಾರ್, ವೇಣೂರು ವಲಯ ಅರಣ್ಯಾ ಧಿಕಾರಿ ಜಿ.ಎಸ್. ಕೊಟ್ಟಾರಿ, ಸಾಮಾಜಿಕ ಅರಣ್ಯ ವಿಭಾಗದ ವಲಯ ಅಧಿಕಾರಿ ಸುಬ್ರಹ್ಮಣ್ಯ ಗೌಡ, ಶ್ರೀ ಕ್ಷೇ. ಧ.ಗ್ರಾ. ಯೋ. ಯೋಜನಾಧಿಕಾರಿ ವಸಂತ ಸಾಲ್ಯಾನ್, ದ. ಕ ಜಿಲ್ಲಾ ನೆರವು ಘಟಕದ ಶ್ರೀಮತಿ ಮಂಜುಳಾ ಎಲ್, ಹರಿಪ್ರಸಾದ್, ಆಸಕ್ತ ಜನರು, ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡರು.